Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಇದು ತುಮಕೂರು ಜಿಲ್ಲಾ ಕಾರಾಗೃಹದ ಕರ್ಮಕಾಂಡ!!
    ಸುದ್ದಿ

    ಇದು ತುಮಕೂರು ಜಿಲ್ಲಾ ಕಾರಾಗೃಹದ ಕರ್ಮಕಾಂಡ!!

    vartha chakraBy vartha chakraಜೂನ್ 10, 2022Updated:ಜೂನ್ 10, 2022ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp


    ತುಮಕೂರು ಜಿಲ್ಲಾ ಕಾರಾಗೃಹ. ತುಮಕೂರಿನಿಂದ ಏಳೆಂಟು ಕಿಲೋಮೀಟರ್ ದೂರ ಹೋದ್ರೆ, ಸಿಗೋದು ಅಣ್ಣೇನಹಳ್ಳಿ. ಇದೇ ಅಣ್ಣೇನಹಳ್ಳಿ ಊರ ಹೊರಗೆ ಸುಮಾರು 20 ಎಕರೆ ವಿಸ್ತೀರ್ಣದಲ್ಲಿ ಚಾಚಿಕೊಂಡಿರೋದು ತುಮಕೂರು ಜಿಲ್ಲಾ ಕಾರಾಗೃಹ. 15 ಅಡಿ ಎತ್ತರದ ಗೋಡೆ ಒಳಗಿನ ಸ್ಥಿತಿ ಹೇಗಿದೆಯೋ ಏನೋ? ಆದ್ರೆ ಜೈಲು ಹೊರಗಿನ ಸ್ಥಿತಿ ಮಾತ್ರ ಶೋಚನೀಯ.
    ಜೈಲಿನ ಮೊದಲ ಆರು ಅಡಿ ಗೋಡೆ ಒಳಗೆ ಎಂಟ್ರಿ ಹಾಕಿದ್ರೆ, ಅಲ್ಲಿ ನಮಗೆ ಜೈಲಿನ ಮೇನ್ ಗೇಟ್ ಕಾಣಿಸುತ್ತದೆ. ಆರೋಪಿಗಳನ್ನ ಕರೆದುಕೊಂಡು ಬರೋದು, ಒಳಗೆ ಕರೆದುಕೊಂಡು ಹೋಗೋದು ಎಲ್ಲವೂ ಇದೇ ದ್ವಾರದಿಂದಲೇ. ಇನ್ನು ಒಳಗಿರುವ ಬಂಧಿತ ಆರೋಪಿಗಳನ್ನ ನೋಡೋಕೆ ಅಂತ ದೂರದೂರುಗಳಿಂದ ಬರೋರು ಕೂಡ ಕಾಂಪೌಂಡಿನೊಳಗೆ ಕೂತು ಕಾಯಬೇಕು. ತಮ್ಮ ಸರದಿ ಬರೋವರೆಗೂ ಕುಳಿತುಕೊಳ್ಳೋಣ ಅಂದ್ರೆ ಇರೋದು ಎರಡು ಕಲ್ಲು ಬೆಂಚು. ಜೈಲಿನ ಒಳಗಿರೋ ಖೈದಿಗಳ ಸಂಖ್ಯೆ ಭರ್ತಿ 432.
    ಕನಿಷ್ಟ ದಿನವೊಂದಕ್ಕೆ ನೂರು ಜನ ಆರೋಪಿಗಳನ್ನ ನೋಡೋಕೆ ಮೂನ್ನೂರು ಮಂದಿ ಜೈಲಿಗೆ ವಿಸಿಟ್ ಹಾಕ್ತಾರೆ. ಈ ರೀತಿ ಬರೋರಿಗೆ ಕುಳಿತುಕೊಳ್ಳಲು ಖುರ್ಚಿ ಇರಲಿ, ಕುಡಿಯೋಕೆ ನೀರು ಕೂಡ ಗತಿ ಇಲ್ಲ. ಆವರಣದಲ್ಲಿ ಒಂದು ನೀರಿನ ಟ್ಯಾಂಕ್ ಇದೆ, ಅದರಲ್ಲಿರುವ ನಲ್ಲಿಗಳು ಬಂದ್ ಆಗಿವೆ. ಇನ್ನು ಟ್ಯಾಂಕಿನೊಳಗೆ ನೀರು ಇದೆಯೋ ಇಲ್ವೋ ಗೊತ್ತಿಲ್ಲ. ತೊಳೆದು ವರ್ಷ ಕಳೆದಿರೋದಂತು ಸತ್ಯ. ಇನ್ನು ಶೌಚಾಲಯದ ಕಥೆಯನ್ನಂತೂ ಹೇಳುವಂತೆಯೂ ಇಲ್ಲ ಕಣ್ಣಾರೆ ನೋಡುವಂತೆಯೂ ಇಲ್ಲ. ಅಷ್ಟರ ಮಟ್ಟಿಗೆ ಗಬ್ಬೆದ್ದು ನಾರುತ್ತಿದೆ ಜೈಲಿನ ಆವರಣದಲ್ಲಿರುವ ಸಾರ್ವಜನಿಕ ಶೌಚಾಲಯ.
    ಈ ಫೋಟೋಗಳನ್ನ ನೀಟಾಗಿ ನೋಡಿ. ಇದು ಜೈಲಿಗೆ ಎಂಟ್ರಿ ಹಾಕೋಕೆ ಬರುವ ಸಾರ್ವಜನಿಕರು ಬಳಸುವ ಶೌಚಾಲಯ. ನಾಯಿಗಳು ಹಂದಿಗಳು ವಾಸಿಸುವ ತಾಣದಂತಿದೆ. ಇದರೊಳಗೆ ಕಾಲಿಟ್ರೆ ಗಬ್ಬು ವಾಸನೆ, ಜೊತೆಗೆ ಹಳೆ ಕಬ್ಬಿಣ, ಪ್ಲಾಸ್ಟಿಕ್, ಪೇಪರ್ಗಳದ್ದೇ ಸಾಮ್ರಾಜ್ಯ. ಜೈಲಿನಲ್ಲಿರೋರನ್ನ ನೋಡೋಕೆ ಬರುವ ಪುರುಷರಾದ್ರೆ ಎಲ್ಲೋ ಮೈದಾನದಲ್ಲೋ ಪೊದೆಯ ಮರೆಯಲ್ಲೋ ಮೂತ್ರ ವಿಸರ್ಜನೆ ಮಾಡಿ ಬಿಡ್ತಾರೆ. ಆದ್ರೆ ಗಂಡನನ್ನ, ಅಪ್ಪನನ್ನ, ಅಣ್ಣನನ್ನ, ತಮ್ಮನನ್ನ, ಮಗನನ್ನ ನೋಡೋಕೆ ಬರೋ ಹೆಣ್ಣು ಮಕ್ಕಳ ಪಾಡೇನು?
    ಇನ್ನು ಈ ಬಗ್ಗೆ ಜೈಲು ಅಧೀಕ್ಷಕಿಯಾಗಿರುವ ಶಾಂತಮ್ಮರನ್ನ ವಿಚಾರಿಸಿದ್ರೆ, ನಮ್ಮ ಜೈಲಿನಲ್ಲಿ ಎಲ್ಲವೂ ಕ್ಲೀನ್ ಕ್ಲೀನ್ ಅಂತಾರೆ. ಸ್ವತಃ ತಾನೊಬ್ಬಳು ಹೆಣ್ಣು ಮಗಳಾಗಿ ಮತ್ತೋರ್ವ ಹೆಣ್ಣು ಮಗಳ ಕಷ್ಟದ ಅರಿವಿಲ್ಲ ಅಂದ್ರೆ, ಏನ್ ಹೇಳೋದು ಹೇಳಿ. ಇನ್ನು ಅಲ್ಲಿ ಖೈದಿಗಳನ್ನ ನೋಡೋಕೆ ಬರೋರ ಬಳಿ ಸಿಬ್ಬಂದಿಗಳು ಲಂಚ ಪೀಕ್ತಾರೆ ಎನ್ನುವ ಆರೋಪ ಕೂಡ ಕೇಳಿ ಬಂದಿದೆ. ನಾಲ್ಕು ಸೇಬು ಹಣ್ಣುಗಳನ್ನೋ ಇಲ್ಲವೇ ನಾಲ್ಕು ಬಿರಿಯಾನಿಯನ್ನೋ ಕೈದಿಗೆ ಕೊಡಿ ಅಂತ ಕಳಿಸಿಕೊಟ್ರೆ, ಒಳಗೆ ತಲುಪೋದು ಒಂದೋ ಎರಡೋ ಅಷ್ಟೆ ಅಂತಾರೆ ಹೆಸರು ಹೇಳಲು ಇಚ್ಚಿಸದ ಸಾರ್ವಜನಿಕ.
    ಒಟ್ನಲ್ಲಿ ಇದು ತುಮಕೂರು ಜಿಲ್ಲಾ ಕಾರಾಗೃಹದ ಕರ್ಮಕಾಂಡ. ಬಗೆದಷ್ಟೂ ಭಯಾನಕವಾಗಿದೆ. ಖೈದಿಗಳಿಗಷ್ಟೆ ಅಲ್ಲ, ಅಲ್ಲಿ ನೋಡೋಕೆ ಬರುವವರಿಗೂ ಈ ಜೈಲು ಅಕ್ಷರಶಃ ನರಕವಾಗಿದೆ. ಇನ್ನಾದ್ರೂ ಸಂಬಧಪಟ್ಟವರು ಜೈಲಿನ ಅವ್ಯವಸ್ಥೆಯನ್ನ ಸರಿ ಪಡಿಸ್ತಾರಾ ಕಾದು ನೋಡಬೇಕಿದೆ.

    ಅಪರಾಧ ಸುದ್ದಿ
    Share. Facebook Twitter Pinterest LinkedIn Tumblr Email WhatsApp
    Previous Article‘ಸಾಮ್ರಾಟ್ ಪೃಥ್ವಿರಾಜ್‌’ಗೆ ಪ್ರೇಕ್ಷಕರ ಕೊರತೆ: ಹಲವೆಡೆ ಚಿತ್ರಪ್ರದರ್ಶನ ರದ್ದು
    Next Article ಜಾತ್ಯತೀತ ತತ್ವ ಉಳಿಸಲು ಜೆಡಿಎಸ್ ನಮಗೆ ಬೆಂಬಲ ನೀಡಬೇಕು: ಡಿ.ಕೆ. ಶಿವಕುಮಾರ್ ಮನವಿ
    vartha chakra
    • Website

    Related Posts

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    ಜೂನ್ 24, 2025

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    ಜೂನ್ 24, 2025

    ಗುಜರಾತ್ ನಲ್ಲಿ ಆಪ್ ಗೆದ್ದೇ ಬಿಡ್ತು.

    ಜೂನ್ 24, 2025

    Comments are closed.

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಜುಲೈ 7ರಂದು ಮಹಾನಗರ ಪಾಲಿಕೆಗಳು ಕೆಲಸ ಮಾಡುವುದಿಲ್ಲ!

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    ಸುಂದರಿ ಜಾಲಕ್ಕೆ ಬಲಿಯಾದ ಇರಾನ್.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • narkologiya ರಲ್ಲಿ 600 ಕೋಟಿ ರೂಪಾಯಿ ಕೊಟ್ಟು ಸನ್ಯಾಸಿಯಾದ | New Delhi
    • narkologiya ರಲ್ಲಿ ಪೊಲೀಸ್ ಕಮೀಷನರ್ Bike ride.
    • iulc2 ರಲ್ಲಿ ಪ್ರಧಾನಿ ಮೋದಿ – ವಿಜಯೇಂದ್ರ ಮುಖಾಮುಖಿ.
    Latest Kannada News

    ಜುಲೈ 7ರಂದು ಮಹಾನಗರ ಪಾಲಿಕೆಗಳು ಕೆಲಸ ಮಾಡುವುದಿಲ್ಲ!

    ಜೂನ್ 24, 2025

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    ಜೂನ್ 24, 2025

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    ಜೂನ್ 24, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ತಿರುಪತಿ ಲಾಡು ಗೆ ಮಂಡ್ಯ ತುಪ್ಪ #tirupati #tirumala #hyderabad #andhrapradesh #trending #ghee #products
    Subscribe