Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಟ್ರೆಂಡ್ ಆಗ್ತಿದೆಯಾ ಮದುವೆಗೆ ಮುಂಚೆ ಪ್ರೆಗ್ನೆಂಟ್?
    ಪ್ರಚಲಿತ

    ಟ್ರೆಂಡ್ ಆಗ್ತಿದೆಯಾ ಮದುವೆಗೆ ಮುಂಚೆ ಪ್ರೆಗ್ನೆಂಟ್?

    vartha chakraBy vartha chakraಡಿಸೆಂಬರ್ 12, 2025Updated:ಡಿಸೆಂಬರ್ 12, 2025ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಕನ್ನಡ ಧಾರಾವಾಹಿಗಳಲ್ಲಿ ಮದುವೆಗೆ ಮೊದಲು ಪ್ರೆಗ್ನೆಂಟ್ ಆಗುವ ಟ್ರೆಂಡ್ ಶುರುವಾಗಿದೆಯಾ?
    ಟಾಪ್ ಧಾರಾವಾಹಿ ಜ಼ೀ ಕನ್ನಡದ ʻಕರ್ಣʼದಲ್ಲಿ ನಿತ್ಯಾ ಪಾತ್ರ ಪ್ರೀತಿಯಿಂದ ಮೋಸ ಹೋಗಿ ಗರ್ಭಿಣಿಯಾಗಿದ್ದಾಳೆ. ನಾಯಕ ಕರ್ಣನನ್ನು ಮದುವೆ ಆದರೂ ಗರ್ಭಕ್ಕೆ ಕಾರಣ ಹಳೆಯ ಸ್ನೇಹಿತ. ಕರ್ಣ-ನಿತ್ಯಾಳದು ಮದುವೆ ನಾಟಕ. ಅಸಲಿಗೆ ನಿತ್ಯಾಳನ್ನು ಈ ಅವಮಾನಕರ ಪರಿಸ್ಥಿತಿಯಿಂದ ಪಾರು ಮಾಡಲೆಂದೇ ತ್ಯಾಗಜೀವಿ ಕರ್ಣ ಮದುವೆಯಾಗಿದ್ದು. ನಿತ್ಯಾ ಇಲ್ಲಿ ಪುಟ್ಟಣ್ಣ ಕಣಗಾಲರ ʻಅಮೃತ ಘಳಿಗೆʼ ಚಿತ್ರದ ನಾಯಕಿಯ ಹಾಗೆ. ಅಲ್ಲಿ ಪದ್ಮಾವಾಸಂತಿ ಗರ್ಭಕ್ಕೆ ಕಾರಣನಾಗಿದ್ದು ರಾಮಕೃಷ್ಣ, ಮದುವೆಯಾಗಿದ್ದು ಶ್ರೀಧರ್!
    ಇನ್ನು ಉದಯ ಟಿವಿಯ ಮೂರು ಧಾರಾವಾಹಿಗಳಲ್ಲಿ ಮದುವೆಗೆ ಮುಂಚೆ ಪ್ರೆಗ್ನೆಂಟ್ ಆದ ಹುಡುಗೀರ ಕಥೆಯಿದೆ. ʻಸಿಂಧುಭೈರವಿʼ ಧಾರಾವಾಹಿಯಲ್ಲಿ ನಾಯಕಿಯ ಅಕ್ಕ ಭವಾನಿ ಪ್ರೀತಿಯ ಅಮಲಲ್ಲಿ ಮದುವೆಗೆ ಮುಂಚೆ ಗರ್ಭಿಣಿ. ಇವರ ಪ್ರೀತಿಗೆ ನಾಯಕನ ಅಮ್ಮನೇ ಖಳನಾಯಕಿ. ಎಲ್ಲೂ ಸರಿ ಹೋಗಿ ಗರ್ಭಿಣಿ ಭವಾನಿಗೆ ಪ್ರಿಯಕರ ಅಥರ್ವನ ಜೊತೆ ಮದುವೆ ನೆಡೆದಿದೆ. ವಿಶೇಷ ಅಂದ್ರೆ ಈ ಗರ್ಭವನ್ನು ಒಂದು ಅಪರಾಧ ಅಂತ ಸುತ್ತ ಇರುವ ಯಾವ ಪಾತ್ರವೂ ಭಾವಿಸಿದ ಹಾಗೆ ಕಾಣುತ್ತಿಲ್ಲ. ಗರ್ಭಿಣಿ ಮದುವೆ ಯಾವುದೇ ವಿರೋಧವಿಲ್ಲದೇ ನೆಡೆಯುತ್ತಿದೆ. ಉದಯ ಟಿವಿಯ ಇನ್ನೊಂದು ಧಾರಾವಾಹಿ ʻಮೈನಾʻ. ಇದರಲ್ಲಿ ನಾಯಕಿಯೇ ಮದುವೆಯಾಗದೇ ಗರ್ಭಿಣಿ. ಇವಳ ಗರ್ಭಕ್ಕೆ ಪಾರ್ಟಿಯಲ್ಲಿ ಆದ ಮೋಸ ಕಾರಣ. ಆದರೆ ಮೋಸಗಾರ ಯಾರು ಅಂತ ಗೊತ್ತಿಲ್ಲ. ಇಲ್ಲಿ ಮದುವೆಗೆ ಮುಂಚೆ ಗರ್ಭ ಗುಟ್ಟಾಗಿ ಉಳಿದಿದೆ. ಬಹಿರಂಗವಾದಾಗ ಏನು ಅಲ್ಲೋಲಕಲ್ಲೋಲ ಆಗುತ್ತದೆಯೋ ಕಾದು ನೋಡಬೇಕು. ಉದಯ ಟಿವಿಯ ಇನ್ನೊಂದು ಧಾರಾವಾವಿ ʻಚಿಕ್ಕೆಜಮಾನಿʼಯಲ್ಲಿ ನಾಯಕಿ ಕಾವೇರಿ ಮದುವೆಗೆ ಮುಂಚೆ ಗರ್ಭವತಿ ಆಗಿರುತ್ತಾಳೆ. ಸ್ನೇಹಿತನಿಂದ ಮೋಸಕ್ಕೆ ಒಳಗಾಗಿ ಗರ್ಭಧರಿಸುವ ಅವಳು, ನಂತರ ತನಗಿಂತ ತುಂಬ ವಯಸ್ಸಾದ ಕಂಪನಿ ಯಜಮಾನನನ್ನು ಮದುವೆ ಆಗಬೇಕಾಗುತ್ತದೆ. ಈ ಗರ್ಭಕಥೆ ಕೂಡ ಕಥೆಯಲ್ಲಿ ಗುಟ್ಟಾಗಿತ್ತು, ಈಗ ಗರ್ಭಪಾತ ಆಗಿದೆ. ಒಟ್ಟಿನಲ್ಲಿ ಈ ಮೊದಲೆಲ್ಲ ನಾಯಕಿ ಅಂತ ಗಂಗೆಯಷ್ಟು ಪವಿತ್ರ, ನಿಸ್ವಾರ್ಥ, ತ್ಯಾಗಜೀವಿಯಾಗಿರುತ್ತಿದ್ದಳು. ಮದುವೆ ಆದರೂ ವ್ರತ ಕಥೆ ಅಂತ ಗರ್ಭ ಧರಿಸಲು ಟೈಮೇ ಇರುತ್ತಿರಲಿಲ್ಲ! ಈಗ ಕಾಲ ಬದಲಾಗಿದೆ. ಲಿವ್ – ಇನ್ ಟುಗೆದರ್, ಮದುವೆಯಾಗದೇ ಮಗು ಪಡೆಯುವುದು ಟ್ರೆಂಡ್ ಆಗುತ್ತಿರುವ ಈ ದಿನಗಳಲ್ಲಿ ಮದುವೆಗೆ ಮುಂಚೆ ಗರ್ಭ ಧರಿಸುವುದು ʻಪರವಾಗಿಲ್ಲʻ ಎನ್ನುವ ಹಾಗೆ ತೋರುತ್ತಿದೆ.

    ಧಾರಾವಾಹಿ ಮದುವೆ ಮೈ
    Share. Facebook Twitter Pinterest LinkedIn Tumblr Email WhatsApp
    Previous Articleಚನ್ನರಾಜ ಹಟ್ಟಿಹೊಳಿ ಹಾಕಿದ ಪೋಸ್ಟ್ ನಲ್ಲಿ ಏನಿದೆ ಗೊತ್ತಾ?
    Next Article ಎಚ್ಚೆತ್ತ ರಾಜ್ಯ ಸರ್ಕಾರ
    vartha chakra
    • Website

    Related Posts

    ಎಚ್ಚೆತ್ತ ರಾಜ್ಯ ಸರ್ಕಾರ

    ಡಿಸೆಂಬರ್ 12, 2025

    ಚನ್ನರಾಜ ಹಟ್ಟಿಹೊಳಿ ಹಾಕಿದ ಪೋಸ್ಟ್ ನಲ್ಲಿ ಏನಿದೆ ಗೊತ್ತಾ?

    ಡಿಸೆಂಬರ್ 12, 2025

    ಜಗತ್ತಿನ ಅತಿ ದೊಡ್ಡ ರಾಷ್ಟ್ರಧ್ವಜ ಅನಾವರಣ

    ಡಿಸೆಂಬರ್ 9, 2025

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಎಚ್ಚೆತ್ತ ರಾಜ್ಯ ಸರ್ಕಾರ

    ಟ್ರೆಂಡ್ ಆಗ್ತಿದೆಯಾ ಮದುವೆಗೆ ಮುಂಚೆ ಪ್ರೆಗ್ನೆಂಟ್?

    ಚನ್ನರಾಜ ಹಟ್ಟಿಹೊಳಿ ಹಾಕಿದ ಪೋಸ್ಟ್ ನಲ್ಲಿ ಏನಿದೆ ಗೊತ್ತಾ?

    ಜಗತ್ತಿನ ಅತಿ ದೊಡ್ಡ ರಾಷ್ಟ್ರಧ್ವಜ ಅನಾವರಣ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • KennethMef ರಲ್ಲಿ ಸೋತ ಕಾಂಗ್ರೆಸ್ ನಾಯಕರಿಗೆ ಪಾಠ.
    • kypit kyrsovyu_lsPi ರಲ್ಲಿ ಮಗನನ್ನು ಕೊಂದ ತಾಯಿ ಮಾನಸಿಕ ರೋಗಿ ಅಲ್ಲ| Suchana Seth
    • fen daison_idOt ರಲ್ಲಿ ಮುರಸೋಳಿ ಸೆಲ್ವಂ ಎಂಬ ಗಾರುಡಿಗ.
    Latest Kannada News

    ಎಚ್ಚೆತ್ತ ರಾಜ್ಯ ಸರ್ಕಾರ

    ಡಿಸೆಂಬರ್ 12, 2025

    ಟ್ರೆಂಡ್ ಆಗ್ತಿದೆಯಾ ಮದುವೆಗೆ ಮುಂಚೆ ಪ್ರೆಗ್ನೆಂಟ್?

    ಡಿಸೆಂಬರ್ 12, 2025

    ಚನ್ನರಾಜ ಹಟ್ಟಿಹೊಳಿ ಹಾಕಿದ ಪೋಸ್ಟ್ ನಲ್ಲಿ ಏನಿದೆ ಗೊತ್ತಾ?

    ಡಿಸೆಂಬರ್ 12, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸಿಎಂ ವಿಮಾನಯಾನ ಬಳಕೆಗೆ 47 ಕೋಟಿ ಖರ್ಚು #varthachakra #siddaramaiah #helicopter #airtravel #costs #news
    Subscribe