ಬೆಂಗಳೂರು,ಮೇ.22-ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಸೇನೆ,ನೌಕಾಪಡೆ ಹಾಗೂ ವಾಯುಪಡೆ ಸೇರುವ ಪದವಿ ವಿದ್ಯಾರ್ಥಿಗಳ ಬೋಧನಾ ಶುಲ್ಕ ಮನ್ನಾ ಮಾಡಲಾಗಿದೆ.
ರಕ್ಷಣಾ ಮತ್ತು ಅರೆಸೇನಾ ನಂತರದ ಪದವಿ ಕೋರ್ಸ್ ಗಳಿಗೆ ಶೇ 100ರಷ್ಟು ಬೋಧನಾ ಶುಲ್ಕ ಮನ್ನಾ ಮಾಡಲಾಗಿದ್ದು,ಭಾರತದ 22 ಲಕ್ಷ ಸಕ್ರಿಯ ರಕ್ಷಣಾ (ಸೇನೆ, ನೌಕಾಪಡೆ ಮತ್ತು ವಾಯುಪಡೆ) ಮತ್ತು ಸಿಆರ್ ಪಿಎಫ್, ಐಟಿಬಿಪಿ, ಬಿಎಸ್ಎಫ್ ಮತ್ತು ಎಸ್ ಎಸ್ ಬಿ ಸೇರಿ ಅರೆಸೈನಿಕ ಸಿಬ್ಬಂದಿಗೆ ಪ್ರತ್ಯೇಕವಾಗಿ ಜೈ ಜವಾನ್ ವಿದ್ಯಾರ್ಥಿ ವೇತನ ಪ್ರಾರಂಭಿಸಲಾಗಿದೆ.
ರಾಷ್ಟ್ರೀಯ ಕೃತಜ್ಞತೆ ಮತ್ತು ಶೈಕ್ಷಣಿಕ ಸೇರ್ಪಡೆ ಹೆಚ್ಚಿಸಲು ಬದ್ಧತೆಯನ್ನು ಪ್ರತಿಬಿಂಬಿಸುವ ಸಲುವಾಗಿ ಲವ್ಲಿ ವಿಶ್ವವಿದ್ಯಾಲಯವು ನೀಡುವ ಜೈ ಜವಾನ್ ಸ್ಕಾಲರ್ ಶಿಪ್ ಶಿಕ್ಷಣದಲ್ಲಿ ವಿಶ್ವದ ಅತಿದೊಡ್ಡ ಖಾಸಗಿ ವಿದ್ಯಾರ್ಥಿವೇತನ ಯೋಜನೆ ಎಂದು ರಾಜ್ಯಸಭಾ ಸದಸ್ಯ ಅಶೋಕ್ ಕುಮಾರ್ ತಿಳಿಸಿದ್ದಾರೆ.
ವಿದ್ಯಾರ್ಥಿವೇತನವು ಸಿಂಧೂರ್ ಯಶಸ್ವಿ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ವಿಶೇಷ ರಾಷ್ಟ್ರೀಯ ಪ್ರಸ್ತುತತೆಯನ್ನು ಹೊಂದಿದೆ, ಪೂರ್ಣ ಪ್ರಮಾಣದ ವಿದ್ಯಾರ್ಥಿವೇತನಗಳು ಒಗ್ಗಟ್ಟಿನ ಸ್ಪಷ್ಟವಾದ ಅಭಿವ್ಯಕ್ತಿಯಾಗಿದೆ – ಏಕೆಂದರೆ ನಿಜವಾದ ಗೌರವವು ಪದಗಳನ್ನು ಮೀರಿ ಕಾರ್ಯರೂಪಕ್ಕೆ ಬರಬೇಕು ಎಂದು ಹೇಳಿದರು.
ಲವ್ಲಿ ಪ್ರೊಫೆಷನಲ್ ವಿವಿ ಕುಲಪತಿ ಡಾ. ಅಶೋಕ್ ಕುಮಾರ್ ಮಿತ್ತಲ್ ರಕ್ಷಣಾ ಮತ್ತು ಅರೆಸೇನಾ ಸಿಬ್ಬಂದಿಗೆ ವಿಶ್ವದ ಅತಿದೊಡ್ಡ ಶೈಕ್ಷಣಿಕ ವಿದ್ಯಾರ್ಥಿವೇತನವು 22 ಲಕ್ಷಕ್ಕೂ ಹೆಚ್ಚು ಸಕ್ರಿಯ ಸೇವಾ ಸದಸ್ಯರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದರು.