Archives
    • March 2026
    • February 2026
    • January 2026
    • December 2025
    • November 2025
    • October 2025
    • September 2025
    • August 2025
    • July 2025
    • June 2025
    • May 2025
    • April 2025
    • March 2025
    • February 2025
    • January 2025
    • December 2024
    • November 2024
    • October 2024
    • September 2024
    • August 2024
    • July 2024
    • June 2024
    • May 2024
    • April 2024
    • March 2024
    • February 2024
    • January 2024
    • December 2023
    • November 2023
    • October 2023
    • September 2023
    • August 2023
    • July 2023
    • June 2023
    • May 2023
    • April 2023
    • March 2023
    • February 2023
    • January 2023
    • December 2022
    • November 2022
    • October 2022
    • September 2022
    • August 2022
    • July 2022
    • June 2022
    • May 2022
    • April 2022
    Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಕೆ.ಎನ್.ರಾಜಣ್ಣ ಎಂಬ ನಿಷ್ಠೂರವಾದಿ ಸಹಕಾರ ಜೀವಿ | KN Rajanna
    Trending

    ಕೆ.ಎನ್.ರಾಜಣ್ಣ ಎಂಬ ನಿಷ್ಠೂರವಾದಿ ಸಹಕಾರ ಜೀವಿ | KN Rajanna

    vartha chakraBy vartha chakraMarch 14, 20241 Comment4 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ನಾನು ಚಿಕ್ಕವನಿದ್ದಾಗ ಜನರು ಕಾಸಿಗಾಗಿ ಪರದಾಡುತ್ತಿದ್ದುದನ್ನು ನೋಡುತ್ತಿದ್ದೆ, ಬಡ ಜನರು ಶ್ರೀಮಂತರ ಬಳಿ ವಾಯಿದೆ ಬಡ್ಡಿಗೆ ಚಿನ್ನಾಭರಣಗಳನ್ನು ಅಡವಿಟ್ಟು, ನಿಗದಿಪಡಿಸಿದ ದಿನದೊಳಗೆ ಸಾಲ ತೀರಿಸಲಾಗದೆ ಆಭರಣಗಳನ್ನು ಕಳೆದುಕೊಳ್ಳುತ್ತಿದ್ದರು. ಕೃಷಿ ಸಾಲ ತೀರಿಸದವರ ಮನೆಗಳನ್ನು ಜಪ್ತಿ ಮಾಡಲಾಗುತ್ತಿತ್ತು. ಇದನ್ನೆಲ್ಲ ನೋಡಿ ನನ್ನ ಮನಸ್ಸು ಮರುಗುತ್ತಿತ್ತು. ರೈತರ, ರೈತ ಕಾರ್ಮಿಕರ, ನಗರದ ಬಡ ಜನರ ನೋವು ನಿವಾರಿಸಬೇಕೆನ್ನಿಸುತ್ತಿತ್ತು. ಸಹಕಾರಿ ಕ್ಷೇತ್ರದಿಂದಲೇ ಇದು ಸಾಧ್ಯ ಎನ್ನುವುದು ಬೆಳೆಯುತ್ತ ಬೆಳೆಯುತ್ತ ಅನುಭವಕ್ಕೆ ಆ ಮೂಲಕ ಅರಿವಿಗೆ ಬಂತು. ಹೀಗಾಗಿ ಸಹಕಾರಿ ಕ್ಷೇತ್ರ ನನ್ನ ಕರ್ಮ ಭೂಮಿಯಾಯಿತು” ಇದು ರಾಜ್ಯದ ಸಹಕಾರ ಮಂತ್ರಿ ನಿಷ್ಠೂರವಾದಿ ರಾಜಕಾರಣಿ ಕೆ.ಎನ್.ರಾಜಣ್ಣ ಅವರ ಮಾತು.
    ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಮೊಟ್ಟಮೊದಲ ಬಾರಿಗೆ ಮಂತ್ರಿಯಾಗಿ ತಮ್ಮ ಕ್ರಿಯಾಶೀಲ ಚಟುವಟಿಕೆ, ಇಲಾಖೆಯ ಬಗ್ಗೆ ಆಳವಾದ ಜ್ಞಾನ, ಜನ ಸಾಮಾನ್ಯರ ಬಗ್ಗೆ ಆಪ್ತವಾದ ಕಳಕಳಿ, ರಾಜಕೀಯದಲ್ಲಿ ಪ್ರಬುದ್ಧ ನಡವಳಿಕೆ,ನೇರ ಹಾಗೂ ನಿಷ್ಠೂರ ವ್ಯಕ್ತಿತ್ವ ಇದೇ ಕೆ.ಎನ್.ರಾಜಣ್ಣ ಅವರ ವ್ಯಕ್ತಿತ್ವ ರಾಜ್ಯದ ಸಹಕಾರಿ ರಂಗದ ಆಳ, ಉದ್ದಗಲಗಳನ್ನು ವ್ಯಾಪಿಸಿಕೊಂಡಿರುವ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಇದೇ ಸಹಕಾರಿ ಚಟುವಟಿಕೆಗಳ ಮೂಲಕವೇ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ ಅಧ್ಯಕ್ಷರಾಗಿ ಆಯ್ಕೆಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

    ಅಪೆಕ್ಸ್ ಬ್ಯಾಂಕ್‌ಗೆ ಎರಡನೇ ಸಲ ಆಯ್ಕೆಯಾಗಿದ್ದ ಮೊದಲ ಹಾಗೂ ಏಕೈಕ ಸಹಕಾರಿ ಇವರು ಎಂಬ ಹೆಗ್ಗಳಿಕೆಯಿದೆ.
    ಸಹಕಾರಿ ಆಂದೋಲನ, ಸ್ವಸಹಾಯ ಗುಂಪುಗಳ ಸಂರಚನೆ ಹಾಗೂ ಸಂಘಟನೆ, ಕೃಷಿ, ಸಾವಯವ ಕೃಷಿ, ಗ್ರಾಮೀಣಾಭಿವೃದ್ಧಿ ಹಾಗೂ ಸಮಾಜ ಸೇವೆ ಕೆ.ಎನ್. ರಾಜಣ್ಣನವರ ವಿಶೇಷ ಆಸಕ್ತಿಯ ಕ್ಷೇತ್ರಗಳಾಗಿವೆ.
    ತುಮಕೂರು ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್(ಡಿಸಿಸಿ)ಗೆ ಐದು ಅವಧಿಗೆ ಚುನಾಯಿತರಾಗಿದ್ದ ರಾಜಣ್ಣ ಬ್ಯಾಂಕ್‌ನ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದು ಅವರ ಜನಪ್ರಿಯತೆ ಹಾಗೂ ಕಾರ್ಯತತ್ಪರತೆಯ ಕೈಗನ್ನಡಿಯಾಗಿದೆ.
    ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಜಿಲ್ಲೆಯ ರೈತರ ಏಳಿಗೆ ಹಾಗೂ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ನಿರಂತರ ಶ್ರಮಿಸಿದ ಅವರು ವಿಧಾನ ಪರಿಷತ್ ಸದಸ್ಯರಾಗಿ ಹಾಗೂ ವಿಧಾನಸಭೆ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದು ಅವರ ಜನಪ್ರಿಯತೆಗೆ ಸಾಕ್ಷಿ.

    ಜನತಾ ಪರಿವಾರದ ಪ್ರಭಾವಿ ನಾಯಕರಾಗಿದ್ದ ರಾಜಣ್ಣ ನಂತರದಲ್ಲಿ ತಮ್ಮ ರಾಜಕೀಯ ನಿಷ್ಠೆ ಬದಲಿಸಿ,ಕಾಂಗ್ರೆಸ್ ನ ನಿಷ್ಠಾವಂತ ನಾಯಕರಾಗಿ ಹೊರ ಹೊಮ್ಮಿದ್ದಾರೆ.ಪರಿಶಿಷ್ಟ ವರ್ಗಕ್ಕೆ ಸೇರಿದ ಇವರು ಮೀಸಲು‌ ಕ್ಷೇತ್ರದ ಬದಲಿಗೆ ಸಾಮಾನ್ಯ ಕ್ಷೇತ್ರದಲ್ಲಿ ಆಯ್ಕೆಯಾಗುತ್ತಿರುವುದು ಇವರ ಜನಪ್ರಿಯತೆಗೆ ಸಾಕ್ಷಿ.
    ತುಮಕೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿಎಸ್ಸಿ ಪದವಿ, ನಂತರ ಕಾನೂನು ಪದವಿ ಪಡೆದ ರಾಜಣ್ಣ 1972 ರಿಂದಲೂ ಸಹಕಾರಿ ಆಂದೋಲನದಲ್ಲಿ ತೊಡಗಿಸಿಕೊಂಡು ಅಪಾರ ಬೆಂಬಲಿಗರು, ಅನುಯಾಯಿ ಗಳನ್ನು ಈ ಕ್ಷೇತ್ರದಲ್ಲಿ ದಾರಿ ತೋರಿಸಿ ಬೆಳೆಸಿದ್ದಾರೆ.
    ರಾಜ್ಯ ಸಹಕಾರಿ ಆಂದೋಲನದ ಅತ್ಯಂತ ಹಿರಿಯ ಹಾಗೂ ಸುದೀರ್ಘ ಅನುಭವವುಳ್ಳ ಇವರಿಗೆ ಕರ್ನಾಟಕ ಸರ್ಕಾರವು ಸಹಕಾರಿ ಕ್ಷೇತ್ರದಲ್ಲಿ ಕೊಡಮಾಡುವ ಅತ್ಯುನ್ನತ ಪ್ರಶಸ್ತಿಯಾದ “ಸಹಕಾರಿ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
    ಕೆ.ಎನ್.ರಾಜಣ್ಣನವರು ಭಾರತೀಯ ಸಹಕಾರಿ ಬ್ಯಾಂಕ್, ಮುಂಬೈನ (ಸಿಓಬಿಐ) ನಿರ್ದೇಶಕರಾಗಿ, ರಾಷ್ಟ್ರೀಕೃಷಿ ಮಾರುಕಟ್ಟೆ ಮಹಾಮಂಡಳ (ನ್ಯಾಫೆಡ್), ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.

    ಕೃಷಿಕ್ ಭಾರತಿ ಸಹಕಾರಿ ನಿ, (ಕ್ರಿಬ್‌ಕೊ)ದ ಸದಸ್ಯರಾಗಿ ಆಯ್ಕೆಯಾಗಿದ್ದರು, ತುಮಕೂರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್ತಿಗೆ ಭಾರೀ ಬಹುಮತದಿಂದ ಚುನಾಯಿತರಾಗಿದ್ದ ರಾಜಣ್ಣನವರು 1998ರಿಂದ 2004 ರವರೆಗೆ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ.
    ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಸರ್ಕಾರಿ ಗೋಶಾಲೆಗೆ ಬಂದ ಸುಮಾರು 7.35ಲಕ್ಷ ಜಾನುವಾರುಗಳಿಗೆ ಮೇವು ಒದಗಿಸಲು ರೂ.52.೦೦ಲಕ್ಷ ಮೊತ್ತವನ್ನು ಬಿಡುಗಡೆ ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
    ತುಮಕೂರು ಜಿಲ್ಲೆಯಲ್ಲಿ ಹಲವಾರು ಸಹಕಾರಿ ಸಂಸ್ಥೆಗಳು ಮತ್ತು ಸ್ವಸಹಾಯ ಗುಂಪುಗಳನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಹಾಗೂ ಸಮಾಜದ ಯಾರನ್ನೂ ತಲುಪದ ದಕ್ಕಲರು, ಹಂದಿ ಜೋಗಿಗಳು, ಹಕ್ಕಿಪಿಕ್ಕರು ಮೊದಲಾದ ಕಡು ಬಡವರಿಗೆ ಹಲವಾರು ಯೋಜನೆಗಳನ್ನು ರೂಪಿಸಿ ನೆರವು ನೀಡಿದ್ದಾರೆ.

    ರಾಜ್ಯ ಸರ್ಕಾರ ರಾಜ್ಯದ ಶಾಲಾ ಮಕ್ಕಳಿಗೆ ಉಚಿತವಾಗಿ ಶೂ, ಬ್ಯಾಗ್ ನೀಡುವ ಯೋಜನೆಯ ಕಾರಣಕರ್ತರು ಈ ರಾಜಣ್ಣನವರೇ ಆಗಿದ್ದಾರೆ,
    ರಾಜಣ್ಣನವರು ಸಹಕಾರಿ ಕ್ಷೇತ್ರದಲ್ಲಿ ಸ್ಥಳೀಯವಾಗಿ ಪಡೆದಿರುವ ಅನುಭವಗಳ ಜೊತೆಗೆ ಥೈಲಾಂಡ್, ಮಲೇಶಿಯಾ,
    ನ್ಯೂಜಿಲಾಂಡ್, ಚೀನಾ, ಫಿಲಿಪೈನ್ಸ್, ಸಿಂಗಾಪುರ್, ಅಮೇರಿಕಾ, ಕೊಲಂಬಿಯಾ, ಸ್ವಿಟ್ಜರ್‌ಲಾಂಡ್, ಜಪಾನ್, ಕೊರಿಯಾ, ದಕ್ಷಿಣ ಆಫ್ರಿಕಾ, ನೆದರ್‌ಲಾಂಡ್, ಆಸ್ಟೆಲಿಯಾ, , ಯುನೈಟೆಂಡ್ ಕಿಂಗ್ಡಮ್ ಮತ್ತು ಇಂಡೋನೇಶ್ಯಾ ಮೊದಲಾದ ದೇಶಗಳಿಗೆ ಭೇಟಿ ನೀಡಿ ಸಹಕಾರಿ ಸಮ್ಮೇಳನ, ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ.

    ಇಲ್ಲಿ ದಿನವೂ ಜನ ಜಾತ್ರೆ !
    ನಗರಕ್ಕೆ ಸಮೀಪದಲ್ಲಿರುವ ಶ್ರೀ ಸಿದ್ಧಗಂಗಾ ಮಠದಲ್ಲಿ ವರ್ಷಕ್ಕೊಮ್ಮೆ ಜಾತ್ರೆಯಾದರೆ, ಅಲ್ಲೇ ಎದುರಿನ ಕ್ಯಾತಸಂದ್ರದಲ್ಲಿರುವ ಕೆ.ಎನ್.ರಾಜಣ್ಣನವರ ಮನೆಯ ಮುಂದೆ ದಿನವೂ ಜನಜಾತ್ರೆ. ರಾಜಣ್ಣನವರು ಯಾವುದೇ ರಾಜಕೀಯ ಪಕ್ಷದಲ್ಲಿರಲಿ, ಅಧಿಕಾರದಲ್ಲಿರಲಿ ಇಲ್ಲದಿರಲಿ ಇಡೀ ಜಿಲ್ಲೆಯ ಜನರು ಅವರನ್ನು ಭೇಟಿಯಾಗಲು, ತಮ್ಮ ಕಷ್ಟ, ನೋವು, ಸಂಕಟಗಳನ್ನು ಹೇಳಿಕೊಳ್ಳಲು ಬಂದು ಕಾದು ನಿಲ್ಲುತ್ತಾರೆ. ಅವರು ಅಧಿಕಾರದಲ್ಲಿ ಇದ್ದ ದಿನಗಳಿಗಿಂತ ಮಾಜಿಯಾದ ಮೇಲೇ ಹೆಚ್ಚು ಜನರು ಬರುತ್ತಿದ್ದಾರೆ ಎಂದರೆ ಅಚ್ಚರಿ ಎನಿಸುವುದಿಲ್ಲವೇ. ತುಮಕೂರು ಜಿಲ್ಲೆಯ ಯಾವುದೇ ಹಾಲಿ ಮತ್ತು ಮಾಜಿ ಮಂತ್ರಿಗಳು, ಶಾಸಕರು ಅಥವಾ ಇನ್ನಾವುದೇ ಜನಪ್ರತಿನಿಧಿಗಳ ಮನೆಯ ಬಳಿ ಇಷ್ಟು ದೊಡ್ಡ ಪ್ರಮಾಣದ ಜನಸಂದಣಿಯನ್ನು ಕಾಣಲು ಸಾಧ್ಯವಿಲ್ಲ.

    ಬಂದ ಎಲ್ಲರನ್ನು ಗುರುತಿಸಿ ಹೆಸರು ಕರೆದು ಮಾತನಾಡಿಸುವ ರಾಜಣ್ಣನವರು, ವ್ಯವಸಾಯ ಸೇವಾ ಸಹಕಾರ ಸಂಘಗಳ ಮೂಲಕ ನೀಡುವ ಕೃಷಿ ಸಾಲಗಳಿಗಾಗಿ ಅರ್ಜಿ ಹಿಡಿದು ಬರುವವರಿಗೆ ಆದ್ಯತೆ ನೀಡುತ್ತಾರೆ. ಕಷ್ಟು ಸುಖ ಕೇಳುತ್ತಾರೆ. ಮಗಳ ಮದುವೆಗೋ, ಮಕ್ಕಳ ಫೀಜಿಗೋ, ನಾಮಕರಣಕ್ಕೋ, ತಿಥಿಗೋ ಖರ್ಚು ಮಾಡುವ ಬಗ್ಗೆಯೂ ಪುಟ್ಟ ತನಿಖೆ ಮಾಡಿ, ಹಣವನ್ನು ಕಳೆದುಕೊಳ್ಳಬೇಡಿ ಎಂದು ಕಿವಿಮಾತು ಹೇಳಿಕಳಿಸುತ್ತಾರೆ. ಗೃಹ ಕಚೇರಿಯ ಜನತಾ ದರ್ಶನ ಮುಗಿಸಿ, ಸ್ನಾನಕ್ಕೋ, ತಿಂಡಿಗೋ ಹೊರಡುವ ಮುನ್ನ ಎಲ್ಲರಿಗೂ ತಮ್ಮೊಂದಿಗೆ ಮಾತನಾಡಲು ಅವಕಾಶ ಸಿಕ್ಕಿದೆಯೋ ಇಲ್ಲವೋ ಎಂಬುದನ್ನು ಅವರೇ ಖುದ್ದು ಹೊರಬಂದು ನೋಡಿ ಖಚಿತಪಡಿಸಿಕೊಳ್ಳುತ್ತಾರೆ.

    ಮಂತ್ರಿಯಾದ ನಂತರದಲ್ಲಿ ಇವರ ಈ ಸೇವಾ ಕಾರ್ಯ ಇನ್ನೂ ವಿಸ್ತಾರಗೊಂಡಿದೆ.ಶಾಸಕರಾಗಿದ್ದ ವೇಳೆ ತುಮಕೂರಿನ ಜನ ಮಾತ್ರ ಇವರನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಈಗ ನೆರೆಯ ಹಾಸನದಿಂದ ಪ್ರತಿನಿತ್ಯ‌ ಜನರ ದಂಡೀ ಇವರ ಮನೆಯ ಮುಂದೆ ನೆರೆದಿರುತ್ತದೆ.
    ಇವರು ಬರಲಿದ್ದಾರೆ ಎಂಬ ಮಾಹಿತಿ ಸಿಕ್ಕರೆ ಸಾಕು ಹಾಸನದಲ್ಲಿ ಇವರ ಭೇಟಿಗೆ ಜನಜಾತ್ರೆಯೇ‌ ಇರುತ್ತದೆ.ಇವರು ಅಲ್ಲಿಗೆ ಭೇಟಿ ನೀಡಿದಾಗೆಲ್ಲಾ ಅನಧಿಕೃತ ಜನತಾದರ್ಶನ,ಮೊರೆ ಹೊತ್ತು‌ ಬಂದ ಜನರಿಗೆ ಸ್ಥಳದಲ್ಲೇ ಪರಿಹಾರ.ಸರ್ಕಾರದ ವತಿಯಿಂದ ಪರಿಹಾರ ನೀಡಲು ತಾಂತ್ರಿಕ ತೊಡಕಿದ್ದವರಿಗೆ ವೈಯುಕ್ತಿಕ ಪರಿಹಾರ ಖಚಿತ.ಆದರೆ,ತಾವು ಮಾಡಿದ ಸಹಾಯ ಮತ್ತೊಬ್ಬರಿಗೆ ಗೊತ್ತಾಗಬಾರದು ಎಂಬ ಸಂಕೋಚ.ಈ ವಿಷಯದಲ್ಲಿ ಪ್ರಚಾರದಿಂದ ಸದಾ ದೂರ.
    ಇನ್ನೂ ಜಿಲ್ಲಾ ಮಂತ್ರಿಯಾಗಿ ಇವರು ನಡೆಸುವ ಕೆಡಿಪಿ ಸಭೆಗಳು ಅಧಿಕಾರಿಗಳಿಗೆ ಸಿಂಹಸ್ವಪ್ನ.ಉಡಾಫೆ ಮನೋಭಾವದ ಅಧಿಕಾರಿಗಳ ಮೈ ಚಳಿ ಬಿಡಿಸುವುದರಲ್ಲಿ ಎತ್ತಿದ ಕೈ.ಹೀಗಾಗಿ ಇವರ ಸಭೆಗೆ ಬರುವ ಅಧಿಕಾರಿಗಳು ಸಂಪೂರ್ಣ ಅಧ್ಯಯನದ ಜೊತೆಗೆ ಎಲ್ಲಾ ದಾಖಲೆಗಳೊಂದಿಗೆ ಶಿಸ್ತಾಗಿ ಹಾಜರಾಗುತ್ತಾರೆ.ಇವರು ನೀಡುವ ಆದೇಶ,ಸೂಚನೆಗಳನ್ನು ತಕ್ಷಣವೇ ಪಾಲಿಸುತ್ತಾರೆ ಹೀಗಾಗಿ ಜನರಿಗೆ ಶೀಘ್ರದಲ್ಲೇ ಫಲಿತಾಂಶ ಸಿಗುತ್ತದೆ.ಹೀಗಾಗಿಯೇ ಇವರ ಇಲಾಖೆಯ ಬಗ್ಗೆ ಪ್ರತಿಪಕ್ಷ ಸದಸ್ಯರೂ ಸೇರಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

    Verbattle
    Verbattle
    Verbattle
    Karnataka KN Rajanna News Politics ಕಾಂಗ್ರೆಸ್ ಕಾನೂನು ಚಿನ್ನ ತುಮಕೂರು ಮದುವೆ ರಾಜಕೀಯ ಶಾಲೆ ಸಿದ್ದರಾಮಯ್ಯ ಹಾಸನ
    Share. Facebook Twitter Pinterest LinkedIn Tumblr Email WhatsApp
    Previous Articleಭಿನ್ನಮತದ ಧಗೆಗೆ ಬಿಜೆಪಿ ವಿಲವಿಲ | BJP
    Next Article ಬೆಂಗಳೂರಲ್ಲಿ ಗುಂಡಿನ‌ ಸದ್ದಿಗೆ ಬೆಚ್ಚಿದ ಜನತೆ | Bengaluru
    vartha chakra
    • Website

    Related Posts

    ರಾಜ್ಯದ 13 ಜಿಲ್ಲೆಗಳಲ್ಲಿ ಮಳೆ: ಸುಡುವ ಬಿಸಿಲಿಗೆ ತಂಪೆರೆದ ವರುಣ!

    March 18, 2026

    ಮಂತ್ರಿ ಸ್ಥಾನಕ್ಕೆ ಹಿರಿಯ ಶಾಸಕರ ಪಟ್ಟು

    March 18, 2026

    ಅಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೋಟಿಸ್

    March 18, 2026

    1 Comment

    1. Rktdbq on March 18, 2026 7:19 am

      Desbloqueie vitórias lendárias no Betano Casino https://betanogame.org/pt/. Novos usuários ganham até €500 mais 200 rodadas grátis. Seguro, emocionante e sempre recompensador.

      Reply

    Leave A Reply Cancel Reply

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ರಾಜ್ಯದ 13 ಜಿಲ್ಲೆಗಳಲ್ಲಿ ಮಳೆ: ಸುಡುವ ಬಿಸಿಲಿಗೆ ತಂಪೆರೆದ ವರುಣ!

    ಮಂತ್ರಿ ಸ್ಥಾನಕ್ಕೆ ಹಿರಿಯ ಶಾಸಕರ ಪಟ್ಟು

    ಅಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೋಟಿಸ್

    ಪ್ರಿಯಾಂಕ್ ಖರ್ಗೆ ಪ್ರಶ್ನೆಗೆ ತಬ್ಬಿಬ್ಬಾದ ಬಿಜೆಪಿ ಶಾಸಕರು

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • WilliamSkity on ಅವಿವಾಹಿತರಿಗೆ ಹೋಟೆಲ್ ರೂಂ ಇಲ್ಲ
    • Svejie cveti_xqKt on ಯಡಿಯೂರಪ್ಪ ಅವರನ್ನು ಅನುಕರಿಸುವ ವಿಜಯೇಂದ್ರ | Yediyurappa
    • WilliamSkity on ಕಾಂಗ್ರೆಸ್ ಸಂಸದ, ಶಾಸಕರಿಗೆ E.D. ಶಾಕ್.
    Latest Kannada News

    ರಾಜ್ಯದ 13 ಜಿಲ್ಲೆಗಳಲ್ಲಿ ಮಳೆ: ಸುಡುವ ಬಿಸಿಲಿಗೆ ತಂಪೆರೆದ ವರುಣ!

    March 18, 2026

    ಮಂತ್ರಿ ಸ್ಥಾನಕ್ಕೆ ಹಿರಿಯ ಶಾಸಕರ ಪಟ್ಟು

    March 18, 2026

    ಅಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೋಟಿಸ್

    March 18, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.