Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Acid ದಾಳಿ story
    ಸುದ್ದಿ

    Acid ದಾಳಿ story

    vartha chakraBy vartha chakraMay 14, 2022No Comments3 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು,ಮೇ.14- ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿ ಬಂಧಿತನಾಗಿ ಗುಂಡೇಟು ತಿಂದಿರುವ ನಾಗೇಶ್ ಅಲಿಯಾಸ್ ನಾಗೇಶ್ ಬಾಬು‌ ದಾಳಿಗೂ ಮುನ್ನ ಮಾಡಿದ ಸಂಚು ಬೆಚ್ಚಿ ಬೀಳಿಸುವಂತಿದೆ.!
    ಕಳೆದ 7 ವರ್ಷಗಳಿಂದಲೂ ಆ್ಯಸಿಡ್ ಸಂತ್ರಸ್ತೆಯ ಪರಿಚಯ ನಾಗೇಶ್ ಗಿದ್ದು ಆಕೆಯಿದ್ದ ಮನೆಯಲ್ಲೇ ಮತ್ತೊಂದು ಮನೆಯನ್ನು ಬಾಡಿಗೆಗೆ ಪಡೆದುಕೊಂಡಿದ್ದ. ಪ್ರೀತ್ಸೆ ಎನ್ನುತ್ತಾ ಹಿಂದೆ ಬಿದ್ದಿದ್ದ ಆತನಿಗೆ ಯುವತಿಯು ಮಾತ್ರ ನೀನು ಅಣ್ಣನಂತೆ ಇದ್ದೀಯ. ನಾ ನಿನ್ನ ಲವ್ ಮಾಡೋದಿಲ್ಲ ಎಂದು ಸಾರಿ ಸಾರಿ ಹೇಳಿದರೂ‌ ಅದನ್ನು ಕೇಳದೇ ಮೊಂಡು ತನವನ್ನು ನಾಗೇಶ್ ತೋರಿದ್ದ.
    ಕೊನೆಗೆ ನಾಗೇಶ್ ಮೊಂಡಾಟಕ್ಕೆ ಬೇಸತ್ತ ಯುವತಿ, ಮನೆಯವರಿಗೆ ವಿಷಯ ತಿಳಿಸಿದಾಗ, ನಾಗೇಶ್ ನನ್ನು ಆ ಮನೆಯಿಂದ ಖಾಲಿ ಮಾಡಿಸಿದ್ದಾರೆ.
    ಆದರೆ, ಅಲ್ಲಿಯೇ ಇದ್ದಂತ ಸ್ನೇಹಿತನೊಬ್ಬನ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದ ನಾಗೇಶ್, ಯುವತಿಯ ಬಗ್ಗೆ ಎಲ್ಲಾ ಮಾಹಿತಿಯನ್ನು ದಿನಂಪ್ರತಿ ಪಡೆದುಕೊಳ್ಳುತ್ತಿದ್ದ ಜೊತೆಗೆ ಅಕ್ಕನ ಮದುವೆ ನಿಶ್ಚಿಯದಲ್ಲೇ ಆಕೆಗೂ ವರ ಗೊತ್ತು ಮಾಡುವ ವಿಚಾರವನ್ನು ತಿಳಿದಿದ್ದಾನೆ.
    ಆ್ಯಸಿಡ್ ಖರೀದಿ ಹೇಗೆ:
    ಹೌಸ್ ಕೀಪಿಂಗ್ ಕೆಲಸಕ್ಕಾಗಿ ಆ್ಯಸಿಡ್ ಖರೀದಿಸುತ್ತಿದ್ದ ಕಂಪನಿಯೊಂದರ ಪರಿಚಯ ಈತನಿಗಿದ್ದು, ಆ ಕಂಪನಿಯವರು ಆ್ಯಸಿಡ್ ಖರೀದಿಗಾಗಿ ಇಂಡೆಂಟ್ ಹಾಕಿದಾಗ, ತಾನೇ ಖರೀದಿಸಿ ತರುವುದಾಗಿ ಹೇಳಿ 20 ಲೀಟರ್ ಕ್ಯಾನ್ ಜೊತೆಗೆ, ತಾನೂ ಒಂದೊಂದು ಲೀಟರ್ ನ ಎರಡು ಲೀಟರ್ ಪ್ರತ್ಯೇಕವಾಗಿ ಖರೀದಿಸಿದ್ದಾನೆ.
    ಹೀಗೆ ಏ. 20ರಂದು ಆ್ಯಸಿಡ್ ಖರೀದಿಸಿದ್ದ ಈತ, ಯುವತಿಯ ಮೇಲೆ ಆ್ಯಸಿಡ್ ಹಾಕುವ ಸಂಚು ಮಾಡಿದ್ದಾನೆ. ಕೊನೆಯ ಬಾರಿಗೆ ಕೇಳಲು ಏ. 27ರಂದು ಯುವತಿಯನ್ನು ಅಡ್ಡಗಟ್ಟಿ ಪ್ರೀತಿಸುವಂತೆ ಕೇಳಿದ್ದು, ನೀನು ನನ್ನ ಅಣ್ಣನ ರೀತಿಯಲ್ಲಿ ಇದ್ದೀಯ. ನಿನ್ನ ನಾ ಮದುವೆಯಾಗುವುದಿಲ್ಲ. ಪ್ರೀತಿಸುವುದು ಇಲ್ಲ ಎಂದು ಕಡ್ಡಿ ಮುರಿದಂತೆ ನಿರ್ಧಾರ ತಿಳಿಸಿದ್ದಾಳೆ.
    ದಾಳಿ ಮುನ್ಸೂಚನೆ:
    ಇದರಿಂದ ಆಕ್ರೋಶಗೊಂಡ ನಾಗೇಶ್, ಮರುದಿನ ಆ್ಯಸಿಡ್ ದಾಳಿ ಮಾಡಲು ನಿರ್ಧರಿಸಿ ಏಪ್ರಿಲ್ 28ರಂದು ಖರೀದಿಸಿ ಆ್ಯಸಿಡ್ ನ ಬಾಟಲಿ ಇಟ್ಟುಕೊಂಡು ಬೈಕ್ ನಲ್ಲಿ ಬೆಳಿಗ್ಗೆಯೇ ಸುಂಕದಕಟ್ಟೆಗೆ ಬಂದಿದ್ದಾನೆ.
    ಅಲ್ಲಿ ಕಾದು ಕುಳಿತು ಯುವತಿ ಕಚೇರಿಗೆ ತೆರಳುವ ಸಂದರ್ಭದಲ್ಲಿ ಕಚೇರಿಯ ಬಳಿಯಲ್ಲಿಯೇ ಆಕೆಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾನೆ.

    ಅಲ್ಲಿಂದ ಪರಾರಿಯಾಗಿ ನೇರವಾಗಿ ಸೆಷನ್ ಕೋರ್ಟ್, ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ತೆರಳಿ ತಾನು ಆ್ಯಸಿಡ್ ದಾಳಿ ಮಾಡಿ ಬಂದಿದ್ದೇನೆ. ನನಗೆ ಜಾಮೀನು ಬೇಕು ಎಂದಾಗ, ಇನ್ನೂ ಎಫ್ಐಆರ್ ಆಗಿರುವುದಿಲ್ಲ. ಪೊಲೀಸ್ ಠಾಣೆಗೆ ಹೋಗು, ಶರಣಾಗು ಎಫ್ಐಆರ್ ಆಗಲಿದೆ. ಆ ಬಳಿಕ ಜಾಮೀನಿಗೆ ಅರ್ಜಿ ಸಲ್ಲಿಸೋಣ ಎಂಬುದಾಗಿ ಸಲಹೆ ಮಾಡಿದ್ದಾರೆ.
    ಬೈಕ್ ಬಿಟ್ಟು ಬಸ್:
    ಈ ಸಲಹೆ ನನಗೆ ಉಪಯೋಗಕ್ಕೆ ಬರುವುದಿಲ್ಲ ಎನ್ನುವುದನ್ನು ಅರಿತ ಆತ, ಮ್ಯಾಜಿಸ್ಟ್ರೇಟ್ ಕೋರ್ಟ್ ಬಳಿಯಲ್ಲಿಯೇ ಬೈಕ್ ಬಿಟ್ಟು ಹೊಸಕೋಟೆ ಬಸ್ ಏರಿದ್ದಾನೆ. ಹೊಸಕೋಟೆಯ ಬಳಿಯಲ್ಲಿ ಯಾವುದಾದರೂ ಕೆರೆಗೆ ಬಿದ್ದು ಆತ್ಮಹತ್ಯೆ ನಿರ್ಧಾರವನ್ನು ಮಾಡಿ ತೆರಳಿದ್ದಾನೆ. ನಡುವೆ ಮನಸ್ಸು ಬದಲಿಸಿ, ಅಲ್ಲಿಂದ ತಿರುವಣ್ಣಾಮಲೈಗೆ ತೆರಳಿದ್ದಾನೆ. ಅಲ್ಲಿನ ದೇವಾಲಯದಲ್ಲಿ ಕಾವಿಧರಿಸಿ, ಸ್ವಾಮೀಜಿಯ ರೀತಿಯಲ್ಲಿ ವೇಶಮರೆಸಿಕೊಂಡಿದ್ದಾನೆ.
    ಈ ದೇವಾಲಯದಲ್ಲಿ ಹೀಗೆ ನೂರಾರು ಮಂದಿ ಇರುವ ವಿಚಾರ ತಿಳಿದು ಪೊಲೀಸರು, ಆ ದೇವಾಲಯದಲ್ಲಿ ಆ್ಯಸಿಡ್ ದಾಳಿಕೋರ ನಾಗೇಶ್ ಬಗ್ಗೆ ಪ್ರಕಟಣೆ ಇರುವ ಪೋಟೋ ಸಹಿತ ಕರಪತ್ರ ಹಚ್ಚಿ ಬಂದಿದ್ದಾರೆ.
    ಆಟೋ ಚಾಲಕನ ಸುಳಿವು:
    ಕರಪತ್ರದ ಪೋಟೋದಲ್ಲಿನ ಪೋಟೋ ಹಾಗು ದೇವಾಲಯದಲ್ಲಿ ಸ್ವಾಮೀಜಿ ವೇಷಧರಿಸಿ ಧ್ಯಾನದಲ್ಲಿ ಕುಳಿತ ವ್ಯಕ್ತಿಯೊಬ್ಬನಿಗೆ ಹೋಲಿಕೆ ಕಂಡು ಬಂದಿದ್ದನ್ನು ಗಮನಿಸಿದಂತ ಆಟೋ ಚಾಲಕನೊಬ್ಬ, ಪೊಲೀಸರು ನೀಡಿದ್ದ ನಂಬರ್ ಗೆ ಆತನ ಪೋಟೋ ತೆಗೆದು ವಾಟ್ಸಾಪ್ ಮಾಡಿದ್ದಾರೆ.
    ಪೋಟೋ ನೋಡಿದಂತ ಪೊಲೀಸರಿಗೆ ಆತನ ಕೈ ಕೂಡ ಆ್ಯಸಿಡ್ ದಾಳಿಯ ವೇಳೆ ಸುಟ್ಟಿರುವ ಗುರುತು ಪತ್ತೆಯಾಗಿದ್ದು, ಕೂಡಲೇ ಸ್ಥಳಕ್ಕೆ ತೆರಳಿದ್ದಾರೆ. ಆತನ ಬಳಿಯಲ್ಲೇ ಧ್ಯಾನಕ್ಕೆ ಕುಳಿತವರಂತೆ ಕುಳಿತು, ಏನ್ ಹೆಸರು, ಎಲ್ಲಿಂದ ಬಂದಿದ್ದು ಹೀಗೆಲ್ಲಾ ಕೇಳಿ ಆತನ ಬಳಿ ಯಾವುದೇ ಶಸ್ತ್ರಾಸ್ತ್ರ ‌ಇಲ್ಲದಿರುವುದನ್ನು ಖಚಿತ ಪಡಿಸಿದ್ದಾರೆ.
    ಸ್ಥಳೀಯರ ವಿರೋಧ:
    ಆರಂಭದಲ್ಲಿ ಯಾವುದೇ ಮಾಹಿತಿ ಬಿಚ್ಚಿಟ್ಟಿಲ್ಲ. ಪೊಲೀಸ್ ಭಾಷೆಯಲ್ಲಿ ಜೋರಾಗಿ ಕೇಳಿದಾಗ ತನ್ನ ಹೆಸರು ನಾಗೇಶ್ ಎಂಬುದಾಗಿ ತಿಳಿಸಿದ್ದಾನೆ. ನಾಗೇಶ್ ಎಂದು ಬಾಯ್ಬಿಟ್ಟ ಬಳಿಕ ಆತನನ್ನು ಪೊಲೀಸರು ವಶಕ್ಕೆ ಪಡೆದಾಗ, ಅಲ್ಲಿನ ಸ್ಥಳೀಯರು ವಿರೋಧ ವ್ಯಕ್ತ ಪಡಿಸಿದ್ದಾರೆ. ಈ ವೇಳೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಅಲ್ಲಿನ ಪೊಲೀಸರ ಜೊತೆ ಸ್ಥಳಕ್ಕೆ ತೆರಳಿ, ಅಲ್ಲಿನವರಿಗೆ ಮನವೊಲಿಕೆ ಮಾಡಿಕೊಟ್ಟ ನಂತರ ಬೆಂಗಳೂರಿಗೆ ತಿರುವಣ್ಣಾಮಲೈನಿಂದ ನಾಗೇಶ್ ನನ್ನು ಹೆಡೆಮುರಿಕಟ್ಟಿ ಹಿಡಿದು ತರಲಾಗಿದೆ. ಹೀಗೆ ಕೊನೆಗೂ ಆ್ಯಸಿಡ್ ದಾಳಿಕೋರ ನಾಗೇಶ್ ನನ್ನು ಪೊಲೀಸರು ಬಂಧಿಸಿದ್ದು ರೋಚಕ ಕತೆಯಾಗಿದೆ.
    50ಸಾವಿರ ಬಹುಮಾನ:
    ನಾಗೇಶ್ ಇದೇ ಮೊದಲ ಬಾರಿಗೆ ಯುವತಿಯ ಮೇಲೆ ಆ್ಯಸಿಡ್ ದಾಳಿ ಮಾಡೋದಕ್ಕೆ ಆ್ಯಸಿಡ್ ಖರೀದಿಸಿಲ್ಲ. ಈ ಹಿಂದೆ 2020ರಲ್ಲಿಯೇ ಆತ ಖರೀದಿಸಿದ ಮಾಹಿತಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ವಿಶೇಷವೆಂದರೆ, ತನ್ನ ಯಾವುದೇ ಸುಳಿವು ಸಿಗದಿರಲಿ ಎಂದು ನಾಗೇಶ್ ಆ್ಯಸಿಡ್ ದಾಳಿ ಬಳಿಕ ಮೊಬೈಲ್, ಲ್ಯಾಪ್ ಟಾಪ್ ಯಾವುದನ್ನು ಬಳಸಿಲ್ಲ.
    ಒಟ್ಟು10 ಪೊಲೀಸ್ ತಂಡಗಳ 50 ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ದಾಳಿಕೋರನನ್ನು ಬಂಧಿಸುವಲ್ಲಿ ಶ್ರಮಿಸಿದ್ದು ಅವರಿಗೆಲ್ಲಾ ನಗರ ಪೊಲೀಸ್ ಕಮೀಷನರ್ ಕಮಲ್ ಪಂತ್ ಧನ್ಯವಾದ ತಿಳಿಸಿದ್ದಾರೆ.
    ಜೊತೆಗೆ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ 50ಸಾವಿರ ನಗದು ಬಹುಮಾನ ನೀಡಿ, ಗೌರವಿಸಿದ್ದಾರೆ.ಈ‌ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಪಶ್ಚಿಮ ವಿಭಾಗದ ಡಿಸಿಪಿ ಡಾ. ಸಂಜೀವ್ ಪಾಟೀಲ್ ಕಾಮಾಕ್ಷಿಪಾಳ್ಯ ಇನ್ಸ್‌ಪೆಕ್ಟರ್ ಪ್ರಶಾಂತ್ ಅವರಿದ್ದರು.

    Verbattle
    Verbattle
    Verbattle
    acid atack acid attack from nagesh
    Share. Facebook Twitter Pinterest LinkedIn Tumblr Email WhatsApp
    Previous Articleಪಾರ್ವತಮ್ಮ ರಾಜ್ ಕುಮಾರ್ ಸಹೋದರಿ ನಿಧನ
    Next Article ಬಿಜೆಪಿ ಶಕ್ತಿ ಪ್ರದರ್ಶನ…
    vartha chakra
    • Website

    Related Posts

    ಹಿರಿಯ ಪತ್ರಕರ್ತ ಪಿ. ರಾಮಯ್ಯ ನಿಧನ: ಮಾಧ್ಯಮ ಲೋಕಕ್ಕೆ ತುಂಬಲಾರದ ನಷ್ಟ

    February 11, 2026

    ಸಚಿವ ಬೈರತಿ ಸುರೇಶ್ ಕಚೇರಿಯಲ್ಲಿ ಕಳ್ಳತನ.

    February 10, 2026

    ಬೆಂಗಳೂರು ಮೆಟ್ರೋ ದರ ಏರಿಕೆ, ಕೇಂದ್ರ – ರಾಜ್ಯ ಸರ್ಕಾರದ ನಡುವೆ ತೀವ್ರಗೊಂಡ ಜಿದ್ದಾಜಿದ್ದಿ

    February 10, 2026

    Comments are closed.

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ನುಡಿದಂತೆ ನಡೆದ 1000 ದಿನ: ಕನ್ನಡಿಗರ ‘ಕೈ’ಹಿಡಿದ ಕಾಂಗ್ರೆಸ್ ಸರ್ಕಾರ!

    ಡೆಡ್ಲಿ ಡೀಲ್: ಅಮೆರಿಕಾದ ಮುಂದೆ ಮಂಡಿ ಊರಲಿದೆಯೇ ಭಾರತ..?

    ಜೋರಾಗಿ ಕೆಮ್ಮೋದು ತಪ್ಪಾ..?

    ಹಿರಿಯ ಪತ್ರಕರ್ತ ಪಿ. ರಾಮಯ್ಯ ನಿಧನ: ಮಾಧ್ಯಮ ಲೋಕಕ್ಕೆ ತುಂಬಲಾರದ ನಷ್ಟ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • LinwoodGah on ಸಿದ್ದರಾಮಯ್ಯ ರಾಜೀನಾಮೆ ಕೊಡಲ್ಲ.
    • LinwoodGah on ಡಿಸಿಎಂ ಶಿವಕುಮಾರ್ ಗೆ ಖರ್ಗೆ ಕೊಟ್ಟ ಸಂದೇಶ ಏನು ಗೊತ್ತಾ?
    • Glennhof on ಎದೆ ನಡುಗಿಸಿದ ಭೀಕರ ಹತ್ಯೆ.
    Latest Kannada News

    ನುಡಿದಂತೆ ನಡೆದ 1000 ದಿನ: ಕನ್ನಡಿಗರ ‘ಕೈ’ಹಿಡಿದ ಕಾಂಗ್ರೆಸ್ ಸರ್ಕಾರ!

    February 11, 2026

    ಡೆಡ್ಲಿ ಡೀಲ್: ಅಮೆರಿಕಾದ ಮುಂದೆ ಮಂಡಿ ಊರಲಿದೆಯೇ ಭಾರತ..?

    February 11, 2026

    ಜೋರಾಗಿ ಕೆಮ್ಮೋದು ತಪ್ಪಾ..?

    February 11, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.