ನವದೆಹಲಿ
ಅಬಕಾರಿ ಕರ್ಮಕಾಂಡ ಆರೋಪದಲ್ಲಿ ಸಿಲುಕಿರುವ ದೆಹಲಿಯ ಮುಖ್ಯಮಂತ್ರಿ, ಅರವಿಂದ ಕೇಜ್ರಿವಾಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಚಿವೆ ಆತಿಶಿ ಮರ್ಲೇನಾ ಅವರನ್ನು ಆಯ್ಕೆ ಮಾಡಲಾಗಿದೆ.
ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅರವಿಂದ ಕೇಜ್ರಿವಾಲ್ ಘೋಷಣೆ ಮಾಡಿದ ಬೆನ್ನಲ್ಲೇ, ಆ ಸ್ಥಾನಕ್ಕೆ ನೇಮಕಗೊಳ್ಳಲು ಆಮ್ ಆದ್ಮಿ ಪಕ್ಷದ ನಾಯಕರರಲ್ಲಿ ಬಾರಿ ಪೈಪೋಟಿ ಉಂಟಾಗಿತ್ತು.
ಹಿರಿಯ ನಾಯಕರಾದ ಮನೀಶ್ ಸಿಸೋಡಿಯ ಸೇರಿದಂತೆ ಹಲವರ ಹೆಸರು ಪ್ರಮುಖವಾಗಿ ಕೇಳಿ ಬಂದಿತಾದರೂ, ಅಂತಿಮವಾಗಿ ಕೇಜ್ರಿವಾಲ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಹಿರಿಯ ನಾಯಕರು ಸಚಿವೆ ಆತಿಶಿ ಪರವಾಗಿ ವ್ಯಕ್ತಪಡಿಸಿದರು ಎನ್ನಲಾಗಿದೆ.
ಅರವಿಂದ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯ ಅವರು ಅಬಕಾರಿ ಹಗರಣದಲ್ಲಿ ಜೈಲು ಸೇರಿದ ನಂತರ ಸಚಿವೆ ಆತಿಶೀ ಅವರು ಸರ್ಕಾರ ಮತ್ತು ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು ಈ ಹಿನ್ನೆಲೆಯಲ್ಲಿ ಸಚಿವೆ ಆತಿಶಿ ಅವರನ್ನು ದೆಹಲಿ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲು ತೀರ್ಮಾನಿಸಲಾಯಿತು ಎಂದು ಗೊತ್ತಾಗಿದೆ
Previous Articleಬಾಲಿವುಡ್ ನಲ್ಲಿ ಕಾಸ್ಟಿಂಗ್ ಕೌಚ್.
Next Article ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್.


1 Comment
ОќО№ПЋПѓОµ П„О·ОЅ О±ОґПЃОµОЅО±О»ОЇОЅО· ПѓП„Ої Betano https://betanogame.org/el/. ОџО№ ОЅООїО№ ПЂО±ОЇОєП„ОµП‚ ОєОµПЃОґОЇО¶ОїП…ОЅ ОП‰П‚ €500 ОјПЂПЊОЅОїП…П‚ + ОґП‰ПЃОµО¬ОЅ ПЂОµПЃО№ПѓП„ПЃОїП†ОП‚ ПѓОµ ОґО·ОјОїП†О№О»О® ПЂО±О№П‡ОЅОЇОґО№О±. ОЈП„ОїО№П‡О·ОјО¬П„О№ПѓОµ ПѓП„О± О±ОіО±ПЂО·ОјООЅО± ПѓОїП… О±ОёО»О®ОјО±П„О± О® ОіПЌПЃО№ПѓОµ П„О± reels 24/7. О¤Ої Betano ПЂПЃОїПѓП†ОПЃОµО№ О±ПѓП„О±ОјО¬П„О·П„О· ОґО№О±ПѓОєООґО±ПѓО· ОєО±О№ ОјОµОіО¬О»ОµП‚ О±ОЅО±О»О®П€ОµО№П‚.