ಬೆಂಗಳೂರು.
ಆಂತರಿಕ ಕಚ್ಚಾಟ ಒಳ ಜಗಳದಿಂದ ತತ್ತರಿಸಿದ್ದ ಜನತಾ ಪರಿವಾರ ಹಲವು ಸುತ್ತಿನ ಚರ್ಚೆ ಮತ್ತು ಮಾತುಕತೆ ನಂತರ ಜನತಾದಳ ಹೆಸರಿನಲ್ಲಿ ಒಂದಾಗಿತ್ತು ಈ ಪಕ್ಷಕ್ಕೆ ದೊರೆತ ಚಕ್ರದ ಚಿನ್ಹೆ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಗೆಲುವು ತಂದು ಕೊಟ್ಟಿತ್ತು.
ಚಕ್ರದ ಚಿನ್ಹೆಯನ್ನು ಜನತಾ ಪರಿವಾರದ ನಾಯಕರು ಈಗಲೂ ಕೂಡ ಅದೃಷ್ಟದ ಸಂಕೇತ ಎಂದು ಭಾವಿಸುತ್ತಾರೆ ಆದರೆ ಆ ನಂತರದಲ್ಲಿ ಜನತಾದಳ ರಾಷ್ಟ್ರೀಯ ಮಟ್ಟದಲ್ಲಿ ವಿಭಜನೆಯಾದಾಗ ಆ ಪಕ್ಷಕ್ಕೆ ನೀಡಿದ ಚಕ್ರ ಚಿನ್ಹೆಯನ್ನು ಯಾವುದೇ ಪಕ್ಷಕ್ಕೂ ನೀಡಿರಲಿಲ್ಲ.
ಅಂದು ಜನತಾ ಪರಿವಾರದ ಪ್ರಭಾವಿ ನಾಯಕರಾಗಿದ್ದ ಮುಲಾಯಂ ಸಿಂಗ್ ಯಾದವ್, ಶರದ್ ಯಾದವ್, ಬಿಜು ಪಟ್ನಾಯಕ್, ಲಾಲೂಪ್ರಸಾದ್ ಯಾದವ್,ಭೈರಾವ್ ಸಿಂಗ್ ಶೆಕಾವತ್, ರಾಮಕೃಷ್ಣ ಹೆಗಡೆ, ಜಾರ್ಜ್ ಫರ್ನಾಂಡಿಸ್, ದೇವೇಗೌಡ ಅವರು ಜನತಾದಳದಿಂದ ಹೊರಬಂದು ತಮ್ಮದೇ ಆದ ಹೊಸ ಪಕ್ಷಗಳನ್ನು ಕಟ್ಟಿದರು. ತಮ್ಮ ಪಕ್ಷಕ್ಕೆ ಚಕ್ರದ ಚಿನ್ಹೆಯನ್ನು ಕೊಡುವಂತೆ ಮಾಡಿದ ಮನವಿಯನ್ನು ಚುನಾವಣಾ ಆಯೋಗ ತಳ್ಳಿಹಾಕಿ ಚಿನ್ಹೆಯನ್ನು ನಿಷೇಧಿಸಿತ್ತು. ಇದಾದ ನಂತರ ಎಲ್ಲರೂ ತಮ್ಮ ಪಕ್ಷಗಳಿಗೆ ಬೇರೆಯ ಚಿನ್ಹೆಯನ್ನು ರೂಪಿಸಿಕೊಂಡಿದ್ದರು.
ದೇವೇಗೌಡರ ನೇತೃತ್ವದ ಜೆಡಿಎಸ್ ಕರ್ನಾಟಕದಲ್ಲಿ ಮೊದಲಿಗೆ ಟ್ರ್ಯಾಕ್ಟರ್ ಚಿನ್ಹೆಯನ್ನು ಬಳಸಿತ್ತು ಆನಂತರ ಇದನ್ನು ಬದಲಾಯಿಸಿ ತೆಂಗಿನ ಮರದ ಚಿನ್ಹೆ ರೂಪಿಸಿತು. ಅದನ್ನು ಕೂಡ ಮಾರ್ಪಡಿಸಿ ತೆನೆ ಹೊತ್ತ ಮಹಿಳೆಯ ಚಿನ್ಹೆಯನ್ನು ಬಳಸುತ್ತಿದೆ.
ಹೀಗಿರುವಾಗ ಈಗ ಮತ್ತೆ ಚಕ್ರ ಚಿನ್ಹೆಯ ಬಗ್ಗೆ ಚರ್ಚೆ ಆರಂಭವಾಗಿದೆ. ಚಕ್ರ, ಅದೃಷ್ಟದ ಸಂಕೇತ ಎಂದು ಭಾವಿಸಿರುವ ಮಾಜಿ ಪ್ರಧಾನಿ ದೇವೇಗೌಡ ಅವರು ಇದೀಗ ತಮ್ಮ ಪಕ್ಷದ ಚಿನ್ಹೆಯಾದ ತೆನೆ ಹೊತ್ತ ಮಹಿಳೆಯ ಜೊತೆಗೆ ಚಕ್ರವನ್ನು ಬಳಸಲು ಸಿದ್ಧತೆ ನಡೆಸಿದ್ದಾರೆ ಕಳೆದ ರಾತ್ರಿ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ.
Previous Articleಸಿಎಂ ಹುದ್ದೆ ಬಗ್ಗೆ ಕೋಡಿಮಠದ ಭವಿಷ್ಯ!
Next Article ಎ.ಐ ಹುಡುಗಿ ನೋಡಿ ಹಳ್ಳಕ್ಕೆ ಬಿದ್ದ!


5 ಪ್ರತಿಕ್ರಿಯೆಗಳು
casino deneme siteleri deneme bonusu veren casino siteleri
güvenilir casino siteleri: güvenilir casino siteleri
vdcasino güncel adres vdcasino
vdcasino vdcasino
vdcasino resmi vdcasino