ಜೀವನದಿ ಕಾವೇರಿ ಉಗಮಿಸುವ ನಾಡು ಕೊಡಗು. ಕರ್ನಾಟಕ ತಮಿಳುನಾಡು ಕೇರಳ ಮತ್ತು ಪಾಂಡಿಚರಿ ರಾಜ್ಯಗಳಿಗೆ ನೀರುಣಿಸುವ ಪುಣ್ಯಭೂಮಿ ಕೊಡಗಿನಲ್ಲಿ ಪ್ರತಿ ವರ್ಷ ಮಳೆ ಬಾರಿ ಅವಾಂತರವನ್ನೇ ಸೃಷ್ಟಿಸುತ್ತದೆ.
ಇದನ್ನು ಮನ ಕಂಡಿರುವ ಮಡಿಕೇರಿ ಕ್ಷೇತ್ರದ ಉತ್ಸಾಹಿ ಹಾಗೂ ಜನಪ್ರಿಯ ಶಾಸಕ ಡಾಕ್ಟರ್ ಮಂತರಗೌಡ ಮುಂಗಾರು ಆರಂಭಕ್ಕೆ ಮುನ್ನವೇ ಮಳೆ ಅವಾಂತರಗಳ ಕುರಿತು ಅಧ್ಯಯನ ನಡೆಸಿ ಈ ಹಿಂದೆ ಆದ ಅನಾಹುತಗಳು ಪುನರಾವರ್ತನೆಯಾಗಬಾರದು ಜನಸಾಮಾನ್ಯರ ಜೀವನದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರಬಾರದು ಎಂದು ಮುಂದಾಲೋಚನೆ ಮಾಡಿದ್ದಾರೆ ಇದಕ್ಕಾಗಿ ಮಡಿಕೇರಿ ನಗರಸಭೆಯ ಅಧಿಕಾರಿಗಳ ಸಭೆ ನಡೆಸಿ ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ಮುಂಗಾರು ಸಂದರ್ಭ ಮಡಿಕೇರಿ ನಗರದಲ್ಲಿ ರಾಜ ಕಾಲುವೆಯಲ್ಲಿ ಕಸ ಕಡ್ಡಿ ಸೇರದಂತೆ ಕಾಲ ಕಾಲಕ್ಕೆ ಸ್ವಚ್ಚಗೊಳಿಸಬೇಕು.ಮಳೆಯಿಂದ ಯಾವುದೇ ಅವಘಡ ನಡೆಯದಂತೆ ಹೆಚ್ಚಿನ ಎಚ್ಚರ ವಹಿಸಬೇಕು ಎಂದು ಶಾಸಕ ನಗರಸಭೆ ಅಧಿಕಾರಿಗಳಿಗೆ ಸಲಹೆ ಮಾಡಿದ್ದಾರೆ
ಮಳೆಗಾಲಕ್ಕೆ ಮುನ್ನವೇ ಅಧಿಕಾರಿಗಳು ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ತಗ್ಗು ಪ್ರದೇಶದಲ್ಲಿ ಮಳೆ ನೀರು ನಿಲ್ಲದೆ ಸರಾಗವಾಗಿ ಹರಿಯುವಂತೆ ಮಾಡಬೇಕು. ನಗರದ ವಿವಿಧ ಪ್ರದೇಶಗಳಲ್ಲಿ ಹೆಚ್ಚಿನ ಮಳೆ ಸಂದರ್ಭದಲ್ಲಿ ಕಾಳಜಿ ವಹಿಸಬೇಕು. ಯಾವುದೇ ರೀತಿಯ ತೊಂದರೆ ಆಗದಂತೆ ಮುನ್ನೆಚ್ಚರ ವಹಿಸಬೇಕು ಎಂದು ಸಲಹೆ ಮಾಡಿದ್ದಾರೆ.
ಮಳೆಗಾಲದ ಅವಧಿಯಲ್ಲಿ ಹಲವು ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ
ಪರಿಸರ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸಹಾಯವಾಣಿ ಆರಂಭಿಸುವ ಮೂಲಕ ಮುಂಗಾರು ಸಂಬಂಧ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಅವರು ನಿರ್ದೇಶನ ನೀಡಿದ್ದಾರೆ
ಸಾರ್ವಜನಿಕರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕು. ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ರಾಜಾಸೀಟು ಮತ್ತು ಜನರಲ್ ತಿಮ್ಮಯ್ಯ ಮುಖ್ಯರಸ್ತೆ ಅಭಿವೃದ್ಧಿಪಡಿಸಲು ಮುಂದಾಗಲಾಗಿದೆ. ಆ ನಿಟ್ಟಿನಲ್ಲಿ ಪಾದಚಾರಿ ದಾರಿ, ಚರಂಡಿ, ವಾಹನಗಳ ಪಾರ್ಕಿಂಗ್ ಹೀಗೆ ಎಲ್ಲವನ್ನೂ ಒಳಗೊಂಡ ರಸ್ತೆ ಅಭಿವೃದ್ಧಿಪಡಿಸಲು ಮುಂದಾಗಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಅಧಿಕಾರಿಗಳು ಫಾರ್ಮ್ ನಂ.3 ನ್ನು ಸರಿಯಾಗಿ ನಿರ್ವಹಣೆ ಮಾಡುವಂತೆ ಶಾಸಕರು ಸೂಚಿಸಿದರು. ನಗರಸಭೆ ಕೆಲಸಗಳ ಸಂಬಂಧ ಪಟ್ಟಿ ಮಾಡಿ ನಾಮಫಲಕದಲ್ಲಿ ಅಳವಡಿಸುವಂತೆಯೂ ಸಲಹೆ ನೀಡಿದರು.
ಈ ವೇಳೆ ,ನಗರಸಭೆ ಸದಸ್ಯರಾದ ಬಿ.ವೈ.ರಾಜೇಶ್, ಬಿ.ಪಿ.ಚಿತ್ರಾವತಿ, ಸತೀಶ್, ಸವಿತಾ ರಾಕೇಶ್ ಬಶೀರ್ ಅಹ್ಮದ್, ಪಿ.ಚಂದ್ರಶೇಖರ್, ಕೆ.ಎಂ.ಅಪ್ಪಣ್ಣ, ಸಬಿತಾ, ಮೇರಿ ವೇಗಸ್, ಕೆ.ಎಸ್.ರಮೇಶ್, ಎಂ.ಎ. ಮುಸ್ತಾಪ, ಸಿ.ಕೆ.ಮಂಜುಳಾ, ಅರುಣ್ ಶೆಟ್ಟಿ, ಎನ್.ಪಿ. ಅನಿತಾ, ಎಂ.ಕೆ.ಮನ್ಸೂರ್ ಅಲಿ, ನೀಮಾ ಆರ್ಶದ್, ವೈ.ಡಿ ಶ್ವೇತಾ, ನಾಮ ನಿರ್ದೇಶಿತ ಸದಸ್ಯರಾದ ಸದಾ ಮುದ್ದಪ್ಪ, ಜಿ.ಸಿ.ಜಗದೀಶ್, ಜುಲೈಕಾಬಿ, ಬಿ.ಎನ್.ಮುದ್ದುರಾಜ್ ಇತರರು ಹಲವು ವಿಚಾರಗಳ ಕುರಿತು ಗಮನ ಸೆಳೆದರು.
Previous Articleತಾಳಿ ಕಟ್ಟಿಸಿಕೊಳ್ಳಬೇಕಿದ್ದ ವಧು ಮಾಡಿದ್ದೇನು ಗೊತ್ತೇ ?
Next Article ನಮ್ಮ ಮೆಟ್ರೋ ದ ವಿಕೃತ ಸಿಕ್ಕಿಬಿದ್ದ.