ಮೈಸೂರು.
ವಿಧಾನಸಭೆ ಚುನಾವಣೆ ನಂತರ ಅಧಿಕಾರ ಹಂಚಿಕೆ ಕುರಿತು ಹೈಕಮಾಂಡ್ ಮಟ್ಟದಲ್ಲಿ ನಡೆದ ಮಾತುಕತೆ ವೇಳೆ ಕೈಗೊಂಡ ತೀರ್ಮಾನದಂತೆ ಅಧಿಕಾರ ಹಸ್ತಾಂತರ ನಡೆಯಲಿದೆ ಎಂದು ಮಾಜಿ ಮಂತ್ರಿ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಯಾವುದೋ ಆರೋಪ ಬಂದಿದ್ದರಿಂದ ಶೀಘ್ರದಲ್ಲೇ ರಾಜೀನಾಮೆ ಕೊಡುತ್ತಾರೆ ಎಂದೆಲ್ಲಾ ಮಾಧ್ಯಮದಲ್ಲಿ ವಿಶ್ಲೇಷಣೆ-ಚರ್ಚೆ ನಡೆಯುತ್ತಿವೆ. ಯಾರಿಗೆ ಹೇಗೆ ಬೇಕೋ ಹಾಗೆ ವಿಶ್ಲೇಷಿಸುತ್ತಿದ್ದಾರೆ’ ಎಂದರು.
ಆರೋಪ ಬಂದಿದೆ ಎಂಬ ಮಾತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವುದಿಲ್ಲ ಬದಲಾಗಿ ಹೈಕಮಾಂಡ್ ಜೊತೆ ನಡೆದ ಮಾತುಕತೆಯ ಆಧಾರದಲ್ಲಿ ಮೊದಲ ಅವಧಿ ಮುಗಿದ ನಂತರ ತಮ್ಮ ಸ್ಥಾನ ತೊರೆಯಲಿದ್ದಾರೆ ಎಂದು ಹೇಳಿದರು.
ವಿಧಾನಸಭೆ ಚುನಾವಣೆ ಮುಗಿದು ಅಧಿಕಾರ ಹಂಚಿಕೆ ಕುರಿತು ಮಾತುಕತೆ ನಡೆದ ಸಮಯದಲ್ಲಿ ಮೊದಲ ಅವಧಿಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ ನಂತರದ ಅವರಿಗೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಒಪ್ಪಂದ ಏರ್ಪಟ್ಟಿತ್ತು. ಅದರಂತೆ ಬೆಳವಣಿಗೆಗಳು ನಡೆಯುತ್ತವೆ ಎಂದು ತಿಳಿಸಿದರು.
ಅಧಿಕಾರ ಹಸ್ತಾಂತರದ ಜೊತೆಗೆ ಮಂತ್ರಿಮಂಡಲ ಪುನಾರಚನೆಯೂ ಆಗಲಿದೆ. ಈ ವೇಳೆ ತಮಗೆ ಮಂತ್ರಿ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆ ಇದೆ ತಾವು ಮಂತ್ರಿ ಆಗಬೇಕು ಎಂದು ಹೈಕಮಾಂಡ್ ನಾಯಕರಿಗೆ ಇಂಗಿತವನ್ನು ತಿಳಿಸಿದ್ದೇನೆ ಅವರ ತೀರ್ಮಾನಕ್ಕಾಗಿ ಕಾಯುತ್ತಿದ್ದೇನೆ ಎಂದು ಹೇಳಿದರು
Previous Article16 ವರ್ಷಕ್ಕಿಂತ ಕಿರಿಯ ಮಕ್ಕಳು Social Media ಬಳಸುವಂತಿಲ್ಲ
Next Article San Fransisco ನಗರದ ಪರಿಸ್ಥಿತಿ ನೋಡಿ!


3 ಪ್ರತಿಕ್ರಿಯೆಗಳು
wowvegasus offers an astounding no-real-money casino knowledge stuffed with top-tier slots and semi-weekly giveaways. Players attraction the generous sign-up bonuses and the faculties to carry off the palm redeemable Sweepstakes Coins middle of humorous gameplay.
Feel the pulse of real-time betting and strategic gameplay. coins crown casino offers a wide range of poker variants and roulette wheels. Join now for a thrilling ride!
Sweet Bonanza brings the party to your screen with vibrant graphics and high-reward gameplay. Land sweet bonanza real money scatters, activate bombs, watch your balance grow. The fun never stops!