ಹಿರಿಯ ವಕೀಲರು, ವಿಧಾನ ಪರಿಷತ್ ಮಾಜಿ ಸದಸ್ಯರು, ಸಹಕಾರಿ ಧುರೀಣರೂ ಅದ ಶ್ರೀಯುತ ರಮೇಶ್ ಬಾಬು ಅವರು ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ನಿಯಮಿತದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಬ್ಯಾಂಕ್ ನ ಅಧ್ಯಕ್ಷರಾಗಿ ಬ್ಯಾಂಕ್ ಹಾಗು ಅದರ ಸದಸ್ಯರ ಏಳಿಗೆಗಾಗಿ ಶ್ರಮಿಸಿದ ಶ್ರೀಯುತರು, ಬ್ಯಾಂಕ್ ಅನ್ನು ಅತ್ಯಂತ ಲಾಭದಾಯಕ ಹಾಗು ವಿಶ್ವಾಸಾರ್ಹ ಸಂಸ್ಥೆಯನ್ನಾಗಿಸಿ ಅದನ್ನು ಪ್ರಗತಿ ಪಥದತ್ತ ಕೊಂಡೊಯ್ದರು. ವಕೀಲ ಸಮುದಾಯವಷ್ಟೇ ಅಲ್ಲ ಬ್ಯಾಂಕ್ ಎಲ್ಲಾ ಸದಸ್ಯರ ಆಗು ಹೋಗುಗಳಿಗೆ ಸ್ಪಂದಿಸುವ ಮೂಲಕ ಬ್ಯಾಂಕ್ ನಿಜವಾದ ಅರ್ಥದಲ್ಲಿ ನ್ಯಾಯಮಿತ್ರನಾಗಿ ಕೆಲಸ ಮಾಡುವಂತೆ ಮಾಡಿದವರು ರಮೇಶ್ ಬಾಬು ಸಹಕಾರಿಯಾಗಿ ಇವರು ಮಾಡಿದ ವಿನೂತನ ಪ್ರಯೋಗಗಳಿಂದ ಈ ಬ್ಯಾಂಕ್ ಬೆಂಗಳೂರಿನಲ್ಲಿ ಅತ್ಯಂತ ವಿಶ್ವಾಸಾರ್ಹ ಸಂಸ್ಥೆಯಾಗಿದೆ. ಇವರ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ ಇತ್ತೀಚೆಗೆ ಇವರಿಗೆ ಸಹಕಾರ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ಇಂತಹ ಸಹಕಾರಿಯ ಸೇವೆಯನ್ನು ಗುರುತಿಸಿದ ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ನ ಸದಸ್ಯರು ಇವರನ್ನು ಮತ್ತೊಂದು ಅವಧಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ.
ಈ ಅವಧಿಯಲ್ಲಿ ಬ್ಯಾಂಕ್ 103775.4 ಲಕ್ಷ ರೂಪಾಯಿ ವಹಿವಾಟು ನಡೆಸಿದ್ದು,353.93 ಲಕ್ಷ ರೂಪಾಯಿ ಲಾಭಗಳಿಸಿದೆ ಎಂದು ಬ್ಯಾಂಕ್ ನ ಪ್ರಧಾನ ವ್ಯವಸ್ಥಾಪಕ ಡಿ.ಆರ್.ಪ್ರಸನ್ಮ ತಿಳಿಸಿದ್ದಾರೆ.