ಬೆಂಗಳೂರು: ಮಕ್ಕಳ ಭವಿಷ್ಯ ನಿರ್ಧರಿಸುವ ಪಠ್ಯಪುಸ್ತಕಗಳ ಕೇಸರೀಕರಣದ ವಿರುದ್ಧ ರಾಜ್ಯದಲ್ಲಿ ಎದ್ದಿರುವ ಆಕ್ರೋಶ ಹೆಚ್ಚಾಗುತ್ತಿದೆ. ಪಠ್ಯ ಬಳಕೆಗೆ ನೀಡಿದ್ದ ಅನುಮತಿ ಹಿಂಪಡೆಯುವವರ ಪಟ್ಟಿಯೂ ಬೆಳೆಯುತ್ತಿದೆ.
ಮೊದಲಿಗೆ ದೇವನೂರ ಮಹಾದೇವ ಹಿಂಪಡೆದರು. ಅವರು ‘ಎದೆಗೆ ಬಿದ್ದ ಅಕ್ಷರ’ ಪಾಠವನ್ನು ಹತ್ತನೇ ತರಗತಿ ಕನ್ನಡ ಪಠ್ಯದಿಂದ ವಾಪಸ್ ಪಡೆಯುವ ಮೂಲಕ ಮೊದಲಿಗೆ ಪ್ರತಿರೋಧ ದಾಖಲಿಸಿದರು.
ಮಂಗಳವಾರ (ಮೇ 31) ಈ ಸಾಲಿಗೆ ಮತ್ತೆ ನಾಲ್ವರು ಸೇರ್ಪಡೆಯಾಗಿದ್ದಾರೆ. ಕವಿ ಮೂಡ್ನಾಕೂಡು ಚಿನ್ನಸ್ವಾಮಿ, ಲೇಖಕ ಈರಪ್ಪ ಎಂ.ಕಂಬಳಿ, ಚಂದ್ರಶೇಖರ ಪಾಳ್ಯ, ರೂಪಾ ಹಾಸನ ಅನುಮತಿ ಹಿಂಪಡೆದಿದ್ದಾರೆ.
ಮೂಡ್ನಾಕೋಡು ಚಿನ್ನಸ್ವಾಮಿಯವರು ಐದನೇ ತರಗತಿಯ ‘ನನ್ನ ಕವಿತೆಗೆ’, ಈರಪ್ಪ ಅವರು ಹತ್ತನೇ ತರಗತಿಯ ನುಡಿಕನ್ನಡದಲ್ಲಿನ ‘ಹೀಗೊಂದು ಟಾಪ್ ಪ್ರಯಾಣ’ ಲಲಿತ ಪ್ರಬಂಧ, ಚಂದ್ರಶೇಖರ ಪಾಳ್ಯ ಅವರು ಆರನೇ ತರಗತಿಯ ‘ಒಂದು ಸೋಜಿಗದ ಪದ್ಯ’, ರೂಪಾ ಅವರು ಒಂಬತ್ತನೇ ತರಗತಿಯ ‘ಅಮ್ಮನಾಗುವುದೆಂದರೆ’ ಕವಿತೆಯ ಬಳಕೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿದ್ದಾರೆ.
ಈಗಾಗಲೇ ವಿದ್ವಾಂಸರಾದ ಜಿ.ರಾಮಕೃಷ್ಣ ಅವರು ‘ಭಗತ್ಸಿಂಗ್’ ಪಾಠ, ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು 9ನೇ ತರಗತಿಯ ದ್ವಿತೀಯ ಭಾಷಾ ಪಠ್ಯವಾಗಿದ್ದ “ಮನೆಗೆಲಸದ ಹೆಣ್ಣು ಮಗಳು” ಪದ್ಯ ಬಳಕೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿದ್ದಾರೆ.
Previous Article40 ಕೋಟಿ ರೂಪಾಯಿ ಮೌಲ್ಯದ ಬಿಡಿಎ ಸ್ವತ್ತು ವಶ
Next Article ಬಾಲಿವುಡ್ ಗಾಯಕ ಕೆಕೆ ಸಾವು: ಪೊಲೀಸರಿಗೆ ಅನುಮಾನ