Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ತಾತನ ಅಂತ್ಯಸಂಸ್ಕಾರಕ್ಕೆ ನೀರಿನಲ್ಲಿ ನಡೆದು ಬಂದ ಬಾಣಂತಿ
    ಸುದ್ದಿ

    ತಾತನ ಅಂತ್ಯಸಂಸ್ಕಾರಕ್ಕೆ ನೀರಿನಲ್ಲಿ ನಡೆದು ಬಂದ ಬಾಣಂತಿ

    vartha chakraBy vartha chakraAugust 29, 2022Updated:August 29, 2022No Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ತುಮಕೂರು: ರಾಜ್ಯದಲ್ಲಿ ಅಬ್ಬರಿಸಿ ಬೊಬ್ಬರಿಸುತ್ತಿರೋ ಮಳೆರಾಯನ ಅವಾಂತರ ಒಂದಲ್ಲ ಎರಡಲ್ಲ. ವರುಣಾಘಾತದಿಂದ ತಾತನ ಅಂತ್ಯ ಸಂಸ್ಕಾರ ನೆರವೇರಿಸಲು 12 ದಿನದ ಬಾಣಂತಿ 1 ಕಿಮಿ ಕಾಲ್ನಡಿಗೆಯಲ್ಲೇ ನಡೆದು ಬಂದ ಘಟನೆ ತುಮಕೂರಿನಲ್ಲಿ ನಡೆದಿದೆ.
    ವರ್ಷಧಾರೆಗೆ ಇಡೀ ಕರ್ನಾಟಕವೇ ಬೆಚ್ಚಿ ಬೀದ್ದಿದೆ.
    ಕೈಯಲ್ಲಿ ಹಸುಗೂಸು.. ಕಿ.ಮೀ ನಡೆದು ಕೊಂಡೋ ತಾತನ ಅಂತ್ಯಸಂಸ್ಕಾರಕೆ ಬಂದ ಮೊಮ್ಮಗಳು. ಈ ಪ್ರಕರಣ ತುಮಕೂರು ಮಧುಗಿರಿ ತಾಲೂಕಿನ ಗೌರೆಡ್ಡಿ ಪಾಳ್ಯದಲ್ಲಿ ಬೆಳಕಿಗೆ ಬಂದಿದೆ. ಕೊಡಿಗೇನಹಳ್ಳಿ ಗ್ರಾಪಂಗೆ ಸೇರಿದ ಗೌರೆಡ್ಡಿ ಪಾಳ್ಯದಲ್ಲಿ ವಾಸವಿರುವ ಸರ್ವೋದಯ ಶಾಲೆಯ ಶಿಕ್ಷಕ ಸದಾಶಿವರೆಡ್ಡಿ ತಂದೆ ವಯೋಸಹಜ ಖಾಯಿಲೆಯಿಂದ ಮೃತಪಟ್ಟಿದ್ದರು. ಅಂತ್ಯ ಸಂಸ್ಕಾರಕ್ಕೆ ಬರಬೇಕಿದ್ದ ಸಂಬಂಧಿಕರು ಜಯಮಂಗಲಿ ನದಿ ತುಂಬಿ ಹರಿಯುತ್ತಿದ್ದರಿಂದ ಬರಲು ಸಾಧ್ಯವಾಗಲಿಲ್ಲ. ಆದರೆ, ತಾತನ ಅಂತ್ಯ ಸಂಸ್ಕಾರ ನೆರವೇರಿಸಲು 12 ದಿನದ ಬಾಣಂತಿ 1 ಕಿಮಿ ಜಮೀನಿನ ಬದುಗಳಲ್ಲಿ ನಡೆದು ಬಂದಿದ್ದಾರೆ. ಕೊಡಿಗೇನಹಳ್ಳಿಯ ಜಯಮಂಗಲಿ ನದಿ ಅಂಚಿನಲ್ಲಿರುವ ಸುಮಾರು 50 ಕ್ಕು ಹೆಚ್ಚು ಕುಟುಂಬಗಳು ವಾಸವಿದ್ದು ಸೂಕ್ತ ರಸ್ತೆ ಇಲ್ಲದೆ ಅಂತ್ಯ ಸಂಸ್ಕಾರಕ್ಕೆ ತೆರಳಲು ಸಾಧ್ಯವಾಗದೆ ಇಂದಿಗೂ ಪರದಾಡುತ್ತಿದ್ದಾರೆ. ಸೂಕ್ತ ರಸ್ತೆ ಇಲ್ಲದ ಕಾರಣ ಜಯಮಂಗಲಿ ನದಿಯಲ್ಲಿ ಒಬ್ಬರಿಗೊಬ್ಬರು ಕೈ ಹಿಡಿದುಕೊಂಡು ಬಂದು ನದಿ ದಾಟಿ ಅಂತ್ಯಸಂಸ್ಕಾರ ಮಾಡುವ ಪರಿಸ್ಥಿತಿ ಇಂದಿಗೂ ಇದೆ. ಎಂದು ಆರೋಪಿಸುತ್ತಾರೆ ಸ್ಥಳೀಯ ರಾಜಣ್ಣ
    ಕೊಡಿಗೇನಹಳ್ಳಿಯಿಂದ ಸುಮಾರು 2 ಕಿಮಿ ದೂರದಲ್ಲಿರುವ ಗೌರೆಡ್ಡಿ ಪಾಳ್ಯದಲ್ಲಿ ಸ್ವಾತಂತ್ರö್ಯ ಪೂರ್ವದಿಂದಲೂ ಸುಮಾರು 50 ರಿಂದ 60 ಕುಟುಂಬಗಳು ತಮ್ಮ ಜಮೀನುಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ವಾಸವಿದ್ದಾರೆ. ನಿತ್ಯ ಶಾಲಾ ಕಾಲೇಜು ಹಾಗೂ ಡೇರಿಗೆ ಹಾಲು ಹಾಕಲು ದಿನಸಿ ತರಲು ಜಯಮಂಗಲಿ ನದಿ ದಡ ಅಥವ ನದಿ ಪಕ್ಕದ ಜಮೀನಿನ ವನ್ನು ಆಶ್ರಯಿಸಿದ್ದಾರೆ. ಮಳೆ ಬಂದು ನದಿ ಹರಿದರೆ ವೃದ್ದರು, ವಿದ್ಯಾರ್ಥಿಗಳು, ಮಹಿಳೆಯರು, ಗರ್ಭಿಣಿಯರು ಹಾಗೂ ರೋಗಿಗಳ ಪಾಡುಹೇಳ ತೀರದಾಗಿದೆ.
    ಚುನಾವಣೆ ಸಂದರ್ಭದಲ್ಲಿ ಮತಯಾಚಿಸುವ ಅಭ್ಯರ್ಥಿಗಳು ರಸ್ತೆ ಹಾಗೂ ಸೇತುವೆ ಮಾಡಿಸುವ ಭರವಸೆ ನೀಡಿ ಹೋಗುತ್ತಾರೆ. ಆದರೆ ಅವರು ಗೆದ್ದ ನಂತರ ಈ ಕಡೆ ತಿರುಗಿಯು ನೋಡುವುದಿಲ್ಲ. ಎಂದು ಇಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ. ಇನ್ನಾದರೂ ಸಂಬAಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸುತ್ತಾರಾ ಕಾದು ನೋಡಬೇಕಿದೆ.

    ಕಾಲೇಜು ತುಮಕೂರು ವಿದ್ಯಾರ್ಥಿ ಶಾಲೆ
    Share. Facebook Twitter Pinterest LinkedIn Tumblr Email WhatsApp
    Previous Articleಯಡಿಯೂರಪ್ಪ-ಸಂತೋಷ್ ಬಿಗ್ ಫೈಟ್
    Next Article ಯುಕ್ರೇನ್ ನಲ್ಲಿ ಸತ್ತ ರಷ್ಯಾದ ಸೈನಿಕರೆಷ್ಟು?
    vartha chakra
    • Website

    Related Posts

    ಕಾಮುಕ ಯೋಗಗುರು ಅರೆಸ್ಟ್.

    September 18, 2025

    ಡಿ.ಕೆ. ಶಿವಕುಮಾರ್ ಕೊಟ್ಟ ಟಾರ್ಗೆಟ್.

    September 18, 2025

    ಸುತ್ತಿಕೊಳ್ಳುತ್ತಿದೆ ಮುಡಾ ಹಗರಣದ ಉರುಳು.

    September 17, 2025

    Comments are closed.

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬಂಗ್ಲೆ ಗುಡ್ಡ ರಹಸ್ಯದ ಬೆನ್ನು ಹತ್ತಿದ ಪೊಲೀಸ್.

    ಕಾಮುಕ ಯೋಗಗುರು ಅರೆಸ್ಟ್.

    ಡಿ.ಕೆ. ಶಿವಕುಮಾರ್ ಕೊಟ್ಟ ಟಾರ್ಗೆಟ್.

    ಇವರಿಗೆ ಬೆಂಗಳೂರು ಬೇಡವಂತೆ.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Seo Backlinks on ಇಂದಿರಾ ಗಾಂಧಿ ಚುನಾವಣೆ ಹೇಗೆ ನಡೆದಿತ್ತು ಗೊತ್ತಾ..? | Indira Gandhi
    • Diplomi_qbEa on ಇನ್ನು ಮುಂದೆ ಜಾಲತಾಣ Koo ಇರುವುದಿಲ್ಲ.
    • dizainerskie kashpo_cpEt on ದೇವಸ್ಥಾನಗಳ ತಸ್ತೀಕ್ ಹಣ ಬಿಡುಗಡೆ | Temples
    Latest Kannada News

    ಬಂಗ್ಲೆ ಗುಡ್ಡ ರಹಸ್ಯದ ಬೆನ್ನು ಹತ್ತಿದ ಪೊಲೀಸ್.

    September 18, 2025

    ಕಾಮುಕ ಯೋಗಗುರು ಅರೆಸ್ಟ್.

    September 18, 2025

    ಡಿ.ಕೆ. ಶಿವಕುಮಾರ್ ಕೊಟ್ಟ ಟಾರ್ಗೆಟ್.

    September 18, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    9ನೇ ಕ್ಲಾಸ್ ವಿದ್ಯಾರ್ಥಿ ಬ್ಯಾಗಿನಲ್ಲಿ ಕಾಂಡೊಮ್, ಸಿಗರೇಟ್, ಆಲ್ಕೋಹಾಲ್ #varthachakra#medicalcheckup #parents
    Subscribe