ಬೆಂಗಳೂರು –
ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದ ನಟ ಶ್ರೀ ನಂದಮೂರಿ ತಾರಕ ರತ್ನರವರು ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿಯ ಬಗ್ಗೆ ನಾರಾಯಣ ಹೃದಯಾಲಯ ಬಿಡುಗಡೆ ಮಾಡಿದ “ಹೆಲ್ತ್ ಬುಲೆಟಿನ್” ಇಲ್ಲಿದೆ.
ಶ್ರೀ ನಂದಮೂರಿ ತಾರಕ ರತ್ನ ಅವರ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿದೆ. ವೆಂಟಿಲೇಟರ್ ಮತ್ತು ಇತರ ಹೆಚ್ಚಿನ ಸಪೋರ್ಟ್ ಗಳ ಅಡಿಯಲ್ಲಿ ಇರುವ ಅವರ ಆರೋಗ್ಯ ನಿರ್ಣಾಯಕ ಸ್ಥಿತಿಯಲ್ಲಿದೆ. ಅವರು ಇಲ್ಲಿಯವರೆಗೆ ಯಾವುದೇ ECMO ಬೆಂಬಲವನ್ನು ಪಡೆದಿಲ್ಲ ಎಂಬುದನ್ನು ನಾವು ಮಾಧ್ಯಮದವರಿಗೆ ಸ್ಪಷ್ಟಪಡಿಸಲು ಬಯಸುತ್ತೇವೆ. ಅವರ ಆರೋಗ್ಯ ಸ್ಥಿತಿಯ ಬಗ್ಗೆ ಅವರ ಕುಟುಂಬಕ್ಕೆ ನಿರಂತರವಾಗಿ ಮಾಹಿತಿಯನ್ನು ನೀಡಲಾಗುತ್ತಿದೆ. ಅವರ ಆರೋಗ್ಯದಲ್ಲಿ ಏನೇ ಬದಲಾವಣೆ ಕಂಡರೂ ಅಗತ್ಯವಿರುವಂತೆ ತಿಳಿಸಲಾಗುತ್ತದೆ.
ಗೌಪ್ಯತೆ ಮತ್ತು ಅಡೆತಡೆಯಿಲ್ಲದ ಚಿಕಿತ್ಸೆಯನ್ನು ಒದಗಿಸುವಲ್ಲಿ ಸಾರ್ವಜನಿಕರು ನಮಗೆ ಬೆಂಬಲವನ್ನು ಮುಂದುವರಿಸಬೇಕೆಂದು ನಾವು ವಿನಂತಿಸುತ್ತೇವೆ.


1 Comment
Where doubters become deposit screenshots – https://atamsulosin.com/mostbet-777/ , Spin like gravity doesn’t apply to winners .