Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಮುದರಂಗಡಿ ಗ್ರಾಪಂ ವ್ಯಾಪ್ತಿಯ ಸಾಗುಮನೆ ಬಳಿ ಕಿರು ಸೇತುವೆ ಇಲ್ಲದೆ ತೋಡು ದಾಟಲು ಶಾಲಾ ಮಕ್ಕಳ ಪರದಾಟ
    ಸುದ್ದಿ

    ಮುದರಂಗಡಿ ಗ್ರಾಪಂ ವ್ಯಾಪ್ತಿಯ ಸಾಗುಮನೆ ಬಳಿ ಕಿರು ಸೇತುವೆ ಇಲ್ಲದೆ ತೋಡು ದಾಟಲು ಶಾಲಾ ಮಕ್ಕಳ ಪರದಾಟ

    vartha chakraBy vartha chakraJune 6, 2022Updated:June 6, 2022No Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೃಹತ್ ಮೊತ್ತದ ಕಾಮಗಾರಿಗಳು ಯಾವುದೇ ಅಭ್ಯಂತರವಿಲ್ಲದೆ ಸ್ಥಳೀಯಾಡಳಿತಗಳಲ್ಲಿ ಅನುಷ್ಠಾನಗೊಳ್ಳುತ್ತದೆ. ಆದರೆ ಕನಿಷ್ಟ ಮೊತ್ತದ ಕಾಮಗಾರಿಗಳು ಸೂಕ್ತ ಸಮಯದಲ್ಲಿ ನಡೆಯದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಲೇ ಇರುತ್ತಾರೆ.
    ಇದಕ್ಕೆ ಪೂರಕವಾಗಿ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮುದರಂಗಡಿ ಗ್ರಾಪಂ ವ್ಯಾಪ್ತಿಯ ಸಾಂತೂರು ಸಾಗುಮನೆ ಬಳಿ ಯಾವತ್ತೋ ನಿರ್ಮಿಸಬೇಕಾಗಿದ್ದ ಕಾಲು ಸಂಕ ಕಾಮಗಾರಿಯ ವಿಳಂಬವೇ ಸಾಕ್ಷಿ.

    ಸಾಂತೂರು ಸಾಗುಮನೆಯ ಕೊಳಕೆ ಮಾರು ಬಳಿ ಮಳೆ ನೀರು ಹರಿದು ಹೋಗುವ ತೋಡಿಗೆ ಕಾಲು ಸಂಕ ನಿರ್ಮಿಸದ ಕಾರಣ ಈ ಭಾಗದ ಶಾಲಾ ಮಕ್ಕಳು ಮತ್ತು ಸ್ಥಳೀಯ ಕೃಷಿಕರು ಕಷ್ಟಕರ ರೀತಿಯಲ್ಲಿ ಎದ್ದು ಬಿದ್ದು ತೋಡು ದಾಟುತ್ತಿದ್ದಾರೆ.

    ಕೃಷಿ ಚಟುವಟಿಕೆಯೇ ಪ್ರಧಾನವಾಗಿರುವ ಈ ಭಾಗದ ಜನರಿಗೆ ರಸ್ತೆ ಸಂಪರ್ಕವಿದೆ. ಆದರೆ ಸುತ್ತುಬಳಸಿ ತೆರಳಬೇಕಾದ ಕಾರಣ ಅವರು ಹತ್ತಿರದ ದಾರಿಯಾದ ಈ ತೋಡು ಬಳಸಿಯೇ ಸಂಚರಿಸುತ್ತಿದ್ದಾರೆ. ಮೇ ತಿಂಗಳಿಂದ ಜನವರಿವರೆಗೆ ಈ ತೋಡಿನಲ್ಲಿ ನೀರು ತುಂಬಿರುವುದರಿಂದ ಅವರ ಕಷ್ಟ ಹೇಳತೀರದು.

    ನೆರೆ ಬಂದರೆ ಮಕ್ಕಳಿಗೆ ಇಲ್ಲಿ ನಡೆದಾಡಲೂ ಕಷ್ಟಕರವಾಗಿದೆ. ಇಂತಹ ಸಂದರ್ಭಗಳಲ್ಲಿ ಹೆತ್ತವರೇ ಇಲ್ಲಿಗೆ ಬಂದು ಮಕ್ಕಳನ್ನು ದಾಟಿಸಬೇಕಾಗಿದೆ. ಕೃಷಿಕರೇ ತುಂಬಿರುವ ಈ ಭಾಗದ ಜನರು ಹಾಲು ಕೊಂಡೊಯ್ಯಲೂ ಇದೇ ಮಾರ್ಗವನ್ನು ಬಳಸುತ್ತಾರೆ. ಈ ತೋಡನ್ನು ಕನಿಷ್ಟ 25ಮನೆಗಳವರು ಬಳಸುತ್ತಿದ್ದಾರೆ.

    ಸ್ಥಳೀಯಾಡಳಿತ ಇಲ್ಲಿ ಕಾಲು ಸಂಕ ನಿರ್ಮಿಸಲು ಹಲವು ಬಾರಿ ಕ್ರಿಯಾ ಯೋಜನೆ ರೂಪಿಸಿತ್ತು. ಕಡಿಮೆ ಮೊತ್ತದ ಕಾಮಗಾರಿಯಾಗಿದ್ದ ಕಾರಣ ಉದಾಸೀನ ಎದ್ದು ಕಾಣುತ್ತದೆ. ಈ ಬಾರಿಯೂ ಇಲ್ಲೆ ಕಾಲು ಸಂಕ ನಿರ್ಮಾಣಕ್ಕೆ ಅನುದಾನ ಜೋಡಿಸಲಾಗಿದೆ. ಆದರೆ ಕಾಮಗಾರಿ ನಡೆದಿಲ್ಲ. ಮತ್ತೆ ಮಳೆಗಾಲ ಮುಗಿಯುವವರೆಗೆ ಕಾಯಬೇಕಿದೆ.

    ಬೆಳ್ಮಣ್ಣು ಸಂತ ಜೋಸೆಫ್ ಪ್ರೌಢ ಶಾಲೆಯ ವಿದ್ಯಾರ್ಥಿನಿ ೯ನೇ ತರಗತಿvಯ ಚಿಂತನಾ ಮಾತನಾಢಿ, ದೂರದ ಬೆಳ್ಮಣ್ಣು ಶಾಲೆಗೆ ಹೋಗಬೇಕಾಗಿರುವುದರಿಂದ ರಸ್ತೆ ಮೂಲಕ ಸುತ್ತು ಬಳಸಿ ಹೋಗಲು ಹೆಚ್ಚು ಸಮಯ ವ್ಯರ್ಥವಾಗುತ್ತದೆ. ಹಾಗಾಗಿ ಹತ್ತಿರದ ತೋಡಿನ ಮೂಲಕ ನಿತ್ಯ ಸಂಚರಿಸುತ್ತಿದ್ದು, ಹೆದರಿಕೊಂಡೇ ನಿತ್ಯ ಸಂಚರಿಸುತ್ತಿದ್ದೇವೆ. ಈಗಾಗಲೇ ಹಲವರು ಇಲ್ಲಿ ಬಿದ್ದ ಘಟನೆಯೂ ನಡೆದಿದೆ ಎಂದು ಹೇಳಿದ್ದಾಳೆ.

    ಸ್ಥಳೀಯರಾದ ಸುಬ್ರಾಯ ನಾಯಕ್ ಮಾತನಾಡಿ, ಕೃಷಿಕರೇ ಹೆಚ್ಚು ವಾಸಿಸುವ ಇಲ್ಲಿನ ಜನರು ಹೆಚ್ಚಾಗಿ ಇದೇ ದಾರಿಯನ್ನು ಬಳಸುತ್ತಿದ್ದಾರೆ. ಹಲವು ಬಾರಿ ನೀರಿಗೆ ಬಿದ್ದ ಘಟನೆ ನಡೆದಿದೆ. ಸ್ಥಳೀಯಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದರು.

    mudarangadi udupi
    Share. Facebook Twitter Pinterest LinkedIn Tumblr Email WhatsApp
    Previous Articleಸ್ನಾನಕ್ಕೆ ಹೋದವರು ಜಲಸಮಾಧಿ
    Next Article ಆರ್.ಎಸ್.ಎಸ್ ದೇಶ ಭಕ್ತಿ ಕೆಲಸ ಮಾಡುತ್ತಿದೆ- CM ಬೊಮ್ಮಾಯಿ
    vartha chakra
    • Website

    Related Posts

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    June 24, 2025

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    June 24, 2025

    ಗುಜರಾತ್ ನಲ್ಲಿ ಆಪ್ ಗೆದ್ದೇ ಬಿಡ್ತು.

    June 24, 2025

    Comments are closed.

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಜುಲೈ 7ರಂದು ಮಹಾನಗರ ಪಾಲಿಕೆಗಳು ಕೆಲಸ ಮಾಡುವುದಿಲ್ಲ!

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    ಸುಂದರಿ ಜಾಲಕ್ಕೆ ಬಲಿಯಾದ ಇರಾನ್.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • 4ti7u on ಬೆಂಗಳೂರಿನ ಈ ರಸ್ತೆಯಲ್ಲಿ ಆಟೋ ಸಂಚಾರ ಇಲ್ಲ.
    • d3hlt on ಮುಡಾ ಸುಳಿಯಲ್ಲಿ ಸಿದ್ದರಾಮಯ್ಯ ವಿಲವಿಲ !
    • xh9qb on ವಿಧಾನಸಭೆಯಲ್ಲಿ ಇನ್ನು ತಂದೆ-ಮಕ್ಕಳ ದರ್ಬಾರ್
    Latest Kannada News

    ಜುಲೈ 7ರಂದು ಮಹಾನಗರ ಪಾಲಿಕೆಗಳು ಕೆಲಸ ಮಾಡುವುದಿಲ್ಲ!

    June 24, 2025

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    June 24, 2025

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    June 24, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ತಿರುಪತಿ ಲಾಡು ಗೆ ಮಂಡ್ಯ ತುಪ್ಪ #tirupati #tirumala #hyderabad #andhrapradesh #trending #ghee #products
    Subscribe