Facebook Twitter Instagram
    Vartha Chakra
    • ಸುದ್ದಿ
    • ಬೆಂಗಳೂರು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ರಾಜಕೀಯ
      • ಚುನಾವಣೆ 2023
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • ಅಪರಾಧ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಬಸವಣ್ಣ ಲಿಂಗಾಯಿತ ಧರ್ಮ ಸ್ಥಾಪಕ!!
    ವಿಶೇಷ ಸುದ್ದಿ

    ಬಸವಣ್ಣ ಲಿಂಗಾಯಿತ ಧರ್ಮ ಸ್ಥಾಪಕ!!

    vartha chakraBy vartha chakraಮೇ 4, 2022Updated:ಮೇ 4, 2022ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter Pinterest LinkedIn Tumblr Email
    Share
    Facebook Twitter LinkedIn Pinterest Email

    ಕಾಯಕವೇ ಕೈಲಾಸ, ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂಬ ತತ್ವವನ್ನು ಬೋಧಿಸಿದ ಮಹಾನ್ ಮಾನವತಾವಾದಿ ಬಸವಣ್ಣ ಜಗತ್ತು ಕಂಡ ಅತ್ಯಂತ ಶ್ರೇಷ್ಟ ದಾರ್ಶನಿಕ.
    ಇವನಾರವ‌…ಇವನಾರವ.ಇವನಾರವನೆಂದೆನಿಸದಿರಯ್ಯಾ ಇವ ನಮ್ಮವ.. ನಮ್ಮವ ..ಎಂದೆನಿಸಯ್ಯಾ.. ಎಂದು ಹೇಳಿ ಎಲ್ಲರೂ ನಮ್ಮವರೆ ಎಂದು ಪ್ರತಿಪಾದಿಸುವ ಮೂಲಕ ಜಗತ್ತಿಗೆ ಸಮಾನತೆಯ ಮಂತ್ರ ಬೋಧಿಸಿದ ಬಸವಣ್ಣ ಹಿಂದೂ ಧರ್ಮದಲ್ಲಿನ‌ ಕಂದಾಚಾರಗಳನ್ನು ಧಿಕ್ಕರಿಸಿ ದೇಹವೇ ದೇಗುಲ ಶಿರ ಹೊನ್ನ ಕಳಸವಯ್ಯಾ ಎಂಬ ಆಶಯದ ಲಿಂಗಾಯತ ಧರ್ಮವನ್ನು ಹುಟ್ಟು ಹಾಕಿದರು. ಹಿಂದೂ ಧರ್ಮದಲ್ಲಿ ಹಾಸು ಹೊಕ್ಕಾಗಿದ್ದ ಮೇಲು-ಕೀಳು ಎಂಬ ಜಾತಿ ತಾರತಮ್ಯವನ್ನು ಧಿಕ್ಕರಿಸಿದ ಹನ್ನೆರಡನೆ ಶತಮಾನದ ಈ ಧರ್ಮ ಕೆಲವೇ ದಿನಗಳಲ್ಲಿ ಜನಮೆಚ್ಚುಗೆ ಪಡೆದಿದ್ದು ಇದೀಗ ಇತಿಹಾಸ.
    ಲಿಂಗ ಧರಿಸಿದವರೆಲ್ಲಾ ಲಿಂಗಾಯಿತರೆಂದ ಬಸವಣ್ಣನ ಧರ್ಮ ಪ್ರತ್ಯೇಕ ಧರ್ಮ ಎಂದು ಪ್ರತಿಪಾದಿಸಿದಾಗ ಅದಕ್ಕೆ ಬಲವಾದ ವಿರೋಧ ವ್ಯಕ್ತ ಪಡಿಸಿದ್ದು ಸಂಘ ಪರಿವಾರ.
    ಕಳೆದ 2001 ಮತ್ತು 2011ರಲ್ಲಿ ನಡೆದ‌ ಜನಗಣತಿಯ ವೇಳೆ ಲಿಂಗಾಯಿತರೆಲ್ಲಾ ತಮ್ಮದು ಲಿಂಗಾಯಿತ ಧರ್ಮ ಎಂದು ನಮೂದಿಸುವಂತೆ ದಿವಂಗತ ಮಾತೆ ಮಹಾದೇವಿ, ಎಂ.ಎಂ.ಕಲಬುರಗಿ ಸೇರಿದಂತೆ ಅನೇಕ ಮಠಾಧೀಶರು, ದಾರ್ಶನಿಕರು‌ ಕರೆ ನೀಡಿದ್ದರು.ಕಾಂಗ್ರೆಸ್ ನ ಹಲವು ನಾಯಕರು ಈ ವಾದವನ್ನು ಬೆಂಬಲಿಸಿದ್ದರು.ಆದರೆ ಸಂಘ ಪರಿವಾರ ಮತ್ತು ಬಿಜೆಪಿ ನಾಯಕರು ಇದಕ್ಕೆ ವಿರೋಧ ವ್ಯಕ್ತ ಪಡಿಸಿ ಲಿಂಗಾಯಿತ ಧರ್ಮವಲ್ಲ ಅದೊಂದು ಹಿಂದೂ ಧರ್ಮದಲ್ಲಿನ ಜಾತಿ.ಎಲ್ಲಾ ಲಿಂಗಾಯಿತರು ಹಿಂದೂಗಳು ಎಂದು ಪ್ರತಿಪಾದಿಸಿದ್ದರು.
    ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ‌ ಅವಧಿಯಲ್ಲಂತೂ ಇದು‌ ತೀವ್ರ ಸ್ವರೂಪ ಪಡೆದುಕೊಂಡಿತು. ರಾಜ್ಯ ಸರ್ಕಾರ ಲಿಂಗಾಯಿತ ಎನ್ನುವವುದು ಭಕ್ತಿ ಭಂಡಾರಿ ಬಸವಣ್ಣ ಸ್ಥಾಪಿತ ಪ್ರತ್ಯೇಕ ಧರ್ಮ ಎಂದು‌ ಪ್ರತಿಪಾದಿಸಿದರೆ,ರಾಜ್ಯ ಬಿಜೆಪಿ‌ ಮತ್ತು ಕೇಂದ್ರ‌ ಸರ್ಕಾರ ಇದನ್ನು ವಿರೋಧಿಸಿದ್ದು ಇದೀಗ ಇತಿಹಾಸ.
    ಈಗ ಬಸವ ಜಯಂತಿಯಂದು ಬಸವಣ್ಣನ ಗುಣಗಾನ‌ ನಡೆದಿದೆ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಬಸವಣ್ಣನ ವಚನಗಳು ಇಂದಿನ ಅಗತ್ಯ ಎಂದು ಪ್ರತಿಪಾದಿಸಿದರೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಾಡಿರುವ ಟ್ವೀಟ್ ಎಲ್ಲರ ಗಮನ ಸೆಳದಿದೆ.
    ಈ ಟ್ವೀಟ್ ನಲ್ಲಿ ಗಡ್ಕರಿ ಅವರು ಬಸವಣ್ಣ ಅವರನ್ನು ಲಿಂಗಾಯಿತ ಧರ್ಮದ‌ ಸ್ಥಾಪಕ ಎಂದು ಬಣ್ಣಿಸಿದ್ದಾರೆ.
    ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಹಲವರು ಕೊನೆಗೂ ಸತ್ಯ ಹೊರ ಬಂದಿದೆ ಎಂದು ಹೇಳಿ ಗಡ್ಕರಿ‌ ಅವರ ನಡೆಗೆ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.
    ಗಡ್ಕರಿ ಅವರು ಪ್ರತಿನಿಧಿಸುವ ನಾಗಪುರ ಲೋಕಸಭಾ ಕ್ಷೇತ್ರ ಹಾಗೂ ಅದರ ಆಸುಪಾಸಿನಲ್ಲಿ ಲಿಂಗಾಯಿತರು ದೊಡ್ಡ ಪ್ರಮಾಣದಲ್ಲಿದ್ದಾರೆ ಹೀಗಾಗಿ ಇವರ ಈ ಹೇಳಿಕೆ ಗಮನ ಸೆಳೆದಿದೆ.
    ಸಂಘ ಪರಿವಾರದ ಕಟ್ಟಾ ಕಾರ್ಯಕರ್ತ ನಿತಿನ್ ಗಡ್ಕರಿ‌ ಒಂದು ಅವಧಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದರು. ಹೀಗಾಗಿ ಲಿಂಗಾಯಿತ ಧರ್ಮ ಎಂಬ ಇವರ ಟ್ವೀಟ್ ಇದೀಗ ಚರ್ಚೆಯ ವಿಷಯವಾಗಿದೆ.

    basavanna lingayat nithin gadkari tweet ನಿತಿನ್ ಗಡ್ಕರಿ ಟ್ವೀಟ್
    Share. Facebook Twitter Pinterest LinkedIn Tumblr Email
    Previous Articleಪಂಜಾಬ್ ಗೆ ಸುಲಭ ಜಯ
    Next Article 28 ವರ್ಷ ಚಿಕ್ಕವಳ ಕೈಹಿಡಿದ ಮಾಜಿ ಕ್ರಿಕೆಟಿಗ!
    vartha chakra
    • Website

    Related Posts

    ರಸ್ತೆಯಲ್ಲಿ ಬೆತ್ತಲಾಗಿ ಓಡಿದ ಸಿನಿಮಾ ನಟಿ

    ಮಾರ್ಚ್ 21, 2023

    Ola ಮತ್ತು Uber ಗೆ ಸೆಡ್ಡು ಹೊಡೆದ ನಮ್ಮ ಯಾತ್ರಿ

    ಮಾರ್ಚ್ 18, 2023

    Oyo ಸಂಸ್ಥಾಪಕನ ತಂದೆ ಅನುಮಾನಾಸ್ಪದ ಸಾವು #oyo #startup

    ಮಾರ್ಚ್ 10, 2023

    Comments are closed.

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕ್ರೀಡೆ
    • ಚುನಾವಣೆ
    • ಚುನಾವಣೆ 2023
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬೆಂಗಳೂರು
    • ಮನರಂಜನೆ
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಮಾಜ
    • ಸಮೂಹ ಶಕ್ತಿ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    BJP ಸೇರಿದ ರೋಷನ್ ಬೇಗ್! #bjp #karnataka #congressparty #elections

    ರಸ್ತೆಯಲ್ಲಿ ಬೆತ್ತಲಾಗಿ ಓಡಿದ ಸಿನಿಮಾ ನಟಿ

    Electionಗೆ ಮುನ್ನವೇ DK ವ್ಯೂಹ ಛಿದ್ರ

    BJP ಸಿಎಂ ಅಭ್ಯರ್ಥಿ ಯಾರು?

    About
    About

    We're social, connect with us:

    Facebook Twitter YouTube
    Software Training
    Recent Posts
    • BJP ಸೇರಿದ ರೋಷನ್ ಬೇಗ್! #bjp #karnataka #congressparty #elections ಮಾರ್ಚ್ 21, 2023
    • ರಸ್ತೆಯಲ್ಲಿ ಬೆತ್ತಲಾಗಿ ಓಡಿದ ಸಿನಿಮಾ ನಟಿ ಮಾರ್ಚ್ 21, 2023
    • Electionಗೆ ಮುನ್ನವೇ DK ವ್ಯೂಹ ಛಿದ್ರ ಮಾರ್ಚ್ 21, 2023
    • BJP ಸಿಎಂ ಅಭ್ಯರ್ಥಿ ಯಾರು? ಮಾರ್ಚ್ 20, 2023
    • ರಮೇಶ್ ಜಾರಕಿಹೊಳಿಗೆ BJP ಗೇಟ್ ಪಾಸ್? ಮಾರ್ಚ್ 19, 2023
    • ಆರೋಗ್ಯ ನೌಕರರ ಮೇಲೆ ESMA ಬ್ರಹ್ಮಾಸ್ರ್ತ ಮಾರ್ಚ್ 19, 2023
    • ಹಿರಿಯೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪೂರ್ಣಿಮಾ ಶ್ರೀನಿವಾಸ್ ಕಣಕ್ಕಿಳಿಯಲಿದ್ದಾರೆ ಮಾರ್ಚ್ 18, 2023
    • ದಾರಿ ಕಾಣದಾದ ಸಿದ್ದರಾಮಯ್ಯ #siddaramaiah #congress #kharge ಮಾರ್ಚ್ 18, 2023
    • Ola ಮತ್ತು Uber ಗೆ ಸೆಡ್ಡು ಹೊಡೆದ ನಮ್ಮ ಯಾತ್ರಿ ಮಾರ್ಚ್ 18, 2023
    • ಬಯಲಾಯ್ತು Express ಹೆದ್ದಾರಿ ‌ಬಣ್ಣ! ಮಾರ್ಚ್ 18, 2023
    Popular Posts

    BJP ಸೇರಿದ ರೋಷನ್ ಬೇಗ್! #bjp #karnataka #congressparty #elections

    ಮಾರ್ಚ್ 21, 2023

    ರಸ್ತೆಯಲ್ಲಿ ಬೆತ್ತಲಾಗಿ ಓಡಿದ ಸಿನಿಮಾ ನಟಿ

    ಮಾರ್ಚ್ 21, 2023

    Electionಗೆ ಮುನ್ನವೇ DK ವ್ಯೂಹ ಛಿದ್ರ

    ಮಾರ್ಚ್ 21, 2023
    Copyright © 2023 Vartha Chakra
    • ಸುದ್ದಿ
    • ಬೆಂಗಳೂರು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ರಾಜಕೀಯ
      • ಚುನಾವಣೆ 2023
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • ಅಪರಾಧ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    A free roll of viewpoints in a political interview.
    H Vishwanath in Bicchu Maatu #jds #congressparty #kpcc #dkshivakumar #mysore #mysuru #siddaramaiah
    Subscribe