ಕಾರವಾರ,ಆ.21- ಬ್ರೆಡ್ ತರಲು ಅಂಗಡಿಗೆ ಹೋಗಿದ್ದ ಬಾಲಕನನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಪಹರಿಸಿರುವ ಘಟನೆ ಭಟ್ಕಳ ಪಟ್ಟಣದ ಆಜಾದ್ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಅಪರಿಚಿತರು ಕಾರಿನಲ್ಲಿ ಬಂದು ಬಾಲಕನನ್ನು ಅಪಹರಿಸಿದ್ದು ಪ್ರಕರಣ ದಾಖಲಿಸಿರುವ ಭಟ್ಕಳ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ತೀವ್ರ ಶೋಧ ಕೈಗೊಂಡಿದ್ದಾರೆ.
ಅಲಿ ಇಸ್ಲಾಂ ಸಾದಾ(8) ನಾಪತ್ತೆಯಾಗಿರುವ ಬಾಲಕನಾಗಿದ್ದಾನೆ. ಸಂಜೆ ವೇಳೆ ಅಲಿ ಇಸ್ಲಾಂ ಸಾದಾ ಬ್ರೆಡ್ ತರಲು ಅಂಗಡಿಗೆ ಹೋಗಿದ್ದನು. ಅಂಗಡಿಗೆ ಹೋದವನು ವಾಪಸ್ ಬರದಿದ್ದರಿಂದ ಆತಂಕಗೊಂಡ ಕುಟುಂಬಸ್ಥರಿಂದ ಹುಡುಕಾಟ ನಡೆಸಿದ್ದಾರೆ.
ಅಕ್ಕಪಕ್ಕದ ಮನೆಗಳ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ ವೇಳೆ ಬೆಳಕಿಗೆ ಬಂದ ಅಪಹರಣ ಆಗಿರುವುದು ಖಚಿತವಾಗಿದೆ. ಬಾಲಕ ನಡೆದು ಹೋಗುವ ವೇಳೆ ಅಪರಿಚಿತರು ಕಾರಿನಲ್ಲಿ ಬಂದು ಎಳೆದೊಯ್ದಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ಅಪಹರಣದ ದೃಶ್ಯ ಸೆರೆಯಾಗಿದೆ.
ಬಾಲಕನನ್ನು ಅಪಹರಣ ಮಾಡಿದ ಬಳಿಕ ಆಜಾದ್ ನಗರದ ಮೊದಲ ಕ್ರಾಸ್ನಲ್ಲಿ ಜಾಲಿ ಕಡೆಗೆ ಕಾರು ಹೋಗಿದೆ. ಬಾಲಕನ ಕುಟುಂಬಸ್ಥರಿಂದ ಭಟ್ಕಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Previous Articleರವಿಚಂದ್ರನ್ ಮಗನ ಮದುವೆ ಆಯ್ತು..
Next Article ಜೈಪುರ ಕ್ಯಾಸಿನೋದಲ್ಲಿ ಕರ್ನಾಟಕದ ಅಧಿಕಾರಿಗಳು..