ವಿವಾದದ ಸುಳಿಯಲಿ ಸಿಲುಕಿ ಹಾಕಿಕೊಂಡು ಬಹಳಷ್ಟು ಆರ್ಥಿಕ ನಷ್ಟವನ್ನು ಅನುಭವಿಸಿರುವ ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರು ಗುರುವಾರ ಬೆಳಗ್ಗೆ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಅಧ್ಯಕ್ಷ ಶರದ್ ಪವಾರ್ ಅವರನ್ನು ದಕ್ಷಿಣ ಮುಂಬೈಯಲ್ಲಿರುವ ಪವಾರ್ ನಿವಾಸ ನಿವಾಸ ಸಿಲ್ವರ್ ಓಕ್ನಲ್ಲಿ ಭೇಟಿಯಾದರು.
ಮೂಲಗಳ ಪ್ರಕಾರ, ಅದಾನಿ ಅವರು ಬೆಳಿಗ್ಗೆ 10 ಗಂಟೆಗೆ ಪವಾರ್ ಅವರ ನಿವಾಸವನ್ನು ತಲುಪಿದರು. “ಈ ಸಭೆಯು ಗುರುವಾರ ಬೆಳಿಗ್ಗೆ ಸುಮಾರು ಎರಡು ಗಂಟೆಗಳ ಕಾಲ ನಡೆಯಿತು” ಎಂದು ಎನ್ಸಿಪಿ ಕಾರ್ಯಾಧಿಕಾರಿ ಒಬ್ಬರು ಖಚಿತಪಡಿಸಿದರು, ಅವರು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದರು. ದೇಶ ಮತ್ತು ರಾಜ್ಯದ ವಿವಿಧ ವಿಷಯಗಳ ಕುರಿತು ಇಬ್ಬರೂ ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ಅದಾನಿ ಗ್ರೂಪ್ನ ಬಗ್ಗೆ ಅಮೆರಿಕಾದ ಸಂಸ್ಥೆ ಹಿಂಡೆನ್ಬರ್ಗ್ನ ನೀಡಿದ ವರದಿಯ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ಮಾಡಬೇಕೆಂಬ ವಿರೋಧ ಪಕ್ಷಗಳ ಬೇಡಿಕೆಯ ವಿರುದ್ಧ ಪವಾರ್ ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿ ಈ ತಿಂಗಳ ಆರಂಭದಲ್ಲಿ ಪ್ರತಿಪಕ್ಷಗಳ ಒಳಗೆ ಕೋಲಾಹಲವನ್ನು ಉಂಟುಮಾಡಿದ್ದರು. ಅದಾದ ಕೆಲವು ದಿನಗಳ ನಂತರ ಈ ಸಭೆ ನಡೆದಿದೆ. ಪವಾರ್ ಅವರು ಅದಾನಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು ವಿರೋಧಪಕ್ಷಗಳಲ್ಲಿ ಅಸಮಾಧಾನ ಮೂಡಿಸಿದೆ.
ಈ ಭೇಟಿಯ ನಂತರವಂತೂ ಅದಾನಿ ವಿಷಯದಲ್ಲಿ ಪ್ರತಿಪಕ್ಷಗಳ ಒಗ್ಗಟ್ಟಿನ ವಿಚಾದಲ್ಲಿ ಬಹಳಷ್ಟು ಅನುಮಾನಗಳಿಂದಾಗಿ ಗಂಭೀರ ಒಡಕುಗಳು ಉಂಟಾಗುವ ಸಾಧ್ಯತೆಯಿದೆ.
3 Comments
идеи для бизнеса идеи для бизнеса .
Вывести из запоя на дому в Алматы https://fizioterapijakeskic.com .
мини бизнес мини бизнес .