ಹುಬ್ಬಳ್ಳಿ,ಜು.6-ನಮ್ಮ ಹಾಗು ಚಂದ್ರಶೇಖರ ಗುರೂಜಿ ಜೊತೆಗೆ ಒಳ್ಳೆ ಸಂಬಂಧವಿದ್ದು, ಗುರೂಜಿ ನಮ್ಮ ತಂದೆಯಂತಿದ್ದು ಅವರನ್ನು ನಮ್ಮ ಯಜಮಾನರು ಕೊಲೆ ಮಾಡಿದ್ದು ತಪ್ಪು ಎಂದು ಆರೋಪಿ ಮಹಾಂತೇಶ್ ಶಿರೂರು ಪತ್ನಿ ವನಜಾಕ್ಷಿ ಹೇಳಿದ್ದಾರೆ.
ನನಗೆ ಬೇಸರ ಆದಾಗ ಗುರೂಜಿ ಜೊತೆ ಮಾತನಾಡುತ್ತಿದ್ದೆ. ಬೇನಾಮಿ ಆಸ್ತಿ ವಿಚಾರವಾಗಿ ಕೊಲೆಯಾಗಿದೆ ಎನ್ನುವುದು ಸುಳ್ಳು ಸುದ್ದಿ. ನನ್ನ ಪತಿ ಸರಳ ವಾಸ್ತುನಲ್ಲಿ ಮುಂಬಯಿ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದರು. ಸಾಲ ಮಾಡಿ ಅಪಾರ್ಟ್ಮೆಂಟ್ನಲ್ಲಿ ಮನೆ ತೆಗೆದುಕೊಂಡಿದ್ದೇವೆ. ನನ್ನ ಹೆಸರಿಗೆ ಯಾವುದೇ ಆಸ್ತಿ ಇಲ್ಲ. ಕೊಲೆ ವಿಡಿಯೋ ನೋಡಿ ನೋವಾಗಿದೆ.
ಗುರೂಜಿ ಮೇಲೆ ನಮ್ಮ ಮನೆಯವರಿಗೆ ಇಷ್ಟು ಆಕ್ರೋಶ ಏಕೆ ಎಂದು ಗೊತ್ತಾಗುತ್ತಿಲ್ಲ. ಗುರೂಜಿ ಅಲ್ಲ, ಯಾರಿಗೆ ಆದರೂ ಈ ರೀತಿ ಬರ್ಬರ ಕೊಲೆ ಆಗಬಾರದು. ಪೊಲೀಸರೂ ಸಹ ವಿಚಾರಣೆಗೆ ಕರೆದೊಯ್ದಿದ್ದರು ವಿಚಾರಣೆಗೆ ಸಹಕರಿಸಿದ್ದೇನೆ. ನನ್ನ ಗಂಡ ಮಾಡಿದ್ದು ತಪ್ಪು ಎಂದಿದ್ದಾರೆ.