ಬೆಂಗಳೂರು,ಫೆ.18-
ನಗರ ಪೊಲೀಸ್ ಠಾಣೆಯೊಂದರಲ್ಲಿ ದೂರು ಕೊಡಲು ಹೋದಾಗ ಒಬ್ಬ ಪೊಲೀಸ ರೂ ಇರಲಿಲ್ಲ ಎಂದು ವ್ಯಕ್ತಿಯೋರ್ವ ಸಾಮಾಜಿಕ ಜಾಲತಾಣದಲ್ಲಿ ಅಳಲನ್ನು ತೋಡಿಕೊಂಡಿದ್ದಾನೆ.
‘ಸೈಕಲ್ ಕಳ್ಳತನವಾಗಿದ್ದಕ್ಕೆ ಮಹಾಲಕ್ಷ್ಮಿ ಲೇಔಟ್ (Mahalakshmi Layout) ನಲ್ಲಿ ದೂರು ಕೊಡಲು 45 ನಿಮಿಷ ಕಾದಿದ್ದು ನಂತರ ಬಂದ ಪೊಲೀಸರು ಸೈಕಲ್ ಕಳ್ಳತನದ ದೂರು ಎಂದಾಗ ನನ್ನನ್ನು ನೋಡಿ ನಕ್ಕಿದ್ದಾರೆ.
ದೂರು ಸ್ವೀಕರಿಸಲು ರೈಟರ್ ಸಹ ಠಾಣೆಯಲ್ಲಿ ಇರಲಿಲ್ಲ’ ಎಂದು ಮಂಜುನಾಥ್ ಎನ್ನುವವರು ಆರೋಪಿಸಿದ್ದಾರೆ.
ಹೀಗಾಗಿ ದೂರು ನೀಡದೇ ಮಂಜುನಾಥ್ ವಾಪಸ್ ಆಗಿದ್ದಾರೆ. ಇವರು ಮಹಾಲಕ್ಷ್ಮಿ ಲೇಔಟ್ ಪೊಲೀಸರ ಮೇಲೆ ಆರೋಪ ಮಾಡಿ ಇದರ ಬಗ್ಗೆ ಬರೆದು ಬೆಂಗಳೂರು ಸಿಟಿ ಪೊಲೀಸ್ಗೆ Twitter ನಲ್ಲಿ ಟ್ಯಾಗ್ ಮಾಡಿದ್ದಾರೆ.