ವಿಜಯರಾಘವೇಂದ್ರ ಮತ್ತು ಹರ್ಷಿಕಾ ಪೂಣಚ್ಚ ಅಭಿನಯಿಸುತ್ತಿರುವ ‘ಕಾಸಿನ ಸರ’ ಚಿತ್ರದ ಮುಹೂರ್ತ ನೆರವೇರಿತು. ನಿನ್ನೆ (ದಿನಾಂಕ 01-08-22) ಸೋಮವಾರ ಬೆಂಗಳೂರಿನ ಮಲೇಶ್ವರಂನ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ನೇಟಿವ್ ಕ್ರಿಯೇಷನ್ಸ್ ಅರ್ಪಿಸುವ ಗ್ರಾಮೀಣ ಸೊಗಡಿನ ಕೌಟುಂಬಿಕ ಕತೆಯನ್ನು ಒಳಗೊಂಡ “ಕಾಸಿನ ಸರ” ಚಿತ್ರದ ಮುಹೂರ್ತ ನೆರವೇರಿತು. ಸಚಿವ ಎಸ್.ಟಿ. ಸೋಮಶೇಖರ್ ಕ್ಲಾಪ್ ಮಾಡಿದರು.
ದೊಡ್ಡನಾಗಯ್ಯ ನಿರ್ಮಾಣದಲ್ಲಿ ನಿರ್ದೇಶಕರಾದ ನಂಜುಡೇಗೌಡ ಆಕ್ಷನ್ ಕಟ್ ಹೇಳಲಿದ್ದಾರೆ, ಚಿತ್ರಕ್ಕೆ ವೇಣುಗೋಪಾಲ್ ಛಾಯಾಗ್ರಹಣ ಇದೆ, ಮುಹೂರ್ತ ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮಾ.ಹರೀಶ್, ಹಿರಿಯ ನಿರ್ಮಾಪಕರಾದ ಚಿನ್ನೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Previous Articleಮಿಡ್ ನೈಟ್ ಬಾ ಅಂತಾರೆ: ಬಾಲಿವುಡ್ ಕರಾಳ ಮುಖ ಬಿಡಿಸಿಟ್ಟ ಖ್ಯಾತ ನಟಿ
Next Article ರಾಹುಲ್ ಗಾಂಧಿಗೆ ಲಿಂಗದೀಕ್ಷೆ…