ತಿರುವನಂತಪುರ: ರಾಜಕೀಯದಲ್ಲಿ ವಂಶಪಾರಂಪರ್ಯ ಎನ್ನುವುದು ಇತ್ತೀಚೆಗೆ ಅತ್ಯಂತ ಸವಕಲು ನಾಣ್ಯವಾಗಿ ಪರಿಣಮಿಸಿದೆ. ಅಧಿಕಾರಸ್ಥರಾದ ಪ್ರತಿಯೊಬ್ಬ ರಾಜಕಾರಣಿ ತಮ್ಮ ಮಗ ಇಲ್ಲದೆ ಮಗಳು ರಾಜಕಾರಣಿಯಾಗಿ ಅಧಿಕಾರ ಚುಕ್ಕಾಣಿ ಹಿಡಿಯಬೇಕೆಂದು ಹಂಬಲಿಸುತ್ತಾರೆ.
ಆದರೆ ಇಲ್ಲೊಬ್ಬ ತಂದೆ ಇದ್ದಾರೆ ಅವರು ಲೋಕಸಭೆಗೆ ಸ್ಪರ್ಧಿಸಿರುವ ತಮ್ಮ ಪುತ್ರ ಈ ಚುನಾವಣೆಯಲ್ಲಿ ಸೋಲಬೇಕು ಎಂದು ಶಾಪ ಹಾಕುತ್ತಿದ್ದಾರೆ. ಅಷ್ಟೇ ಅಲ್ಲ ಮತದಾರರು ಅವರನ್ನು ಸೋಲಿಸಿ ಮನೆಗೆ ಕಳುಹಿಸಬೇಕು ಎಂದು ಮನವಿ ಮಾಡುತ್ತಿದ್ದಾರೆ.
ಅವರು ಯಾರೆಂದರೆ ಕಾಂಗ್ರೆಸ್ಸಿನ ಹಿರಿಯ ನಾಯಕ ಉದ್ದೇಶದ ಅತ್ಯಂತ ಪ್ರಾಮಾಣಿಕ ರಾಜಕಾರಣಿ ಎಂದೇ ಹೆಸರಾಗಿರುವ ಹಿರಿಯ ನಾಯಕ ಎ.ಕೆ. ಆಂಟನಿ.
ಕಾಂಗ್ರೆಸ್ಸಿನ ಹಿರಿಯ ನಾಯಕ ಎ.ಕೆ. ಆಂಟನಿ ಅವರ ಪುತ್ರ ಅನಿಲ್ ಆಂಟನಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ ಅಷ್ಟೇ ಅಲ್ಲ, ಕೇರಳದ ಪಟ್ಟನಂತಿಟ್ಟ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಇಲ್ಲಿ ಅವರ ವಿರುದ್ಧ ಪ್ರಚಾರ ಮಾಡುತ್ತಿರುವ ಎ.ಕೆ ಆಂಟನಿ ಈ ಚುನಾವಣೆಯಲ್ಲಿ ತಮ್ಮ ಪುತ್ರ ಅನಿಲ್ ಸೋಲಲೇಬೇಕು ಇದಕ್ಕಾಗಿ ನಾನು ಕಾಪಿಸುತ್ತೇನೆ ಯಾಕೆಂದರೆ ಕಾಂಗ್ರೆಸ್ ನನ್ನ ಧರ್ಮ ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಬೇಕು ಎಂದು ಹೇಳಿದ್ದಾರೆ.


1 ಟಿಪ್ಪಣಿ
Votre pharmacie oГ№ chaque client repart rassurГ© et satisfait – https://saintpierremagnycours-tourisme.jimdofree.com/associations-commerces-services/commer%C3%A7ants-services/pharmacie/ , Des produits sГ©lectionnГ©s avec soin pour toute la famille .