ಬೆಂಗಳೂರು, ಅ.30-
ಹಣಕಾಸಿನ ಹೊರೆ ತಗ್ಗಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರ ಮಾಡಿದ ಆದೇಶವನ್ನು ತಾನೇ ಗಾಳಿಗೆ ತೂರಿದ ಘಟನೆ ಇದು. ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿ ಎಂಜಿನಿಯರ್ ಆಗಿದ್ದ ಎನ್.ಪಿ. ಬಾಲರಾಜು ಅವರು,ಸೇವಾ ನಿವೃತ್ತಿಯಾಗಿ ಅದೇ ದಿನ ಅದೇ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಮಹತ್ವದ ಹುದ್ದೆ ಪಡೆದುಕೊಂಡಿದ್ದಾರೆ .
ಇದು ಈಗ ವಿವಾದಕ್ಕೆ ಕಾರಣವಾಗಿದೆ.ಆಗಸ್ಟ್ 31ರಂದು ನಿವೃತ್ತಿ ಯಾಗಿದ್ದ ಎನ್.ಪಿ. ಬಾಲರಾಜು ಅವರನ್ನು ಸೆಪ್ಟೆಂಬರ್ 1ರಿಂದ ಮಂಡಳಿಯ ಮುಖ್ಯ ತಾಂತ್ರಿಕ ಸಲಹೆಗಾರರನ್ನಾಗಿ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಾಲಿ ಗುತ್ತಿಗೆ ಮತ್ತು ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನಿವೃತ್ತ ಸರ್ಕಾರಿ ಅಧಿಕಾರಿ ಹಾಗೂ ನೌಕರರ ಸೇವೆ ಸರ್ಕಾರಕ್ಕೆ ಹೊರೆ ಆಗಿದೆ ಎಂದು ಆರ್ಥಿಕ ಇಲಾಖೆ ನೀಡಿದ ವರದಿಯನ್ನು ಆಧರಿಸಿ ,ರಾಜ್ಯ ಸರ್ಕಾರ ಕಳೆದ ಜೂನ್ 14ರಂದು ನಿವೃತ್ತ ಗುತ್ತಿಗೆ ನೌಕರರನ್ನು ಕೂಡಲೇ ಸೇವೆಯಿಂದ ಬಿಡುಗಡೆ ಗೊಳಿಸುವಂತೆ ಆದೇಶ ಹೊರಡಿಸಿತ್ತು.ಅಲ್ಲದೇ ಇನ್ನು ಮುಂದೆ ನಿವೃತ್ತ ನೌಕರರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡದಂತೆ ಸುತ್ತೋಲೆ ಹೊರಡಿಸಿತ್ತು.
ನಿಗಮ, ಮಂಡಳಿಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನಿವೃತ್ತ ಅಧಿಕಾರಿಗಳು, ನೌಕರರನ್ನು ಕೆಲಸದಿಂದ ಬಿಡುಗಡೆ ಮಾಡುವಂತೆ ಆದೇಶಿಸಿದ್ದ ಸಿಎಂ ಸಿದ್ದರಾಮಯ್ಯ ಅವರೇ ಇದೀಗ ನಿವೃತ್ತ ಅಧಿಕಾರಿಯ ನೇಮಕಕ್ಕೆ ಆದೇಶ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.
ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಆರ್ಥಿಕ ಹೊರೆ ತಪ್ಪಿಸಲು ಸಿಎಂ ಸಿದ್ದರಾಮಯ್ಯ ಅವರು ಕಳೆದ ಜೂನ್ನಲ್ಲಿ ನಿವೃತ್ತ ಹಿರಿಯ ಅಧಿಕಾರಿಗಳನ್ನು ವಜಾ ಮಾಡಲು ಆದೇಶ ನೀಡಿದ್ದರು. ಈ ಆದೇಶದ ಬಳಿಕ 360ಕ್ಕೂ ಹೆಚ್ಚು ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳು, ನಿವೃತ್ತ ಎಂಜಿನಿಯರ್ ಗಳು, ಲೆಕ್ಕಾಧಿಕಾರಿಗಳು ಸೇರಿ ಅನೇಕ ಹುದ್ದೆಯಲ್ಲಿನ ಅಧಿಕಾರಿ, ಸಿಬ್ಬಂದಿಯನ್ನು ಸರ್ಕಾರ ವಜಾ ಮಾಡಿತ್ತು
5 ಪ್ರತಿಕ್ರಿಯೆಗಳು
clomiphene tablete how can i get cheap clomiphene price how to get clomiphene how can i get clomid price where can i buy cheap clomid generic clomid walmart order clomiphene online
More posts like this would prosper the blogosphere more useful.
inderal 10mg cheap – cost propranolol methotrexate 5mg generic
amoxicillin oral – order valsartan 160mg sale ipratropium 100mcg cost
buy azithromycin tablets – buy zithromax 500mg online buy generic bystolic