Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » KSRTC ಬಸ್ ಟಿಕೆಟ್ ನಿಂದ ‌ಸಿಕ್ಕಿಬಿದ್ದ ಕೊಲೆಗಾರರು
    ಪ್ರಚಲಿತ

    KSRTC ಬಸ್ ಟಿಕೆಟ್ ನಿಂದ ‌ಸಿಕ್ಕಿಬಿದ್ದ ಕೊಲೆಗಾರರು

    vartha chakraBy vartha chakraOctober 6, 202327 Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಕಾರವಾರ, ಅ.6 – ಮೂರು ದಿನಗಳ ಹಿಂದಿನ ಹಳೆಯ ಕೆಎಸ್‌ಆರ್‌ಟಿಸಿ (KSRTC) ಬಸ್ ಟಿಕೆಟ್ ಕೊಲೆಗಾರರನ್ನು ಹಿಡಿದು ಕೊಟ್ಟಿದೆ.ಬಸ್ ಟಿಕೆಟ್ ನ ಸುಳಿವು ಆಧರಿಸಿ ಕುಮಟಾದಲ್ಲಿ ನಡೆದ ಕೊಲೆ ಪ್ರಕರಣವನ್ನು ಜಿಲ್ಲಾ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
    ಕಳೆದ ಸೆಪ್ಟೆಂಬರ್ 30ರಂದು ಶಿರಸಿ-ಕುಮಟಾ ಹೆದ್ದಾರಿಯ ದೇವಿಮನೆ ಘಾಟ್‌ನ ದೇವಸ್ಥಾನದ ಹಿಂಭಾಗದಲ್ಲಿ ಬಶೀರ್ (40) ಎಂಬುವರ ಮೃತದೇಹ ಪತ್ತೆಯಾಗಿತ್ತು.

    ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ ಕುಮಟಾ ಪೊಲೀಸರಿಗೆ ಪ್ರಾರಂಭದಲ್ಲಿ ಯಾವುದೇ ಸುಳಿವು ಸಿಗಲಿಲ್ಲ. ಮೃತ ವ್ಯಕ್ತಿಯ ಪಾಕೆಟ್ ನಲ್ಲಿ ಸಿಕ್ಕ ಕೆಎಸ್ ಆರ್ ಟಿಸಿ ಬಸ್ ಟಿಕೆಟ್ ಸಿಕ್ಕಿತ್ತು.ಅದರ ಜಾಡು ಹಿಡಿದು ಹೊರಟ ಪೊಲೀಸರಿಗೆ ಮೃತ ವ್ಯಕ್ತಿ ಇತ್ತೀಚೆಗೆ ಗಜೇಂದ್ರಗಢಕ್ಕೆ ಹೋಗಿರುವುದು ದೃಢವಾಗಿತ್ತು,
    ಈ ವೇಳೆ ಆತನ ಜೊತೆಗೆ ಮತ್ತೊಬ್ಬರು ಪ್ರಯಾಣಿಸಿದ್ದರು.
    ಪೊಲೀಸರು ತನಿಖೆ ನಡೆಸಿದ ವೇಳೆ ಆತನ ಜೊತೆಗೆ ಪತ್ನಿಯೂ ಪ್ರಯಾಣಿಸಿರುವುದು ಬೆಳಕಿಗೆ ಬಂತು. ನಂತರ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಮುಸಿಗೆರೆಗೆ ಪೊಲೀಸ್ ತಂಡ ತೆರಳಿ ವಿಚಾರವನ್ನು ದೃಢ ಪಡಿಸಿಕೊಂಡಿತ್ತು.
    ಬಶೀರ್ ಪತ್ನಿ ರಜ್ಮಾ ಆತನೊಂದಿಗೆ ತೆರಳಿದ್ದರು ಕೆಲ ವರ್ಷಗಳ ಹಿಂದೆ ಅವರಿಬ್ಬರು ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದರು.ಕುರಿ ವ್ಯಾಪಾರಿಯಾಗಿದ್ದ ಬಶೀರ್ ಕೆಲವು ತಿಂಗಳ ಹಿಂದೆ ಕುರಿಗಳನ್ನು ಮಾರಲು ಹೋಗಿದ್ದಾಗ ಬಾದಾಮಿಯಲ್ಲಿ ಪರಶುರಾಮ ಎಂಬಾತನ ಪರಿಚಯವಾಗಿತ್ತು.

    ಬಶೀರ್ ಸೋದರ ಸಂಬಂಧಿ ಕಾಸಿಂ ಎಂಬುವರ ಮೂಲಕ ಪರಶುರಾಮನ ಪರಿಚಯವಾಗಿ,ಸ್ನೇಹಕ್ಕೆ ತಿರುಗಿತ್ತು.ತನ್ನ ಸ್ನೇಹಿತನಾಗಿದ್ದ ಪರುಶುರಾಮ್ ನನ್ನು ಬಶೀರ್ ತನ್ನ ಪತ್ನಿಗೆ ಪರಿಚಯಿಸಿದ್ದ.
    ಇದಾದ ಬಳಿಕ ಪರಶುರಾಮ ಆಗಿಂದಾಗ್ಗೆ ಬಶೀರ್ ಮನೆಗೆ ಬಂದು ಹೋಗ ತೊಡಗಿದ.ಹೀಗಿರುವಲ್ಲಿ ಬಶೀರ್ ಪತ್ನಿ ರಜ್ಮಾ ಮತ್ತು ಪರಶುರಾಮ ನ ನಡುವೆ ಸಲುಗೆ ಬೆಳೆಯುತ್ತದೆ. ಇದಕ್ಕೆ ಬಶೀರ್ ಆಕ್ಷೇಪ ವ್ಯಕ್ತ ಪಡಿಸಿದ್ದ, ಈ ವಿಷಯವಾಗಿ ಇಬ್ಬರ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು.ಇದರಿಂದ ಕೋಪಗೊಂಡ ರಜ್ಮಾ ,ಪರಶುರಾಮನ  ಸಹಾಯ ಪಡೆದು ಬಶೀರ್ ನನ್ನು ಕೊಲೆ ಮಾಡಲು ಸಂಚು ರೂಪಿಸುತ್ತಾಳೆ.ಅದರಂತೆ ರಜ್ಮಾ ಸೆ. 26 ರಂದು 10 ಸಾವಿರ ರು ಹಣ ನೀಡಿದ್ದಳು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ ಟಿ ಜಯಕುಮಾರ್ ತಿಳಿಸಿದ್ದಾರೆ.
    ಕೊಲೆ ಸಂಚು ಕಾರ್ಯಗತಗೊಳಿಸಲು  ಪರುಶುರಾಮ್ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದ. ಆರೋಪಿಯು ತನ್ನ ಸ್ನೇಹಿತ ಆದೇಶ್‌ನನ್ನು ಭೇಟಿಯಾಗಲು ಬಶೀರ್ ಮತ್ತು ಇನ್ನೊಬ್ಬ ಸ್ನೇಹಿತ ರವಿಯ ಜೊತೆ ಮಂಗಳೂರಿಗೆ ಹೋಗಿದ್ದ.  ಅಲ್ಲಿ ಆದೇಶ್‌ನೊಂದಿಗೆ ಉಳಿದುಕೊಂಡು ಅಲ್ಲಿಂದ ಒಟ್ಟಿಗೆ ಪಣಂಬೂರು ಬೀಚ್ ಗೆ ತೆರಳಿ  ಬಶೀರ್‌ನನ್ನು ಕೊಲೆ ಮಾಡುವ ಯೋಜನೆಯನ್ನು ಪರಶುರಾಮ್ ಹೇಳಿದ್ದ. ಆದರೆ  ಮಂಗಳೂರಿನಲ್ಲಿ ಮಾಡಬೇಡಿ ಎಂದು ಸಲಹೆ ನೀಡಿದ ಆದೇಶ್ ಅದರಂತೆ ಬಶೀರ್ ನನ್ನು ಗಜೇಂದ್ರಗಡದಿಂದ ದೇವಿಮನೆ ಘಾಟ್‌ ದೇವಸ್ಥಾನದ ಹಿಂಭಾಗಕ್ಕೆ ಕರೆದುಕೊಂಡು ಹೋಗುತ್ತಾರೆ.

    ಇದನ್ನು ಆದೇಶ್ ವ್ಯವಸ್ಥೆ ಮಾಡುತ್ತಾನೆ.ಗಜೇಂದ್ರ ಗಡದಲ್ಲಿ ಅವರೆಲ್ಲರನ್ನು ಬಸ್ ಹತ್ತಿಸಿ ಆದೇಶ್ ದೇವಸ್ಥಾನದ ಬಳಿ ಇರುವ ದೇವಿಮನೆ ಘಾಟ್‌ನಲ್ಲಿ ಇಳಿಸುವಂತೆ  ಬಸ್  ಚಾಲಕ ಮತ್ತು ಕಂಡಕ್ಟರ್‌ಗೆ ತಿಳಿಸಿದರು. ಅದರಂತೆ ಸೆ.29ರಂದು ದೇವಸ್ಥಾನದ ಬಳಿ ಇಳಿದರು’ ಈ ಎಲ್ಲವೂ ಮೃತನ ಬಳಿ ದೊರೆತ ಬಸ್ ಟಿಕೆಟ್ ನಿಂದಾಗಿ ಗೊತ್ತಾಗುತ್ತದೆ ಎಂದು ಕಾರವಾರ ಹೆಚ್ಚುವರಿ ಎಸ್ಪಿ ಜಯಕುಮಾರ್ ವಿವರಿಸಿದರು.
    ಆರೋಪಿಗಳು ಬಶೀರ್‌ಗೆ ಚೆನ್ನಾಗಿ ಮದ್ಯ ಕುಡಿಸಿದ್ದಾರೆ. ನಂತರ ಆತನನ್ನು ಕೊಲೆ ಮಾಡಿ ಶವವನ್ನು ಅಲ್ಲಿ ಬಿಸಾಡಿದ್ದು, ಮರುದಿನ ಬೆಳಗ್ಗೆ ಶವ ಪತ್ತೆಯಾಗಿದೆ.
    ಪ್ರಕರಣವನ್ನು ಅಲ್ಪಾವಧಿಯಲ್ಲಿ ಭೇದಿಸಿದ ಪೊಲೀಸ್ ಇನ್ಸ್‌ಪೆಕ್ಟರ್ ತಿಮ್ಮಪ್ಪ, ಸಬ್ ಇನ್‌ಸ್ಪೆಕ್ಟರ್ ನವೀನ್ ನಾಯ್ಕ್ ಮತ್ತು ಇತರರ ನೇತೃತ್ವದ ತಂಡವನ್ನು ಪೊಲೀಸ್ ಉನ್ನತಾಧಿಕಾರಿಗಳು ಅಭಿನಂದಿಸಿದ್ದಾರೆ. ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ.

    bus KSRTC ಕೊಲೆ Business
    Share. Facebook Twitter Pinterest LinkedIn Tumblr Email WhatsApp
    Previous ArticleBJP-JDS ಮೈತ್ರಿ-ಪಕ್ಷ ತೊರೆಯಲು ಸಜ್ಜಾದ ಬಿಜೆಪಿ ಶಾಸಕ
    Next Article ಪೊಲೀಸ್ ಆಡಳಿತ ಹೀಗಿರಬೇಕು | Karnataka Police
    vartha chakra
    • Website

    Related Posts

    ಬೈರತಿ ಬಸವರಾಜ್ ಪತ್ತೆಗೆ ಲುಕ್ ಔಟ್ ನೋಟಿಸ್

    December 22, 2025

    ನರೇಗಾ ಯೋಜನೆ ಹೆಸರು ಬದಲಾವಣೆ : ಸೋನಿಯಾ ಗಾಂಧಿ ಅವರ ಸಂದೇಶ

    December 22, 2025

    ನಾಯಕತ್ವದ ಬಗ್ಗೆ ಖರ್ಗೆ ಕೊಟ್ಟ ಅಪ್ಡೇಟ್

    December 21, 2025

    Leave A Reply Cancel Reply

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೈರತಿ ಬಸವರಾಜ್ ಪತ್ತೆಗೆ ಲುಕ್ ಔಟ್ ನೋಟಿಸ್

    ಯೂಟ್ಯೂಬ್ ನಲ್ಲಿ ಪೋಲಿ ವಿಡಿಯೋಗಳ ಹಾವಳಿ

    ನರೇಗಾ ಯೋಜನೆ ಹೆಸರು ಬದಲಾವಣೆ : ಸೋನಿಯಾ ಗಾಂಧಿ ಅವರ ಸಂದೇಶ

    ನಾಯಕತ್ವದ ಬಗ್ಗೆ ಖರ್ಗೆ ಕೊಟ್ಟ ಅಪ್ಡೇಟ್

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • rylonnie shtori na plastikovie okna s elektroprivodom_npSn on ಬೆಂಗಳೂರಿಗೆ ಎರಡು ಸಾವಿರ ಹೆಚ್ಚುವರಿ ಪೊಲೀಸ್
    • Georgehes on ಸೋತ ಕಾಂಗ್ರೆಸ್ ನಾಯಕರಿಗೆ ಪಾಠ.
    • elektrokarniz kypit_ffsl on ಬೆಂಗಳೂರಿಗೆ ಎರಡು ಸಾವಿರ ಹೆಚ್ಚುವರಿ ಪೊಲೀಸ್
    Latest Kannada News

    ಬೈರತಿ ಬಸವರಾಜ್ ಪತ್ತೆಗೆ ಲುಕ್ ಔಟ್ ನೋಟಿಸ್

    December 22, 2025

    ಯೂಟ್ಯೂಬ್ ನಲ್ಲಿ ಪೋಲಿ ವಿಡಿಯೋಗಳ ಹಾವಳಿ

    December 22, 2025

    ನರೇಗಾ ಯೋಜನೆ ಹೆಸರು ಬದಲಾವಣೆ : ಸೋನಿಯಾ ಗಾಂಧಿ ಅವರ ಸಂದೇಶ

    December 22, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ನಾಯಕತ್ವದ ಬಗ್ಗೆ ಖರ್ಗೆ ಕೊಟ್ಟ ಅಪ್ಡೇಟ್.#varthachakra #mallikarjunkharge #siddaramaiah #dkshivakumar
    Subscribe