Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ತನ್ನ ಶಿಕ್ಷಕಿಗೇ ಶೂಟ್ ಮಾಡಿದ 6 ವರ್ಷದ ಹುಡುಗ
    ಅಂತಾರಾಷ್ಟ್ರೀಯ

    ತನ್ನ ಶಿಕ್ಷಕಿಗೇ ಶೂಟ್ ಮಾಡಿದ 6 ವರ್ಷದ ಹುಡುಗ

    vartha chakraBy vartha chakraJanuary 7, 2023Updated:March 20, 2023No Comments1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಅವನು ಕೇವಲ ಆರು ವರ್ಷದ ಪುಟ್ಟ ಪೋರ. ಆದರೆ ಆಟಿಕೆಗಳನ್ನು ಹಿಡಿಯಬೇಕಾದ ಆ ಪುಟ್ಟ ಕೈಗಳು, ಬಂದೂಕನ್ನು ಹಿಡಿದದ್ದು ಮಾತ್ರ ಆಘಾತಕಾರಿ ವಿಷಯ. ಅದಕ್ಕಿಂತ ಆಘಾತವೆಂದರೆ, ವಿದ್ಯೆ ಕಲಿಸುವ ತನ್ನ ಶಿಕ್ಷಕಿಗೇ ಈ ಪೋರ ಶೂಟ್ ಮಾಡಿದ್ದಾನೆ. ಹೌದು, ಓದಿ ಅಚ್ಚರಿಯಾದರೂ, ಕೋಪ ಬಂದರೂ, ವಿಷಾದವೆನಿಸಿದರೂ, ನಂಬಲು ಕಷ್ಟವಾದರೂ ಇದು ನಂಬಲೇ ಬೇಕಾದ ಸತ್ಯ ಘಟನೆ. ಈ ಘೋರವಾದ ಘಟನೆ ನಡೆದಿದ್ದು ವರ್ಜಿನಿಯಾದ ನ್ಯೂಪೋರ್ಟ್ ನ್ಯೂಸ್ ಎಂಬ ನಗರದ ರಿಚ್ನೆಕ್ ಎಲೆಮೆಂಟರಿ ಶಾಲೆಯಲ್ಲಿ.

    ಶಿಕ್ಷಕಿ ಮತ್ತು ಬಾಲಕನ ನಡುವೆ ವಾಗ್ವಾದ ಶುರುವಾಗಿತ್ತು. ಆಗಲೇ, ತನ್ನ ಬಳಿಯಿದ್ದ ಬಂದೂಕಿನಿಂದ ಬಾಲಕ ಶಿಕ್ಷಕಿಯ ಮೇಲೆ ಗುಂಡಿನ ದಾಳಿ ಮಾಡಿದ್ದಾನೆ ಎನ್ನಲಾಗಿದೆ. ಇದು ಅಕಸ್ಮಾತ್ ಆಗಿ ಆದದ್ದಲ್ಲ ಎಂಬುದು ಮತ್ತಷ್ಟು ಆಘಾತ ನೀಡುವ ಸಂಗತಿ. ಘಟನೆಯನ್ನು ಪರಿಶೀಲಿಸಿದ ಪೋಲಿಸ್ ಚೀಫ಼್ ಸ್ಟೀವ್ ಡ್ರೀವ್, ಸುದ್ದಿ ಗೋಷ್ಟಿಯಲ್ಲಿ ಹೀಗೆ ಹೇಳಿದ್ದಾರೆ. ಆರೋಪಿ ಬಾಲಕನನ್ನು ವಶಕ್ಕೆ ಪಡೆದಿದ್ದೇವೆ. ಇತ್ತೀಚೆಗೆ ಬಂದ ಆಸ್ಪತ್ರೆಯ ವರದಿಯ ಪ್ರಕಾರ ಗಾಯಾಳು ಶಿಕ್ಷಕಿಯ ಆರೋಗ್ಯ ಪರಿಸ್ಥಿತಿ ಕೂಡ ಸುಧಾರಿಸುತ್ತಿದೆ. ಬಾಲಕನ ಕೈಯ್ಯಲ್ಲಿ ಬಂದೂಕು ಹೇಗೆ ಬಂತು? ಅದನ್ನು ಉಪಯೋಗಿಸುವಂಥ ಸಂದರ್ಭ ಏನಿತ್ತು? ಪರಿಸ್ಥಿತಿ ಕೈ ಮೀರಲು ಕಾರಣವೇನು ಎಂಬುದನ್ನೆಲ್ಲ ತನಿಖೆ ನಡೆಸಿ ತಿಳಿದುಕೊಳ್ಳುತ್ತೇವೆ.

    ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ನ್ಯೂಪೋರ್ಟ್ ನ್ಯೂಸ್ ಪಬ್ಲಿಕ್ ಶಾಲೆಯ ಸೂಪರಿನ್ಡ್ಟೆಂಡೆಂಟ್ ಡಾ. ಜೊರ್ಜ್ ಪಾರ್ಕರ್ ಘಟನೆಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾತನಾಡುತ್ತ, “ಈ ಘಟನೆಯ ಬಗ್ಗೆ ನನಗೆ ತೀವ್ರ ದುಃಖವಿದೆ. ಬಂದೂಕಿನಂತಹ ಮಾರಕ ವಸ್ತುಗಳನ್ನು ಮಕ್ಕಳ ಕೈಗೆ ಸಿಗದಂತೆ ನಾವು ಎಚ್ಚರವಹಿಸಬೇಕಿದೆ. ಈ ನಿಟ್ಟಿನಲ್ಲಿ ನಮಗೆ ಸಮುದಾಯದ ಸಂಪೂರ್ಣ ಬೆಂಬಲ ಬೇಕೆಂದು
    ಕೋರಿಕೊಳ್ಳುತ್ತೇನೆ. ಮಕ್ಕಳನ್ನು ಸುರಕ್ಷಿತವಾಗಿ ಇಡುವಲ್ಲಿ ನಾವು ಮತ್ತಷ್ಟು ಹೆಚ್ಚು ಪರಿಶ್ರಮ ವಹಿಸಬೇಕಿದೆ” ಎಂದಿದ್ದಾರೆ.

    ಆಟಿಕೆಯೊಂದಿಗೆ ಆಡಬೇಕಾದ ವಯಸ್ಸಲ್ಲಿ ಮಾರಕ ವಸ್ತುಗಳ ಪ್ರಯೋಗ ನಿಜಕ್ಕೂ ಆಘಾತಕಾರಿ. ಇಂತಹ ಬೆಳವಣಿಗೆಗಳನ್ನು ಕಂಡಾಗ ಎತ್ತ ನಡೆಯುತ್ತಿದೆ ಈ ಸಮಾಜ ಎಂದು ಎದೆ ನಡುಗುವುದು ಸುಳ್ಳಲ್ಲ.

    ಆರೋಗ್ಯ ಶಾಲೆ
    Share. Facebook Twitter Pinterest LinkedIn Tumblr Email WhatsApp
    Previous Articleಸಹಪ್ರಯಾಣಿಕ ಮಹಿಳೆಯ ಮೇಲೆ ಮೂತ್ರ ಮಾಡಿದ ಆರೋಪಿಯ ಪ್ರತಿಕ್ರಿಯೆ
    Next Article ತಮಾಷೆಗಾಗಿ ಬಾಂಬ್ ಬೆದರಿಕೆ ಕರೆ ಮಾಡಿದ ಬಾಲಕ
    vartha chakra
    • Website

    Related Posts

    ಜುಲೈ 7ರಂದು ಮಹಾನಗರ ಪಾಲಿಕೆಗಳು ಕೆಲಸ ಮಾಡುವುದಿಲ್ಲ!

    June 24, 2025

    ಸುಂದರಿ ಜಾಲಕ್ಕೆ ಬಲಿಯಾದ ಇರಾನ್.

    June 24, 2025

    ಮದುವೆಯಾಗುವುದಾಗಿ ನಂಬಿಸಿ ಕುತ್ತಿಗೆ ಕೊಯ್ದ.

    June 18, 2025

    Comments are closed.

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಜುಲೈ 7ರಂದು ಮಹಾನಗರ ಪಾಲಿಕೆಗಳು ಕೆಲಸ ಮಾಡುವುದಿಲ್ಲ!

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    ಸುಂದರಿ ಜಾಲಕ್ಕೆ ಬಲಿಯಾದ ಇರಾನ್.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • 9rlm1 on ಸೋನಿಯಾ ಗಾಂಧಿ ನಿಲುವಿಗೆ ವಿರುದ್ಧವಾ ಕಾಂಗ್ರೆಸ್ ಸರ್ಕಾರ? | Sonia Gandhi
    • 958c7 on ವಿಜಯೇಂದ್ರ ಯಾಕೆ ಹೀಗೆ ಮಾಡುತ್ತಿದ್ದಾರೆ ಗೊತ್ತಾ.
    • r4yd7 on ಪತ್ನಿಗೆ ಮೆಸೇಜ್ ಮಾಡಿದವನ ಕಣ್ಣು ಕಿತ್ತು ಹತ್ಯೆ
    Latest Kannada News

    ಜುಲೈ 7ರಂದು ಮಹಾನಗರ ಪಾಲಿಕೆಗಳು ಕೆಲಸ ಮಾಡುವುದಿಲ್ಲ!

    June 24, 2025

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    June 24, 2025

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    June 24, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ತಿರುಪತಿ ಲಾಡು ಗೆ ಮಂಡ್ಯ ತುಪ್ಪ #tirupati #tirumala #hyderabad #andhrapradesh #trending #ghee #products
    Subscribe