Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಇವರೇ ನರೇಂದ್ರ ಮೋದಿ ಅವರ ಉತ್ತರಾಧಿಕಾರಿ.
    ರಾಜಕೀಯ

    ಇವರೇ ನರೇಂದ್ರ ಮೋದಿ ಅವರ ಉತ್ತರಾಧಿಕಾರಿ.

    vartha chakraBy vartha chakraFebruary 3, 20255 Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ನವದೆಹಲಿ.
    ದೇಶದ ರಾಜಕೀಯ ಇತಿಹಾಸದಲ್ಲಿ ತಮ್ಮ ಅತ್ಯುತ್ತಮ ವಾಗ್ಜರಿ, ಮೋಡಿ ಮಾಡುವ ಮಾತುಗಾರಿಕೆ ಮೂಲಕ ಪ್ರಧಾನ ಮಂತ್ರಿ ಹುದ್ದೆಗೇರಿದ ನರೇಂದ್ರ ಮೋದಿ ಅವರಿಗೆ ಪರ್ಯಾಯ ನಾಯಕನ ಹುಡುಕಾಟದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರ ನಿರತವಾಗಿದೆ.
    ಸತತ ಮೂರನೇ ಅವಧಿಗೆ ಪ್ರಧಾನಿ ಹುದ್ದೆ ಅಲಂಕರಿಸಿರುವ ನರೇಂದ್ರ ಮೋದಿ ಅವರು 70 ವರ್ಷವನ್ನು ದಾಟಿದ್ದಾರೆ.ಹೀಗಾಗಿ ಇದೀಗ ಅವರಿಗೆ ಸರಿಸಾಟಿಯಾಗಬಲ್ಲ ನಾಯಕನ ಅವಶ್ಯಕತೆ ಇದೆ ಎಂದು ಮನಗಂಡಿರುವ ಸಂಘ ಪರಿವಾರ ಇದಕ್ಕಾಗಿ ಕಳೆದ ಐದು ವರ್ಷಗಳಿಂದ ಹುಡುಕಾಟ ನಡೆಸಿದೆ.
    ಪ್ರಧಾನಿ ನರೇಂದ್ರ ಮೋದಿ ಅವರ ನಂತರದಲ್ಲಿ ಸರ್ಕಾರ ಮತ್ತು ಪಕ್ಷದಲ್ಲಿ ಅತ್ಯಂತ ಪ್ರಭಾವಿಯಾಗಿರುವ ಗೃಹ ಮಂತ್ರಿ ಅಮಿತ್ ಶಾ ಅವರು ಸ್ವಾಭಾವಿಕ ಆಯ್ಕೆ ಎಂದು ಹೇಳಲಾಗುತ್ತದೆಯಾದರೂ ಸಂಘ ಪರಿವಾರ ಇದಕ್ಕೆ ಸಹಮತ ಹೊಂದಿಲ್ಲ.ಅಲ್ಲದೆ ಬಿಜೆಪಿಯಲ್ಲಿರುವ ಹಲವು ಪ್ರಭಾವಿ ನಾಯಕರು ಕೂಡ ಅಮಿತ್ ಶಾ ಅವರನ್ನು ಪ್ರಧಾನಿ ಮೋದಿ ಅವರ ಸ್ಥಾನದಲ್ಲಿ ನೋಡಲು ಸಿದ್ದರಿಲ್ಲ.
    ಹೀಗಾಗಿ ಸಂಘ ಪರಿವಾರ ಮತ್ತು ಬಿಜೆಪಿಯ ಎಲ್ಲ ನಾಯಕರು ಒಪ್ಪುವಂತಹ ವ್ಯಕ್ತಿಗಾಗಿ ಹುಡುಕಾಟ ನಡೆಸಿದ್ದು ಸಹಜವಾಗಿ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಹೆಸರು ಕೇಳಿಬಂದಿತ್ತು.
    ಆದರೆ ಅವರ ವಿರುದ್ಧ ಇತ್ತೀಚೆಗೆ ನಡೆದ ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿನ ಅಕ್ರಮ ಆರೋಪ ಹಾಗೂ ಹಲವು ಶೆಲ್ ಕಂಪೆನಿಗಳಲ್ಲಿ ಇವರು ಹಣ ತೊಡಗಿಸಿದ್ದಾರೆ ಎಂಬ ದೂರುಗಳು ಸಂಘ ಪರಿವಾರವನ್ನು ತಲುಪಿದೆ.
    ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎದುರಾಗಿ ಪರ್ಯಾಯ ನಾಯಕರಾಗಿ ನಿತಿನ್ ಗಡ್ಕರಿ ಹೊರಹೊಮ್ಮಲಿದ್ದಾರೆ ಎಂದು ಭಾವಿಸಿದ್ದ ಸಂಘ ಪರಿವಾರದ ನಾಯಕರು ಮತ್ತು ಬಿಜೆಪಿ ಮುಖಂಡರಿಗೆ ಈ ಬೆಳವಣಿಗೆ ತೀರಾ ಬೇಸರ ತರಿಸಿದೆ.
    ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರ್ಯಾಯ ಯಾರು ಎಂದು ಹುಡುಕಾಡುತ್ತಿದ್ದ ಸಂಘ ಪರಿವಾರದ ನಾಯಕರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಚಿತ್ಪಾವನ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ದೇವೇಂದ್ರ ಫಡ್ನವೀಸ್ ಆಶಾಕಿರಣವಾಗಿ ಗೋಚರಿಸಿದ್ದಾರೆ.
    ಅದರಲ್ಲೂ ಮಹಾರಾಷ್ಟ್ರ ವಿಧಾನಸಭೆ Electionಯಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ರಾಜಕೀಯ ತಂತ್ರಗಾರಿಕೆಯನ್ನು ನೆಚ್ಚಿಕೊಳ್ಳದೆ ಸಂಘ ಪರಿವಾರದ ಕಾರ್ಯಕರ್ತರನ್ನು ಸಂಪೂರ್ಣವಾಗಿ ಬಳಸಿಕೊಂಡು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಮತ್ತು ಗಿರಿಜನರ ಮತ ಬ್ಯಾಂಕ್ ಸೃಷ್ಟಿಸುವ ಮೂಲಕ ಅಧಿಕಾರ ಚುಕ್ಕಾಣಿ ಹಿಡಿದಿದ್ದು ಸಂಘ ಪರಿವಾರದ ನಾಯಕರಿಗೆ ಹೊಸ ಭರವಸೆ ಮೂಡುವಂತೆ ಮಾಡಿದೆ.
    ಮರಾಠವಾಡ ವಿಧರ್ಭಪ್ರಾಂತ್ಯಗಳಲ್ಲಿ ಬಿಜೆಪಿಯ ಕಮಲ ಅರಳುವಂತೆ ಮಾಡಿರುವ ದೇವೇಂದ್ರ ಫಡ್ನವೀಸ್ ನಾಗಪುರದ ನೀಲಿ ಕಣ್ಣಿನ ಹುಡುಗನಾಗಿ ಹೊರಹೊಮ್ಮುತ್ತಿದ್ದಾರೆ ಎಂಬ ಸುದ್ದಿಯನ್ನು ತಿಳಿದ ಅಮಿತ್ ಶಾ ಈಗಾಗಲೇ ಅಡ್ಡಗಾಲು ಹಾಕಲು ಮುಂದಾಗಿದ್ದಾರೆ.
    ವಿಧಾನಸಭೆ ಚುನಾವಣೆ ಸಮಯದಲ್ಲಿ ಪ್ರಚಾರ ತಂತ್ರಗಾರಿಕೆ ಸೇರಿದಂತೆ ಹಲವಾರು ವಿಷಯಗಳಲ್ಲಿ ದೇವೇಂದ್ರ ಫಡ್ನವೀಸ್ ಅವರ ಓಟಕ್ಕೆ ಕಡಿವಾಣ ಹಾಕಲು ಯತ್ನಿಸಿದ ಅಮಿತ್ ಶಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಚ್ಚು ಭಾಗಿಯಾಗದಂತೆ ನೋಡಿಕೊಂಡರು ಅಷ್ಟೇ ಅಲ್ಲ ತಾವು ವಿವಾದವೊಂದನ್ನು ಸೃಷ್ಟಿಸಿ ಮಣಿಪುರ ಬಿಕ್ಕಟ್ಟು ಬಗೆಹರಿಸುವ ನೆಪದಲ್ಲಿ ದೆಹಲಿಯಲ್ಲೇ ಉಳಿದುಕೊಂಡರು.
    ಈ ಆಡೆ ತಡೆಯ ಬಗ್ಗೆ ತಲೆ ಕೆಡಿಸಿಕೊಳ್ಳದ ದೇವೇಂದ್ರ ಫಡ್ನವೀಸ್ ಸಂಘ ಪರಿವಾರ ಕಾರ್ಯಕರ್ತರ ಬೆಂಬಲದೊಂದಿಗೆ ಭರ್ಜರಿ ಗೆಲುವು ದಾಖಲಿಸಿದರು ಇದೀಗ ಮಹಾರಾಷ್ಟ್ರ ಮುಖ್ಯಮಂತ್ರಿ ಆಗಿರುವ ಅವರಿಗೆ ಆ ಹುದ್ದೆಗೇರುವ ಸಮಯದಲ್ಲಿ ಅಮಿತ್ ಶಾ ತಮ್ಮದೇ ಪ್ರಭಾವ ಬಳಸಿ ಅಡ್ಡಿ ಉಂಟು ಮಾಡಲು ಪ್ರಯತ್ನಿಸಿದ್ದು ಈಗ ಗುಟ್ಟಾಗಿಯೇನೂ ಉಳಿದಿಲ್ಲ.
    ಅಂತಿಮವಾಗಿ ಸಂಘ ಪರಿವಾರದ ಶ್ರೀ ರಕ್ಷಣೆಯೊಂದಿಗೆ ಮುಖ್ಯಮಂತ್ರಿ ಆಗಿರುವ ಫಡ್ನವೀಸ್ ಅವರನ್ನು ಇನ್ನೆರಡು ವರ್ಷ ಕಳೆದ ಬಳಿಕ ದೆಹಲಿಯಲ್ಲಿ ಉನ್ನತ ಹುದ್ದೆಗೆ ನಿಯೋಜಿಸಲಾಗುತ್ತದೆ ಆ ಮೂಲಕ ಮುಂಬರುವ ಲೋಕಸಭಾ ಚುನಾವಣೆಯ ವೇಳೆಗೆ ಪ್ರಧಾನಿ ಇಳ
    ನರೇಂದ್ರ ಮೋದಿ ಅವರಿಗೆ ಪರ್ಯಾಯವಾಗಿ ಅವರನ್ನು ಬಿಂಬಿಸಲು ಸಿದ್ಧತೆ ನಡೆಸಲಾಗಿದೆ.

    Election ನರೇಂದ್ರ ಮೋದಿ ಬಿಜೆಪಿ ರಾಜಕೀಯ ಸರ್ಕಾರ ಸುದ್ದಿ
    Share. Facebook Twitter Pinterest LinkedIn Tumblr Email WhatsApp
    Previous Articleಸಂಬರಗಿ ವಿರುದ್ಧ ಪ್ರಕಾಶ್ ರೈ ದೂರು
    Next Article ಈ ಹೋಟೆಲ್ ಗೆ ಹೋದವರ ಸಾವು ಗ್ಯಾರಂಟಿ
    vartha chakra
    • Website

    Related Posts

    ಜುಲೈ 7ರಂದು ಮಹಾನಗರ ಪಾಲಿಕೆಗಳು ಕೆಲಸ ಮಾಡುವುದಿಲ್ಲ!

    June 24, 2025

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    June 24, 2025

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    June 24, 2025

    5 Comments

    1. g2tz4 on June 5, 2025 11:07 pm

      can you get clomiphene without a prescription cheapest clomiphene pills what is clomid medication clomiphene generic brand how to get generic clomid tablets where to get cheap clomiphene pill buy generic clomid price

      Reply
    2. WilliamBulky on June 18, 2025 2:58 am

      ¡Hola, fanáticos del riesgo !
      casino por fuera sin validaciГіn de identidad – п»їп»їhttps://casinoonlinefueradeespanol.xyz/ п»їп»їcasino fuera de espaГ±a
      ¡Que disfrutes de asombrosas conquistas legendarias !

      Reply
    3. ThomasSwere on June 18, 2025 4:11 am

      ¡Saludos, aficionados a los desafíos!
      Juegos sin verificaciГіn en casino online extranjero – п»їhttps://casinoextranjerosenespana.es/ casinoextranjerosenespana.es
      ¡Que disfrutes de movidas extraordinarias !

      Reply
    4. hogs9 on June 18, 2025 12:56 pm

      order inderal 20mg pill – cheap inderal 20mg buy methotrexate 5mg without prescription

      Reply
    5. 2jhsi on June 23, 2025 1:44 pm

      azithromycin 500mg ca – nebivolol 5mg tablet order bystolic sale

      Reply

    Leave A Reply Cancel Reply

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಜುಲೈ 7ರಂದು ಮಹಾನಗರ ಪಾಲಿಕೆಗಳು ಕೆಲಸ ಮಾಡುವುದಿಲ್ಲ!

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    ಸುಂದರಿ ಜಾಲಕ್ಕೆ ಬಲಿಯಾದ ಇರಾನ್.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • fgsca on ಇದು ದರೋಡೆಕೋರರ ಹೆದ್ದಾರಿ | Bengaluru-Mysuru Highway
    • AlbertDuabe on ವನ, ವನ್ಯಜೀವಿ ಸಂರಕ್ಷಣೆಗೆ ನಾವೀನ್ಯ ತಂತ್ರಜ್ಞಾನ ಬಳಕೆ :ಈಶ್ವರ ಖಂಡ್ರೆ | Eshwar Khandre
    • EdwardNor on ಇಂದಿರಾ ಗಾಂಧಿ ಚುನಾವಣೆ ಹೇಗೆ ನಡೆದಿತ್ತು ಗೊತ್ತಾ..? | Indira Gandhi
    Latest Kannada News

    ಜುಲೈ 7ರಂದು ಮಹಾನಗರ ಪಾಲಿಕೆಗಳು ಕೆಲಸ ಮಾಡುವುದಿಲ್ಲ!

    June 24, 2025

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    June 24, 2025

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    June 24, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ತಿರುಪತಿ ಲಾಡು ಗೆ ಮಂಡ್ಯ ತುಪ್ಪ #tirupati #tirumala #hyderabad #andhrapradesh #trending #ghee #products
    Subscribe