ಬೆಂಗಳೂರು.
ಪ್ರಾಕೃತಿಕ ರಮಣೀಯ ಸುಂದರ ತಾಣ ಕೊಡಗು ಕರ್ನಾಟಕದ ಕಾಶ್ಮೀರ ಎಂದೇ ಪ್ರಖ್ಯಾತಿ ಪಡೆದಿದೆ. ಆತಿಥ್ಯ ಮತ್ತು ವಿಭಿನ್ನ ಸಂಸ್ಕೃತಿಗೆ ಹೆಸರಾದ ಕೊಡಗಿನ ಜನರು ರಾಜಕೀಯವಾಗಿ ಕೂಡ ಅತಿ ಹೆಚ್ಚು ಜಾಗರೂಕರಾಗಿದ್ದಾರೆ.ಈ ಜನ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗಲು ಕೂಡ ಅತ್ಯಂತ ಎಚ್ಚರಿಕೆ ಮತ್ತು ಜಾಗರೂಕತೆಯನ್ನು ವಹಿಸುತ್ತಾರೆ.
ಇಂಥಾ ರಾಜಕೀಯ ಜಾಣ್ಮೆಯ ಪರಿಣಾಮವಾಗಿ ಈ ಬಾರಿ ಮಡಿಕೇರಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಮಂತರ್ ಗೌಡ ತಮ್ಮ ವೈಶಿಷ್ಟ್ಯ ಪೂರ್ಣವಾದ ನಡವಳಿಕೆ, ಶಿಕ್ಷಣ, ಜನಸಾಮಾನ್ಯರ ಕುರಿತ ಕಾಳಜಿ ರಾಜಕೀಯ ಪ್ರಜ್ಞೆ, ಕೃಷಿ Business ಪರಿಸರ ಮತ್ತು ಪ್ರವಾಸೋದ್ಯಮದ ಬಗ್ಗೆ ಇರುವ ವಿಶೇಷವಾದ ದೃಷ್ಟಿಕೋನ ಮತ್ತು ಬದ್ದತೆಯಿಂದ ಗಮನ ಸೆಳೆಯುತ್ತಾರೆ.
ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದ
ಮಂತರ್ ಗೌಡ, ರೇಡಿಯೋಲಜಿ ವಿಭಾಗದಲ್ಲಿ ವೈದ್ಯಕೀಯ ಪದವಿ ಪಡೆದಿದ್ದಾರೆ. ವೈದ್ಯರಾಗಿ ಸಮಾಜ ಸೇವೆ ಮಾಡಲು ತುಡಿಯುತ್ತಿದ್ದ ಇವರನ್ನು ಸಹಜವಾಗಿ ರಾಜಕೀಯ ಕ್ಷೇತ್ರ ಆಕರ್ಷಿಸಿತು.
ತಮ್ಮ ಕುಟುಂಬದ ರಾಜಕೀಯ ಹಿನ್ನೆಲೆ ಇದಕ್ಕೆ ಪ್ರೇರಣೆ ಎನ್ನಬಹುದು. ಕಾಂಗ್ರೆಸ್ ಪಕ್ಷದಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದ ಇವರು ತಮ್ಮ ಸಂಘಟನಾ ಚಾತುರ್ಯದಿಂದ ಮಡಿಕೇರಿ ವಿಧಾನಸಭೆ Electionಗೆ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಪಡೆಯುತ್ತಾರೆ.
ಪಕ್ಷದ ಟಿಕೆಟ್ ಪಡೆದ ಮಂತರ್ ಗೌಡ ಆನಂತರದಲ್ಲಿ ಎಲ್ಲಾ ಹಂತದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನಸಾಮಾನ್ಯರೊಂದಿಗೆ ಬೆರೆಯುವ ಮೂಲಕ ತಾವೊಬ್ಬ ವಿಶ್ವಾಸ ಮೂಡಿಸುವ ನಾಯಕ ಎಂದು ಮನದಟ್ಟು ಮಾಡಿಕೊಡುತ್ತಾರೆ. ಇದರ ಪರಿಣಾಮ ಸುದೀರ್ಘ ಎರಡು ದಶಕಗಳ ನಂತರ ಮಡಿಕೇರಿಯಲ್ಲಿ ಕಾಂಗ್ರೆಸ್ ಪತಾಕೆ ಹಾರುವಂತೆ ಮಾಡಿ ವಿಧಾನಸಭೆಗೆ ಆಯ್ಕೆಯಾಗುತ್ತಾರೆ.
ಶಾಸಕರಾಗಿ ಆಯ್ಕೆಯಾಗುತ್ತಿದ್ದಂತೆ ಆ ರಾಜಕಾರಣವನ್ನು ಸಂಪೂರ್ಣವಾಗಿ ಬದಿಗೊತ್ತಿ ಕ್ಷೇತ್ರದಲ್ಲಿ ಮನೆ ಮಗನ ರೀತಿಯಲ್ಲಿ ಎಲ್ಲರೊಳಗೊಂದಾಗಿ ಮುನ್ನಡೆಯುತ್ತಿದ್ದಾರೆ.
ಕ್ಷೇತ್ರದ ಹಲವು ಜ್ವಲಂತ ಸಮಸ್ಯೆಗಳ ಕಡೆ ಗಮನ ಹರಿಸಿದ್ದಾರೆ ಕುಡಿಯುವ ನೀರು, ತ್ಯಾಜ್ಯ ವಿಲೇವಾರಿ, ಒಳಚರಂಡಿ, ರಸ್ತೆ, ಸುಸಜ್ಜಿತ ಆಸ್ಪತ್ರೆ ಮತ್ತು ಪರಿಸರ ಸ್ನೇಹಿ ಪ್ರವಾಸೋದ್ಯಮ ತಮ್ಮ ಆದ್ಯತೆ ಎಂದು ಈ ವಲಯದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಇವರ ಸಂಘಟನಾ ಚಾತುರ್ಯ ಮತ್ತು ದೂರ ದೃಷ್ಟಿಗೆ ಸಾಕ್ಷಿ ಮಡಿಕೇರಿಯ ಕಾಫಿ ದಸರಾ, ಸರ್ಕಾರಿ ಆಸ್ಪತ್ರೆ, ತ್ಯಾಜ್ಯ ವಿಲೇವಾರಿ ಘಟಕ.
ಅಭಿವೃದ್ಧಿಯಲ್ಲಿ ಎಂದಿಗೂ ರಾಜಕೀಯ ನುಸುಳಲೇಬಾರದು ಎಂದು ಬಲವಾಗಿ ಪ್ರತಿಪಾದಿಸಿ ಅನುಷ್ಠಾನಕ್ಕೆ ತರುತ್ತಿರುವ ಈ ನಾಯಕ ಮಡಿಕೇರಿ ಕ್ಷೇತ್ರದ ಪಾಲಿಗೆ ಆಜಾತಶತ್ರು ಮತ್ತು ಭರವಸೆಯ ಬೆಳಕು.