Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಡಿಕೆ ಶಿವಕುಮಾರ್ ಮತ್ತು ದೇವರಾಜ ಗೌಡ ನಡುವೆ ನಡೆದಿದ್ದೇನು.?
    Trending

    ಡಿಕೆ ಶಿವಕುಮಾರ್ ಮತ್ತು ದೇವರಾಜ ಗೌಡ ನಡುವೆ ನಡೆದಿದ್ದೇನು.?

    vartha chakraBy vartha chakraಮೇ 7, 20246 ಪ್ರತಿಕ್ರಿಯೆಗಳು3 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    ಬೆಂಗಳೂರು,ಮೇ.7:
    ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಕಿರುಕುಳ ಆರೋಪದ ಪೆನ್ ಡ್ರೈವ್ ಬಹಿರಂಗ ಪ್ರಕರಣ ಕ್ಷಣಕ್ಕೊಂದು ತಿರುವು ನಡೆಯುತ್ತಿದೆ. ಬಿಜೆಪಿ ನಾಯಕರ ಒತ್ತಡ ಮತ್ತು ಕುಮಾರಸ್ವಾಮಿ ಅವರ ಒಪ್ಪಿಗೆಯ ಮೇರೆಗೆ ವಕೀಲ ದೇವರಾಜೇ ಗೌಡ ಈ ಪೆನ್ ಡ್ರೈವ್ ಬಿಡುಗಡೆ ಮಾಡಿದ್ದಾರೆ ಎಂದು ಹಿರಿಯ ನಾಯಕ ಶಿವರಾಮೇಗೌಡ ಆಪಾದಿಸಿದ್ದಾರೆ.
    ಪೆನ್ ಡ್ರೈವ್ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕೈವಾಡವಿದೆ ಎಂದು ನಿನ್ನೆ ವಕೀಲ ದೇವರಾಜೇಗೌಡ ಆರೋಪ ಮಾಡಿ ಆಡಿಯೋ ಬಿಡುಗಡೆ ಮಾಡಿದ ಪ್ರಕರಣಕ್ಕೆ ಕುರಿತಂತೆ ಇಂದು ಶಿವರಾಮೇಗೌಡ ಸ್ಪಷ್ಟನೆ ನೀಡಿದ್ದಾರೆ.
    ದೇವರಾಜಗೌಡ ಹಾಗೂ ತಮ ನಡುವಿನ ಭೇಟಿ ಹಾಗೂ ಅನಂತರದ ಬೆಳವಣಿಗೆಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿರುವ ಶಿವರಾಮೇಗೌಡ ಅವರು ಈ ಪ್ರಕರಣದಲ್ಲಿ ಉಪಮುಖ್ಯಮಂತ್ರಿಯ ಡಿಕೆ ಶಿವಕುಮಾರ್ ಅವರ ಯಾವುದೇ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದರು.
    ತಾವು ಮತ್ತು ದೇವರಾಜೇಗೌಡ ಬಿಜೆಪಿಯಲ್ಲಿದ್ದೇವು. ಅವರು ಹೊಳೆನರಸೀಪುರದ ಅಭ್ಯರ್ಥಿ ಎಂಬ ಕಾರಣಕ್ಕೆ ಸಿಕ್ಕಾಗ ಹಾಯ್‌ ಬಾಯ್‌ ಹೇಳುತ್ತಿದ್ದೆ. ನಾಲ್ಕು ದಿನಗಳ ಹಿಂದಷ್ಟೆ ಅವರ ಜೊತೆ ಮಾತನಾಡಿದ್ದು ಬಿಟ್ಟರೆ, ಅದಕ್ಕೂ ಮೊದಲು ಹೆಚ್ಚಿನ ಪರಿಚಯ ಇರಲಿಲ್ಲ.ತಮ್ಮ ಮನೆಯಲ್ಲಿ ಎಂದಿನಂತೆ ಜನರನ್ನು ಭೇಟಿ ಮಾಡುವ ವೇಳೆ ಹೊಳೆನರಸೀಪುರದವರು ಬಂದಿದ್ದರು. ಅವರು ನಮ್ಮ ದೇವರಾಜೇಗೌಡರು ನಿಮ್ಮನ್ನು ಕೇಳುತ್ತಿದ್ದರು ಎಂದು ಹೇಳಿದರು. ವಿಡಿಯೋ ಬಹಿರಂಗದ ಬಗ್ಗೆ ನನಗೂ ಕುತೂಹಲ ಇತ್ತು. ಹಾಗಾಗಿ ಕರೆ ಮಾಡಿಕೊಡುವಂತೆ ಹೊಳೆನರಸೀಪುರದವರ ಬಳಿ ಹೇಳಿದ್ದೆ. ಫೋನ್‌ನಲ್ಲಿ ಸಂಪರ್ಕಕ್ಕೆ ಸಿಕ್ಕ ದೇವರಾಜೇಗೌಡರಿಗೆ ನಿಮ್ಮ ಆಸೆ ಈಡೇರಿತ್ತಲ್ಲ, ಎರಡು ವರ್ಷದ ನಿಮ್ಮ ಹೋರಾಟ ಯಶಸ್ವಿಯಾಯಿತಲ್ಲ ಎಂಬುದಾಗಿ ಅಭಿನಂದಿಸಿದ್ದೆ ಎಂದು ತಿಳಿಸಿದರು.
    ಆಗ ದೇವರಾಜ ಗೌಡ ಅವರು ನಾನು ಹಿರಿಯ ವಕೀಲೆ ಪ್ರಮೀಳಾನೇಸರ್ಗಿ ಅವರ ಕಚೇರಿಯಲ್ಲಿ ಕಿರಿಯ ವಕೀಲನಾಗಿ ಕೆಲಸ ಮಾಡುತ್ತಿದ್ದೇನೆ ನಾನು ತುಂಬಾ ಕಷ್ಟದಲ್ಲಿದ್ದು ನಿಮ್ಮನ್ನು ಭೇಟಿಯಾಗಬೇಕಿದೆ ಎಂದು ಹೇಳಿದ್ದರು ಆಗ ನಾನು ಈಗ ಸಾಧ್ಯವಿಲ್ಲ ನಾನು ಕೊಂಚ ಬ್ಯುಸಿಯಾಗಿದ್ದೇನೆ ಎಂದು ಹೇಳಿದ್ದೆ ಆನಂತರದಲ್ಲಿ ವಕೀಲೆ ಪ್ರಮೀಳಾನೇಸರ್ಗಿ  ಅವರ ಕಚೇರಿಯಲ್ಲಿ ಭೇಟಿಯಾಗಿ ಮಾತನಾಡಿದ್ದೆ ಎಂದು ತಿಳಿಸಿದರು
    ಈ ವೇಳೆ ದೇವರಾಜ ಗೌಡ ಅವರು ತಮಗೆ
    ಬಿಜೆಪಿಯ ಎಲ್ಲಾ ಮುಖಂಡರು ವಿಡಿಯೋ ಬಹಿರಂಗ ಪಡಿಸುವಂತೆ ಬಲವಂತ ಮಾಡಿದ್ದರು. ಅದಕ್ಕಾಗಿ ನಾನೇ ಬಿಡುಗಡೆ ಮಾಡಿದ್ದೆ. ಅದಕ್ಕೆ ಕುಮಾರಸ್ವಾಮಿಯವರ ಒಪ್ಪಿಗೆಯೂ ಇತ್ತು ಎಂದು  ನನ್ನ ಬಳಿ ಹೇಳಿಕೊಂಡರು. ನಾನು ವಿಡಿಯೋ ಬಿಡುಗಡೆ ಮಾಡಿದ ಮೇಲೆ ಸಾಕಷ್ಟು ಬೆಳವಣಿಗೆಯಾಗಿದೆ.ವ್ಯಾಪಕ ಚರ್ಚೆಯಾಗುತ್ತಿದೆ. ಒಮೆ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿಸಿ ಎಂದು ಅವರು ಕೇಳಿಕೊಂಡರು. ದೇವರಾಜಗೌಡ ಕೂಡ ಯುವ ಕಾಂಗ್ರೆಸ್‌‍ನಲ್ಲಿದ್ದರಂತೆ, ಆಗ ಡಿ.ಕೆ.ಶಿವಕುಮಾರ್‌ ಬೆಂಬಲ ನೀಡಲಿಲ್ಲ ಎಂಬ ಆಕ್ಷೇಪವನ್ನು ವ್ಯಕ್ತ ಪಡಿಸಿದ್ದರು. ಆಗಿದ್ದು ಆಗಿ ಹೋಯಿತು ಬಿಡಿ ಎಂದು ನಾನು ಸಮಾಧಾನ ಮಾಡಿದ್ದೆ. ನಮ ಮಾತುಕತೆ ವೇಳೆಗೆ ಡಿ.ಕೆ.ಶಿವಕುಮಾರ್‌ ಬೇರೆ ಊರಿನ ಪ್ರವಾಸದಲ್ಲಿದ್ದರು. ದೇವರಾಜೇಗೌಡ ರಾತ್ರಿ ಏಳು ಗಂಟೆಯವರೆಗೂ ತಮ ಜೊತೆಯಲ್ಲಿ ತಿಂಡಿ ತಿಂದುಕೊಂಡು ತಿರುಗಾಡಿಕೊಂಡಿದ್ದರು. ಆ ಬಳಿಕ ಹೋದರು. ಆ ಕ್ಷಣದಲ್ಲಿ ಅವರ ಚಟುವಟಿಕೆ ನೋಡಿದರೆ ಪ್ರಜ್ವಲ್‌ ರೇವಣ್ಣನಿಗಿಂತ ದೊಡ್ಡ ಮನೋರೋಗಿ ಎನಿಸಿತ್ತು ಎಂದು ವಿವರಿಸಿದರು.
    ತಮ್ಮ ಮೊಬೈಲ್‌ ಅನ್ನು ಗುಪ್ತಚರ ಇಲಾಖೆಯವರು ಟಾಪ್‌ ಮಾಡುತ್ತಿದ್ದಾರೆ ಎಂದು ಆತ ವಾಕಿಟಾಕಿ ಬಳಸುತ್ತಿದ್ದಾರೆ. ಹೋರಾಟ ಮಾಡುವ ನೀನು ಹುಷಾರು ಎಂದು ನಾನು ಕಾಳಜಿಯಿಂದ ಹೇಳಿದ್ದೆ. ರಾತ್ರಿ 11ಗಂಟೆಗೆ ಎಂದಿನಂತೆ ನಾನು ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಲು ಹೋಗಿದ್ದೆ. ಆರಂಭದಲ್ಲಿ ದೇವರಾಜೇಗೌಡ ನಿಮ ಬಳಿ ಮಾತನಾಡಬೇಕಂತೆ ಮಾತನಾಡುತ್ತೀರಾ ಎಂದು ಡಿ.ಕೆ.ಶಿವಕುಮಾರ್‌ ಅವರನ್ನು ಕೇಳಿದೆ.
    ಅವರು ಬೇಡ ಎಂದರು, ನಾನೇಕೆ ಅವರ ಜೊತೆ ಮಾತನಾಡಬೇಕು ಎಂದು ಅವರು ಹೇಳಿದರು. ನಾನೇ ಬಲವಂತ ಮಾಡಿ ಒಪ್ಪಿಸಿದೆ. ಸರಿ ಕರೆ ಮಾಡಿಕೊಡಿ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು. ಆ ವೇಳೆಗೆ ದೇವರಾಜೇಗೌಡ ದೂರದಲ್ಲಿದ್ದೇನೆ ಬರಲು ತಡವಾಗುತ್ತದೆ ಎಂದು ಹೇಳಿದ್ದರು.ನಾನು
    ಫೋನ್‌ನಲ್ಲೇ ಮಾತನಾಡಿ ಎಂದು ಡಿ.ಕೆ.ಶಿವಕುಮಾರ್‌ ಕೈಗೆ ಫೋನ್‌ ಕೊಟ್ಟೆ. ಡಿ.ಕೆ.ಶಿವಕುಮಾರ್‌ ಬಳಿಯೂ ದೇವರಾಜ್‌ಗೌಡ ಫೋನ್‌ನಲ್ಲಿ ಎರಡು ಮೂರು ಮಂದಿ ಸಂತ್ರಸ್ತರ ಬಗ್ಗೆ ವಿವರಣೆ ನೀಡುತ್ತಿದ್ದರು,ಅದನ್ನೇಲ್ಲಾ ಕೇಳಲು ನಿರಾಕರಿಸಿದ ಡಿ.ಕೆ.ಶಿವಕುಮಾರ್‌ ಎಸ್‌‍ಐಟಿ ರಚನೆ ಮಾಡಿದ್ದೇವೆ. ಏನೇ ಇದ್ದರೂ ತನಿಖಾಧಿಕಾರಿಗಳ ಮುಂದೆ ಹೇಳಿ ಎಂದು ಫೋನ್‌ ಕಟ್‌ ಮಾಡಿದ್ದರು ಎಂದು ಶಿವರಾಮೇಗೌಡ ವಿವರಿಸಿದ್ದಾರೆ.
    ಡಿ.ಕೆ.ಶಿವಕುಮಾರ್‌ಗೂ ಇದಕ್ಕೂ ಸಂಬಂಧ ಇಲ್ಲ, ದೇವರಾಜೇಗೌಡನನ್ನೂ ಕರೆದುಕೊಂಡು ಬಾ ಎಂದು ನನ್ನ ಬಳಿ ಅವರು ಹೇಳಿರಲಿಲ್ಲ. ಇಷ್ಟು ಕೆಳಮಟ್ಟದಲ್ಲಿ ರಾಜಕಾರಣ ಮಾಡುತ್ತಾರೆ ಎಂದು ನನಗೆ ಗೊತ್ತಿರಲಿಲ್ಲ. ಡಿ.ಕೆ.ಶಿವಕುಮಾರ್‌ ಮಾತನಾಡಿರುವ ಆಡಿಯೋ ಇದ್ದರೆ ಪೂರ್ತಿ ಬಹಿರಂಗ ಮಾಡಲಿ. ರಾಜಕೀಯಕ್ಕಾಗಿ ಸ್ಟಂಟ್‌ ಮಾಡುವುದು ಬೇಡ ಎಂದು ಶಿವರಾಮೇಗೌಡ ಸವಾಲು ಹಾಕಿದರು.
    ಡಿ.ಕೆ.ಶಿವಕುಮಾರ್‌ ಮಾತನಾಡಿರುವ ಕಾಲ್‌ ಅನ್ನು ದೇವರಾಜೇಗೌಡ ರೆಕಾರ್ಡ್‌ ಮಾಡಿಕೊಳ್ಳುವುದು ನನಗೆ ಗೊತ್ತಿರಲಿಲ್ಲ. ವಕೀಲ ಎಂಬ ಗೌರವದಿಂದ ನಾನು ಮಾತನಾಡಿದ್ದೆ, ಈ ರೀತಿ ಮಾಡುತ್ತಾರೆ ಎಂಬ ಮಾಹಿತಿ ಇದಿದ್ದರೆ ಹತ್ತಿರಕ್ಕೂ ಸೇರಿಸಿಕೊಳ್ಳುತ್ತಿರಲಿಲ್ಲ ಎಂದು ಅಸಮಧಾನ ವ್ಯಕ್ತ ಪಡಿಸಿದರು.

    ಕಾಂಗ್ರೆಸ್ ರಾಜಕೀಯ ಲೈಂಗಿಕ ಕಿರುಕುಳ ಹಾಸನ
    Share. Facebook Twitter Pinterest LinkedIn Tumblr Email WhatsApp
    Previous Articleಪ್ರಜ್ವಲ್ ರೇವಣ್ಣ ಮಾನಸಿಕ ಅಸ್ವಸ್ಥ!.?
    Next Article ಪೆನ್ ಡ್ರೈವ್ ಪ್ರಕರಣ ಶಿವಕುಮಾರ್ ಮಾಡಿದ ಪಿತೂರಿಯಂತೆ.
    vartha chakra
    • Website

    Related Posts

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    ಜೂನ್ 24, 2025

    ಸುಂದರಿ ಜಾಲಕ್ಕೆ ಬಲಿಯಾದ ಇರಾನ್.

    ಜೂನ್ 24, 2025

    ಗುಜರಾತ್ ನಲ್ಲಿ ಆಪ್ ಗೆದ್ದೇ ಬಿಡ್ತು.

    ಜೂನ್ 24, 2025

    6 ಪ್ರತಿಕ್ರಿಯೆಗಳು

    1. dagpv on ಜೂನ್ 7, 2025 7:34 ಅಪರಾಹ್ನ

      can i get generic clomid prices how to get clomiphene without prescription cost generic clomiphene without insurance buying clomid clomid rx for men where can i buy generic clomid no prescription clomid prices in south africa

      Reply
    2. where to buy cialis online in canada on ಜೂನ್ 9, 2025 4:07 ಫೂರ್ವಾಹ್ನ

      More text pieces like this would make the интернет better.

      Reply
    3. does flagyl cover e coli on ಜೂನ್ 10, 2025 10:19 ಅಪರಾಹ್ನ

      I couldn’t weather commenting. Warmly written!

      Reply
    4. tecbd on ಜೂನ್ 18, 2025 5:29 ಫೂರ್ವಾಹ್ನ

      inderal 20mg oral – methotrexate 5mg usa methotrexate 2.5mg price

      Reply
    5. hvfe7 on ಜೂನ್ 21, 2025 2:54 ಫೂರ್ವಾಹ್ನ

      order amoxil for sale – ipratropium 100 mcg cost buy ipratropium pills

      Reply
    6. e2cw0 on ಜೂನ್ 23, 2025 6:22 ಫೂರ್ವಾಹ್ನ

      azithromycin drug – order azithromycin online cheap nebivolol price

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    ಸುಂದರಿ ಜಾಲಕ್ಕೆ ಬಲಿಯಾದ ಇರಾನ್.

    ಗುಜರಾತ್ ನಲ್ಲಿ ಆಪ್ ಗೆದ್ದೇ ಬಿಡ್ತು.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • AlbertDuabe ರಲ್ಲಿ ನೇಮಕಾತಿ ಪರೀಕ್ಷೆ ಅಕ್ರಮ – ಸಿಐಡಿ ತನಿಖೆ | CID Investigation
    • klining_lsEt ರಲ್ಲಿ ಹೆಬ್ಬಗೋಡಿಯಲ್ಲಿ ರೇವೋ ಪಾರ್ಟಿ.
    • pechat_na_futbolkah_chSt ರಲ್ಲಿ ನಟ ದರ್ಶನ್ ಮಾನಸಿಕವಾಗಿ ಸಿದ್ದರಾಗಿಲ್ಲವಂತೆ.
    Latest Kannada News

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    ಜೂನ್ 24, 2025

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    ಜೂನ್ 24, 2025

    ಸುಂದರಿ ಜಾಲಕ್ಕೆ ಬಲಿಯಾದ ಇರಾನ್.

    ಜೂನ್ 24, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಮುರುಡೇಶ್ವರಕ್ಕೆ_ ಹೋಗ್ತಿದ್ದೀರಾ ಜೀನ್ಸ್ ಹಾಕ್ಲೇಬೇಡಿ! #murudeshwar #culturedress #karnataka #rules #shiva
    Subscribe