ಬೆಂಗಳೂರು,
ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಮ್ಮ ಬಿಡುವಿಲ್ಲದ ರಾಜಕೀಯ ಚಟುವಟಿಕೆಗಳ ನಡುವೆಯೂ ತಮ್ಮ ಸ್ವಕ್ಷೇತ್ರ ಕನಕಪುರದಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವ ಕನಕೋತ್ಸವವನ್ನು ಅದ್ದೂರಿಯಾಗಿ ಆಯೋಜಿಸುವ ಮೂಲಕ ರಾಜ್ಯದ ಗಮನ ಸೆಳೆದರು.
ಹತ್ತಾರು ಕೋಟಿ ರೂಪಾಯಿ ವೆಚ್ಚದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ನೇತೃತ್ವದಲ್ಲಿ ಕಲೆ, ಸಂಸ್ಕೃತಿ ಹಾಗೂ ಕ್ರೀಡೆಗೆ ಉತ್ತೇಜನ ನೀಡಲು ಕನಕಪುರದಲ್ಲಿ ಡಿ.ಕೆ.ಎಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಈ ಕನಕೋತ್ಸವ ನಡೆಯಿತು.
ಜನವರಿ 28 ರಿಂದ ಫೆಬ್ರವರಿ 1 ರವರೆಗೆ ಒಟ್ಟು ಐದು ದಿನಗಳ ಕಾಲ ಈ ಉತ್ಸವ ಬಹಳ ಅದ್ದೂರಿಯಾಗಿ ಜರುಗಿದ ಈ ಉತ್ಸವ ಕೇವಲ ಸಾಂಸ್ಕೃತಿಕ ಮತ್ತು ಕ್ರೀಡಾ ಉತ್ಸವವಾಗಿ ಮಾತ್ರವೇ ಗಮನ ಸೆಳೆಯಲಿಲ್ಲ ಬದಲಾಗಿ ಡಿಕೆ ಶಿವಕುಮಾರ್ ಸಹೋದರರ ಶಕ್ತಿ ಪ್ರದರ್ಶನ ಹಾಗೂ ಮುಂಬರುವ ರಾಜಕೀಯ ಬೆಳವಣಿಗೆಗಳ ದಿಕ್ಸೂಚಿಯಂತೆ ಇದು ಗೋಚರಿಸಿತು.
ಉತ್ಸವದ ಮೊದಲ ದಿನ ಸುಮಾರು 300ಕ್ಕೂ ಹೆಚ್ಚು ಗ್ರಾಮ ದೇವತೆಗಳ ಅದ್ದೂರಿ ಮೆರವಣಿಗೆ ನಡೆಯಿತು. ಕಬ್ಬಾಳಮ್ಮ ದೇವಿಯನ್ನು ಅಂಬಾರಿಯಲ್ಲಿ ಹೊತ್ತ ಆನೆಗಳ ಮೆರವಣಿಗೆ ವಿಶೇಷವಾಗಿತ್ತು.
ಕರ್ನಾಟಕದ ಮೂಲೆ ಮೂಲೆಗಳಿಂದ ಬಂದಿದ್ದ ವೀರಗಾಸೆ, ಡೊಳ್ಳು ಕುಣಿತ, ಗೊರವರ ಕುಣಿತ ಮತ್ತು ಪೂಜಾ ಕುಣಿತದ ಕಲಾತಂಡಗಳು ಮೆರವಣಿಗೆಯ ಉದ್ದಕ್ಕೂ ಪ್ರದರ್ಶನ ನೀಡಿದವು.
ಸುಮಾರು 17,000 ಶಾಲಾ ವಿದ್ಯಾರ್ಥಿಗಳು ಒಂದೇ ಸ್ಥಳದಲ್ಲಿ ಚಿತ್ರಕಲೆ ಬಿಡಿಸುವ ಮೂಲಕ ದಾಖಲೆ ನಿರ್ಮಿಸಿದರು. ಕನಕಪುರದ ಮೈದಾನದಲ್ಲಿ ಏಕಕಾಲದಲ್ಲಿ ಚಿತ್ರಕಲೆ ಬಿಡಿಸುವ ಮೂಲಕ ಅತಿ ದೊಡ್ಡ ‘ಕಲಾ ಸಂಗಮ’ಕ್ಕೆ ಸಾಕ್ಷಿಯಾದರು.
ಉತ್ಸವದ ಹಿನ್ನೆಲೆಯಲ್ಲಿ ಜಿಲ್ಲಾಮಟ್ಟದ ಕ್ರಿಕೆಟ್ ಟೂರ್ನಿಮೆಂಟ್ ಮತ್ತು ಇತರ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.ಕನಕಪುರ ತಾಲ್ಲೂಕಿನ ಪ್ರತಿ ಪಂಚಾಯತಿ ಮಟ್ಟದಿಂದ ತಂಡಗಳನ್ನು ಆಯ್ಕೆ ಮಾಡಿ ಪಂದ್ಯಾವಳಿ ನಡೆಸಲಾಯಿತು. ವಿಜೇತ ತಂಡಗಳಿಗೆ ಲಕ್ಷಾಂತರ ರೂಪಾಯಿ ನಗದು ಬಹುಮಾನ ಮತ್ತು ಆಕರ್ಷಕ ಟ್ರೋಫಿಗಳನ್ನು ನೀಡಲಾಯಿತು.
ಹಗ್ಗಜಗ್ಗಾಟ, ಕಬ್ಬಡ್ಡಿ ಮತ್ತು ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಿ, ಸ್ಥಳೀಯ ಸಂಪ್ರದಾಯಗಳನ್ನು ಉಳಿಸುವ ಪ್ರಯತ್ನ ಮಾಡಲಾಯಿತು. ವಿಜೇತರಿಗೆ ಬೈಕ್ ಸೇರಿದಂತೆ ಹಲವು ಆಕರ್ಷಕ ಬಹುಮಾನಗಳನ್ನು ನೀಡಲಾಯಿತು.
ತಾರಾ ಸಂಗಮಕ್ಕೂ ಸಾಕ್ಷಿಯಾದ ಈ ಉತ್ಸವದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಉಪೇಂದ್ರ ರಿಷಬ್ ಶೆಟ್ಟಿ ಸೇರಿದಂತೆ ಹಲವಾರು ಘಟಾನುಘಟಿ ಸಿನಿಮಾ ತಾರೆಯರು ಪಾಲ್ಗೊಂಡಿದ್ದರು ಗಾಯಕರಾದ ನವೀನ್ ಸಜ್ಜು, ಚಂದನ್ ಶೆಟ್ಟಿ ಮತ್ತು ಆಲೋಕ್ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮಗಳು ನಡೆದವು.
ಈ ಉತ್ಸವದಲ್ಲಿ ಮೆಹಂದಿ ಸ್ಪರ್ಧೆ, ಕೇಶ ವಿನ್ಯಾಸ ಸ್ಪರ್ಧೆ ಮತ್ತು ಆದರ್ಶ ದಂಪತಿಗಳ ಸ್ಪರ್ಧೆಗಳಂತಹ ವಿಭಿನ್ನ ಕಾರ್ಯಕ್ರಮಗಳು ಜನರ ಗಮನ ಸೆಳೆದವು. ಪ್ರತಿದಿನ ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಈ ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು.
ಉತ್ಸವಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ಉಚಿತ ಊಟದ ವ್ಯವಸ್ಥೆ ಮಾಡಲಾಗಿತ್ತು. ಪ್ರತಿದಿನ ಲಕ್ಷಾಂತರ ಜನರಿಗೆ ಊಟದ ವ್ಯವಸ್ಥೆ ಮಾಡುವುದು ಈ ಕಾರ್ಯಕ್ರಮದ ಬೃಹತ್ ಸವಾಲುಗಳಲ್ಲಿ ಒಂದಾಗಿತ್ತು.ಕನಕಪುರ ನಗರದಾದ್ಯಂತ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಇಡೀ ನಗರವು ಹಬ್ಬದ ವಾತಾವರಣದಲ್ಲಿತ್ತು.
ಈ ಉತ್ಸವದ ಹಿಂದೆ ಕೇವಲ ಮನೋರಂಜನೆಯಷ್ಟೇ ಅಲ್ಲದೆ, ಸ್ಥಳೀಯ ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕೆ ಚೈತನ್ಯ ನೀಡುವುದು ಡಿ.ಕೆ. ಶಿವಕುಮಾರ್ ಅವರ ಮುಖ್ಯ ಉದ್ದೇಶವಾಗಿತ್ತು. ಕನಕಪುರವನ್ನು ಸಾಂಸ್ಕೃತಿಕ ಹಬ್ ಆಗಿ ರೂಪಿಸುವ ಪ್ರಯತ್ನ ಇದಾಗಿತ್ತು.
ಇದರ ನಡುವೆ ಡಿ.ಕೆ.ಶಿವಕುಮಾರ್ ಅವರ ಬೆಂಬಲಿಗ ಅನೇಕ ಮಂದಿ ಕಾಂಗ್ರೆಸ್ ಶಾಸಕರು ಮತ್ತು ಮಂತ್ರಿಗಳು ಭಾಗವಹಿಸುವ ಮೂಲಕ ಗಮನದಲ್ಲಿ ಇಡೀ ಕನಕೋತ್ಸವದ ಹೈಲೈಟ್ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಶಿವಕುಮಾರ್ ಹೆಗ್ಡೆ. ಈ ಉತ್ಸವದ ಮೂಲಕ ಶಿವಕುಮಾರ್ ಅವರು ತಮ್ಮ ಪುತ್ರಿಯನ್ನು ಕ್ಷೇತ್ರದ ಜನತೆಗೆ ಅದ್ದೂರಿಯಾಗಿ ಪರಿಚಯಿಸಿಕೊಟ್ಟರು ಈ ಮೂಲಕ ತಮ್ಮ ರಾಜಕೀಯ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಗಳಿಗೆ ಉತ್ತರ ನೀಡಿದರು ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಅಷ್ಟೇ ಅಲ್ಲ ಮುಂಬರುವ ದಿನಗಳಲ್ಲಿ ಐಶ್ವರ್ಯ ಶಿವಕುಮಾರ್ ಹೆಗ್ಡೆ ಅವರು ರಾಜಕೀಯದಲ್ಲಿ ಸಕ್ರಿಯರಾಗುವ ಸೂಚನೆಗಳನ್ನು ನೀಡಿದರು.
Previous Articleಕಾನ್ಫಿಡೆಂಟ್ ರಾಯ್ ಸಾವಿನ ಕಾರಣ ಪತ್ತೆ!
Next Article ಮೈಲಾರ ಕಾರ್ಣಿಕ ಭವಿಷ್ಯದ ಅರ್ಥ ಗೊತ್ತಾ..?


4 Comments
mgm on line https://betmgm-play.com/ online casino mgm
Feel quicken deliveries thrilling and action time real in pulses energy high. In ignation casino, prosper and pulse. Feel and flourish!
Experience the exciting world of online gaming where endless fun awaits. Bovada Exclusive Bonus offers top slots and no-deposit bonuses for all players. With Bovada, enjoy unmatched wins and secure, reliable entertainment every day!
Play Big Bass Bonanza at top casinos! Claim Bigger Bass Bonanza big win free spins and start your bonanza.