Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಲಾರೆನ್ಸ್ ಬಿಷ್ಣೋಯ್ ರಕ್ತ ಚರಿತ್ರೆ
    ಸುದ್ದಿ

    ಲಾರೆನ್ಸ್ ಬಿಷ್ಣೋಯ್ ರಕ್ತ ಚರಿತ್ರೆ

    vartha chakraBy vartha chakraOctober 17, 20243 Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಮುಂಬೈ.
    ಪಂಜಾಬ್ ನ ಖ್ಯಾತ ಪಾಪ್ ಗಾಯಕ ಸಿಧು ಮೂಸೇವಾಲಾ ಹತ್ಯೆ ನಂತರ ದೇಶದಲ್ಲೆಡೆ ಚರ್ಚೆಯಾಗಿದ್ದು ಲಾರೆನ್ಸ್ ಬಿಷ್ಣೋಯ್ ಬಗ್ಗೆ ಇದಾದ ನಂತರ ಆಗಿಂದಾಗ್ಗೆ ಈ ಹೆಸರು ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಯಲ್ಲಿ ಬರುತ್ತಿತ್ತು ಲಾರೆನ್ಸ್ ಬಿಷ್ಣೋಯ್ ತಂಡದಿಂದ ಅವರಿಗೆ ಬೆದರಿಕೆ ಇವರಿಗೆ ಎಚ್ಚರಿಕೆ ಎಂಬ ಸುದ್ದಿಗಳು ಒಂದಲ್ಲಾ ಒಂದು ಮಾಧ್ಯಮದಲ್ಲಿ ಬರುತ್ತಿದ್ದವು.
    ಇದೀಗ ಮಹಾರಾಷ್ಟ್ರದ ಎನ್ ಸಿ ಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ನಂತರ ದೊಡ್ಡ ಪ್ರಮಾಣದಲ್ಲಿ ಸುದ್ದಿ ಮಾಡುತ್ತಿದ್ದಾನೆ.ಈ ಹತ್ಯೆಗೆ ಪ್ರಮುಖ ಕಾರಣ
    ಬಾಲಿವುಡ್ ನಟ ಸಲ್ಮಾನ್ ಖಾನ್ .
    ಅಂದಹಾಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕಳೆದ ಕೆಲವು ವರ್ಷಗಳಿಂದ ನಟ ಸಲ್ಮಾನ್ ಖಾನ್ ಹಿಂದೆ ಬಿದ್ದಿದೆ. ಲಾರೆನ್ಸ್ ಗ್ಯಾಂಗ್‌ನ ಶೂಟರ್‌ಗಳು ಸಲ್ಮಾನ್ ಖಾನ್‌ ಮೇಲೆ ಎರಡು ಬಾರಿ ದಾಳಿ ಮಾಡಿದ್ದರು. ಮೊದಲ ಬಾರಿಗೆ ರೆಡಿ ಚಿತ್ರದ ಶೂಟಿಂಗ್ ವೇಳೆ, ಎರಡನೇ ಬಾರಿಗೆ ಪನ್ವೇಲ್‌ನಲ್ಲಿರುವ ಸಲ್ಮಾನ್ ಅವರ ತೋಟದ ಮನೆಯ ದಾಳಿ ಆಗಿತ್ತು. ಇದಾದ ನಂತರ ಲಾರೆನ್ಸ್ ಬಿಷ್ಣೋಯ್, ಸಲ್ಮಾನ್ ಖಾನ್ ಅವರ ಮುಂಬೈ ಮನೆಯಾದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಮೇಲೆ ಮತ್ತೆ ಗುಂಡಿನ ದಾಳಿ ನಡೆಸಿದ್ದರು.
    ಇದಕ್ಕೆ ಪ್ರಮುಖ ಕಾರಣ ಸಲ್ಮಾನ್ ಖಾನ್ ಕೃಷ್ಣಮೃಗವನ್ನು ಕೊಂದಿದ್ದು. ಲಾರೆನ್ಸ್ ಬಿಷ್ಣೋಯ್ ಸಮುದಾಯದ ಜನತೆ ಕೃಷ್ಣಮೃಗವನ್ನು ಭಕ್ತಿಯಿಂದ ಆರಾಧಿಸಿ ಪೂಜಿಸುತ್ತಾರೆ. ತಾವು ಪೂಜಿಸುವ ದೈವವನ್ನು ಸಲ್ಮಾನ್ ಖಾನ್ ಹೊಂದಿದ್ದಾರೆ ಎಂದು ಕೋಪಗೊಂಡಿರುವ ಲಾರೆನ್ಸ್ ಬಿಷ್ಣೋಯ್ ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಹೇಳುತ್ತಿದ್ದಾರೆ.
    ಇದೀಗ ಈ ಗ್ಯಾಂಗ್ ನಿಂದ ಹತ್ಯೆಯಾಗಿರುವ ಎಂಸಿಬಿ ನಾಯಕ ಬಾಬಾ ಸಿದ್ದಿಕಿ ನಟ ಸಲ್ಮಾನ್ ಖಾನ್ ಅವರಿಗೆ ಅತ್ಯಂತ ಆಪ್ತ ಇದೊಂದೇ ಕಾರಣಕ್ಕಾಗಿ ಈ ಗ್ಯಾಂಗ್ ಅವರನ್ನು ಹತ್ಯೆ ಮಾಡಿದೆ.
    ಇಂಥ ಕಾರಣಗಳಿಗೆಲ್ಲ ಸುದ್ದಿ ಮಾಡುತ್ತಿರುವ ಲಾರೆನ್ಸ್
    ಬಿಷ್ಣೋಯ್ ಯಾರು ಅಂತೀರಾ.
    ಫೆಬ್ರವರಿ 1993ರಲ್ಲಿ ಪಂಜಾಬ್ ರಾಜ್ಯದ ಫಿರೋಜಪುರದ ಅತ್ಯಂತ ಸ್ಥಿತಿವಂತ ಕುಟುಂಬದಲ್ಲಿ ಜನಿಸಿದ ಬಿಷ್ಣೋಯ್ ಅವರು ಮೊದಲ ಹೆಸರು ಬಾಲ್ಕರನ್ ಬ್ರಾರ್. ಇವರ ತಂದೆ ಮೊದಲು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು.
    ಸ್ಥಿತಿವಂತ ಕುಟುಂಬದ ಈತ ಓದಿನಲ್ಲಿ ಸಾಕಷ್ಟು ಮುಂದಿದ್ದ.ಜೊತೆಗೆ ನಾಯಕತ್ವದ ಗುಣಗಳನ್ನು ಹೊಂದಿದ್ದ.
    ಲಾರೆನ್ಸ್ ಬಿಷ್ಣೋಯ್ ಅಲಿಯಾಸ್ ಬಾಲ್ಕರನ್ ಬ್ರಾರ್ ಶಾಲೆಯಲ್ಲಿದ್ದಾಗಲೇ ಪ್ರೀತಿಯ ಬಲೆಯಲ್ಲಿದ್ದ. ತನ್ನ ಗೆಳತಿಯ ಮುಂದೆ ಸದಾ ಹೀರೋನಂತೆ ವಿಜೃಂಭಿಸಬೇಕೆಂದು ಬಯಸುತ್ತಿದ್ದ ಈತ ವಿಧ್ಯಾರ್ಥಿ ಸಂಘಟನೆಯೊಂದನ್ನು ಹುಟ್ಟು ಹಾಕಿದ್ದ.ಈ ಅವಧಿಯಲ್ಲಿ ಕಾಲೇಜಿನ ವಿದ್ಯಾರ್ಥಿ ಸಂಘದ Election ನಡೆಯುತ್ತದೆ.ಇದರಲ್ಲಿ ಗೆದ್ದು ತನ್ನ ಗೆಳತಿಯ ಮುಂದೆ ಸಂಭ್ರಮಿಸಬೇಕೆಂದು ಚುನಾವಣೆಯಲ್ಲಿ ಸ್ಪರ್ಧಿಸುತ್ತಾನೆ.ಆದರೆ ದುರದೃಷ್ಟವಶಾತ್ ಈ ವೇಳೆ ಎರಡು ತಂಡಗಳ ನಡುವೆ ಜಿದ್ದಾಜಿದ್ದಿನ ಹಣಹಣಿ ನಡೆದು ಲಾರೆನ್ಸ್ ಬಿಷ್ಣೋಯ್ ಸೋಲುತ್ತಾನೆ ಇದರಿಂದ ಆಕ್ರೋಶಗೊಂಡ ಆತ ಎದುರಾಳಿ ತಂಡದ ಗೆದ್ದ ಅಭ್ಯರ್ಥಿಯನ್ನು ಕೊಚ್ಚಿಕೊಲ್ಲುತ್ತಾನೆ.
    ಇದಕ್ಕೆ ಪ್ರತಿಕಾರವಾಗಿ ಆತನ ಎದುರಾಳಿ ತಂಡ
    ಅವನ ಗೆಳತಿಯನ್ನು ಜೀವಂತವಾಗಿ ಸುಟ್ಟುಹಾಕುತ್ತಾರೆ. ಇದರ ಸೇಡಿಗಾಗಿ ಮತ್ತಷ್ಟು ಹಲ್ಲೆಗಳು ನಡೆಯುತ್ತದೆ.
    ಪೊಲೀಸರು ಈತನನ್ನು ಬಂಧಿಸಿ ಜೈಲಿಗೆ ಕಳಿಸುತ್ತಾರೆ ಅಲ್ಲಿ ಈತನಿಗೆ ಗೋಲ್ಡಿ ಬ್ರಾರ್ ಎನ್ನುವ ವ್ಯಕ್ತಿಯ ಪರಿಚಯವಾಗುತ್ತದೆ. ಗ್ಯಾಂಗ್ ಸ್ಟರ್ ಆಗಿದ್ದ ಬ್ರಾರ್ ಜೊತೆಗಿನ ಸಹವಾಸ ದೋಷದಿಂದಾಗಿ, ಲಾರೆನ್ಸ್ ಬಿಷ್ಣೋಯ್ ಅಪರಾಧ ಲೋಕಕ್ಕೆ ಕಾಲಿಡುತ್ತಾನೆ.
    ಇಲ್ಲಿಂದ ಈತನ ಅಪರಾಧ ಜಗತ್ತಿನ ಕಥಾನಕ ಆರಂಭವಾಗುತ್ತದೆ.
    ಈತ ರೌಡಿಸಂಗೆ ಸೀಮಿತವಲ್ಲದೇ, ಮದ್ಯ ಸಾಗಾಣಿಕೆ, ಶಸ್ತ್ರಾಸ್ತ್ರ ಕಳ್ಳಸಾಗಾಣಿಕೆ ಸೇರಿದಂತೆ ಆದಾಯವಿರುವ ಎಲ್ಲಾ ದಂಧೆಯಲ್ಲಿ ಗೀತಾ ವ್ಯವಸ್ಥೆತವಾಗಿ ತೊಡಗಿಕೊಂಡಿದ್ದಾನೆ ದೇಶಾದ್ಯಂತ ಇತರ ಗ್ಯಾಂಗ್ ವಿಸ್ತರಿಸುತ್ತಾ ಹೋಗುತ್ತಿದೆ
    2012ರಿಂದ ಜೈಲಿನಲ್ಲೇ ಇರುವ ಬಿಷ್ಣೋಯ್, ಸುಮಾರು 700 ಜನರ ಬಲಾಢ್ಯ ತಂಡವನ್ನು ಕಟ್ಟಿಕೊಂಡಿದ್ದಾನೆ. ತನ್ನ ತಂಡದ ಸದಸ್ಯರ ಪೈಕಿ ಒಬ್ಬರಿಗೆ ಏನಾದರೂ ಆದರೂ, ಹಗೆ ಸಾಧಿಸುವುದು ಈತನ ವಿಶೇಷ
    ಭದ್ರತಾ ದೃಷ್ಟಿಯಿಂದ ಈತನನ್ನು ಮೂರು ಬಾರಿ ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಭರತಪುರ್ ಜೈಲು, ತಿಹಾರ್ ಜೈಲಿನ ನಂತರ ಈಗ ಬಿಷ್ಣೋಯ್ ಅನ್ನು ಸಬರಮತಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಅತ್ಯಾಧುನಿಕ VoIP ಟೆಕ್ನಾಲಜಿ ಮೂಲಕ, ತಮ್ಮ ಸಹಚರರನ್ನು ಸಂಪರ್ಕಿಸುವ ಈತ
    ಪೊಲೀಸರು ಚಾಪೆ ಕೆಳಗೆ ನುಗ್ಗಿದರೆ,ನಾನು ರಂಗೋಲಿಯೊಳಗೆ ನುಗ್ಗುತ್ತೇನೆ ಎನ್ನುವ ಗಾದೆ ಮಾತಿನಂತೆ, ಚಾಣಕ್ಯ ತಂತ್ರ ರೂಪಿಸುತ್ತಾನೆ
    ಈತನನ್ನು ಹೆಡೆಮುರಿ ಕಟ್ಟಲು, ಎಷ್ಟೇ ಪ್ರಯತ್ನ ಮಾಡಿದರೂ ಈತನ ಆಟ ಹೆಚ್ಚುತ್ತಲೇ ಇದೆ, ಇವನ ಗ್ಯಾಂಗ್ ಬೆಳೆಯುತ್ತಲೇ ಇದೆ.

    Election ವಿದ್ಯಾ ವಿದ್ಯಾರ್ಥಿ ಶಾಲೆ ಸುದ್ದಿ
    Share. Facebook Twitter Pinterest LinkedIn Tumblr Email WhatsApp
    Previous Articleರಾಬಿ ಬೆಳೆಗಳಿಗೆ ಹೊಸ ಕನಿಷ್ಠ ಬೆಂಬಲ ಬೆಲೆ – (ಎಂಎಸ್‌ಪಿ) ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಅನುಮೋದನೆ.
    Next Article ತೀರ್ಥ ಸ್ವರೂಪಿಣಿಯಾಗಿ ಹರಿದ ಕಾವೇರಿ.
    vartha chakra
    • Website

    Related Posts

    ಸತೀಶ್ ಜಾರಕಿಹೊಳಿ ಯಾಕೆ ಹೀಗೆ ಹೇಳಿದರು ?

    June 16, 2025

    ಬೈಕ್ ಟ್ಯಾಕ್ಸಿ ಸೇವೆ ನಿಂತು ಹೋಯಿತು !

    June 16, 2025

    ಇದು ಮಂತ್ರಿ ಎಂ.ಬಿ.ಪಾಟೀಲ್‌ ಕನಸು.

    June 13, 2025

    3 Comments

    1. 1ulq1 on June 6, 2025 6:12 am

      where buy clomid tablets where to buy generic clomiphene tablets can i order clomiphene for sale where can i buy clomiphene no prescription can you get clomid online cost clomid for sale can you get cheap clomid without rx

      Reply
    2. how to take cialis pills on June 10, 2025 4:58 am

      Thanks on putting this up. It’s okay done.

      Reply
    3. doxycycline and flagyl on June 11, 2025 11:21 pm

      Greetings! Jolly serviceable advice within this article! It’s the crumb changes which liking make the largest changes. Thanks a portion quest of sharing!

      Reply

    Leave A Reply Cancel Reply

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಇಸ್ರೇಲ್ ನ ಐರನ್ ಡೋಮ್ ವ್ಯವಸ್ಥೆ ಏನಾಯ್ತು ಗೊತ್ತಾ ?

    ಸತೀಶ್ ಜಾರಕಿಹೊಳಿ ಯಾಕೆ ಹೀಗೆ ಹೇಳಿದರು ?

    ಕೆ.ಗೋಪಾಲಯ್ಯ ನಂಬರ್ ಒನ್ ಶಾಸಕ !

    ಬೈಕ್ ಟ್ಯಾಕ್ಸಿ ಸೇವೆ ನಿಂತು ಹೋಯಿತು !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • JamesWesee on ಬಿಜೆಪಿ ಭಿನ್ನಮತಕ್ಕೆ ಸುರಿದ ತುಪ್ಪ | BJP Karnataka
    • Wilburhal on ಬಾಬಾ ಬುಡನ್ ಗಿರಿ ಶಾಖಾದ್ರಿಗೆ ಸಂಕಷ್ಟ | Baba Budangiri
    • RobertPat on ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿ
    Latest Kannada News

    ಇಸ್ರೇಲ್ ನ ಐರನ್ ಡೋಮ್ ವ್ಯವಸ್ಥೆ ಏನಾಯ್ತು ಗೊತ್ತಾ ?

    June 16, 2025

    ಸತೀಶ್ ಜಾರಕಿಹೊಳಿ ಯಾಕೆ ಹೀಗೆ ಹೇಳಿದರು ?

    June 16, 2025

    ಕೆ.ಗೋಪಾಲಯ್ಯ ನಂಬರ್ ಒನ್ ಶಾಸಕ !

    June 16, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸಿದರೆ 15000! #chandrababunaidu #andrapradesh #govermentschool #sharepost
    Subscribe