Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Saleem Effect ಹೇಗಿದೆ ನೋಡಿ!
    Bengaluru

    Saleem Effect ಹೇಗಿದೆ ನೋಡಿ!

    vartha chakraBy vartha chakraDecember 2, 2022Updated:December 2, 20221 Comment2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಇತ್ತೀಚಿನ ದಿನಗಳಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ನಗರದ ಮೂಲಭೂತ ಸಮಸ್ಯೆ ಆಗಿರುವ ಟ್ರಾಫಿಕ್ ಜಾಮ್ ಸಮಸ್ಯೆ ಇದೀಗ ಕೊಂಚ ನಿವಾರಣೆಯಾದಂತೆ ಅನಿಸಿದೆ. ಅತಿಯಾದ ಸಂಚಾರ ದಟ್ಟಣೆ ಪ್ರದೇಶವಾಗಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಮಾರತ್ ಹಳ್ಳಿ ರಸ್ತೆಗಳಲ್ಲಿ ‌ದಟ್ಟಣೆ ಸಮಸ್ಯೆ ಕೆಲ ದಿನಗಳಿಂದ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ.
    ಇದಕ್ಕೆ ಕಾರಣ ಎನು ಗೊತ್ತಾ…ಈ ಸ್ಟೋರಿ ನೋಡಿ ಗೊತ್ತಾಗುತ್ತದೆ
    ಬೆಂಗಳೂರು ನಗರದ ಸಂಚಾರ ದಟ್ಟಣೆಯ ಸಮಸ್ಯೆ
    ನಿವಾರಿಸಲು ನಗರ ಸಂಚಾರ ವಿಭಾಗಕ್ಕೆ ಎಡಿಜಿಪಿ ದರ್ಜೆಯ ವಿಶೇಷ ಆಯುಕ್ತರ ಹುದ್ದೆಯನ್ನು ಹೊಸದಾಗಿ ಸೃಷ್ಟಿಸಿ, ಐಪಿಎಸ್ ಅಧಿಕಾರಿ ಡಾ. ಎಂ.ಎ.ಸಲೀಂ ಅವರನ್ನು ನೇಮಿಸಲಾಗಿದೆ.
    ಸಲೀಂ ಅವರು ಹೊಸ ಹುದ್ದೆಯ ಜವಾಬ್ದಾರಿ ವಹಿಸಿಕೊಂಡ ಬಳಿಕ ಬೆಂಗಳೂರು ಸಂಚಾರ‌ ವ್ಯವಸ್ಥೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಬಂದಿದೆ.
    ಕಡಿಮೆ ಆಗೋದೆ ಇಲ್ಲ ಎಂದುಕೊಂಡಿದ್ದ ಟ್ರಾಫಿಕ್ ಜಾಮ್ ಸಮಸ್ಯೆ ಈಗ ರಾಜ್ಯ ರಾಜಧಾನಿಯಲ್ಲಿ ಕಡಿಮೆಯಾಗಿದೆ. ಈ ಮೊದಲು ಇದರ ತೀವ್ರತೆ ಯಾವ ಪ್ರಮಾಣದಲ್ಲಿ ಇತ್ತೆಂದರೆ ಬೆಂಗಳೂರಿಗೆ ಇತ್ತೀಚೆಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಕೂಡ ಸಂಚಾರ ಸಮಸ್ಯೆ ಬಗ್ಗೆ ಗಮನ ಹರಿಸುವಂತೆ ಸೂಚಿಸಿದ್ದರು.
    ಪ್ರಧಾನಿ ಸೂಚನೆ ನಂತರ ತಲೆ ಕೆಡಿಸಿಕೊಂಡ ಮುಖ್ಯಮಂತ್ರಿಗಳು ಹಿರಿಯ ಅಧಿಕಾರಿಗಳೊಂದಿಗೆ‌ ಹಲವು ಸುತ್ತಿನ ಸಭೆ ನಡೆಸಿ ಈ ಹಿಂದೆ ಬೆಂಗಳೂರು ನಗರ ಸಂಚಾರ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದ್ದ ಸಲೀಂ ಕೆಲ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದರು ಅವರಿಗೆ ಈ‌ ಜವಾಬ್ದಾರಿ ನೀಡುವುದು ಸೂಕ್ತ ಎಂಬ ಅಭಿಪ್ರಾಯ ಕೇಳಿಬಂತು.ಆದರೆ ಅವರೀಗ ಉನ್ನತ ದರ್ಜೆಯ ಅಧಿಕಾರಿಯಾಗಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಅದಕ್ಕೆ ಅನುಗುಣವಾದ ಹುದ್ದೆ ಸೃಷ್ಟಿಸಿ ಅದನ್ನು ವಿಶೇಷ ಆಯುಕ್ತರ ಹುದ್ದೆ ಸಂಚಾರ ವಿಭಾಗ ಎಂದು ಕರೆಯಲಾಯಿತು.
    ಈ ರೀತಿಯಲ್ಲಿ ಹೊಸದಾಗಿ ಸೃಷ್ಟಿಸಲಾದ ವಿಶೇಷ ಆಯುಕ್ತರ ಹುದ್ದೆಗೆ ಸಲೀಂ ನೇಮಕ ಬಳಿಕ, ಕೊಂಚ ಮಟ್ಟಿಗೆ ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ಸಿಕ್ಕಿದಂತಾಗಿದೆ.
    ಅಂದಹಾಗೆ ಡಾ. ಎಂ.ಎ ಸಲೀಂ ಜಾರಿಗೆ ತಂದ ಮೂರು ಸೂತ್ರದಿಂದ ನಗರದಲ್ಲಿ ಟ್ರಾಫಿಕ್ ಕಡಿಮೆಯಾಗಿದೆ. ಈ, ಮೂರು ಸೂತ್ರಗಳು ಯಾವುವೆಂದರೆ, ಮೊದಲನೆಯದು ಸರಕು ವಾಹನಗಳು ನಿರ್ಬಂಧ.
    ಬೆಳಗ್ಗೆ ಎಂಟರಿಂದ ಹನ್ನೊಂದು ಹಾಗೂ ಸಂಜೆ ಐದರಿಂದ ಎಂಟರವರೆಗೆ ವಿಮಾನ ನಿಲ್ದಾಣ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸರಕು ಸಾಗಣೆಯ ಭಾರಿ ವಾಹನಗಳ ನಗರ ಪ್ರವೇಶಕ್ಕೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ.
    ಎರಡನೆಯದು ಸಿಗ್ನಲ್ ಸಿಂಕ್ರನೈಜ್. ಒಂದು ಸಿಗ್ನಲ್ ವಾಹನ ಸಂಚಾರಕ್ಕೆ ತೆರೆದುಕೊಂಡರೆ ಇಲ್ಲಿಂದ ಹಾದು ಹೋಗುವ ವಾಹನ ಮುಂದಿನ ಸಿಗ್ನಲ್ ತಲುಪುವಾಗ ಆ ಸಿಗ್ನಲ್ ಕೂಡ ಓಪನ್ ಆಗಲಿದೆ.ಇಂತಹ ತಾಂತ್ರಿಕ ಸುಧಾರಣೆ ತಂದ ಪರಿಣಾಮ ಸಿಗ್ನಲ್ ಗಳಲ್ಲಿ ಹಸಿರು ದೀಪಕ್ಕೆ ಕಾಯುವ ವಾಹನಗಳ ಪ್ರಮಾಣ ಕಡಿಮೆಯಾಗಿದೆ ಮೂರನೆಯದು ಬೆಳಗ್ಗೆಯೇ ರಸ್ತೆಗೆ ಇಳಿಯುವ ಸಂಚಾರಿ ಪೊಲೀಸರು. ಸಂಚಾರಿ ಪೊಲೀಸ್ ಅಧಿಕಾರಿಗಳು ಮರಗಳ ಮರೆಯಲ್ಲಿ, ಗೋಡೆ,ಕಂಬಗಳ ಪಕ್ಕದಲ್ಲಿ ನಿಂತು ಸಂಚಾರ ನಿಯಮ ಉಲ್ಲಂಘನೆ ದಂಡ ವಿಧಿಸುವುದನ್ನು ಬಿಟ್ಟು
    ಬೆಳಗ್ಗೆ ಎಂಟಕ್ಕೆ ಮೊದಲೇ ರಸ್ತೆಗೆ ಇಳಿದು ಟ್ರಾಫಿಕ್ ಕಂಟ್ರೋಲ್ ಮಾಡುತ್ತಿದ್ದಾರೆ. ಈ ಎಲ್ಲ ಕಾರಣದಿಂದ ನಗರದಲ್ಲಿ ಟ್ರಾಫಿಕ್ ಸದ್ಯ ಕಡಿಮೆಯಾಗುತ್ತಿದೆ.
    ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿರುವ ಡಾ.ಎಂ.ಎ ಸಲೀಂ, ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆಯದ್ದೇ ಹೆಚ್ಚು ಸಮಸ್ಯೆ.ಹಲವು ರಸ್ತೆಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ಗಳಿಂದಲೂ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಇದನ್ನು ಸುಧಾರಿಸುವುದಕ್ಕೆ ನಮ್ಮ ಸಂಚಾರಿ ಇಲಾಖೆ ಮುಂದಾಗಿದ್ದು, ಒಳ್ಳೆಯ ಸ್ಪಂದನೆ ಸಹ ದೊರೆಯುತ್ತಿದೆ ಎಂದರು.
    ಸಂಚಾರ ದಟ್ಟಣೆ ತೀವ್ರವಾಗಿರುವ ಹೆಬ್ಬಾಳ ಫ್ಲೈಓವರ್ನಲ್ಲೂ ಸುಧಾರಣೆ ಕಾಣುತ್ತಿದೆ. ನಾಯಂಡಹಳ್ಳಿಯಿಂದ ಮೈಸೂರು ರಸ್ತೆಯಲ್ಲೂ ಸಹ ವಾಹನಗಳು ವೇಗವಾಗಿ ಸಾಗುತ್ತಿವೆ. ಮಾರತ್ ಹಳ್ಳಿ ರಿಂಗ್ ರೋಡ್, ವೈಟ್ ಫೀಲ್ಡ್ ಸೇರಿದಂತೆ ಕೆಲ ಭಾಗಗಳಲ್ಲಿ ಸಮಸ್ಯೆಗಳು ಇನ್ನೂ ಇವೆ. ಸಿಟಿ ಮಾರ್ಕೆಟ್ನಲ್ಲಿ ಪಾದಚಾರಿ ಸಮಸ್ಯೆ ಇತ್ತು, ಅದನ್ನ ಕಾರ್ಯರೂಪಕ್ಕೆ ಬರಲು ಹೆಚ್ಚುವರಿ ಸಿಬ್ಬಂದಿಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಕೆ.ಆರ್ ಮಾರ್ಕೆಟ್ನಲ್ಲಿ ಸಂಚಾರ ದಟ್ಟಣೆ ಸುಧಾರಣೆ ಕಂಡಿದೆ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

    m
    Share. Facebook Twitter Pinterest LinkedIn Tumblr Email WhatsApp
    Previous Articleಚಿರತೆ ಭಯದಲ್ಲಿ ಕರ್ನಾಟಕ
    Next Article ಬೈಕ್ ನಲ್ಲಿ ಓವರ್ ಟೇಕ್ ಮಾಡಿದ್ದಕ್ಕೆ ಹೀಗಾ ಮಾಡೋದು?
    vartha chakra
    • Website

    Related Posts

    ಜುಲೈ 7ರಂದು ಮಹಾನಗರ ಪಾಲಿಕೆಗಳು ಕೆಲಸ ಮಾಡುವುದಿಲ್ಲ!

    June 24, 2025

    ಮದುವೆಯಾಗುವುದಾಗಿ ನಂಬಿಸಿ ಕುತ್ತಿಗೆ ಕೊಯ್ದ.

    June 18, 2025

    Blackmail ಪೂಜಾರಿ ಪೊಲೀಸ್ ಬಲೆಗೆ.

    June 16, 2025

    Comments are closed.

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಜುಲೈ 7ರಂದು ಮಹಾನಗರ ಪಾಲಿಕೆಗಳು ಕೆಲಸ ಮಾಡುವುದಿಲ್ಲ!

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    ಸುಂದರಿ ಜಾಲಕ್ಕೆ ಬಲಿಯಾದ ಇರಾನ್.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Melvinboory on Crypto ವಂಚಕ Arrest.
    • AlbertDuabe on ಗಾಯಾಳು ಡಿಸಿಪಿ ಸೈದುಲ್ ಮಾಡಿದ ಕೆಲಸ ಗೊತ್ತಾ ?
    • купить кокаин on ಅಂತಾರಾಜ್ಯ pistol ಮಾರಾಟ ಜಾಲ ಪತ್ತೆ
    Latest Kannada News

    ಜುಲೈ 7ರಂದು ಮಹಾನಗರ ಪಾಲಿಕೆಗಳು ಕೆಲಸ ಮಾಡುವುದಿಲ್ಲ!

    June 24, 2025

    ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಎಂದ ಜಮೀರ್ ಅಹ್ಮದ್ ಖಾನ್.

    June 24, 2025

    ಕಾಲ್ತುಳಿತ ಘಟನೆಯ ಕಾರಣ ಪತ್ತೆ ಹಚ್ಚಿದ ಸರ್ಕಾರ !

    June 24, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ತಿರುಪತಿ ಲಾಡು ಗೆ ಮಂಡ್ಯ ತುಪ್ಪ #tirupati #tirumala #hyderabad #andhrapradesh #trending #ghee #products
    Subscribe