ಮೈಸೂರು
ನಾಡಿನ ಅಧಿದೇವತೆ ಚಾಮುಂಡೇಶ್ವರಿ ನೆಲೆಸಿರುವ ತಾಣ ಚಾಮುಂಡಿ ಬೆಟ್ಟ. ಇದನ್ನು ಶಕ್ತಿಪೀಠ ಎಂದು ಕೂಡ ಕರೆಯುತ್ತಾರೆ ದೇವಿಯ ಆರಾಧನೆಗಾಗಿ ನಾಡಿನ ಮೂಲೆ ಮೂಲೆಗಳಿಂದ ಭಕ್ತರು ಬರುತ್ತಾರೆ.
ಆಶಾಡ ಶುಕ್ರವಾರ ಮತ್ತು ದಸರಾ ಸಮಯದಲ್ಲಿ ಇಲ್ಲಿ ಜನಜಂಗುಳಿ ನೆರೆದಿರುತ್ತದೆ ಇಂಥಹಾ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದೆ.
ಪ್ರಾಧಿಕಾರದ ಮೊದಲ ಸಭೆಯನ್ನು ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲವು ತೀರ್ಮಾನಗಳನ್ನು ಪ್ರಕಟಿಸಿದರು ಅದರಲ್ಲಿ ಪ್ರಮುಖವಾಗಿ ದೇವಾಲಯ ಪ್ರವೇಶಕ್ಕೆ ಯಾವುದೇ ವಸ್ತ್ರ ಸಂಹಿತೆ ಇಲ್ಲ. ಹಾಗೆ ಚಾಮುಂಡಿಬೆಟ್ಟದಲ್ಲಿ ಪ್ಲಾಸ್ಟಿಕ್ ಬಳಕೆ, ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧಿಸಲಾಗಿದೆ. ಅಲ್ಲದೇ ಚಾಮುಂಡಿ ದರ್ಶನ ವೇಳೆ ಮೊಬೈಲ್ ನಿಷೇಧ ಮಾಡಲಾಗಿದೆ ಎಂದು ಪ್ರಕಟಿಸಿದರು.
ಚಾಮುಂಡಿಬೆಟ್ಟವಷ್ಟೇ ಅಲ್ಲ ಎಲ್ಲಾ ದೇಗುಲಗಳಲ್ಲೂ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತದೆ. ಚಾಮುಂಡಿಬೆಟ್ಟದಲ್ಲಿ ಸುರಕ್ಷತೆ ಇರಬೇಕೆಂದು ಸಿಸಿಟಿವಿ ಅಳವಡಿಕೆ ಮಾಡಲಾಗುವುದು. ಚಾಮುಂಡಿಬೆಟ್ಟದಲ್ಲಿ ಪ್ರಸಾದ ವಿತರಣೆಗೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು
Previous Articleಭೂ ಚಕ್ರದ ಸುಳಿಯಲ್ಲಿ ಛಲವಾದಿ ನಾರಾಯಣ ಸ್ವಾಮಿ.
Next Article ಯತ್ನಾಳ್ ಗೆ ಬಿಗ್ ರಿಲೀಫ್


1 ಟಿಪ್ಪಣಿ
Betano Casino https://betanogame.org/el/bonuses/ – П„Ої ПѓПЂОЇП„О№ П„П‰ОЅ П„ОµПЃО¬ПѓП„О№П‰ОЅ jackpots. О”О№ОµОєОґОЇОєО·ПѓОµ П„Ої ОјПЂПЊОЅОїП…П‚ ОєО±О»П‰ПѓОїПЃОЇПѓОјО±П„ОїП‚ €500 ПѓО®ОјОµПЃО± ОєО±О№ ОµОѕОµПЃОµПЌОЅО·ПѓОµ П‡О№О»О№О¬ОґОµП‚ ПѓП…ОЅО±ПЃПЂО±ПѓП„О№ОєОїПЌП‚ П„ОЇП„О»ОїП…П‚. Live casino, ПѓП„ОїО№П‡О®ОјО±П„О± О±ОёО»О·ОјО¬П„П‰ОЅ ОєО±О№ ПЂОїО»О»О¬ О¬О»О»О± ПѓОµ ПЂОµПЃО№ОјООЅОїП…ОЅ. О“ОЇОЅОµ ОёПЃПЌО»ОїП‚ ОјОµ ОєО¬ОёОµ ПѓП„ОїОЇП‡О·ОјО±.