Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಕನ್ಯೆ ನೋಡಲು ಹೋಗಬೇಕಿದ್ದವನು ಕೊಲೆಯಾದ, ಕುರಿಕಾಯಲು ಹೋಗಬೇಕಿದ್ದವನು ಕೊಲೆಗೈದ!
    ಸುದ್ದಿ

    ಕನ್ಯೆ ನೋಡಲು ಹೋಗಬೇಕಿದ್ದವನು ಕೊಲೆಯಾದ, ಕುರಿಕಾಯಲು ಹೋಗಬೇಕಿದ್ದವನು ಕೊಲೆಗೈದ!

    vartha chakraBy vartha chakraJuly 1, 2022Updated:July 1, 2022No Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಗದಗ: ಹಣದ ವ್ಯವಹಾರ ಹಿನ್ನೆಲೆ ಅಣ್ಣತಮ್ಮಂದಿರನ್ನೇ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಆಳು ಕೊಲೆಗೈದ ಘಟನೆ ಶಿರಹಟ್ಟಿ ತಾಲೂಕಿನ ಕೇರಹಳ್ಳಿ ಗ್ರಾಮದಲ್ಲಿ ನಡೆದಿದೆ.
    ಮಾಂತೇಶ್ ಮಾಚನಹಳ್ಳಿ (28) ಫಕಿರೇಶ್ ಮಾಚನಹಳ್ಳಿ(17) ಕೊಲೆಗೀಡಾಗಿದ್ದಾರೆ.
    ಮಂಜುನಾಥ್ ದೆಸಳ್ಳಿ(38) ಕೊಲೆ ಮಾಡಿದ ಆರೋಪಿ ಎನ್ನಲಾಗಿದ್ದು, ನಸುಕಿನ ಜಾವ ದೊಣ್ಣೆಯಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗುತ್ತಿದೆ.

    ಆದರೆ ಹಲವು ಅಂಶಗಳಿಂದ ಈ ಘಟನೆ ಅನುಕಂಪ ಹಾಗು ಅಚ್ಚರಿಗೆ ಕಾರಣವಾಗಿದೆ. ಹೌದು, ಅಂದುಕೊಂಡಂತೆ ಆಗಿದ್ದರೆ ಇಂದು ಬೆಳಗಾಗೋವಷ್ಟರಲ್ಲಿ ಕೊಲೆಯಾದ ವ್ಯಕ್ತಿ ಮಹಾಂತೇಶ್, ಕನ್ಯೆ ನೋಡಲು ಹೋಗಬೇಕಿತ್ತು. ಆದರೆ ವಿಧಿಯಾಟ ಬೇರೆಯದ್ದೆಯಾಗಿತ್ತು. ತಮ್ಮ ಮಗಳನ್ನು ನೋಡಲು ಬರುತ್ತಾರೆ ಎಂಬ ಸಂಭ್ರಮದಲ್ಲಿದ್ದ ಆ ಮನೆಯಲ್ಲಿಯೂ ಕೊಂಚ ನೋವು ಸಹಜವಲ್ಲವೆ? ಇನ್ನು ಮೃತನ ಮನೆಯಲ್ಲಂತೂ ದುಖಃ ಮುಗಿಲು ಮುಟ್ಟಿದೆ.

    ಅಷ್ಟಕ್ಕೂ ಕೊಲೆಗೈದ ವ್ಯಕ್ತಿ ಮಹಾಂತೇಶ್ ಮನೆಯಲ್ಲಿಯೇ ಕುರಿ ಮೇಯಿಸಿಕೊಂಡು ಇದ್ದವನು. ಈಗಾಗಲೇ ಕೆಲಸಕ್ಕೆ ಸೇರುವುದು ಬಿಡೋದು ಹತ್ತು ಹಲವು ಬಾರಿ ನಡೆದೆ ಇತ್ತು. ಆದರೂ ಮಹಾಂತೇಶ್, ಈ ಬಾರಿಯೂ ಕೊಲೆ ಆರೋಪಿ ಮಂಜುನಾಥ್ ನನ್ನು ನಿನ್ನೆ ರಾತ್ರಿ ಮನೆಗೆ ಕರೆದುಕೊಂಡು ಬಂದು ಮತ್ತೆ ಕೆಲಸಕ್ಕೆ ಹೋಗುವಂತೆ ಹೇಳಿದ್ದಾನೆ. ಎಲ್ಲರು ಒಟ್ಟಿಗೆ ರಾತ್ರಿ ಚಿಕನ್ ತಿಂದು ಮಲಗಿದ್ದಾರೆ.
    ನಾನು ನಿನ್ನನ್ನು ಕುರಿಕಾಯಲು ಬಿಟ್ಟು, ಕನ್ಯೆ ನೋಡಿ ಬರುತ್ತೇನೆ ಎಂದು ಆರೋಪಿ ಮಂಜುನಾಥನಿಗೆ ಹೇಳಿ ಮಲಗಿದ ಮಹಾಂತೇಶ್, ಬೆಳಿಗ್ಗೆ ಏಳಲೇ ಇಲ್ಲ. ಜೊತೆಗೆ ಇನ್ನೆಂದು ಏಳುವುದೇ ಇಲ್ಲ. ಇನ್ನು ಮಗಳ ನೋಡಲು ಬರಬೇಕಿದ್ದ ಈ ಹುಡುಗ ಎಂದೂ ಆ ಮನೆಗೆ ಹೋಗಲು ಆಗುವುದೇ ಇಲ್ಲ. ಕೊನೆಗೂ ಮಹಾಂತೇಶ ಮರಳಿ ಬಾರದ ಲೋಕಕ್ಕೆ ತೆರಳಿದ. ಜೊತೆಗೆ ತನ್ನ ಸೋದರ ಸಂಬಂಧಿ ಇಗಿನ್ನು 17ವರ್ಷದ ಫಕ್ಕೀರೇಶ ಕೂಡ ಕೊಲೆಯಾಗಿದ್ದಾನೆ. ಬದುಕಿನಲ್ಲಿನ್ನು ಬಾಳಿ ಬೆಳಗಬೇಕಾದ ಫಕ್ಕೀರೇಶನ ಬದುಕು ಅರಳುವ ಮುನ್ನವೇ ಬಾಡಿದಂತಾಗಿದೆ.
    ರಾತ್ರಿ ಊಟ ಮಾಡಿ, ಮೂವರು ಮನೆ ಮಾಳಗಿ ಮೇಲೆ ಮಲಗಿಕೊಂಡಿದ್ದಾರೆ. ಆದರೆ ಅದೇನು ಆಯಿತೋ ಬೆಳಗಿನ ಹೊತ್ತಿಗೆ ಇಬ್ಬರ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿದೆ. ಹೊಡತಕ್ಕೆ ಇಬ್ಬರು ರಕ್ತದ ಮಡುವಿನಲ್ಲಿ ಮಿಂದೆದ್ದರು.
    ಕೊಲೆಯ ಬಳಿಕ ಆರೋಪಿ ಊರವರಿಗೆ ಧಮ್ಕಿ ಹಾಕಿ ಪರಾರಿಯಾಗಲು ಯತ್ನಿಸಿದ್ದ ಎಂದು ಹೇಳಲಾಗುತ್ತಿದೆ.
    ಬಳಿಕ ಗ್ರಾಮಸ್ಥರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
    ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಎಸ್.ಪಿ ಶಿವಪ್ರಕಾಶ್ ದೇವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು.

    crime ಅಪರಾಧ ಸುದ್ದಿ ಕೊಲೆ ವ್ಯವಹಾರ
    Share. Facebook Twitter Pinterest LinkedIn Tumblr Email WhatsApp
    Previous Articleಎತ್ತಿಗೂ ಜನ್ಮದಿನ: ರೈತ ಕುಟುಂಬದಲ್ಲಿ ಸಂಭ್ರಮ
    Next Article “ವಿಂಡೋಸೀಟ್‍” ಚಿತ್ರ ವಿಮರ್ಶೆ
    vartha chakra
    • Website

    Related Posts

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    June 24, 2025

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    June 24, 2025

    ಗುಜರಾತ್ ನಲ್ಲಿ ಆಪ್ ಗೆದ್ದೇ ಬಿಡ್ತು.

    June 24, 2025

    Comments are closed.

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಜುಲೈ 7ರಂದು ಮಹಾನಗರ ಪಾಲಿಕೆಗಳು ಕೆಲಸ ಮಾಡುವುದಿಲ್ಲ!

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    ಸುಂದರಿ ಜಾಲಕ್ಕೆ ಬಲಿಯಾದ ಇರಾನ್.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • h3e04 on ರೌಡಿ ಕೊಚ್ಚಿ ಕೊಂದವರು Surrender… | Siddapur Mahesha
    • zcvgd on ಯಾರೇ.. ಕೂಗಾಡಲಿ…
    • oqtyf on Pralhad Joshi ವಿರುದ್ಧದ ಆರೋಪ ಚುನಾವಣಾ ಸ್ಟಂಟ್ – BJP ಆರೋಪ
    Latest Kannada News

    ಜುಲೈ 7ರಂದು ಮಹಾನಗರ ಪಾಲಿಕೆಗಳು ಕೆಲಸ ಮಾಡುವುದಿಲ್ಲ!

    June 24, 2025

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    June 24, 2025

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    June 24, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ತಿರುಪತಿ ಲಾಡು ಗೆ ಮಂಡ್ಯ ತುಪ್ಪ #tirupati #tirumala #hyderabad #andhrapradesh #trending #ghee #products
    Subscribe