Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ರವಿ ಬೆಳಗೆರೆಗೆ ಅಪಮಾನ ಮಾಡಿತ್ತಾ ಸ್ಟಾರ್ ಸುವರ್ಣ…?
    ಸುದ್ದಿ

    ರವಿ ಬೆಳಗೆರೆಗೆ ಅಪಮಾನ ಮಾಡಿತ್ತಾ ಸ್ಟಾರ್ ಸುವರ್ಣ…?

    vartha chakraBy vartha chakraಏಪ್ರಿಲ್ 19, 2022Updated:ಏಪ್ರಿಲ್ 21, 2022ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಕನ್ನಡ ಚಾನೆಲ್ ಕಟ್ಟಲು ಕನ್ನಡದ ಮನಸ್ಸುಗಳು ಬೇಕು. ಯಾವಯಾವುದೋ ಕಾರಣಕ್ಕೆ ಯಾರಯಾರನ್ನೋ ತಂದು ಚಾನೆಲ್ ಹೆಡ್ ಸ್ಥಾನದಲ್ಲಿ ಕೂರಿಸಿದರೆ ಯಾವುದು ಆಗಬಾರದೋ ಅದೇ ಆಗತ್ತೆ.

    ಸುವರ್ಣ ಚಾನೆಲ್ ನಲ್ಲಿ ಆಗಿದ್ದು ಅದೇ. ರವಿ ಬೆಳೆಗೆರೆ ಅವರ ಜನಪ್ರಿಯ ಕಾದಂಬರಿ `ಹೇಳಿಹೋಗು ಕಾರಣ’ ಧಾರಾವಾಹಿ ಪ್ರಸಾರಕ್ಕೆ ಯೋಗ್ಯವಲ್ಲ ಅಂತ ತಿರಸ್ಕರಿಸಿದೆ. ಆದರೆ ಇದು ದೊಡ್ಡ ಸುದ್ದಿಯಾಗಲೇ ಇಲ್ಲ.

    ‘ಹೇಳಿಹೋಗು ಕಾರಣ’ ಧಾರಾವಾಹಿ ಮಾಡಲು ಸುವರ್ಣ ಚಾನೆಲ್ ತಾತ್ವಿಕ ಒಪ್ಪಿಗೆ ನೀಡಿತ್ತು. ಜೀ ಕನ್ನಡದ `ಗಟ್ಟಿಮೇಳ’ ಬಿಟ್ಟು ಹೊರಬಂದಿದ್ದ ನಿರ್ದೇಶಕ ಅನಿಲ್ ಕೋರಮಂಗಲ ಆರೆಂಟು ತಿಂಗಳು ಶ್ರಮ ಹಾಕಿ  15 ಎಪಿಸೋಡ್ ಚಿತ್ರೀಕರಣ ಕೂಡ ಮಾಡಿದ್ದರು. ಅಷ್ಟರಲ್ಲಿ ಮುಖ್ಯಸ್ಥರ ಬದಲಾವಣೆಯಾಗಿ ಮುಂಬೈ ಮೂಲದ ಸುಷ್ಮಾ ಸುರೇಶ್ ಬ್ಯುಸಿನೆಸ್ ಹೆಡ್ ಆಗಿ ಬಂದರು. ಫಿಕ್ಷನ್ ಹೆಡ್ ಆಗಿ ಉದಯ ಟಿವಿಲಿದ್ದ ಇನ್ನೊಬ್ಬಾಕೆ ಮುಂಬೈವಾಲಿ ಶಿಲ್ಪಾ ಕೊಟೆಚಾ ನೇಮಕವಾದರು. ಅನಿಲ್ ಗೆ ವಕ್ರದೆಸೆ ಶುರುವಾಯ್ತು. ಅದು ಹೋಗಲಿ, ಕನ್ನಡ ಸಾಹಿತ್ಯದ ಗಂಧ ಗಾಳಿ ಇಲ್ಲದ ಶಿಲ್ಪಾ ಕೊಟೆಚಾ 50 ಲಕ್ಷ ರೂಪಾಯಿ ಖರ್ಚುಮಾಡಿ ನಿರ್ಮಿಸಿದ್ದ `ಹೇಳಿ ಹೋಗು ಕಾರಣ’ ಧಾರಾವಾಹಿಯ 15 ಸಂಚಿಕೆಗಳನ್ನೂ ಕಸದ ಬುಟ್ಟಿಗೆ ಎಸೆದುಬಿಟ್ಟರು. ಅನಿಲ್ ಬಾಯಿಬಾಯಿ ಬಡಿದುಕೊಳ್ಳುವಂತಾಯ್ತು.

    ಇಲ್ಲಿ ಶಿಲ್ಪಾ ಒಬ್ಬ ನಿರ್ಮಾಪಕರ ಹೊಟ್ಟೆ ಮೇಲೆ ಹೊಡೆದಿದ್ದು ಒಂದು ಕಡೆ. ಇನ್ನೊಂದು ಕಡೆ ಕನ್ನಡದ ಮೇರು ಬರಹಗಾರ ರವಿ ಬೆಳಗೆರೆಗೆ ಅವಮಾನ ಮಾಡಿದ್ದು ! ಇದರ ವಿರುದ್ಧ ಯಾವ ಕ.ರ.ವೇ ಸಹ ಪ್ರತಿಭಟಿಸಲಿಲ್ಲ.  ಹೋಗಲಿ, ನಿರ್ಮಾಪಕ ಅನಿಲ್ ಕೂಡ ಸೊಲ್ಲೆತ್ತಲಿಲ್ಲ. ಅನಿಲ್ ಒಂದು ಪ್ರತಿಭಟನೆಯ ಕಿಡಿ ಹೊತ್ತಿಸಿದ್ದರೆ ನಡೆಯುತ್ತಿದ್ದ ಕಥೆ ಬೇರೆ. ಆದರೆ ಅವರೇಕೋ `ಜೇನುಗೂಡು’ ರೀಮೇಕ್ ಧಾರಾವಾಹಿ ಸಿಕ್ಕಿತು ಅಂತ ನಡು ಬಗ್ಗಿಸಿಬಿಟ್ಟರು. ಹೊಟ್ಟೆಪಾಡು.

    ಕನ್ನಡ ಸಾಹಿತಿಗೆ ಸಾಹಿತ್ಯಕ್ಕೆ ಕನ್ನಡ ಬಾರದ ಹೆಣ್ಣುಮಕ್ಕಳಿಬ್ಬರು ಸೇರಿಕೊಂಡು ಅವಮಾನ ಮಾಡಿದ್ದನ್ನು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಕೂಡ ಪ್ರಶ್ನಿಸಲಿಲ್ಲ. ಅದೊಂಥರಾ ಹಲ್ಲಿಲ್ಲದ ಹಾವು!

    ಇಷ್ಟೆಲ್ಲ ಆವಾಂತರ ಮಾಡಿದ ಸುಷ್ಮಾ-ಶಿಲ್ಪಾ ಲಾಂಚ್ ಮಾಡಿದ ರಿಮೇಕ್ ಮುದ್ದುಮಣಿಗಳು, ಬೆಟ್ಟದ ಹೂ, ಜೇನುಗೂಡು ಧಾರಾವಾಹಿಗಳು ಆಹಾ ಓಹೋ ಅನ್ನುವ ಸದ್ದು ಮಾಡಲಿಲ್ಲ. ಚಾನೆಲ್ ನಾಲ್ಕನೇ ಸ್ಥಾನ ಬಿಟ್ಟು ಮೇಲೆದ್ದಿಲ್ಲ. ಸ್ಟಾರ್- ಡಿಸ್ನಿ ಮ್ಯಾನೇಜ್ ಮೆಂಟ್ ನವರು ಜೀ ಕನ್ನಡ ಮತ್ತು ಕಲರ್ಸ್ ಕನ್ನಡ ನೋಡಿ ಕಲಿಯಬೇಕಾದ ಮೊದಲ ಪಾಠ – ಕನ್ನಡ ವಾಹಿನಿ ನಡೆಸಲು ಕನ್ನಡ ಮನಸ್ಸಿನ ಸಾರಥಿ ಇದ್ದರೆ ಮಾತ್ರ ಸಾಧ್ಯ ಅಂತ. ಹೀಗಾದಾಗ ಚಾನೆಲ್ ಉದ್ಧಾರ ಆಗುವುದರ ಜೊತೆಗೆ ಕನ್ನಡ ಸಾಹಿತಿಗಳಿಗೆ ಅವಮಾನ ಆಗುವುದಾದರೂ ನಿಲ್ಲಬಹುದು.

    #helihogukarana #kannadanovel #kannadaserial #ravibelagere #starsuvarna
    Share. Facebook Twitter Pinterest LinkedIn Tumblr Email WhatsApp
    Previous Articleಶಿವರಾಜ್ ಕುಮಾರ್ ಗೆ ಯಾತಕ್ಕಾಗಿ ಶಾಕ್ ಆಯ್ತು?
    Next Article ತನ್ನ ಗೋರಿ ತಾನೇ ತೋಡಿಕೊಳ್ಳುತ್ತಿರುವ ಉದಯ
    vartha chakra
    • Website

    Related Posts

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    ಜೂನ್ 24, 2025

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    ಜೂನ್ 24, 2025

    ಗುಜರಾತ್ ನಲ್ಲಿ ಆಪ್ ಗೆದ್ದೇ ಬಿಡ್ತು.

    ಜೂನ್ 24, 2025

    Comments are closed.

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಜುಲೈ 7ರಂದು ಮಹಾನಗರ ಪಾಲಿಕೆಗಳು ಕೆಲಸ ಮಾಡುವುದಿಲ್ಲ!

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    ಸುಂದರಿ ಜಾಲಕ್ಕೆ ಬಲಿಯಾದ ಇರಾನ್.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • hl1qu ರಲ್ಲಿ BPL ಕಾರ್ಡ್ ಸಿಗುತ್ತೆ ನೋಡಿ
    • b5ue9 ರಲ್ಲಿ ಸಿದ್ದರಾಮಯ್ಯ ನಂತರ ಸಿಎಂ ಯಾರು ಗೊತ್ತಾ
    • ie6u1 ರಲ್ಲಿ ಮೃತದೇಹ ವಿಲೇವಾರಿಗೆ ನಟ ದರ್ಶನ್ ಕೊಟ್ಟಿದ್ದೆಷ್ಟು ಗೊತ್ತಾ.
    Latest Kannada News

    ಜುಲೈ 7ರಂದು ಮಹಾನಗರ ಪಾಲಿಕೆಗಳು ಕೆಲಸ ಮಾಡುವುದಿಲ್ಲ!

    ಜೂನ್ 24, 2025

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    ಜೂನ್ 24, 2025

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    ಜೂನ್ 24, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ತಿರುಪತಿ ಲಾಡು ಗೆ ಮಂಡ್ಯ ತುಪ್ಪ #tirupati #tirumala #hyderabad #andhrapradesh #trending #ghee #products
    Subscribe