Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಹಂದಿಗಳನ್ನು ಹೀಗೆ ಕದ್ದೊಯ್ದರು.. !!
    ಸುದ್ದಿ

    ಹಂದಿಗಳನ್ನು ಹೀಗೆ ಕದ್ದೊಯ್ದರು.. !!

    vartha chakraBy vartha chakraAugust 22, 2022Updated:August 22, 2022No Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಆ.19-ಮಾರಕಾಸ್ತ್ರಗಳೊಂದಿಗೆ ಬಂದು ಇಬ್ಬರ ಮೇಲೆ ಹಲ್ಲೆ ನಡೆಸಿ ಸುಮಾರು 80 ಹಂದಿಗಳನ್ನು ಕಳವು ಮಾಡಿ ಪರಾರಿಯಾಗಿದ್ದ 10‌ ಮಂದಿ ಡಕಾಯಿತರನ್ನು ಚಿಕ್ಕಜಾಲ ಪೊಲೀಸರು ಬಂಧಿಸುವಲ್ಲಿ‌ ಯಶಸ್ವಿಯಾಗಿದ್ದಾರೆ.
    ರಾಯಚೂರಿನ ಸಿಂದನೂರಿನ ಶಂಕರ್(22),ಪರಶುರಾಮ(25)ಗದಗದ ಲಕ್ಷ್ಮೇಶ್ವರದ ಅಶೋಕ(21)
    ರಾಯಚೂರಿನ ಅಂಬಾಮಠದ ಅಂಬಣ್ಣ(21) ಬೆಳಗಾವಿಯ ಅಡಿವೇಪ್ಪ(22) ಮಾನ್ವಿಯ ಬಸವರಾಜು(29)ಯಲಹಂಕದ
    ರಾಜನುಕುಂಟೆಯ ಮಂಜುನಾಥ(33) ಹಾಸನ ಚನ್ನರಾಯಪಟ್ಟಣದ ಕಿರಣ್(28) ಬೆಳಗಾವಿ ಜಿಲ್ಲೆಯ ರಾಮದುರ್ಗದ ಪಕೀರಪ್ಪ ನಾಗಪ್ಪ ಚಿಪ್ಪಲಕಟ್ಟಿ(31)ಶಂಕರ್ ನಾಗಪ್ಪ ಚಿಪ್ಪಲಕಟ್ಟಿ(27) ಬಂಧಿತ ಡಕಾಯಿತರಾಗಿದ್ದಾರೆ.
    ಬಂಧಿತರಿಂದ 20 ಲಕ್ಷ ಮೌಲ್ಯದ ಹಂದಿಗಳು 28 ಸಾವಿರ ನಗದು ವಶಪಡಿಸಿಕೊಂಡು ಬ್ಯಾಂಕ್ ಖಾತೆಯಲ್ಲಿದ್ದ 21 ಸಾವಿರ ನಗದು ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಹಾಗೂ ಆರೋಪಿಗಳಿಗೆ ಕೃತ್ಯಕ್ಕೆ ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ಡಿಸಿಪಿ ಡಾ.ಅನೂಪ್ ಎ.ಶೆಟ್ಟಿ ತಿಳಿಸಿದ್ದಾರೆ.
    ಚಿಕ್ಕಜಾಲದ ಹುಣಸಮಾರನಹಳ್ಳಿಯ ಸಂದೀಪ್ ಅವರ ಹಂದಿ ಸಾಗಾಣಿಕೆ ಶೆಡ್ ನಲ್ಲಿ‌ ಕಳೆದ ಜು.16 ರಂದು ಮಧ್ಯ ರಾತ್ರಿ 2 ರ ವೇಳೆ 8ಮಂದಿಯ ಬಂಧಿತರ ಗುಂಪು 2 ವಾಹನದಲ್ಲಿ ಬಂದು ಸುಮಾರು 20 ಲಕ್ಷ ಬೆಲೆ ಬಾಳುವ 80 ಹಂದಿಗಳನ್ನು ಕಳ್ಳತನ ಮಾಡುತ್ತಿದ್ದರು.
    ಇದನ್ನು ಕಂಡ ಸಂದೀಪ್ ಮತ್ತವರ ತಂದೆ ರಾಮಕೃಷ್ಣಪ್ಪ ನವರು ಕಳ್ಳರನ್ನು ಹಿಡಿಯಲು ಪ್ರಯತ್ನಿಸಿದಾಗ ಆರೋಪಿಗಳು ರಾಡು ಹಾಗೂ ಮಚ್ಚುಗಳಿಂದ ನಮ್ಮ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಲು ಪ್ರಯತ್ನಿಸಿದ್ದರು.
    ರಾಮಕೃಷ್ಣಪ್ಪ ರವರಿಗೆ ತೀವ್ರತರದ ರಕ್ತಗಾಯ ವಾಗಿರುವುದಾಗಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಈ ಸಂಬಂಧ ಬಂದ ದೂರು ಆಧರಿಸಿ ಪ್ರಕರಣ ದಾಖಲಿಸಿ ಕಾರ್ಯಾಚರಣೆಗಿಳಿದ ಚಿಕ್ಕಜಾಲ ಪೊಲೀಸ್ ಇನ್ಸ್‌ಪೆಕ್ಟರ್ ಪ್ರವೀಣ್ ಎಂ ನೇತೃತ್ವದ ವಿಶೇಷ ತಂಡವು ಆರೋಪಿಗಳನ್ನು ಗಂಗಾವತಿ ಗ್ರಾಮಾಂತರದ ಮರಳಿ ಟೋಲ್ ಬಳಿ ವಶಕ್ಕೆ ಪಡೆಯಲು‌ ಮುಂದಾಗಿತ್ತು. ಈ ವೇಳೆ ಕರ್ತವ್ಯನಿರತ ಅಧಿಕಾರಿ ಮತ್ತು ಸಿಬ್ಬಂದಿಗಳ ಮೇಲೆ ಹತ್ಯೆ ಮಾಡಲು ಪ್ರಯತ್ನಿಸಿದ್ದು ಹಾಗು ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಶಂಕರ್( 22) ಅಶೋಕ(21) ಮೇಲೆ ಅಧಿಕಾರಿ ಸಿಬ್ಬಂದಿಗಳ ಆತ್ಮರಕ್ಷಣೆಗಾಗಿ ಅಲ್ಪ ಪ್ರಮಾಣದ ಬಲಪ್ರಯೋಗ ಮಾಡಿ ಆರೋಪಿಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಬೋಲೇರೋ ಪಿಕಪ್ ವಾಹನವನ್ನು ವಶಕ್ಕೆ ಪಡೆದು ಗಂಗಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
    ಪ್ರಕರಣಕ್ಕೆ ಸಂಬಂದಿಸಿದಂತೆ ಗಂಗಾವತಿ ಗ್ರಾಮಾಂತರ ಪೊಲೀಸ್ ಠಾಣೆ ಪ್ರಕರಣದಲ್ಲಿ ನ್ಯಾಯಾಂಗ ಬಂದನದಲ್ಲಿದ್ದ
    ಶಂಕರ್, ಅಶೋಕ,ಅಂಬಣ್ಣ,ಅಡಿವೇಪ್ಪ, ಪರಶುರಾಮನನ್ನು ಪೊಲೀಸ್ ಬಂದನಕ್ಕೆ ಪಡೆದು ವಿಚಾರಣೆ ಮಾಡಿ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಕಳ್ಳತನದ ಹಂದಿಗಳೆಂದು ತಿಳಿದಿದ್ದರೂ ಸಹಾ ಹಂದಿಗಳನ್ನು ಆರೋಪಿಗಳಿಂದ ಸ್ವೀಕರಿಸಿ ಮಾರಾಟ ಮಾಡುತ್ತಿದ್ದ ಆರೋಪಿ ಕಿರಣ್ ನನ್ನು ಆರೋಪಿಗಳಿಗೆ ಕೃತ್ಯಕ್ಕೆ ವಾಹನ ನೀಡಿ ಸಹಕರಿಸಿದ ವಾಹನದ ಮಾಲೀಕರಾದ ಪಕೀರಪ್ಪ ನಾಗಪ್ಪ ಚಿಪ್ಪಲಕಟ್ಟಿ, ಶಂಕರ್ ನಾಗಪ್ಪ ಚಿಪ್ಪಲಕಟ್ಟಿ ನನ್ನು ದಸ್ತಗಿರಿ ಮಾಡಲಾಗಿದೆ.
    ಕೃತ್ಯಕ್ಕೆ ಬಳಸಲಾದ ಬೊಲೆರೊ ಪಿಕಪ್ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
    ಕೃತ್ಯದಲ್ಲಿ ಬಾಗಿಯಾದ ಕುದೂರು ಪೊಲೀಸ್ ಠಾಣೆಯ ಪ್ರಕರಣದಲ್ಲಿ ನ್ಯಾಯಾಂಗ ಬಂದನದಲ್ಲಿದ್ದ ಆರೋಪಿಗಳಾದ ಮಂಜುನಾಥ ಹಾಗೂ ಬಸವರಾಜು ರವರನ್ನು ಪೊಲೀಸ್ ಬಂಧನಕ್ಕೆ ಪಡೆದು ವಿಚಾರಣೆ ನಡೆಸಿ ಬಂಧಿಸಿದ್ದು ಹಾಲಿ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ ಚಿಕ್ಕಜಾಲ ಪೊಲೀಸರ ಈ ವೃತ್ತಿಪರತೆಯನ್ನು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಶ್ಲಾಘಿಸಿದ್ದಾರೆ.

    Bangalore ಕಳ್ಳತನ ನ್ಯಾಯ ಹಾಸನ
    Share. Facebook Twitter Pinterest LinkedIn Tumblr Email WhatsApp
    Previous Articleಕೋರ್ಟ್ ಗೆ ಹಾಜರು ಪಡಿಸಲು ಕರೆತಂದ ಭೂಗತ ಪಾತಕಿಗೆ ಲಾಡ್ಜ್ ನಲ್ಲಿ ಸಲ್ಲಾಪಕ್ಕೆ ಅವಕಾಶ
    Next Article ಬೈಕ್ ಲೈಟ್ ಕಂಬಕ್ಕೆ ಡಿಕ್ಕಿ ಇಂಜಿನಿಯರ್ ಸಾವು
    vartha chakra
    • Website

    Related Posts

    ನಟ ಶ್ರೀಕಾಂತ್ ಮೇಲೆ ಎಷ್ಟೊಂದು ಕೇಸ್ ಗೊತ್ತಾ?

    June 25, 2025

    ಇಂಜಿನಿಯರಿಂಗ್ ಕಾಲೇಜುಗಳಿಗೆ ಇಡಿ ಬಿಸಿ

    June 25, 2025

    ಐಶ್ವರ್ಯಾ ಗೌಡ ವಿರುದ್ಧ ಚಾರ್ಜ್ ಶೀಟ್

    June 25, 2025

    Comments are closed.

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ನಟ ಶ್ರೀಕಾಂತ್ ಮೇಲೆ ಎಷ್ಟೊಂದು ಕೇಸ್ ಗೊತ್ತಾ?

    ಇಂಜಿನಿಯರಿಂಗ್ ಕಾಲೇಜುಗಳಿಗೆ ಇಡಿ ಬಿಸಿ

    ಐಶ್ವರ್ಯಾ ಗೌಡ ವಿರುದ್ಧ ಚಾರ್ಜ್ ಶೀಟ್

    ಜುಲೈ 7ರಂದು ಮಹಾನಗರ ಪಾಲಿಕೆಗಳು ಕೆಲಸ ಮಾಡುವುದಿಲ್ಲ!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • qjaev on ನೈತಿಕ ಪೊಲೀಸ್ ಗಿರಿ ಮಾಡಿದರೆ ಗಡಿಪಾರು | Karnataka Police
    • EdwardNor on ಭ್ರೂಣ ಹತ್ಯೆ ಪ್ರಕರಣ: ಸಿಐಡಿ ತನಿಖೆಗೆ | CID
    • yvquc on ಕಾನೂನು ಕುಣಿಕೆಯಲ್ಲಿ ಟಾಕ್ಸಿಕ್ ಸಿನಿಮಾ ತಂಡ.
    Latest Kannada News

    ನಟ ಶ್ರೀಕಾಂತ್ ಮೇಲೆ ಎಷ್ಟೊಂದು ಕೇಸ್ ಗೊತ್ತಾ?

    June 25, 2025

    ಇಂಜಿನಿಯರಿಂಗ್ ಕಾಲೇಜುಗಳಿಗೆ ಇಡಿ ಬಿಸಿ

    June 25, 2025

    ಐಶ್ವರ್ಯಾ ಗೌಡ ವಿರುದ್ಧ ಚಾರ್ಜ್ ಶೀಟ್

    June 25, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ರೀಲ್ಸ್_ ಮಾಡುವಾಗ 13ನೇ ಅಂತಸ್ತಿನಿಂದ ಬಿದ್ದು ಯುವತಿ ಸಾವು #varthachakra #death #apartement #reels #viral
    Subscribe