Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ನಕಲಿ ವೀರರು ಅರೆಸ್ಟ್.
    Trending

    ನಕಲಿ ವೀರರು ಅರೆಸ್ಟ್.

    vartha chakraBy vartha chakraಜುಲೈ 15, 2025ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಜು.15-
    ವಿವಿಧ ಅಪರಾಧ ಪ್ರಕರಣಗಳಲ್ಲಿ ಸಿಲುಕಿ ಕೋರ್ಟ್ ನಲ್ಲಿ ಜಾಮೀನು ಪಡೆಯಲು ಪರದಾಡುವರನ್ನು ಸಂಪರ್ಕಿಸಿ ದುಬಾರಿ ಮೊತ್ತ ಪಡೆದು ನಕಲಿ ಆಧಾರ್ ಕಾರ್ಡ್ ಗಳು, ಆರ್ ಟಿಸಿ, ಎಂ.ಆರ್.ದಾಖಲೆಗಳ ಮೂಲಕ ಜಾಮೀನು ನೀಡಿ ಪರಾರಿಯಾಗುತ್ತಿದ ಐನಾತಿ ವಂಚಕರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ
    ವಿಜಯನಗರದ ಹೂವಿನಡಗಲಿಯ ರಫೀ(35)ಯಲಹಂಕದ ಸಿಂಗನಹಳ್ಳಿಯ ಪ್ರವೀಣ್ ಕುಮಾರ್(32)ತಿಪಟೂರು ತಾಲೂಕಿನ ತಿಬ್ಬನಹಳ್ಳಿಯ ಅಭಿಷೇಕ್(33)ಆನೇಕಲ್ ನ‌ ಮೈಸೂರಮ್ಮನ ದೊಡ್ಡಿಯ ಗೋವಿಂದ ನಾಯಕ್(37) ಮಾಗಡಿ ತಾಲೂಕಿನ ಚೌಡನ ಪಾಳ್ಯದ ದೊರೆರಾಜ್ (32) ಬಿಟಿಎಂ ಲೇಔಟ್ ನ ಅಬೀದ್ ವಾಸೀಂ(48) ಯಶವಂತಪುರದ ಅಹಮ್ಮದ್ ಜುಬೇರ್(23)ಹಾಗೂ ತುಮಕೂರು ಜಿಲ್ಲೆಯ ತಾವರೆಕೆರೆಯ ಗೋವಿಂದರಾಜು(32) ಬಂಧಿತ ಆರೋಪಿಗಳಾಗಿದ್ದಾರೆ.
    ಬಂಧಿತರಿಂದ 47 ನಕಲಿ ಆಧಾರ್ ಕಾರ್ಡ್‍ಗಳು, 122 ವಿವಿದ ರೀತಿಯ ನಕಲಿ ದಾಖಲಾತಿಗಳು, ನಕಲಿ ಸ್ಟ್ಯಾಂಫ್ ಪೇಪರ್ 1 ಪೆನ್‍ಡ್ರೈವ್ ಹಾಗೂ 7 ಮೊಬೈಲ್‍ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.
    ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ,ಹಲಸೂರುಗೇಟ್ ನ 4ನೇ ಎಸಿಜೆಎಂ ನ್ಯಾಯಾಲಯದ ಶಿರಸ್ತೇದಾರ್ ಸೆಲ್ವರಾಜ್ ನೀಡಿದ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ನಡೆಸಲಾಯಿತು ಎಂದು ಹೇಳಿದರು
    ಸೆಲ್ವರಾಜ್ ಅವರು ನಕಲಿ ಜಮೀನಿನ ದಾಖಲಾತಿಗಳನ್ನು ಸಲ್ಲಿಸಿ ನ್ಯಾಯಾಲಯದಲ್ಲಿ ಆರೋಪಿಗಳ ಪರವಾಗಿ ಜಾಮೀನು ನೀಡಲು ಬಂದಿದ್ದ ಓರ್ವ ವ್ಯಕ್ತಿಯ ವಿರುದ್ಧ, ಕಾನೂನು ಕ್ರಮ ಕೈಗೊಳ್ಳುವಂತೆ ಸಲ್ಲಿಸಿದ ದೂರಿನ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ  ಹಲಸೂರುಗೇಟ್ ಪೊಲೀಸರು ಪ್ರಕರಣ ದಾಖಲಿಸಿದ್ದರು.
    ಪ್ರಕರಣದ ತನಿಖೆಯನ್ನು ಕೈಗೊಂಡು ಓರ್ವನನ್ನು 4ನೇ ಎಸಿಜೆಎಂ ನ್ಯಾಯಾಲಯದ ಬಳಿ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಹಣಗಳಿಸುವ ಉದ್ದೇಶದಿಂದ ನಕಲಿ ಜಮೀನಿನ ದಾಖಲಾತಿಗಳು, ನಕಲಿ ಗುರುತಿನ ಚೀಟಿಗಳನ್ನು ಸೃಷ್ಠಿಸಿ ಮಾನ್ಯ ನ್ಯಾಯಾಲಯದಲ್ಲಿ ಆರೋಪಿಗಳ ಪರವಾಗಿ ಜಾಮೀನು ನೀಡುತ್ತಿದ್ದುದಾಗಿ ತಪ್ಪೊಪ್ಪಿಕೊಂಡು ಈ ರೀತಿಯ ಕೃತ್ಯಗಳಲ್ಲಿ ಸಹಕರಿಸಿದ ಇತರೆ ಏಳು ಸಹಚರರ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡಿದ್ದು,ಅದನ್ನು ಆಧರಿಸಿ ಉಳಿದವರನ್ನು ಬಂಧಿಸಲಾಗಿದೆ.
    ಬಂಧಿತರಲ್ಲಿ ರಫೀ ಹೊರತುಪಡಿಸಿ ಉಳಿದೆಲ್ಲರೂ ಪದವೀಧರರಾಗಿದ್ದು, ಹೆಚ್ಚಿನ ಹಣದಾಸೆಗೆ ಇಂತಹ ಕೃತ್ಯದಲ್ಲಿ ತೊಡಗಿದ್ದರು,
    ಇವರ ಜಾಲದ ಜೊತೆ ಇನ್ನೂ ಹಲವರು ಭಾಗಿಯಾಗಿ, ನಕಲಿ ದಾಖಲಾತಿಗಳನ್ನು ಸೃಷ್ಠಿಸಿ ಹಾಗೂ ಶೂರಿಟಿ ನೀಡುತ್ತಿದ್ದು ಅವರುಗಳ ಪತ್ತೆ ಕಾರ್ಯ ಮುಂದುವರೆದಿದ್ದು ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದರು.

    Bangalore crime Government Karnataka News Trending Varthachakra ಕಾಂಗ್ರೆಸ್ ಕಾನೂನು ತುಮಕೂರು ನ್ಯಾಯ ಬೆಂಗಳೂರು ಮೈ ಸುದ್ದಿ
    Share. Facebook Twitter Pinterest LinkedIn Tumblr Email WhatsApp
    Previous Articleಉಪನ್ಯಾಸಕರಲ್ಲ ಇವರು ರಾಕ್ಷಸರು.
    vartha chakra
    • Website

    Related Posts

    ಉಪನ್ಯಾಸಕರಲ್ಲ ಇವರು ರಾಕ್ಷಸರು.

    ಜುಲೈ 15, 2025

    ಆಟೋ ಪ್ರಯಾಣ ಬಲು ದುಬಾರಿ.

    ಜುಲೈ 15, 2025

    ಪೊಲೀಸ್ ಆಡಳಿತಕ್ಕೆ ಮೇಜರ್ ಸರ್ಜರಿ.

    ಜುಲೈ 15, 2025

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ನಕಲಿ ವೀರರು ಅರೆಸ್ಟ್.

    ಉಪನ್ಯಾಸಕರಲ್ಲ ಇವರು ರಾಕ್ಷಸರು.

    ಆಟೋ ಪ್ರಯಾಣ ಬಲು ದುಬಾರಿ.

    ಪೊಲೀಸ್ ಆಡಳಿತಕ್ಕೆ ಮೇಜರ್ ಸರ್ಜರಿ.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Connietaups ರಲ್ಲಿ ಕುಮಾರಸ್ವಾಮಿ ಶೀಘ್ರದಲ್ಲಿ ಸಿಎಂ ಆಗುತ್ತಾರಂತೆ.
    • g5nee ರಲ್ಲಿ ಗ್ರಾಮ ಪಂಚಾಯತಿ ಗ್ರಂಥಾಲಯ ನೌಕರರಿಗೆ ವೇತನ ಭದ್ರತೆ | Gram Panchayat
    • FrankCak ರಲ್ಲಿ ಡಿ.ಕೆ‌. ಸುರೇಶ್ ಕೆಎಂಎಫ್ ಅಧ್ಯಕ್ಷರಾಗುವುದು ಖಚಿತ.
    Latest Kannada News

    ನಕಲಿ ವೀರರು ಅರೆಸ್ಟ್.

    ಜುಲೈ 15, 2025

    ಉಪನ್ಯಾಸಕರಲ್ಲ ಇವರು ರಾಕ್ಷಸರು.

    ಜುಲೈ 15, 2025

    ಆಟೋ ಪ್ರಯಾಣ ಬಲು ದುಬಾರಿ.

    ಜುಲೈ 15, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಬೀದಿನಾಯಿಗಳಿಗೆ ಚಿಕನ್ ರೈಸ್ ಭಾಗ್ಯ ! #varthachakra #bbmp #instagram #streetdogs #bangalore #biriyani
    Subscribe