Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಟ್ರೆಂಡ್ ಆಗ್ತಿದೆಯಾ ಮದುವೆಗೆ ಮುಂಚೆ ಪ್ರೆಗ್ನೆಂಟ್?
    ಪ್ರಚಲಿತ

    ಟ್ರೆಂಡ್ ಆಗ್ತಿದೆಯಾ ಮದುವೆಗೆ ಮುಂಚೆ ಪ್ರೆಗ್ನೆಂಟ್?

    vartha chakraBy vartha chakraಡಿಸೆಂಬರ್ 12, 2025Updated:ಡಿಸೆಂಬರ್ 12, 202534 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಕನ್ನಡ ಧಾರಾವಾಹಿಗಳಲ್ಲಿ ಮದುವೆಗೆ ಮೊದಲು ಪ್ರೆಗ್ನೆಂಟ್ ಆಗುವ ಟ್ರೆಂಡ್ ಶುರುವಾಗಿದೆಯಾ?
    ಟಾಪ್ ಧಾರಾವಾಹಿ ಜ಼ೀ ಕನ್ನಡದ ʻಕರ್ಣʼದಲ್ಲಿ ನಿತ್ಯಾ ಪಾತ್ರ ಪ್ರೀತಿಯಿಂದ ಮೋಸ ಹೋಗಿ ಗರ್ಭಿಣಿಯಾಗಿದ್ದಾಳೆ. ನಾಯಕ ಕರ್ಣನನ್ನು ಮದುವೆ ಆದರೂ ಗರ್ಭಕ್ಕೆ ಕಾರಣ ಹಳೆಯ ಸ್ನೇಹಿತ. ಕರ್ಣ-ನಿತ್ಯಾಳದು ಮದುವೆ ನಾಟಕ. ಅಸಲಿಗೆ ನಿತ್ಯಾಳನ್ನು ಈ ಅವಮಾನಕರ ಪರಿಸ್ಥಿತಿಯಿಂದ ಪಾರು ಮಾಡಲೆಂದೇ ತ್ಯಾಗಜೀವಿ ಕರ್ಣ ಮದುವೆಯಾಗಿದ್ದು. ನಿತ್ಯಾ ಇಲ್ಲಿ ಪುಟ್ಟಣ್ಣ ಕಣಗಾಲರ ʻಅಮೃತ ಘಳಿಗೆʼ ಚಿತ್ರದ ನಾಯಕಿಯ ಹಾಗೆ. ಅಲ್ಲಿ ಪದ್ಮಾವಾಸಂತಿ ಗರ್ಭಕ್ಕೆ ಕಾರಣನಾಗಿದ್ದು ರಾಮಕೃಷ್ಣ, ಮದುವೆಯಾಗಿದ್ದು ಶ್ರೀಧರ್!
    ಇನ್ನು ಉದಯ ಟಿವಿಯ ಮೂರು ಧಾರಾವಾಹಿಗಳಲ್ಲಿ ಮದುವೆಗೆ ಮುಂಚೆ ಪ್ರೆಗ್ನೆಂಟ್ ಆದ ಹುಡುಗೀರ ಕಥೆಯಿದೆ. ʻಸಿಂಧುಭೈರವಿʼ ಧಾರಾವಾಹಿಯಲ್ಲಿ ನಾಯಕಿಯ ಅಕ್ಕ ಭವಾನಿ ಪ್ರೀತಿಯ ಅಮಲಲ್ಲಿ ಮದುವೆಗೆ ಮುಂಚೆ ಗರ್ಭಿಣಿ. ಇವರ ಪ್ರೀತಿಗೆ ನಾಯಕನ ಅಮ್ಮನೇ ಖಳನಾಯಕಿ. ಎಲ್ಲೂ ಸರಿ ಹೋಗಿ ಗರ್ಭಿಣಿ ಭವಾನಿಗೆ ಪ್ರಿಯಕರ ಅಥರ್ವನ ಜೊತೆ ಮದುವೆ ನೆಡೆದಿದೆ. ವಿಶೇಷ ಅಂದ್ರೆ ಈ ಗರ್ಭವನ್ನು ಒಂದು ಅಪರಾಧ ಅಂತ ಸುತ್ತ ಇರುವ ಯಾವ ಪಾತ್ರವೂ ಭಾವಿಸಿದ ಹಾಗೆ ಕಾಣುತ್ತಿಲ್ಲ. ಗರ್ಭಿಣಿ ಮದುವೆ ಯಾವುದೇ ವಿರೋಧವಿಲ್ಲದೇ ನೆಡೆಯುತ್ತಿದೆ. ಉದಯ ಟಿವಿಯ ಇನ್ನೊಂದು ಧಾರಾವಾಹಿ ʻಮೈನಾʻ. ಇದರಲ್ಲಿ ನಾಯಕಿಯೇ ಮದುವೆಯಾಗದೇ ಗರ್ಭಿಣಿ. ಇವಳ ಗರ್ಭಕ್ಕೆ ಪಾರ್ಟಿಯಲ್ಲಿ ಆದ ಮೋಸ ಕಾರಣ. ಆದರೆ ಮೋಸಗಾರ ಯಾರು ಅಂತ ಗೊತ್ತಿಲ್ಲ. ಇಲ್ಲಿ ಮದುವೆಗೆ ಮುಂಚೆ ಗರ್ಭ ಗುಟ್ಟಾಗಿ ಉಳಿದಿದೆ. ಬಹಿರಂಗವಾದಾಗ ಏನು ಅಲ್ಲೋಲಕಲ್ಲೋಲ ಆಗುತ್ತದೆಯೋ ಕಾದು ನೋಡಬೇಕು. ಉದಯ ಟಿವಿಯ ಇನ್ನೊಂದು ಧಾರಾವಾವಿ ʻಚಿಕ್ಕೆಜಮಾನಿʼಯಲ್ಲಿ ನಾಯಕಿ ಕಾವೇರಿ ಮದುವೆಗೆ ಮುಂಚೆ ಗರ್ಭವತಿ ಆಗಿರುತ್ತಾಳೆ. ಸ್ನೇಹಿತನಿಂದ ಮೋಸಕ್ಕೆ ಒಳಗಾಗಿ ಗರ್ಭಧರಿಸುವ ಅವಳು, ನಂತರ ತನಗಿಂತ ತುಂಬ ವಯಸ್ಸಾದ ಕಂಪನಿ ಯಜಮಾನನನ್ನು ಮದುವೆ ಆಗಬೇಕಾಗುತ್ತದೆ. ಈ ಗರ್ಭಕಥೆ ಕೂಡ ಕಥೆಯಲ್ಲಿ ಗುಟ್ಟಾಗಿತ್ತು, ಈಗ ಗರ್ಭಪಾತ ಆಗಿದೆ. ಒಟ್ಟಿನಲ್ಲಿ ಈ ಮೊದಲೆಲ್ಲ ನಾಯಕಿ ಅಂತ ಗಂಗೆಯಷ್ಟು ಪವಿತ್ರ, ನಿಸ್ವಾರ್ಥ, ತ್ಯಾಗಜೀವಿಯಾಗಿರುತ್ತಿದ್ದಳು. ಮದುವೆ ಆದರೂ ವ್ರತ ಕಥೆ ಅಂತ ಗರ್ಭ ಧರಿಸಲು ಟೈಮೇ ಇರುತ್ತಿರಲಿಲ್ಲ! ಈಗ ಕಾಲ ಬದಲಾಗಿದೆ. ಲಿವ್ – ಇನ್ ಟುಗೆದರ್, ಮದುವೆಯಾಗದೇ ಮಗು ಪಡೆಯುವುದು ಟ್ರೆಂಡ್ ಆಗುತ್ತಿರುವ ಈ ದಿನಗಳಲ್ಲಿ ಮದುವೆಗೆ ಮುಂಚೆ ಗರ್ಭ ಧರಿಸುವುದು ʻಪರವಾಗಿಲ್ಲʻ ಎನ್ನುವ ಹಾಗೆ ತೋರುತ್ತಿದೆ.

    Verbattle
    Verbattle
    Verbattle
    ಧಾರಾವಾಹಿ ಮದುವೆ ಮೈ
    Share. Facebook Twitter Pinterest LinkedIn Tumblr Email WhatsApp
    Previous Articleಚನ್ನರಾಜ ಹಟ್ಟಿಹೊಳಿ ಹಾಕಿದ ಪೋಸ್ಟ್ ನಲ್ಲಿ ಏನಿದೆ ಗೊತ್ತಾ?
    Next Article ಎಚ್ಚೆತ್ತ ರಾಜ್ಯ ಸರ್ಕಾರ
    vartha chakra
    • Website

    Related Posts

    ಎದ್ದು ನಿಂತ ಪಬ್ಲಿಕ್ ಟಿವಿ , ಕುಸಿದು ಬಿದ್ದ ಟಿವಿ9..!

    ಫೆಬ್ರವರಿ 20, 2026

    ಇನ್ ಸೈಟ್ ಐಎಎಸ್ ನ ಮಾದರಿ ನಡೆ

    ಫೆಬ್ರವರಿ 20, 2026

    ಸಫಾರಿ ಪ್ರಿಯರಿಗೆ ಸಿಹಿ ಸುದ್ದಿ

    ಫೆಬ್ರವರಿ 20, 2026

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬಡವರ ಗ್ಯಾರಂಟಿ Vs ಶ್ರೀಮಂತರ ರಿಯಾಯಿತಿ: ನ್ಯಾಯ ಯಾರ ಪರ?

    ಎದ್ದು ನಿಂತ ಪಬ್ಲಿಕ್ ಟಿವಿ , ಕುಸಿದು ಬಿದ್ದ ಟಿವಿ9..!

    ಇನ್ ಸೈಟ್ ಐಎಎಸ್ ನ ಮಾದರಿ ನಡೆ

    ಸಫಾರಿ ಪ್ರಿಯರಿಗೆ ಸಿಹಿ ಸುದ್ದಿ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Michaelhix ರಲ್ಲಿ ಧರ್ಮಸ್ಥಳ ಪ್ರಕರಣಕ್ಕೆ ಹಠಾತ್ ತಿರುವು.
    • Krovlyanub ರಲ್ಲಿ ಕಾಂಗ್ರೆಸ್ ಶಾಸಕರಿಗೆ ಸಿಎಂ ಕೊಡುವ ಆಫ಼ರ್ ಏನು | Siddaramaiah
    • Michaelhix ರಲ್ಲಿ ಧರ್ಮಸ್ಥಳ ಪ್ರಕರಣಕ್ಕೆ ಹಠಾತ್ ತಿರುವು.
    Latest Kannada News

    ಬಡವರ ಗ್ಯಾರಂಟಿ Vs ಶ್ರೀಮಂತರ ರಿಯಾಯಿತಿ: ನ್ಯಾಯ ಯಾರ ಪರ?

    ಫೆಬ್ರವರಿ 20, 2026

    ಎದ್ದು ನಿಂತ ಪಬ್ಲಿಕ್ ಟಿವಿ , ಕುಸಿದು ಬಿದ್ದ ಟಿವಿ9..!

    ಫೆಬ್ರವರಿ 20, 2026

    ಇನ್ ಸೈಟ್ ಐಎಎಸ್ ನ ಮಾದರಿ ನಡೆ

    ಫೆಬ್ರವರಿ 20, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.