Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ರಾಜ್ಯ ಸರ್ಕಾರದ ವಿರುದ್ಧ BJP Charge Sheet | Karnataka BJP
    Trending

    ರಾಜ್ಯ ಸರ್ಕಾರದ ವಿರುದ್ಧ BJP Charge Sheet | Karnataka BJP

    vartha chakraBy vartha chakraಆಗಷ್ಟ್ 29, 20238 ಪ್ರತಿಕ್ರಿಯೆಗಳು3 Mins Read
    Facebook Twitter WhatsApp Pinterest LinkedIn Tumblr Email
    Karnataka BJP
    Share
    Facebook Twitter LinkedIn Pinterest Email WhatsApp

    ಬೆಂಗಳೂರು.ಆ,29. – ಮುಖ್ಯಮಂತ್ರಿ ಸಿದ್ದರಾಮಯ್ಯರ ನೇತೃತ್ವದ ರಾಜ್ಯದ ನೂತನ ಕಾಂಗ್ರೆಸ್ ಸರಕಾರವು ನೂರು ದಿನ ಪೂರ್ಣಗೊಳಿಸಿದೆ.ಈ ಅವಧಿ ಸರ್ಕಾರದ 5 ವರ್ಷಗಳ ದಿಕ್ಸೂಚಿ ಆಗಬೇಕಿತ್ತು. ಆದರೆ,ಇದು ದಿಕ್ಕು ತಪ್ಪಿದ ಸರಕಾರವಾಗಿದೆ ಎಂದು ಬಿಜೆಪಿ ಆಪಾದಿಸಿದೆ.
    ಗುತ್ತಿಗೆದಾರರ ಬಿಲ್ ಬಾಕಿ ಪಾವತಿಗೆ ಕಮೀಷನ್, ಸರ್ಕಾರಿ ಅಧಿಕಾರಿಗಳ ವರ್ಗಾವಣೆಯಲ್ಲಿ ಲಂಚ,ಅಭಿವೃದ್ಧಿ ಯೋಜನೆಗಳ ಸ್ಥಗಿತ ಸೇರಿದಂತೆ ಹಲವು ಅರೋಪಗಳ ಚಾರ್ಜ್ ಶೀಟ್ ಹೆಸರಿನ ಕಿರು ಹೊತ್ತಿಗೆ ಬಿಡುಗಡೆ ಮಾಡಿದೆ.
    ಈ ವೇಳೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಸರ್ಕಾರದ ವಿರುದ್ಧ ಹಲವು ಆರೋಪ ಮಾಡಿದರು.

    ನೂರು ದಿನಗಳ ಆಡಳಿತ ಅವಧಿಯಲ್ಲಿ ರಾಜ್ಯದ ಹಣಕಾಸಿನ ವ್ಯವಸ್ಥೆಯನ್ನು ಹಳಿ ತಪ್ಪಿಸಿದ್ದಾರೆ. ನಾವು ಫೆಬ್ರವರಿಯಲ್ಲಿ ಮಿಗತೆ ಬಜೆಟ್ ಕೊಟ್ಟಿದ್ದೆವು. ಆದರೆ, ಇವರು ಬಂದ ಬಳಿಕ 8 ಸಾವಿರ ಕೋಟಿಗೂ ಹೆಚ್ಚು ಸಾಲ ಮಾಡಿದ್ದಾರೆ. ಸುಮಾರು 35 ಸಾವಿರ ಕೋಟಿ ಅಧಿಕ ತೆರಿಗೆ ವಿಧಿಸಿದ್ದಾರೆ ಎಂದು ಟೀಕಿಸಿದರು. ಮೋಟಾರು ವಾಹನ ತೆರಿಗೆ, ಅಬಕಾರಿ ಸುಂಕ ಹೆಚ್ಚಳ ಮೊದಲಾದವು ಇದ್ದರೂ 12 ಸಾವಿರ ಕೋಟಿ ರೂ. ಕೊರತೆ ಬಜೆಟ್ ನೀಡಿದ್ದಾರೆ. ನಮ್ಮ ಆಡಳಿತದ ಅವಧಿಯಲ್ಲಿ ಕಾಣಿಸಿಕೊಂಡ ಸಾಂಕ್ರಾಮಿಕ ಕೋವಿಡ್ ವೇಳೆ 14 ಸಾವಿರ ಕೋಟಿ ಕೊರತೆ ಇದ್ದುದನ್ನು ನಾವು ಸರಿದೂಗಿಸಿ ಮಿಗತೆ ಬಜೆಟ್ ಮಂಡಿಸಿದ್ದೇವೆ. ಇವರು ಕೋವಿಡ್ ಇಲ್ಲದಿದ್ದರೂ ಮತ್ತೆ ಕೋವಿಡ್ ಸ್ಥಿತಿಗೆ ಹಣಕಾಸಿನ ಸ್ಥಿತಿಯನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ದೂರಿದರು ಸರಕಾರಿ ನೌಕರರ ವೇತನ ವಿಳಂಬವಾಗುತ್ತಿದೆ. ಇವರು ಅಧಿಕಾರಕ್ಕೆ ಬಂದ ಬಳಿಕ ಒಂದು ಕಿಮೀ ರಸ್ತೆಯನ್ನೂ ಮಾಡಿಲ್ಲ ಬರಗಾಲ ಬಂದಾಗ ರೈತರಿಗೆ ಕನಿಷ್ಠ ಸಹಾಯ ಮಾಡಿಲ್ಲ. 2 ಬಾರಿ ಬಿತ್ತನೆ ಮಾಡಿ ಬೀಜ ಗೊಬ್ಬರ ಹಾಕಿ ರೈತರು ಕಂಗಾಲಾಗಿದ್ದಾರೆ. ಸಾಲವೂ ಸಕಾಲದಲ್ಲಿ ಸಿಗುತ್ತಿಲ್ಲ. ನಾಲ್ಕು ದಿಕ್ಕಿನಲ್ಲಿ ಗಮನಿಸಿದರೂ ಸರಕಾರ ವಿಫಲವಾಗಿದೆ ಎಂದು ದೂರಿದರು.

    ಸರ್ಕಾರ ಹಲವು ಗೊಂದಲಗಳಲ್ಲಿ ಸಿಲುಕಿ ಹಾಕಿಕೊಂಡಿದೆ. ಇದರ ಒಟ್ಟು ಪರಿಣಾಮವೆಂಬಂತೆ ಜನರಿಗೆ ಕೊಟ್ಟ ಮಾತಿಗೆ ಅದು ತಪ್ಪಿ ನಡೆದಿದೆ .ರೈತರ ಆತ್ಮಹತ್ಯೆ ನಡೆದಿದ್ದರೂ ತಿರುಗಿ ನೋಡುತ್ತಿಲ್ಲ…
    ಕಳೆದ 2 ತಿಂಗಳಿನಲ್ಲಿ 50ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
    ಆತ್ಮಹತ್ಯೆ ನಡೆದಿದ್ದರೂ ತಿರುಗಿ ನೋಡುತ್ತಿಲ್ಲರೈತರ ಸಾಲ ವಸೂಲಿ ನಿಲ್ಲಿಸಿ. ಹೊಸ ಸಾಲ, ಬೀಜ- ಗೊಬ್ಬರಕ್ಕೆ ಹೊಸ ಅನುದಾನ ನೀಡುವ ಮೂಲಕ ಆತ್ಮಹತ್ಯೆ ಮಾಡಿಕೊಳ್ಳದಂತೆ ನೋಡಿಕೊಳ್ಳಿ ಎಂದು ಅವರು ಕಿವಿಮಾತು ಹೇಳಿದರು.
    ಕೃಷಿ ಇಲಾಖೆಯಲ್ಲಿ ಇನ್ನೂ ಟ್ರಾನ್ಸ್‍ಫರ್ ಸುಗ್ಗಿ ನಡೆದಿದೆ. ಪಿಡಬ್ಲುಡಿ ಸೇರಿ ಎಲ್ಲ ಇಲಾಖೆಯಲ್ಲಿ ವರ್ಗಾವಣೆಯದೇ ಸುಗ್ಗಿ ನಡೆದಿದೆ. ರೈತ ವಿದ್ಯಾನಿಧಿ, ಭೂಸಿರಿ, ಜೀವನ ಜ್ಯೋತಿ ರೈತರ ವಿಮೆ ಸೇರಿ ನಮ್ಮ ಕಾಲದ ರೈತರ ಕಾರ್ಯಕ್ರಮಗಳು ಸ್ಥಗಿತಗೊಂಡಿವೆ ಎಂದು ಬೇಸರ ವ್ಯಕ್ತಪಡಿಸಿದರು.

    ರೈತರ ಆದಾಯ ಹೆಚ್ಚಳ ಕಾರ್ಯಕ್ರಮಗಳು ನಿಂತಿವೆ ನಾವು ಆರಂಭಿಸಿದ 100 ಅಂಬೇಡ್ಕರ್ ಹಾಸ್ಟೆಲ್‍ಗಳಿಗೆ ಅನುದಾನ ಕೊಟ್ಟಿಲ್ಲ. 50 ಕನಕದಾಸ ಹಾಸ್ಟೆಲ್‍ಗೆ ಅನುದಾನ ಬಿಡುಗಡೆಗೊಳಿಸಿಲ್ಲ. 5 ಮೆಗಾ ಹಾಸ್ಟೆಲ್ ಮಂಜೂರು ಮಾಡಿದ್ದು, ಅನುದಾನ ಸಿಕ್ಕಿಲ್ಲ. ನಾವು ನಿರ್ಮಿಸಿದ 8 ಸಾವಿರ ಶಾಲಾ ಕೊಠಡಿಗೆ ಹಣಕಾಸು ಬಿಡುಗಡೆ ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
    ಶಿಕ್ಷಣ, ಆರೋಗ್ಯ, ಕೃಷಿ, ಹಿಂದುಳಿದ ವರ್ಗ, ಮಹಿಳೆಯರ ಆರ್ಥಿಕ ಸಂಕಷ್ಟ ನಿವಾರಿಸುವ ಯೋಜನೆಗಳನ್ನು ಕಡೆಗಣಿಸಲಾಗಿದೆ. ರಾಜ್ಯದ ಅಭಿವೃದ್ಧಿ ಸಂಪೂರ್ಣ ಸ್ತಬ್ದವಾಗಿದೆ ಎಂದ ಅವರು, ಹಗಲುದರೋಡೆ ರೀತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಮಂತ್ರಿಗಳ ಮಧ್ಯೆ ಗಲಾಟೆ, ಮಂತ್ರಿಗಳು- ಸಿಎಂ ಕಚೇರಿ ಮಧ್ಯೆ ಭ್ರಷ್ಟಾಚಾರದ ವಿಚಾರಕ್ಕೆ ಸಂಬಂಧಿಸಿ ಗಲಾಟೆ ನಡೆದಿದೆ ಎಂದು ವಿವರಿಸಿದರು.

    ಪ್ರಮುಖ ಹುದ್ದೆಗಳ ಹರಾಜು..
    ಬೆಂಗಳೂರು ಗ್ರಾಮಾಂತರ ಡಿ.ಸಿ, ಅಸಿಸ್ಟೆಂಟ್ ಕಮೀಷನರ್ ಹುದ್ದೆಗೆ ಸಂಬಂಧಿಸಿ ದೊಡ್ಡ ಪೈಪೋಟಿ, ಹರಾಜು ನಡೆದಿದೆ. ಈ ಥರ ಪ್ರಮುಖವಾದ ಎಲ್ಲ ಹುದ್ದೆಗೆ ಹರಾಜು ಮೂಲಕ ಟ್ರಾನ್ಸ್‍ಫರ್ ನಡೆದಿದೆ. ಬೆಂಗಳೂರು ಎ.ಸಿ. ದರ 13.5 ಕೋಟಿ ಆಗಿದೆಯಂತೆ. ಭಯ ಭೀತಿ ಇಲ್ಲದೆ ಭ್ರಷ್ಟಾಚಾರ ನಡೆದಿದೆ. ಪ್ರಶ್ನಿಸಿದರೆ ಕೇಸು ಹಾಕುತ್ತಾರೆ ಎಂದು ಹೇಳಿದರು
    ಕಮೀಷನ್ ಕೇಳುತ್ತಿದ್ದಾರೆ ಎಂದು ರಾಜ್ಯಪಾಲರಿಗೆ ದೂರು ಕೊಟ್ಟ ಗುತ್ತಿಗೆದಾರರ ಮೇಲೆ ಕೇಸು ಹಾಕಲಾಗಿದೆ. ಭ್ರಷ್ಟಾಚಾರದ ವಿಷಯ ಕೈಬಿಟ್ಟಿದ್ದಾರೆ. ಕೆಲಸ ನಿಲ್ಲಿಸಿದ್ದ ಕೆಂಪಣ್ಣ ದೂರು ನೀಡಿದ್ದರು. ನಾವು ಅವರ ಮೇಲೆ ಕೇಸು ಹಾಕಿದ್ದೇವಾ ಎಂದು ಪ್ರಶ್ನಿಸಿದರು. ಪತ್ರಕರ್ತರಿಗೆ ಬೆದರಿಕೆ ಹಾಕಿದ್ದಾರೆ. ಪತ್ರಿಕಾ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಮೊಟಕುಗೊಂಡಿದೆ. ಜೈಲಿಗೆ ಹಾಕುವ ಕೆಲಸ ಮುಂದುವರಿದಿದೆ ಎಂದು ಟೀಕಿಸಿದರು. ಇದೇರೀತಿ ಮುಂದುವರಿದರೆ ನಿಮ್ಮ ಜೈಲುಗಳಲ್ಲಿ ಸ್ಥಳ ಸಾಕಾಗದು ಎಂದು ನುಡಿದರು. ರಾಜ್ಯದಲ್ಲಿ ಕುಡಿಯುವ ನೀರಿನ ಹಾಹಾಕಾರ ಇದೆ. ಕರೆಂಟ್ ಕೊಡುತ್ತಿಲ್ಲ. ಕಲ್ಲಿದ್ದಲಿಗೆ ದುಡ್ಡಿಲ್ಲ. ಉಷ್ಣ ವಿದ್ಯುತ್ ಸ್ಥಾವರಗಳು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಿಲ್ಲ. ಜಲ ವಿದ್ಯುತ್ ಉತ್ಪಾದನೆ ಕಡಿಮೆ ಆಗುತ್ತಿದೆ. ಝೀರೊ ಬಿಲ್ ಅಲ್ಲ; ಝೀರೋ ಕರೆಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.ಈ ವೇಳೆಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್, ಮಾಜಿ ಸಚಿವ ಗೋವಿಂದ ಕಾರಜೋಳ  ಉಪಸ್ಥಿತರಿದ್ದರು

    BJP Congress Karnataka karnataka bjp ಆರೋಗ್ಯ ಕಾಂಗ್ರೆಸ್ ಬೊಮ್ಮಾಯಿ ಲಂಚ ಶಿಕ್ಷಣ ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous Articleರೇಣುಕಾಚಾರ್ಯ ಅವರಿಗೆ ಬೇಸರವಾಗಿದೆಯಂತೆ | MP Renukacharya
    Next Article ಶಂಕಿತ ಉಗ್ರ ಜುನೈದ್ ಸಹಚರ Arrested | Junaid
    vartha chakra
    • Website

    Related Posts

    ಐಶ್ವರ್ಯಾ ಗೌಡ ವಿರುದ್ಧ ಚಾರ್ಜ್ ಶೀಟ್

    ಜೂನ್ 25, 2025

    ಜುಲೈ 7ರಂದು ಮಹಾನಗರ ಪಾಲಿಕೆಗಳು ಕೆಲಸ ಮಾಡುವುದಿಲ್ಲ!

    ಜೂನ್ 24, 2025

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    ಜೂನ್ 24, 2025

    8 ಪ್ರತಿಕ್ರಿಯೆಗಳು

    1. KEPALASLOT on ಮೇ 14, 2025 10:46 ಅಪರಾಹ್ನ

      Great goods from you, man. I’ve understand your stuff previous to and you’re just extremely wonderful. I actually like what you have acquired here, really like what you’re saying and the way in which you say it. You make it entertaining and you still take care of to keep it sensible. I can not wait to read far more from you. This is really a great site. Try to Visit My Web Site :KEPALASLOT

      Reply
    2. 7cx4l on ಜೂನ್ 7, 2025 9:22 ಅಪರಾಹ್ನ

      where to get generic clomid price can you get cheap clomid online can i order cheap clomiphene without a prescription can i purchase clomid pills clomiphene medication effects buy clomid no prescription can you get generic clomid for sale

      Reply
    3. buy viagra cialis online on ಜೂನ್ 9, 2025 5:31 ಫೂರ್ವಾಹ್ನ

      More posts like this would bring about the blogosphere more useful.

      Reply
    4. flagyl for on ಜೂನ್ 10, 2025 11:44 ಅಪರಾಹ್ನ

      The thoroughness in this section is noteworthy.

      Reply
    5. 5h5vl on ಜೂನ್ 18, 2025 7:09 ಫೂರ್ವಾಹ್ನ

      inderal 10mg ca – order methotrexate 5mg pills buy methotrexate 5mg without prescription

      Reply
    6. nzkn1 on ಜೂನ್ 21, 2025 4:43 ಫೂರ್ವಾಹ್ನ

      purchase amoxicillin sale – order combivent generic combivent medication

      Reply
    7. bte1k on ಜೂನ್ 23, 2025 8:02 ಫೂರ್ವಾಹ್ನ

      zithromax 250mg sale – buy zithromax 250mg order nebivolol 20mg online

      Reply
    8. ivgg0 on ಜೂನ್ 25, 2025 8:45 ಫೂರ್ವಾಹ್ನ

      clavulanate price – https://atbioinfo.com/ buy ampicillin cheap

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ನಟ ಶ್ರೀಕಾಂತ್ ಮೇಲೆ ಎಷ್ಟೊಂದು ಕೇಸ್ ಗೊತ್ತಾ?

    ಇಂಜಿನಿಯರಿಂಗ್ ಕಾಲೇಜುಗಳಿಗೆ ಇಡಿ ಬಿಸಿ

    ಐಶ್ವರ್ಯಾ ಗೌಡ ವಿರುದ್ಧ ಚಾರ್ಜ್ ಶೀಟ್

    ಜುಲೈ 7ರಂದು ಮಹಾನಗರ ಪಾಲಿಕೆಗಳು ಕೆಲಸ ಮಾಡುವುದಿಲ್ಲ!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • ie1xb ರಲ್ಲಿ ಕಬ್ಬನ್ ಪಾರ್ಕ್ ನಲ್ಲಿ ವಾಹನ ಸಂಚಾರಕ್ಕೆ ಅನುಮತಿ | Cubbon Park
    • lrczf ರಲ್ಲಿ ದಳಪತಿ ವಿಜಯ್ ಪಕ್ಷದ ಹೆಸರು ಗೊತ್ತಾ.
    • Chriswot ರಲ್ಲಿ ಪಾಕಿಸ್ತಾನೀಯರಿಗಾಗಿ ರಾಜ್ಯದಲ್ಲಿ ಹುಡುಕಾಟ
    Latest Kannada News

    ನಟ ಶ್ರೀಕಾಂತ್ ಮೇಲೆ ಎಷ್ಟೊಂದು ಕೇಸ್ ಗೊತ್ತಾ?

    ಜೂನ್ 25, 2025

    ಇಂಜಿನಿಯರಿಂಗ್ ಕಾಲೇಜುಗಳಿಗೆ ಇಡಿ ಬಿಸಿ

    ಜೂನ್ 25, 2025

    ಐಶ್ವರ್ಯಾ ಗೌಡ ವಿರುದ್ಧ ಚಾರ್ಜ್ ಶೀಟ್

    ಜೂನ್ 25, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ರೀಲ್ಸ್_ ಮಾಡುವಾಗ 13ನೇ ಅಂತಸ್ತಿನಿಂದ ಬಿದ್ದು ಯುವತಿ ಸಾವು #varthachakra #death #apartement #reels #viral
    Subscribe