ಮಗು ಬಿಟ್ಟು ಹೋದ ತಾಯಿ ಪೊಲೀಸರ ಮುಂದೆ ಪ್ರತ್ಯಕ್ಷವಾಗಿದ್ದಾಳೆ. ಹಾಗಂತ ಘಟನೆಯೇನೂ ಸುಖಾಂತ್ಯ ಕಂಡಿಲ್ಲ.
ಹೌದು… ಕೊಳ್ಳೇಗಾಲ ತಾಲೂಕಿನ ಮತ್ತೀಪುರ ಬಸ್ ನಿಲ್ದಾಣದ ಸಮೀಪದಲ್ಲಿ ಇಂದು ಮುಂಜಾನೆ ಎರಡು ದಿನದ ನವಜಾತ ಗಂಡು ಶಿಶು ಪತ್ತೆಯಾಗಿದೆ. ಮಗು ಕಂಡು ಹೌಹಾರಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ.
ವಿಚಾರ ಅರಿತು ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸುವಾಗ ಪ್ರತ್ಯಕ್ಷಳಾದ ತಾಯಿ “ನಾನೇ ಅದರ ತಾಯಿ, ನಾನೇ ಮಗುವನ್ನು ಬಿಟ್ಟು ಹೋಗಿದ್ದು” ಎಂದು ಅಲವತ್ತುಕೊಂಡಿದ್ದಾಳೆ. ಹೆಚ್ಚಿನ ವಿಚಾರಣೆ ನಡೆಸಲಾಗಿ ತನಗೆ ಮದುವೆ ಆಗಿದ್ದು ಗಂಡ ಬಿಟ್ಟು ಹೋಗಿದ್ದಾನೆ. ನನಗೆ ಮಗು ಸಾಕುವ ಆಸಕ್ತಿ ಇಲ್ಲ ಎಂದು ಹೇಳಿದ್ದಾಳೆ.
ಕೊನೆಗೆ ಮಗುವನ್ನು ತಾಯಿಯ ಸುಪರ್ದಿಗೆ ಕೊಟ್ಟಿರುವ ಪೊಲೀಸರು ಮಗುವನ್ನು ಕಾನೂನು ಪ್ರಕಾರ ದತ್ತುಗೆ ಕೊಡಿಸಲಾಗುವುದು, ಅಲ್ಲಿಯ ತನಕ ಮಗುವನ್ನು ನೋಡಿಕೊಳ್ಳುವಂತೆ, ಯಾವುದೇ ತೊಂದರೆ ಕೊಡದಂತೆ ಎಚ್ಚರಿಕೆ ಹೇಳಿ ವಾಪಾಸಾಗಿದ್ದಾರೆ.
ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ತಾಯಿಗೆ ಭಾರವಾದ ಮಗು… ಕಸದ ರಾಶಿಯಲ್ಲಿ ಮಗು ಬಿಟ್ಟು ಪೊಲೀಸರ ಮುಂದೆ ಪ್ರತ್ಯಕ್ಷ..!
Previous Articleಚಾಲಕನ ನಿಯಂತ್ರಣ ತಪ್ಪಿ ಸಮುದ್ರ ಸೇರಿದ ಕಾರು!
Next Article ಬಿರುಕುಬಿಟ್ಟ ಗೋಡೆಯಲ್ಲಿ ಸಿಲುಕಿದ್ದ ನಾಗರಹಾವಿನ ರಕ್ಷಣೆ