ಪೊಲೀಸ್ ಇನ್ಸ್ಪೆಕ್ಟರ್ ರೊಬ್ಬರಿಗೆ ಬ್ಯಾಂಕ್ ಖಾತೆಯ ಕೆ ವೈ ಸಿ ಹಾಗು ಪಾನ್ ನಂಬರ್ ಅಪ್ ಡೇಟ್ ಮಾಡುವ ನೆಪದಲ್ಲಿ ಸೈಬರ್ ಖದೀಮನೊಬ್ಬ 3.63 ಲಕ್ಷ ವಂಚನೆ ನಡೆಸಿರುವ ಸಂಬಂಧ ಕೇಂದ್ರ ವಿಭಾಗದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯ ಅಪರಾಧ ದಾಖಲೆಗಳ ವಿಭಾಗ (ಎನ್ ಸಿ ಆರ್ ಬಿ )ದ ಇನ್ಸ್ಪೆಕ್ಟರ್ ನಾಗಭೂಷಣ್ ಅವರಿಗೆ ಬ್ಯಾಂಕ್ ಖಾತೆಯ ಕೆ ವೈ ಸಿ ಹಾಗು ಪಾನ್ ನಂಬರ್ ಅಪ್ ಡೇಟ್ ಮಾಡುವ ನೆಪದಲ್ಲಿ ವಂಚನೆ ನಡೆಸಲಾಗಿದೆ.
ಪಾನ್ ನಂಬರ್ ಹಾಗು ಕೆ ವೈ ಸಿ ಅಪ್ ಡೇಟ್ ಮಾಡುವುದಾಗಿ ಸಂದೇಶವನ್ನು ಖದೀಮ ಕಳುಹಿಸಿದ್ದು ಅದನ್ನು ನಂಬಿ ನಾಗಭೂಷಣ್ ಪಾನ್ ನಂಬರ್, ಬ್ಯಾಂಕ್ ಖಾತೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಸಿಕ್ಕ ಕೂಡಲೇ ನಾಗಭೂಷಣ್ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 3.63 ಲಕ್ಷ ವನ್ನು ತೆಗೆದುಕೊಳ್ಳಲಾಗಿದೆ
ಕಳೆದ ಮಾರ್ಚ್ 21ರಂದು ನಡೆದ ವಂಚನೆ ಸಂಬಂಧ ಕೇಂದ್ರ ವಿಭಾಗದ ಸೆನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಖದೀಮನ ಪತ್ತೆಗೆ ಶೋಧ ಕೈಗೊಂಡಿದ್ದಾರೆ