Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಹೆತ್ತಮ್ಮನನ್ನು ಮನೆಯಿಂದ ಹೊರಹಾಕಿದ ಮಗ ಸೊಸೆ
    ಸುದ್ದಿ

    ಹೆತ್ತಮ್ಮನನ್ನು ಮನೆಯಿಂದ ಹೊರಹಾಕಿದ ಮಗ ಸೊಸೆ

    vartha chakraBy vartha chakraJuly 29, 2022Updated:July 29, 2022No Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ತುಮಕೂರು: ಹೆತಮ್ಮನಿಗೆ ಅನ್ನ ನೀರು ನೀಡದೆ ಮನೆಯಿಂದ ಹೊರಹಾಕಿದ್ದ ಮಗ. ಮನನೊಂದ ತಾಯಿ ತಹಶೀಲ್ದಾರ್ ಮೊರೆ ಹೋಗಿದ್ದರು. ವೃದ್ಧೆಯ ಸಂಕಷ್ಟಕ್ಕೆ ಮರುಗಿದ ಅಧಿಕಾರಿ ವೃದ್ಧೆಗೆ ಮನೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೂರಿಲ್ಲದ ತಾಯಿಗೆ ಸೂರಿನ ಆಸರೆಯಾಗಿದ್ದಾರೆ.
    ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಬುಡ್ಡಯ್ಯನಪಾಳ್ಯ ಗ್ರಾಮದ ಹಿರಿಯ ವೃದ್ದೆಗೆ ನ್ಯಾಯ ಕಲ್ಪಿಸಿರುವ ವಿಶೇಷ ಪ್ರಕರಣವೊಂದು ನಡೆದಿದೆ. ಮಾನಸಿಕ ಮತ್ತು ದೈಹಿಕವಾಗಿ ಮನನೊಂದು ಬೀದಿಯಲ್ಲಿ ದಿನಕಳೆಯುತಿದ್ದ ಹಿರಿಯ ಜೀವಕ್ಕೆ ಆಶ್ರಯ ಸಿಕ್ಕಂತಾಗಿದೆ.
    ವೃದ್ದೆ ರಂಗಹನುಮಕ್ಕನಿಗೆ ತವರು ಮನೆಯಿಂದ ಮನೆಯೊಂದು ಉಡುಗೊರೆ ಸಿಕ್ಕಿತ್ತು. ಈಗಾಗಲೇ ತನ್ನ ಮಗನಿಗೆ ಮನೆ ಮತ್ತು ಜಮೀನು ಎರಡನ್ನು ನೀಡಿದ್ದಾರೆ. ಈಗಿರುವ ತನ್ನ ಮನೆಯಲ್ಲಿನ ಒಂದು ಸಣ್ಣ ಕೊಣೆಯೊಳಗೆ ವಾಸಿಸಲು ಅವಕಾಶ ನೀಡದಿರುವ ಮಗನ ಮೇಲೆ ಸಾರ್ವಜನಿಕ ವಲಯದಲ್ಲಿ ತೀರ್ವ ಆಕ್ರೋಶ ವ್ಯಕ್ತವಾಗಿತ್ತು. ಹಿರಿಯ ನಾಗರೀಕರ ಕಾಯ್ದೆಯ ಅನ್ವಯ ತೀರ್ಪು ಸಹ ವೃದ್ದೆಯ ಪರವಾಗಿಯೇ ಬಂದಿರುವುದು ಸಂತಸ ತಂದಿದೆ.
    ಮನೆಯ ಬೀಗ ಒಡೆಸಿದ ತಹಶೀಲ್ದಾರ್:
    ವೃದ್ದೆಯಿಂದ ತಹಶೀಲ್ದಾರ್‌ಗೆ ದೂರು ಬಂದ ತಕ್ಷಣವೇ ಮಧುಗಿರಿ ಎಸಿಯವರ ಗಮನಕ್ಕೆ ತಂದಿದ್ದಾರೆ. ದೂರು ಆಲಿಸಿದ ಮಧುಗಿರಿ ಎಸಿ ಹಿರಿಯ ನಾಗರೀಕರ ಕಾಯ್ದೆಯ ಅನ್ವಯ ವೃದ್ದೆಗೆ ಮನೆ ನೀಡಿ ಮಗ ಮತ್ತು ಸೊಸೆಯ ವಿರುದ್ದ ಕ್ರಮಕ್ಕೆ ಸೂಚಿಸುತ್ತಾರೆ. ಆದೇಶದ ಅನ್ವಯ ತಹಶೀಲ್ದಾರ್ ನಾಹೀದಾ ಮತ್ತು ಸಿಪಿಐ ಸಿದ್ದರಾಮೇಶ್ವರ ಖುದ್ದು ಗ್ರಾಮಕ್ಕೆ ಬೇಟಿ ನೀಡಿ ಮನೆಯ ಬೀಗ ಹೊಡೆದು ವೃದ್ದೆಗೆ ವಾಸಿಸಲು ಅವಕಾಶ ಮಾಡಿಕೊಟ್ಟು ವೃದ್ದೆಗೆ ಸಮರ್ಪಕ ಭದ್ರತೆ ನೀಡುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
    ವೃದ್ದೆಯ ಮಗನಿಗೆ ಎಚ್ಚರಿಕೆ ನೀಡಿದ ತಹಶೀಲ್ದಾರ್
    ಮನೆಯ ಬೀಗ ಹಾಕಿ ಸ್ಥಳದಿಂದ ಪರಾರಿಯಾಗಿದ್ದ ಮಗ ರಮೇಶ್‌ಗೆ ದೂರವಾಣಿ ಮೂಲಕ ಸಂರ್ಪಕಿಸಿದ ತಹಶೀಲ್ದಾರ್ ನಾಹೀದಾ ಸ್ಥಳಕ್ಕೆ ಬರುವಂತೆ ತಾಕೀತು ಮಾಡಿದಾರೆ. ತಹಶೀಲ್ದಾರ್‌ಗೆ ನಿರ್ಲಕ್ಷದ ಉತ್ತರ ನೀಡಿದ ರಮೇಶ್‌ಗೆ ಮತ್ತೆ ಮನೆಯೊಳಗೆ ನೀವು ಹೊಗಬಾರದು, ಅಜ್ಜಿಗೆ ತೊಂದರೆ ನೀಡಬಾರದು. ನಿಮಗೆ ಏನಾದರೂ ಬೇಕಾದ್ರೆ ತಹಶೀಲ್ದಾರ್ ಕಚೇರಿಗೆ ಬನ್ನಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
    ವೃದ್ದೆ ರಂಗಹನುಮಕ್ಕ ದೂರಿನ ಅನ್ವಯ ಮಗ ಮತ್ತು ಸೂಸೆ ಲಲಿತಮ್ಮ ವಿರುದ್ದ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಹಶೀಲ್ದಾರ್ ಬಳಿ ವೃದ್ದೆ ರಂಗಹನುಮಕ್ಕ ನಾನು ಊಟ-ತಿಂಡಿ ಮಾಡದೆ ವರ್ಷಗಟ್ಟಲೆ ವನವಾಸ ಮಾಡಿದ್ದೇನೆ. ನನ್ನ ಮೇಲೆ ಗಲಾಟೆ ಮಾಡಿ ಮಗ-ಸೂಸೆ ಮನೆಯಿಂದ ಹೊರಗಡೆ ಹಾಕಿ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ. ಮಾನ್ಯ ತಹಶೀಲ್ದಾರ್ ಮೇಡಂ ಮತ್ತೆ ನನಗೆ ಮನೆ ಕೊಡಿಸಿದ್ದಾರೆ. ಮತ್ತೆ ನನಗೆ ತೊಂದರೆ ಕೊಡದಂತೆ ನೋಡಿಕೊಳ್ಳಬೇಕಿದೆ ಎಂದು ಮನವಿ ಮಾಡಿದರು.

    koratagere rangahanumakka tumkur ತುಮಕೂರು ನ್ಯಾಯ
    Share. Facebook Twitter Pinterest LinkedIn Tumblr Email WhatsApp
    Previous Articleದರೋಡೆಕೋರರ ಸೆರೆ
    Next Article ಬಾರ್, ಪಬ್‌ಗಳಿಗೆ ಹೊಸ ರೂಲ್ಸ್
    vartha chakra
    • Website

    Related Posts

    ನಟ ಶ್ರೀಕಾಂತ್ ಮೇಲೆ ಎಷ್ಟೊಂದು ಕೇಸ್ ಗೊತ್ತಾ?

    June 25, 2025

    ಇಂಜಿನಿಯರಿಂಗ್ ಕಾಲೇಜುಗಳಿಗೆ ಇಡಿ ಬಿಸಿ

    June 25, 2025

    ಐಶ್ವರ್ಯಾ ಗೌಡ ವಿರುದ್ಧ ಚಾರ್ಜ್ ಶೀಟ್

    June 25, 2025

    Comments are closed.

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ನಟ ಶ್ರೀಕಾಂತ್ ಮೇಲೆ ಎಷ್ಟೊಂದು ಕೇಸ್ ಗೊತ್ತಾ?

    ಇಂಜಿನಿಯರಿಂಗ್ ಕಾಲೇಜುಗಳಿಗೆ ಇಡಿ ಬಿಸಿ

    ಐಶ್ವರ್ಯಾ ಗೌಡ ವಿರುದ್ಧ ಚಾರ್ಜ್ ಶೀಟ್

    ಜುಲೈ 7ರಂದು ಮಹಾನಗರ ಪಾಲಿಕೆಗಳು ಕೆಲಸ ಮಾಡುವುದಿಲ್ಲ!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • k4s3q on ಕಲುಷಿತ ಆಹಾರ ಸೇವನೆ- ಹಲವರು ಅಸ್ವಸ್ಥ
    • lwejq on ಹೆಬ್ಬಾಳ್ಕರ್ ಪುತ್ರ, ಜಾರಕಿಹೊಳಿ ಪುತ್ರಿ ಅಖಾಡಕ್ಕೆ | Satish Jarkiholi
    • Jessiebep on ಬಾಬಾ ಸಿದ್ಧಿಕ್ಕಿ ಹತ್ಯೆ ನಂತರ, ಸಲ್ಮಾನ್‌ ಖಾನ್ ಹತ್ಯೆ ಮಾಡಲು ಟಾರ್ಗೆಟ್ ಮಾಡುತ್ತಿರುವ ಬಿಷ್ಣೋಯ್‌ ಗ್ಯಾಂಗ್!
    Latest Kannada News

    ನಟ ಶ್ರೀಕಾಂತ್ ಮೇಲೆ ಎಷ್ಟೊಂದು ಕೇಸ್ ಗೊತ್ತಾ?

    June 25, 2025

    ಇಂಜಿನಿಯರಿಂಗ್ ಕಾಲೇಜುಗಳಿಗೆ ಇಡಿ ಬಿಸಿ

    June 25, 2025

    ಐಶ್ವರ್ಯಾ ಗೌಡ ವಿರುದ್ಧ ಚಾರ್ಜ್ ಶೀಟ್

    June 25, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ರೀಲ್ಸ್_ ಮಾಡುವಾಗ 13ನೇ ಅಂತಸ್ತಿನಿಂದ ಬಿದ್ದು ಯುವತಿ ಸಾವು #varthachakra #death #apartement #reels #viral
    Subscribe