Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ‘ಕನ್ನಡತಿ’ ಯಾಕೆ ಹಿಂಗಾಡುತಿ?
    ಮನರಂಜನೆ

    ‘ಕನ್ನಡತಿ’ ಯಾಕೆ ಹಿಂಗಾಡುತಿ?

    vartha chakraBy vartha chakraFebruary 5, 2023Updated:March 20, 202354 Comments1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಕಲರ್ಸ್ ‘ಕನ್ನಡತಿ’ (Kannadathi, Colors Kannada) ಮುಗಿದಿದೆ. ಸರಿಗನ್ನಡಂ ಗೆಲ್ಗೆ ಪಾಠಶಾಲೆ ಕದ ಹಾಕಿದೆ. ಧಾರಾವಾಹಿಗಳಲ್ಲಿ ಕನ್ನಡದ ಮುಖವಾಗಿ, ತನ್ಮೂಲಕ ಬರಹಗಾರ್ತಿಯೂ ಆಗಿ, ಒಂದೆರಡು ಪುಸ್ತಕ ಪ್ರಕಟಿಸಿ, ಇನ್ನೇನು ಸಾಹಿತಿಯ ಸ್ಥಾನಕ್ಕೆ ಬಡ್ತಿ ಹೊಂದಬೇಕಿದ್ದ ನಾಯಕಿ ರಂಜನಿ ರಾಘವನ್ (Ranjani Raghavan) ಮುಂದೇನು ಅಂತ ಯೋಚಿಸುತ್ತಿದ್ದಾರಂತೆ. ಇಲ್ಲ, ಇದು ಮುಗಿದುಹೋಗಬಾರದು. ಕನ್ನಡತಿ ಇನ್ನೂ ಮುಂದುವರಿಯಬೇಕು. ಭಾಗ 2 ಬಂದರೂ ಸರಿ ಅಂತ ಅಭಿಮಾನಿಗಳು ಮೇಲಿಂದ ಮೇಲೆ ಆಗ್ರಹಿಸುತ್ತಿದ್ದಾರಂತೆ. ಹೀಗಾಗಿ ಕಲರ್ಸ್ ವಾಹಿನಿಯ ಕನ್ನಡತಿ ಬಾವುಟ ಮತ್ತೆ ಹಾರಲಿದೆ ಎಂಬ ಗಾಳಿಸುದ್ದಿ ಇದೆ.

    `ಕನ್ನಡತಿ’ ಒಂದು ಧಾರಾವಾಹಿಯಾಗಿ ತನ್ನ ಛಾಪು ಮೂಡಿಸಿದ್ದು ನಿಜ. ಆದರೆ ಬಲ್ಲವರ ಪ್ರಕಾರ ಅದು ಕನ್ನಡದ ಹೆಸರು ಹೇಳಿಕೊಂಡು ಮನರಂಜನೆ ಮಾರುಕಟ್ಟೆಯಲ್ಲಿ ಮಾರಾಟವಾದ ಇನ್ನೊಂದು  ಸರಕು ಮಾತ್ರ. ಭುವಿ ಕನ್ನಡ ಶಿಕ್ಷಕಿ. ಅವಳ ಸಂಭಾಷಣೆಗಳು ಅಚ್ಚಗನ್ನಡದಲ್ಲಿ ಇರುತ್ತಿದ್ದವು ಎಂಬುದನ್ನು ಬಿಟ್ಟರೆ ಕನ್ನಡಕ್ಕೆ ಧಾರಾವಾಹಿಯ ಕೊಡುಗೆ ಅಂಥದ್ದೇನಿಲ್ಲ. ಉಳಿದ ಕಥೆ ಚರ್ವಿತ ಚರ್ವಣ. ಭಾಷೆಯ ಅರಿವಿಲ್ಲದವರ ಬದುಕಿನಲ್ಲಿ ಕನ್ನಡದ ಬೆಳಕು ಹಚ್ಚಿದೆ ಎನ್ನಲಾದ ಸರಿಗನ್ನಡಂ ಗೆಲ್ಗೆಯಲ್ಲಿ ಕೆಲವೊಮ್ಮೆ ಆಭಾಸಗಳೂ, ಅಪ್ರಾಸಂಗಿಕ ವಿಶ್ಲೇಷಣೆಗಳೂ ಹೇರಳವಾಗಿದ್ದವು. ಹಾಗಾಗಿ ಅದೊಂದು ಹೊಸ ಪ್ರಯೋಗವಾಯಿತೇ ವಿನಃ ಕನ್ನಡಕ್ಕಾಗಲಿ ವೀಕ್ಷಕರಿಗಾಗಲಿ ಏನೂ ಪ್ರಯೋಜನವಾಗಲಿಲ್ಲ.

    ‘ಕನ್ನಡತಿ’ ನಾಯಕಿ ರಂಜನಿ ರಾಘವನ್ ಗೆ ಧಾರಾವಾಹಿ ಮುಂದುವರಿಯಲಿ ಎನ್ನುವ ಆಸೆ ಇದೆ; ನಾಯಕ ಕಿರಣ್ ರಾಜ್ (Kiran Raj) ಗೆ ಅಂಥ ಆಸೆ ಇಲ್ಲವಂತೆ ಎಂಬುದು ಸಧ್ಯದ ಸುದ್ದಿ. ಅಪರೂಪಕ್ಕೆ ಒಂದು ಧಾರಾವಾಹಿ ಜನರು ‘ಛೀ ಥೂ, ಏನು ಎಳಿತಾರಪ್ಪ, ಕಥೆಯೇ ಇಲ್ಲ’ ಎನ್ನುವುದರೊಳಗೆ ಮುಕ್ತಾಯಗೊಂಡಿದ್ದು ಆರೋಗ್ಯಕರ ಬೆಳವಣಿಗೆ. ಹಾಗಾಗಿ ವೀಕ್ಷಕರ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಕನ್ನಡತಿ ಭಾಗ 2 ಬೇಕೋ ಬೇಡವೋ ಎಂಬ ಬಗ್ಗೆ ಆರೋಗ್ಯಕರ ಚರ್ಚೆ ನಡೆಯಬೇಕಿದೆ!

    #kannada Bangalore Colors Kannada Entertainment Kannadathi kannadati serial colorskannada Kiran Raj Ranjani Raghavan tv serial tv soap ಆರೋಗ್ಯ ಕನ್ನಡತಿ ಕಲರ್ಸ್ ಕಿರಣ್ ರಾಜ್ ಧಾರಾವಾಹಿ ರಂಜನಿ ರಾಘವನ್ ಶಾಲೆ
    Share. Facebook Twitter Pinterest LinkedIn Tumblr Email WhatsApp
    Previous Articleನಕಲಿ ಚಿನ್ನ ಕೊಟ್ಟು ಅಸಲಿ ಚಿನ್ನ ದೋಚಿದ ಅಜ್ಜಿ ಗ್ಯಾಂಗ್
    Next Article BJP ಅಧಿಕಾರಕ್ಕೆ ಬಂದರೆ 8 DCM!
    vartha chakra
    • Website

    Related Posts

    ಎಚ್ಚೆತ್ತ ರಾಜ್ಯ ಸರ್ಕಾರ

    December 12, 2025

    ಟ್ರೆಂಡ್ ಆಗ್ತಿದೆಯಾ ಮದುವೆಗೆ ಮುಂಚೆ ಪ್ರೆಗ್ನೆಂಟ್?

    December 12, 2025

    ಜಗತ್ತಿನ ಅತಿ ದೊಡ್ಡ ರಾಷ್ಟ್ರಧ್ವಜ ಅನಾವರಣ

    December 9, 2025

    Leave A Reply Cancel Reply

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಎಚ್ಚೆತ್ತ ರಾಜ್ಯ ಸರ್ಕಾರ

    ಟ್ರೆಂಡ್ ಆಗ್ತಿದೆಯಾ ಮದುವೆಗೆ ಮುಂಚೆ ಪ್ರೆಗ್ನೆಂಟ್?

    ಚನ್ನರಾಜ ಹಟ್ಟಿಹೊಳಿ ಹಾಕಿದ ಪೋಸ್ಟ್ ನಲ್ಲಿ ಏನಿದೆ ಗೊತ್ತಾ?

    ಜಗತ್ತಿನ ಅತಿ ದೊಡ್ಡ ರಾಷ್ಟ್ರಧ್ವಜ ಅನಾವರಣ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • playboy888_sgOn on ಮುರುಘಾ ಶರಣರ ವಿರುದ್ಧ ಆರೋಪ ಪಟ್ಟಿ
    • kypit kyrsovyu_ivOl on ಆಚಾರವಿಲ್ಲದ ನಾಲಿಗೆ- ರಾಮಲಿಂಗಾರೆಡ್ಡಿ ಕಿಡಿ ಕಿಡಿ | Anantkumar Hedge
    • kypit kyrsovyu_hwOn on ಮಗನನ್ನು ಕೊಂದ ತಾಯಿ ಮಾನಸಿಕ ರೋಗಿ ಅಲ್ಲ| Suchana Seth
    Latest Kannada News

    ಎಚ್ಚೆತ್ತ ರಾಜ್ಯ ಸರ್ಕಾರ

    December 12, 2025

    ಟ್ರೆಂಡ್ ಆಗ್ತಿದೆಯಾ ಮದುವೆಗೆ ಮುಂಚೆ ಪ್ರೆಗ್ನೆಂಟ್?

    December 12, 2025

    ಚನ್ನರಾಜ ಹಟ್ಟಿಹೊಳಿ ಹಾಕಿದ ಪೋಸ್ಟ್ ನಲ್ಲಿ ಏನಿದೆ ಗೊತ್ತಾ?

    December 12, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸಿಎಂ ವಿಮಾನಯಾನ ಬಳಕೆಗೆ 47 ಕೋಟಿ ಖರ್ಚು #varthachakra #siddaramaiah #helicopter #airtravel #costs #news
    Subscribe