ಬಾಗಲಕೋಟೆ,ನ.23-
ಇಳಕಲ್ ನಲ್ಲಿ ಹೇರ್ ಡ್ರೈಯರ್ ಸ್ಫೋಟಗೊಂಡು ಮೃತ ಯೋಧನ ಪತ್ನಿ ಅಂಗೈ ಛಿದ್ರವಾದ ಘಟನೆ ಅಚ್ಚರಿ ಹಾಗೂ ಆತಂಕಕ್ಕೆ ಕಾರಣವಾಗಿತ್ತು. ತಾಂತ್ರಿಕ ಕಾರಣದಿಂದ ಉಪಕರಣ ಸ್ಪೋಟಗೊಂಡಿದೆ ಎಂಬ ಚರ್ಚೆ ನಡೆದಿತ್ತು ಆದರೆ ತನಿಖೆಯಲ್ಲಿ ಇದೀಗ ಮತ್ತೊಂದು ಅಂಶ ಬೆಳಕಿಗೆ ಬಂದಿದೆ
ಹೇರ್ ಡ್ರೈಯರ್ ಸ್ಫೋಟದ ಹಿಂದೆ ಲವ್ ಸ್ಟೋರಿ ಮತ್ತು ಕೊಲೆಗೆ ಸಂಚು ಇರುವುದು ಬಹಿರಂಗವಾಗಿದೆ.
ಇಳಕಲ್ ನಲ್ಲಿ ಕಳೆದ ನ. 15 ರಂದು ಹೇರ್ ಡ್ರೈಯರ್ ಸ್ಪೋಟಗೊಂಡು ಮೃತ ಯೋಧನ ಪತ್ನಿ ಬಸವರಾಜೇಶ್ವರಿ ಯರನಾಳ (35) ಎರಡು ಮುಂಗೈ ಕಟ್ ಆಗಿದ್ದವು. ಕೇವಲ ಹೇರ್ ಡ್ರೈಯರ್ ನಿಂದ ಇಷ್ಟೊಂದು ಭೀಕರ ಸ್ಫೋಟ ಹೇಗೆ ಎನ್ನುವುದು ಅಚ್ಚರಿ ಜೊತೆಗೆ ಅನುಮಾನಗಳಿಗೆ ಕಾರಣವಾಗಿತ್ತು.
ವಿಷಯದ ಗಂಭೀರತೆ ಅರಿತ ಇಳಕಲ್ ನಗರ ಠಾಣೆ ಪೊಲೀಸರು ಪ್ರಕರಣದ ಬೆನ್ನು ಹತ್ತಿದರು. ಎರಡೇ ದಿನದಲ್ಲಿ ಇದಲ ಹಿಂದೆ ಲವ್ ಸ್ಟೋರಿ ಇರುವುದು ಬೆಳಕಿಗೆ ಬಂದಿತು.
ಮೃತ ಯೋಧ ಪತ್ನಿ ಬಸವರಾಜೇಶ್ವರಿ ಅವರು ತಮ್ಮ ಪತಿಯ ನಿಧನ ನಂತರ ಅವರ ಗೆಳೆಯ ಸಿದ್ದಪ್ಪ ಶೀಲವಂತರ ಜೊತೆ ಅನ್ಯೋನ್ಯವಾಗಿದ್ದರು. ಇದು ಸರಿಯಲ್ಲ ಎಂದು ಬಸವರಾಜೇಶ್ವರಿ ಅವರ ಸ್ನೇಹಿತೆ ಶಶಿಕಲಾ ಹೇಳಿದ್ದಾರೆ . ಇದಾದ ನಂತರ ಬಸವರಾಜೇಶ್ವರಿ ಸಿದ್ದಪ್ಪ ಜೊತೆ ಮಾತನಾಡುವುದನ್ನು ಬಿಟ್ಟಿದ್ದರು.ತನ್ನ ಜೊತೆ ಎಂದಿನಂತೆ ಬಸವರಾಜೇಶ್ವರಿ ಮಾತನಾಡುತ್ತಿಲ್ಲ, ಭೇಟಿ ಮಾಡುತ್ತಿಲ್ಲ ಎಂದು ಬೇಸರಗೊಂಡ ಆತ ಇದರ ಕಾರಣ ಹುಡುಕಿದ್ದಾನೆ.ಅದಕ್ಕೆ ಶಶಿಕಲಾ ಕಾರಣ ಎಂದು ಗೊತ್ತಾಗಿದೆ.
ಇದರ ಅಸಲಿ ಕಾರಣ ಗೊತ್ತಾದ ತಕ್ಷಣ ಸಿದ್ದಪ್ಪ ಶೀಲವಂತರ ನಮ್ಮಿಬ್ಬರ ಸಂಬಂಧ ಕಡಿತಗೊಳ್ಳಲು
ಕಾರಣ ಶಶಿಕಲಾ ಹೀಗಾಗಿ ಆಕೆ ಇಲ್ಲವಾದರೆ ನಮಗ್ಯಾರೂ ಅಡ್ಡಿಯಿರುವುದಿಲ್ಲ ಎಂದು ಭಾವಿಸಿ ಆಕೆಯನ್ನು ಮುಗಿಸೋಣ ಎಂದು ನಿರ್ಧರಿಸಿದ್ದಾನೆ.
ಅದಕ್ಕಾಗಿ ಚಾಕಚಕ್ಯತೆ ಬಳಸಿದ ಸಿದ್ದಪ್ಪ ಗ್ರಾನೈಟ್ ಡೆಟೊನೇಟರ್ ಅನ್ನು ಹೇರ್ ಡ್ರೈಯರ್ ನಲ್ಲಿ ಅಳವಡಿಸಿ ಶಶಿಕಲಾ ಅವರಿಗೆ ಕೊರಿಯರ್ ಮಾಡಿದ್ದಾನೆ.
ಆದರೆ ಅದನ್ನು ಶಶಿಕಲಾ ಬದಲಿಗೆ ರಿಸೀವ್ ಮಾಡಿದ ಬಸವರಾಜೇಶ್ವರಿ ಪರೀಕ್ಷಿಸಲು ಹೋಗಿ ಕೈ ಕಳೆದುಕೊಳ್ಳುವಂತಾಗಿದೆ.
ಇನ್ನೂ ವಿಶೇಷವೆಂದರೆ
ಬಸವರಾಜೇಶ್ವರಿ ಹಾಗೂ ಸಿದ್ದಪ್ಪ ಮದುವೆಗೂ ಮುನ್ನವೇ ಇಬ್ಬರು ಪ್ರೀತಿಸುತ್ತಿದ್ದರು.ಆದರೆ ಇವರ ಕುಟುಂಬ ಸದಸ್ಯರು ಇದಕ್ಕೆ ವಿರುದ್ಧವಾಗಿ ಬಸವರಾಜೇಶ್ವರಿ ಅವರನ್ನು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ರಕ್ಕಸಗಿ ಗ್ರಾಮದ ಯೋಧ ಪಾಪಣ್ಣನಿಗೆ ಮದುವೆ ಮಾಡಿ ಕೊಟ್ಟಿದ್ದಾರೆ .ಈ ನಡುವೆ ಪಾಪಣ್ಣ 2017 ರಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಇದಾದ ನಂತರ ಇವರಿಬ್ಬರ ಲವ್ ಮತ್ತೆ ಮುಂದುವರಿದು ಗಟ್ಟಿಯಾಗಿತ್ತು.
ಪತಿಯ ನಿಧನ ನಂತರ ಬಸವರಾಜೇಶ್ವರಿ ರಕ್ಕಸಗಿ ಬಿಟ್ಟು ಇಳಕಲ್ ನ ಬಸವನಗರದಲ್ಲಿ ಇಬ್ಬರು ಹೆಣ್ಣು ಮಕ್ಕಳ ಜೊತೆ ನೆಲೆಸಿದ್ದಳು. ಸಿದ್ದಪ್ಪ ಅಲ್ಲಿಗೆ ಬರುವುದು ಹೋಗುವುದು ಮಾಡುತ್ತಿದ್ದ. ಶಶಿಕಲಾ ಕೂಡ ಮೃತ ಯೋಧನ ಪತ್ನಿಯಾಗಿದ್ದಳು. ಇದು ಸರಿಯಲ್ಲ ಆತನ ಸಹವಾಸ ಬಿಡು ಎಂದು ಹೇಳುತ್ತಿದ್ದಳು. ಈ ಹಿನ್ನೆಲೆ ಕೆಲ ದಿನಗಳಿಂದ ಬಸವರಾಜೇಶ್ವರಿ ಸಿದ್ದಪ್ಪನನ್ನು ಮನೆಗೆ ಬರಲು ಅವಕಾಶ ನೀಡಿರಲಿಲ್ಲ. ಇದರಿಂದ ಹದಿನೈದು ದಿನದಿಂದ ಶಶಿಕಲಾ ಕೊಲೆಗೆ ಸಿದ್ದಪ್ಪ ಸ್ಕೆಚ್ ಹಾಕಿದ್ದ. ಇಳಕಲ್ ನಗರದ ದೇವಗಿರಿಕರ್ ಎಂಬುವರ ಅಂಗಡಿಯಲ್ಲಿ ನವೆಂಬರ್ 10 ರಂದು 500 ರೂ. ಕೊಟ್ಟು ಹೇರ್ ಡ್ರೈಯರ್ ಖರೀದಸಿದ್ದ. ಅದರಲ್ಲಿ ಡೆಟೊನೇಟರ್ ಅಳವಡಿಸಿ ನ. 13 ರಂದು ಕೊರಿಯರ್ ಮಾಡಿದ್ದ. ಬಾಗಲಕೋಟೆ ಡಿಟಿಡಿಸಿ ಕೊರಿಯರ್ ಮೂಲಕ ಇಳಕಲ್ ನ ಶಶಿಕಲಾ ಅವರಿಗೆ ಕಳುಹಿಸಿದ್ದ. ಕವರ್ ಮೇಲೆ ಶಶಿಕಲಾ ನಂಬರ್ ಹಾಕಿ ಕಳಿಸಿದ್ದ. ಹೇರ್ ಡ್ರೈಯರ್ ಶಶಿಕಲಾ ಪಡೆಯುತ್ತಾಳೆ. ಅದನ್ನು ಆಕೆ ಬಳಸೋದಕ್ಕೆ ಆನ್ ಮಾಡ್ತಾಳೆ. ಆಗ ಬ್ಲಾಸ್ಟ್ ಆಗೋದು ಪಕ್ಕಾ ಎಂದು ಲೆಕ್ಕಾಚಾರ ಸಿದ್ದಪ್ಪನದ್ದಾಗಿತ್ತು.
ಆದರೆ ಕೊರಿಯರ್ ಬಂದಾಗ ಶಶಿಕಲಾ ಅಲ್ಲಿರಲಿಲ್ಲ ಹೀಗಾಗಿ ಅದನ್ನು ಬಸವರಾಜೇಶ್ವರಿ ಸ್ವೀಕರಿಸಿ ಪರಿಶೀಲನೆ ನಡೆಸಿದ್ದಾರೆ.ಆಗ ಅದು ಸ್ಪೋಟಗೊಂಡು ಆಕೆ ಕೈ ಕಳೆದುಕೊಂಡಿದ್ದಾರೆ.
ಈ ಬಗ್ಗೆ ಇಳಕಲ್ ನಗರ ಪೊಲೀಸರ ತನಿಖೆ ನಡೆಸಿ ಸಿಡಿಆರ್ ಮೂಲಕ ಮಾಹಿತಿ ಸಂಗ್ರಹಿಸಿ ಎಲ್ಲ ಬಯಲಿಗೆ ಎಳೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಾಗಲಕೋಟೆ ಡಿಟಿಡಿಸಿ ಕೊರಿಯರ್ ಸಿಬ್ಬಂದಿ ಇಳಕಲ್ ಸಿಬ್ಬಂದಿ ಮೇಲೂ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಒಟ್ಟಿನಲ್ಲಿ ಪ್ರೀತಿಗೆ ಅಡ್ಡಿಯಾದವಳಿಗೆ ಹಾಕಿದ ಸಂಚು ಪ್ರಿಯತಮೆಗೆ ಮುಳುವಾಗಿದೆ. ಪ್ರಿಯತಮೆ ಕೈ ಕಳೆದುಕೊಂಡರೆ ಪ್ರಿಯಕರ ಪೊಲೀಸರ ಅತಿಥಿಯಾಗಿದ್ದಾನೆ.
4 Comments
where can i get generic clomid pill how to get cheap clomiphene pill buy clomiphene without dr prescription where can i get cheap clomid pill how to get cheap clomid pill how to buy cheap clomid without dr prescription cost of generic clomiphene prices
This is the description of topic I have reading.
Greetings! Jolly productive suggestion within this article! It’s the little changes which liking espy the largest changes. Thanks a quantity for sharing!
¡Saludos, descubridores de oportunidades !
Casino online extranjero sin lГmites mensuales – https://www.casinosextranjerosenespana.es/# mejores casinos online extranjeros
¡Que vivas increíbles jackpots extraordinarios!