ಬೆಂಗಳೂರು,ಏ.21:
ವಿಧಾನಮಂಡಲದ ಬಜೆಟ್ ಅಧಿವೇಶನದ ವೇಳೆ ವಿಧಾನಸಭೆಯಲ್ಲಿ ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಬಿಜೆಪಿ ಸದಸ್ಯರನ್ನು ಶಾಸನಸಭೆ ಕಲಾಪದಿಂದ ಅಮಾನತುಗೊಳಿಸಿದ ಆದೇಶ ವಾಪಸ್ ಪಡೆಯಲು ಸಭಾಧ್ಯಕ್ಷ ಯುಟಿ ಖಾದರ್ ಚಿಂತನೆ ನಡೆಸಿದ್ದಾರೆ.
ತಮ್ಮ ಶಾಸಕರನ್ನು ಕಲಾಪದಿಂದ ಅಮಾನತುಗೊಳಿಸಿದ ನಿರ್ಧಾರ ವಾಪಸ್ ಪಡೆಯುವಂತೆ ಆಗ್ರಹಿಸಿ ವಿಧಾನಸಭೆ ಪ್ರತಿ ಪಕ್ಷ ನಾಯಕ ಆರ್ ಅಶೋಕ್ ಬಿಜೆಪಿ ಶಾಸಕರ ನಿಯೋಗದಲ್ಲಿ ಸಭಾಧ್ಯಕ್ಷ ಯುಟಿ ಖಾದರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು
ವಿಧಾನಸಭಾಧ್ಯಕ್ಷರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್ ಅಮಾನತು ಆದೇಶವನ್ನು ಪರಿಶೀಲನೆ ಮಾಡುವುದಾಗಿ ಸಭಾಧ್ಯಕ್ಷರು ತಿಳಿಸಿದ್ದಾರೆ. ವಿಧಾನಸಭೆಯ ಒಳಗೆ ನಡೆದಿರುವ ಘಟನೆಯಾಗಿದ್ದು, ಸರ್ಕಾರದ ಜೊತೆ ಈ ಸಂಬಂಧ ಚರ್ಚೆ ಮಾಡುವುದಾಗಿ ಹೇಳಿದ್ದಾರೆ ಎಂದರು
ಸಭಾಧ್ಯಕ್ಷರ ಪೀಠದ ಬಗ್ಗೆ ನಮಗೆ ಅಗೌರವವಿಲ್ಲ, ಗೌರವವಿದೆ. ಆದರೂ ಆರು ತಿಂಗಳು ಅಮಾನತು ಮಾಡಿರುವುದು ಸರಿಯಲ್ಲ. ಈ ಹಿಂದೆ ಅನೇಕ ಘಟನೆಗಳು ನಡೆದಿವೆ. ಅಮಾನತು ಮಾಡಿರುವುದರಿಂದ ವಿವಿಧ ಸಮಿತಿ ಸಭೆಗಳಿಗೆ ಶಾಸಕರು ಹೋಗಲಾಗುತ್ತಿಲ್ಲ ಎಂದು ಹೇಳಿದರು. ಸದನದಲ್ಲಿ ಸಚಿವ ಕೆ.ಎನ್.ರಾಜಣ್ಣ ಅವರು ಹನಿಟ್ರಾಪ್ ವಿಚಾರ ಪ್ರಸ್ತಾಪಿಸಿದಾಗ, ಪಕ್ಷದ ವತಿಯಿಂದ ಆ ಬಗ್ಗೆ ಮಾತನಾಡಿದ್ದೇವೆ ಎಂದು ತಿಳಿಸಿದರು.ಈ ವೇಳೆ ನಡೆದ ಅಹಿತಕರ ಘಟನೆ ಮರೆತು ಅಮಾನತು ಆದೇಶ ವಾಪಸ್ ಪಡೆಯುವಂತೆ ಕೋರಿದ್ದೇವೆ ಎಂದು ಹೇಳಿದರು.
Previous Articleಕ್ರೈಸ್ತ ಧರ್ಮಗುರು ಪೋಪ್ ಫ್ರಾನ್ಸಿಸ್ ಅಸ್ತಂಗತ
Next Article ಐಸ್ ಕ್ರೀಮ್ ನಿಂದ ಜೀವ ಉಳಿಯಿತು


1 ಟಿಪ್ಪಣಿ
This is what happens when luck gets personal – http://ropinirolec.com/mostbet-casino-recenze-2026-nejlepsi-online-kasino-pro-cechy/ , Your winning era begins the second you join .