ಬೆಂಗಳೂರು- ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ರಮೇಶ್ ಜಾರಕಿಹೊಳಿ ವಿಧಾನಸಭೆ ಚುನಾವಣೆ ಸಮಯದಲ್ಲಿ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಹಲವು ಅಂಶಗಳನ್ನು ಮರೆಮಾಚಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಪಕ್ಷದ ವಕ್ತಾರರಾದ ಎಂ.ಲಕ್ಷಣ್ ಮತ್ತು ರಮೇಶ್ ಬಾಬು ಕೇಂದ್ರದ ರಾಜ್ಯ ಚುನಾವಣಾ ಆಯೋಗದ ಮುಖ್ಯ ಆಯುಕ್ತರನ್ನು ಭೇಟಿ ಮಾಡಿ ರಮೇಶ್ ಜಾರಕಿಹೊಳಿ ಮುಚ್ಚಿಟ್ಟಿದ್ದಾರೆನ್ನಲಾದ ಹಲವು ದಾಖಲೆಗಳನ್ನು ಸಲ್ಲಿಸಿದ್ದಾರೆ.
ರಮೇಶ್ ಜಾರಕಿಹೊಳಿ ಮತ್ತುಬಇವರ ಕುಟುಂಬದ ಸದಸ್ಯರು
ನಿರ್ದೇಶಕರಾಗಿರುವ ಸೌಭಾಗ್ಯ ಷುಗರ್ಸ್ ಕಾರ್ಖಾನೆ ಸುಮಾರು 578 ಕೋಟಿ ಸಾಲ ಮಾಡಿದ್ದು, ಇದರ ವಿವರಗಳನ್ನು ಪ್ರಮಾಣ ಪತ್ರದಲ್ಲಿ ಮುಚ್ಚಿಟ್ಟಿ ರುತ್ತಾರೆ.
ಕಾರ್ಖಾನೆ ರೈತರಿಗೆ ಸುಮಾರು 50
ಕೋಟಿ ರೂಪಾಯಿ ಕಬ್ಬಿನ ಬಾಕಿ ಪಾವತಿ ಮಾಡಬೇಕಾಗಿದೆ ಇದರ ವಿವರವನ್ನು ನೀಡಿಲ್ಲ.ಅಲ್ಲದೆ ಇವರು
ಆದಾಯ ತೆರಿಗೆ ಇಲಾಖೆಗೆ 150 ಕೋಟಿ ರೂಪಾಯಿ ಪಾವತಿ ಮಾಡಬೇಕಾಗಿದ್ದು ಇದರ
ವಿವರಗಳನ್ನು ಪ್ರಮಾಣ ಪತ್ರದಲ್ಲಿ ನಮೂದಿಸಿಲ್ಲ ಎಂದು ಆಪಾದಿಸಿದ್ದಾರೆ.
ಕಬ್ನಿನ ಬಾಕಿ ಹಣ ಪಾವತಿ ಮಾಡುವ ಸಂಬಂಧ ಕರ್ನಾಟಕ ಹೈಕೋರ್ಟ್
28-11-2019ರಲ್ಲಿ ತೀರ್ಪು ನೀಡಿ ಸಾಲದ ಹಣದ ಶೇಕಡಾ 50ರಷ್ಟನ್ನು ಆರು ವಾರದಲ್ಲಿ ಪಾವತಿ ಮಾಡುವಂತೆ ಆದೇಶ ನೀಡಿದೆ.ಆದರೆ
ಇಲ್ಲಿ ಯವರೆಗೆ ಹಣ ಪಾವತಿ
ಮಾಡಿಲ್ಲ ಈ ವಿಷಯವನ್ನೂ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿಲ್ಲ ಎಂದು ಆಯೋಗದ ಗಮನ ಸೆಳೆದಿದ್ದಾರೆ.
ಚುನಾವಣಾ ಪ್ರಮಾಣ ಪತ್ರದಲ್ಲಿ ರಮೇಶ್ ಲಕ್ಷ್ಮಣ್ ಜಾರಕಿಹೊಳಿರವರು ಸೌಭಾಗ್ಯ ಲಕ್ಷ್ಮಿ ಸಕ್ಕರೆ ಕಾರ್ಖಾನೆ ವ್ಯವಹಾರ, ಅಪೆಕ್ಸ್ ಬ್ಯಾಂಕಿನಲ್ಲಿ ಸಲ ಪಡೆದಿರುವ ಮಾಹಿತಿ, ಕುಟುಂಬದ ಸದಸ್ಯರ ಸಾಲದ ವ್ಯವಹಾರಗಳು, ರೈತರಿಗೆ ಪಾವತಿ ಮಾಡಬೇಕಾದ ಹಣದ ವಿವರಗಳು, ಬೇರೆ ಬೇರೆ ಬ್ಯಾಂಕುಗಳಲ್ಲಿ ಪಡೆದಿರುವ ಸಾಲಗಳ ವಿವರಗಳನ್ನು ನಿಖರವಾಗಿ ಮತ್ತು ಪಾರದರ್ಶಕವಾಗಿ ನೀಡದೆ ಸುಳ್ಳು ಪ್ರಮಾಣ ಪತ್ರ ಸಲ್ಲಿಕೆ ಮಾಡಿ ಅಪರಾಧ ಎಸಗಿರುತ್ತಾರೆ.
ಜಾರಕಿಹೊಳಿರವರು ಸಲ್ಲಿಸಿರುವ ಸುಳ್ಳು ಪ್ರಮಾಣ ಪತ್ರವನ್ನು ಗಂಭೀರವಾಗಿ ಪರಿಗಣಿಸಿ, ಸಾರ್ವಜನಿಕ ಹಿತದೃಷ್ಟಿಯಿಂದ ಈ ಪ್ರಕರಣವನ್ನು ಸಿಬಿಡಿಟಿ ಗೆ ಮತ್ತು ಇಡಿ ಗೆ ವರ್ಗಾಯಿಸಬೇಕೆಂದು ಕೋರುತ್ತೇವೆ. ಅವರ ಕುಟುಂಬದ ಸದಸ್ಯರು ಭಾಗಿಯಾಗಿರುವ ಸುಮಾರು 578 ಕೋಟಿ ರೂಪಾಯಿಗಳ ಸೌಭಾಗ್ಯ ಲಕ್ಷ್ಮಿ ಸಕ್ಕರೆ ಕಾರ್ಖಾನೆಯ ವ್ಯವಹಾರಗಳನ್ನು ಶ್ರೀ ರಮೇಶ್ ಜಾರಕಿಹೊಳಿರವರು ತಮ್ಮ ಪ್ರಮಾಣ ಪತ್ರದಲ್ಲಿ ವಿವರವಾಗಿ ನಮೂದಿಸದೆ ಬಚ್ಚಿಟ್ಟು ಅಪರಾಧ ಎಸಗಿರುತ್ತಾರೆ. ಚುನಾವಣಾ ಆಯೋಗವು ಈ ಪ್ರಕರಣವನ್ನು ಕಾಗ್ನಿಝೇನ್ಸ್ ಅಪರಾಧವಾಗಿ ಪರಿಗಣಿಸಿ ಆದ್ಯತೆಯ ಮೇಲೆ ತನಿಖೆಗೆ ವಹಿಸಲು ಮನವಿ ಮಾಡುತ್ತೇವೆ ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.