Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » KGF-3 ಚಿತ್ರದ ಸುಳಿವು ಬಿಟ್ಟುಕೊಟ್ಟ ಚಿತ್ರತಂಡ
    ಸಿನೆಮ

    KGF-3 ಚಿತ್ರದ ಸುಳಿವು ಬಿಟ್ಟುಕೊಟ್ಟ ಚಿತ್ರತಂಡ

    vartha chakraBy vartha chakraಜನವರಿ 9, 2023Updated:ಜನವರಿ 9, 2023ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಡಿಸೆಂಬರ್ 21, 2018 ಇಡೀ ವಿಶ್ವವೇ ಸ್ಯಾನ್ಡಲ್ವುಡ್ ನೆಡೆ ತಿರುಗಿ ನೋಡಿದ ದಿನ. ಕಾರಣ, ಅಂದು ಹೊಂಬಾಳೆ ಪ್ರೊಡಕ್ಷನ್ಸ್ ಅಡಿಯಲ್ಲಿ ಪ್ರಶಾಂತ್ ನೀಲ್ ನಿರ್ದೇಶನದ, ವಿಜಯ್ ಕಿರಗಂದೂರ್ ನಿರ್ಮಾಣದ, ರಾಕಿಂಗ್ ಸ್ಟಾರ್ ಯಶ್ ಅಭಿನಯದ KGF ಬಿಡುಗಡೆಗೊಂಡಿತ್ತು. ಚಿತ್ರವನ್ನು ನೋಡಿ ಮೆಚ್ಚಿದ ಸಿನಿಪ್ರಿಯರು, ಚಿತ್ರಕ್ಕೆ ಭರ್ಜರಿ ಯಶಸ್ಸನ್ನು ತಂದುಕೊಟ್ಟಿದ್ದರು. ಅದೇ ಗುಂಗಲ್ಲಿ, ಮತ್ತಷ್ಟು ಹೆಚ್ಚಿನ ನಿರೀಕ್ಷೆಯೊಂದಿಗೆ ಕೆ.ಜಿ.ಎಫ್ – 2 ಗಾಗಿ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳ ಕಾಯುವಿಕೆ ಅಂತ್ಯಗೊಂಡಿದ್ದು 2022 ರ ಏಪ್ರಿಲ್ 14 ರಂದು ಕೆ.ಜಿ.ಎಫ್ – 2 ಬಿಡುಗಡೆಯಾದಾಗ. ಸಂಜಯ್ ದತ್, ರವೀನಾ ಟಂಡನ್ ಸೇರಿದಂತೆ ದೊಡ್ಡ ತಾರಾಗಣ, ಮಾಸ್ ಡೈಲಾಗ್ಸ್, ಸಂಗೀತ, ಉತ್ತಮ ಹೊಂದಿದ್ದ ಈ ಚಿತ್ರ ಅಭಿಮಾನಿಗಳ ನಿರೀಕ್ಷೆಯನ್ನು ಮೀರಿಸಿ ದೇಶದೆಲ್ಲೆಡೆ ಸೂಪರ್ ಹಿಟ್ ಆಗಿತ್ತು. ಇದೀಗ ಕೆ.ಜಿ.ಎಫ್ – 3 ಗಾಗಿ ಕಾಯುತ್ತಿರುವ ಪ್ರೇಕ್ಷಕ ವರ್ಗಕ್ಕೆ ಚಿತ್ರತಂಡ ನೀಡಿದ ಸುದ್ದಿ ತುಸು ಬೇಸರವನ್ನೇ ತಂದಿದೆ ಎನ್ನಬಹುದು.

    ಇತ್ತೀಚೆಗಿನ ಸಂದರ್ಶನವೊಂದರಲ್ಲಿ, ನಿರ್ಮಾಪಕ ವಿಜಯ ಕಿರಗಂದೂರ್ ಹೇಳಿರುವ ಪ್ರಕಾರ 2025 ರಲ್ಲಿ KGF3 ರ ಚಿತ್ರೀಕರಣ ಆರಂಭವಾಗಲಿದೆ. ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಪ್ರೊಡಕ್ಷನ್ಸ್ ಬೇರೆ ಚಿತ್ರಗಳ ಚಿತ್ರೀಕರಣದಲ್ಲಿ ವ್ಯಸ್ತರಾಗಿರುವ ಕಾರಣ 2025 ರ ಮೊದಲು ಚಿತ್ರ ಸೆಟ್ಟೇರಲು ಸಾಧ್ಯವೇ ಇಲ್ಲ. 2026 ರಲ್ಲಿ ಕೆ.ಜಿ.ಎಫ್ -3 ಅನ್ನು ತೆರೆಯ ಮೇಲೆ ನೋಡಬಹುದು ಎಂದಿದ್ದಾರೆ. ಜೊತೆಗೆ, ಕೆ.ಜಿ.ಎಫ್ ಕಥೆಯನ್ನು ಅನ್ನು ಇನ್ನಷ್ಟು ಸೀರೀಸ್ ವರೆಗೂ ವಿಸ್ತರಿಸುವ ಯೋಚನೆ ಇದೆಯಂತೆ. ಆದರೆ, ಕೆ.ಜಿ.ಎಫ್ – 5 ರ ನಂತರ ರಾಕಿಂಗ್ ಸ್ಟಾರ್ Yash ಬದಲಾಗಿ ರಾಕಿ ಭಾಯ್ ಪಾತ್ರದಲ್ಲಿ ಬೇರೆ ನಾಯಕ ನಟನನ್ನು ನಿರೀಕ್ಷಿಸಬಹುದು. ಜೇಮ್ಸ್ ಬಾಂಡ್ ಸೀರೀಸ್ ನಂತೆ ನಾಯಕರು ಬದಲಾಗುತ್ತಾ ಹೋಗುತ್ತಾರೆ ಎಂಬ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ.

    ಜನವರಿ ೮ರಂದು ತಮ್ಮ 37ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ನಟ ಯಶ್, ಅಭಿಮಾನಿಗಳಿಗಾಗಿ ಪತ್ರವೊಂದನ್ನು ಬರೆದಿದ್ದಾರೆ. ಅದರಿಂದ ಆಯ್ದ ಕೆಲವು ಸಾಲುಗಳು ಇಂತಿವೆ. “ನಾನು ಬಹುವಾಗಿ ನಂಬುವ ಮತ್ತು ಇಷ್ಟಪಡುವ ಕಾರ್ಯವೊಂದರ ಕೊನೆಯ ಹಂತದಲ್ಲಿದ್ದೇನೆ. ನನ್ನ ಬೆನ್ನೆಲುಬು ಮತ್ತು ಶಕ್ತಿಯಾಗಿರುವ ನೀವೇ ನನಗೆ ಸಾಧಿಸಲು ಸ್ಫೂರ್ತಿ . ಮುಂದಿನ ಬಾರಿ ನಿಮ್ಮನ್ನು ಭೇಟಿಯಾದಾಗ ಎಲ್ಲವನ್ನೂ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಆದರೆ ಅದಕ್ಕೆ ನನಗೆ ಸ್ವಲ್ಪ ಸಮಯ ಬೇಕು. ಹಾಗಾಗಿ, ಈ ಬಾರಿ ನಿಮ್ಮಿಂದ ಒಂದು ವಿಶೇಷವಾದ ಉಡುಗೊರೆಯನ್ನು ಬೇಡಲಿಚ್ಛಿಸುತ್ತೇನೆ. ಅದುವೇ ನಿಮ್ಮ ತಾಳ್ಮೆ ಮತ್ತು ಅರ್ಥೈಸುವಿಕೆ.”

    ಹಾಗಾಗಿ ಕೆ.ಜಿ.ಎಫ್ – 3 ನೋಡಲು 2026 ರ ವರೆಗೆ ಕಾಯಲೇಬೇಕು.

    #yash
    Share. Facebook Twitter Pinterest LinkedIn Tumblr Email WhatsApp
    Previous Articleಇವನೇ ಆ Santro Ravi
    Next Article Americaದಲ್ಲಿ ಉದ್ಯೋಗ ಇನ್ನು ಕನಸು ಮಾತ್ರ?
    vartha chakra
    • Website

    Related Posts

    ಜುಲೈ 7ರಂದು ಮಹಾನಗರ ಪಾಲಿಕೆಗಳು ಕೆಲಸ ಮಾಡುವುದಿಲ್ಲ!

    ಜೂನ್ 24, 2025

    ಮದುವೆಯಾಗುವುದಾಗಿ ನಂಬಿಸಿ ಕುತ್ತಿಗೆ ಕೊಯ್ದ.

    ಜೂನ್ 18, 2025

    ಸಂಭ್ರಮಾಚರಣೆ ಅಲ್ಲ ಶೋಕಾಚರಣೆ

    ಜೂನ್ 4, 2025

    Comments are closed.

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಜುಲೈ 7ರಂದು ಮಹಾನಗರ ಪಾಲಿಕೆಗಳು ಕೆಲಸ ಮಾಡುವುದಿಲ್ಲ!

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    ಸುಂದರಿ ಜಾಲಕ್ಕೆ ಬಲಿಯಾದ ಇರಾನ್.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • u6szg ರಲ್ಲಿ ಜಿ.ಟಿ.ದೇವೇಗೌಡ ಸಿಡಿಸಿದ ವಿವಾದದ ಬಾಂಬ್ | GT Devegowda
    • uwy7t ರಲ್ಲಿ ಮೀಸಲಾತಿ ಹೆಚ್ಚಳ- ಸಂವಿಧಾನ ತಿದ್ದುಪಡಿಗೆ ಶಿಫಾರಸು
    • fid27 ರಲ್ಲಿ ಮಂತ್ರಿಗಳ ಹನಿ ಟ್ರ್ಯಾಪ್ ಬಗ್ಗೆ ಉನ್ನತ ತನಿಖೆ
    Latest Kannada News

    ಜುಲೈ 7ರಂದು ಮಹಾನಗರ ಪಾಲಿಕೆಗಳು ಕೆಲಸ ಮಾಡುವುದಿಲ್ಲ!

    ಜೂನ್ 24, 2025

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    ಜೂನ್ 24, 2025

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    ಜೂನ್ 24, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ತಿರುಪತಿ ಲಾಡು ಗೆ ಮಂಡ್ಯ ತುಪ್ಪ #tirupati #tirumala #hyderabad #andhrapradesh #trending #ghee #products
    Subscribe