Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಹೆತ್ತಮ್ಮನನ್ನು ಮನೆಯಿಂದ ಹೊರಹಾಕಿದ ಮಗ ಸೊಸೆ
    ಸುದ್ದಿ

    ಹೆತ್ತಮ್ಮನನ್ನು ಮನೆಯಿಂದ ಹೊರಹಾಕಿದ ಮಗ ಸೊಸೆ

    vartha chakraBy vartha chakraಜುಲೈ 29, 2022Updated:ಜುಲೈ 29, 2022ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ತುಮಕೂರು: ಹೆತಮ್ಮನಿಗೆ ಅನ್ನ ನೀರು ನೀಡದೆ ಮನೆಯಿಂದ ಹೊರಹಾಕಿದ್ದ ಮಗ. ಮನನೊಂದ ತಾಯಿ ತಹಶೀಲ್ದಾರ್ ಮೊರೆ ಹೋಗಿದ್ದರು. ವೃದ್ಧೆಯ ಸಂಕಷ್ಟಕ್ಕೆ ಮರುಗಿದ ಅಧಿಕಾರಿ ವೃದ್ಧೆಗೆ ಮನೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೂರಿಲ್ಲದ ತಾಯಿಗೆ ಸೂರಿನ ಆಸರೆಯಾಗಿದ್ದಾರೆ.
    ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಬುಡ್ಡಯ್ಯನಪಾಳ್ಯ ಗ್ರಾಮದ ಹಿರಿಯ ವೃದ್ದೆಗೆ ನ್ಯಾಯ ಕಲ್ಪಿಸಿರುವ ವಿಶೇಷ ಪ್ರಕರಣವೊಂದು ನಡೆದಿದೆ. ಮಾನಸಿಕ ಮತ್ತು ದೈಹಿಕವಾಗಿ ಮನನೊಂದು ಬೀದಿಯಲ್ಲಿ ದಿನಕಳೆಯುತಿದ್ದ ಹಿರಿಯ ಜೀವಕ್ಕೆ ಆಶ್ರಯ ಸಿಕ್ಕಂತಾಗಿದೆ.
    ವೃದ್ದೆ ರಂಗಹನುಮಕ್ಕನಿಗೆ ತವರು ಮನೆಯಿಂದ ಮನೆಯೊಂದು ಉಡುಗೊರೆ ಸಿಕ್ಕಿತ್ತು. ಈಗಾಗಲೇ ತನ್ನ ಮಗನಿಗೆ ಮನೆ ಮತ್ತು ಜಮೀನು ಎರಡನ್ನು ನೀಡಿದ್ದಾರೆ. ಈಗಿರುವ ತನ್ನ ಮನೆಯಲ್ಲಿನ ಒಂದು ಸಣ್ಣ ಕೊಣೆಯೊಳಗೆ ವಾಸಿಸಲು ಅವಕಾಶ ನೀಡದಿರುವ ಮಗನ ಮೇಲೆ ಸಾರ್ವಜನಿಕ ವಲಯದಲ್ಲಿ ತೀರ್ವ ಆಕ್ರೋಶ ವ್ಯಕ್ತವಾಗಿತ್ತು. ಹಿರಿಯ ನಾಗರೀಕರ ಕಾಯ್ದೆಯ ಅನ್ವಯ ತೀರ್ಪು ಸಹ ವೃದ್ದೆಯ ಪರವಾಗಿಯೇ ಬಂದಿರುವುದು ಸಂತಸ ತಂದಿದೆ.
    ಮನೆಯ ಬೀಗ ಒಡೆಸಿದ ತಹಶೀಲ್ದಾರ್:
    ವೃದ್ದೆಯಿಂದ ತಹಶೀಲ್ದಾರ್‌ಗೆ ದೂರು ಬಂದ ತಕ್ಷಣವೇ ಮಧುಗಿರಿ ಎಸಿಯವರ ಗಮನಕ್ಕೆ ತಂದಿದ್ದಾರೆ. ದೂರು ಆಲಿಸಿದ ಮಧುಗಿರಿ ಎಸಿ ಹಿರಿಯ ನಾಗರೀಕರ ಕಾಯ್ದೆಯ ಅನ್ವಯ ವೃದ್ದೆಗೆ ಮನೆ ನೀಡಿ ಮಗ ಮತ್ತು ಸೊಸೆಯ ವಿರುದ್ದ ಕ್ರಮಕ್ಕೆ ಸೂಚಿಸುತ್ತಾರೆ. ಆದೇಶದ ಅನ್ವಯ ತಹಶೀಲ್ದಾರ್ ನಾಹೀದಾ ಮತ್ತು ಸಿಪಿಐ ಸಿದ್ದರಾಮೇಶ್ವರ ಖುದ್ದು ಗ್ರಾಮಕ್ಕೆ ಬೇಟಿ ನೀಡಿ ಮನೆಯ ಬೀಗ ಹೊಡೆದು ವೃದ್ದೆಗೆ ವಾಸಿಸಲು ಅವಕಾಶ ಮಾಡಿಕೊಟ್ಟು ವೃದ್ದೆಗೆ ಸಮರ್ಪಕ ಭದ್ರತೆ ನೀಡುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
    ವೃದ್ದೆಯ ಮಗನಿಗೆ ಎಚ್ಚರಿಕೆ ನೀಡಿದ ತಹಶೀಲ್ದಾರ್
    ಮನೆಯ ಬೀಗ ಹಾಕಿ ಸ್ಥಳದಿಂದ ಪರಾರಿಯಾಗಿದ್ದ ಮಗ ರಮೇಶ್‌ಗೆ ದೂರವಾಣಿ ಮೂಲಕ ಸಂರ್ಪಕಿಸಿದ ತಹಶೀಲ್ದಾರ್ ನಾಹೀದಾ ಸ್ಥಳಕ್ಕೆ ಬರುವಂತೆ ತಾಕೀತು ಮಾಡಿದಾರೆ. ತಹಶೀಲ್ದಾರ್‌ಗೆ ನಿರ್ಲಕ್ಷದ ಉತ್ತರ ನೀಡಿದ ರಮೇಶ್‌ಗೆ ಮತ್ತೆ ಮನೆಯೊಳಗೆ ನೀವು ಹೊಗಬಾರದು, ಅಜ್ಜಿಗೆ ತೊಂದರೆ ನೀಡಬಾರದು. ನಿಮಗೆ ಏನಾದರೂ ಬೇಕಾದ್ರೆ ತಹಶೀಲ್ದಾರ್ ಕಚೇರಿಗೆ ಬನ್ನಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
    ವೃದ್ದೆ ರಂಗಹನುಮಕ್ಕ ದೂರಿನ ಅನ್ವಯ ಮಗ ಮತ್ತು ಸೂಸೆ ಲಲಿತಮ್ಮ ವಿರುದ್ದ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಹಶೀಲ್ದಾರ್ ಬಳಿ ವೃದ್ದೆ ರಂಗಹನುಮಕ್ಕ ನಾನು ಊಟ-ತಿಂಡಿ ಮಾಡದೆ ವರ್ಷಗಟ್ಟಲೆ ವನವಾಸ ಮಾಡಿದ್ದೇನೆ. ನನ್ನ ಮೇಲೆ ಗಲಾಟೆ ಮಾಡಿ ಮಗ-ಸೂಸೆ ಮನೆಯಿಂದ ಹೊರಗಡೆ ಹಾಕಿ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ. ಮಾನ್ಯ ತಹಶೀಲ್ದಾರ್ ಮೇಡಂ ಮತ್ತೆ ನನಗೆ ಮನೆ ಕೊಡಿಸಿದ್ದಾರೆ. ಮತ್ತೆ ನನಗೆ ತೊಂದರೆ ಕೊಡದಂತೆ ನೋಡಿಕೊಳ್ಳಬೇಕಿದೆ ಎಂದು ಮನವಿ ಮಾಡಿದರು.

    koratagere rangahanumakka tumkur ತುಮಕೂರು ನ್ಯಾಯ
    Share. Facebook Twitter Pinterest LinkedIn Tumblr Email WhatsApp
    Previous Articleದರೋಡೆಕೋರರ ಸೆರೆ
    Next Article ಬಾರ್, ಪಬ್‌ಗಳಿಗೆ ಹೊಸ ರೂಲ್ಸ್
    vartha chakra
    • Website

    Related Posts

    ಐಶ್ವರ್ಯಾ ಗೌಡ ವಿರುದ್ಧ ಚಾರ್ಜ್ ಶೀಟ್

    ಜೂನ್ 25, 2025

    ಜುಲೈ 7ರಂದು ಮಹಾನಗರ ಪಾಲಿಕೆಗಳು ಕೆಲಸ ಮಾಡುವುದಿಲ್ಲ!

    ಜೂನ್ 24, 2025

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    ಜೂನ್ 24, 2025

    Comments are closed.

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಐಶ್ವರ್ಯಾ ಗೌಡ ವಿರುದ್ಧ ಚಾರ್ಜ್ ಶೀಟ್

    ಜುಲೈ 7ರಂದು ಮಹಾನಗರ ಪಾಲಿಕೆಗಳು ಕೆಲಸ ಮಾಡುವುದಿಲ್ಲ!

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • 7o4c4 ರಲ್ಲಿ ಈ ಪಾಪಿಗಾಗಿ ಪೊಲೀಸರ ಹುಡುಕಾಟ
    • f571b ರಲ್ಲಿ ಹೆದ್ದಾರಿಯಲ್ಲಿ ಹೊತ್ತಿ ಉರಿದ ಬಸ್
    • rxxcx ರಲ್ಲಿ ಧೂಮಪಾನ ಮತ್ತು ವೇಪ್ಸ್ ನಿಷೇಧಿಸಲಿರುವ ಬ್ರಿಟನ್
    Latest Kannada News

    ಐಶ್ವರ್ಯಾ ಗೌಡ ವಿರುದ್ಧ ಚಾರ್ಜ್ ಶೀಟ್

    ಜೂನ್ 25, 2025

    ಜುಲೈ 7ರಂದು ಮಹಾನಗರ ಪಾಲಿಕೆಗಳು ಕೆಲಸ ಮಾಡುವುದಿಲ್ಲ!

    ಜೂನ್ 24, 2025

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    ಜೂನ್ 24, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ರೀಲ್ಸ್_ ಮಾಡುವಾಗ 13ನೇ ಅಂತಸ್ತಿನಿಂದ ಬಿದ್ದು ಯುವತಿ ಸಾವು #varthachakra #death #apartement #reels #viral
    Subscribe