Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Sindhuri ವಿರುದ್ಧ ಆರೋಪ – ಉತ್ತರ ಸಿಗಲೇಬೇಕಾದ ಪ್ರಶ್ನೆಗಳು
    ರಾಜ್ಯ

    Sindhuri ವಿರುದ್ಧ ಆರೋಪ – ಉತ್ತರ ಸಿಗಲೇಬೇಕಾದ ಪ್ರಶ್ನೆಗಳು

    vartha chakraBy vartha chakraFebruary 20, 202311 Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು:

    IAS ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಹಾಗೂ IPS ಅಧಿಕಾರಿ ಡಿ.ರೂಪಾ (D Roopa) ನಡುವಿನ ವಾಕ್ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ರಾಜಕಾರಣಿಗಳನ್ನು ಮೀರಿಸುವಂತೆ ಈ ಇಬ್ಬರೂ ಅಧಿಕಾರಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆರೋಪ – ಪ್ರತ್ಯಾರೋಪಗಳಲ್ಲಿ ತೊಡಗಿರುವುದು ಆಡಳಿತ ಯಂತ್ರದ ಮೇಲೆ ದೊಡ್ಡ ಪರಿಣಾಮ ಬೀರಿದೆ.

    IAS, IPS ಅಧಿಕಾರಿಗಳಿಗೆ ನಿರ್ದಿಷ್ಟ ಸೇವಾ ನಿಯಮಗಳಿವೆ. ಯಾರೂ ಕೂಡ ಇವುಗಳನ್ನು ಉಲ್ಲಂಘಿಸಿ ಈ ರೀತಿಯಲ್ಲಿ ಏಕಾಏಕಿ ಮಾತನಾಡುವಂತಿಲ್ಲ. ಈ ಅಧಿಕಾರಿಗಳು ಹೇಳಿಕೆ ನೀಡುವ ಮುನ್ನ ತಮ್ಮ ಹಿರಿಯ ಅಧಿಕಾರಿ ಇಲ್ಲವೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಅನುಮತಿ ಪಡೆಯುವುದು ಕಡ್ಡಾಯ ಇಲ್ಲವಾದರೆ ಇದು ನಿಯಮಗಳ ಉಲ್ಲಂಘನೆಯಾಗಲಿದೆ.

    ಆದರೆ, ಈ ಪ್ರಕರಣದಲ್ಲಿ ಇಬ್ಬರೂ ಅಧಿಕಾರಿಗಳು ಹಿರಿಯ ಅಧಿಕಾರಿಗಳ ಗಮನಕ್ಕೆ ಬಾರದೆ ನಡೆಸಿರುವ ವಾಕ್ಸಮರ‌ ಆಡಳಿತ ಯಂತ್ರ ನಿಯಂತ್ರಣದಲ್ಲಿ ಇಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರನ್ನು ಯಾರೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲವೇನೋ ಎಂಬ ಅಭಿಪ್ರಾಯ ಮೂಡುತ್ತದೆ. ಇದರ ನಡುವೆ ಕೆಲವು ವಿಷಯಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿದೆ. ಅದರಲ್ಲೂ ಹಿರಿಯ ಪೊಲೀಸ್ ಅಧಿಕಾರಿಯಾಗಿರುವ ಡಿ.ರೂಪಾ ಮಾಡಿರುವ ಆರೋಪಗಳನ್ನು ವೈಯಕ್ತಿಕ ಎನ್ನುವುದಕ್ಕಿಂತ ಸಾರ್ವಜನಿಕ ಹಿತಾಸಕ್ತಿಯ ವಿಷಯವಾಗಿ ನೋಡಬೇಕಾದ ಅಗತ್ಯವಿದೆ. ಡಿ.ರೂಪಾ ಆರೋಪ ಮಾಡಿರುವುದು ಹಿರಿಯ ಅಧಿಕಾರಿಯ ವಿರುದ್ಧ. ಅದೂ ಕೂಡ ಆ ಅಧಿಕಾರಿ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಕಾನೂನು ಕ್ರಮ ಜರುಗಿಸಬೇಕಾದ ರಾಜ್ಯ ಸರ್ಕಾರವೇ ಅವರಿಗೆ ರಕ್ಷಣೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

    ಸಿಂಧೂರಿ ಮಂಡ್ಯದಲ್ಲಿದ್ದಾಗ ಶೌಚಾಲಯ ನಿರ್ಮಾಣದ ವಿಚಾರದಲ್ಲಿ ಸುಳ್ಳು ಅಂಕಿ – ಅಂಶಗಳನ್ನು ನೀಡಿ ಕೇಂದ್ರ ಸರ್ಕಾರದಿಂದ ಪ್ರಶಸ್ತಿ ಪಡೆದುಕೊಂಡಿದ್ದರು. ಚಾಮರಾಜನಗರ (Chamarajanagar) ದಲ್ಲಿ ಆಮ್ಲಜನಕದ ಕೊರತೆಯಿಂದ 24 ಜನರು ಮೃತಪಟ್ಟಾಗ ಇವರ ಮೇಲೆ ನೇರ ಆರೋಪ ಬಂದರೂ ಪಾರಾದರು. ಅಗ್ಗದ ಬೆಲೆಯ ಚೀಲಗಳನ್ನು ದುಬಾರಿ ದರಕ್ಕೆ ಮಾರಾಟ ಮಾಡಿದ ಪ್ರಕರಣದಲ್ಲಿ ಲೋಕಾಯುಕ್ತರು ತನಿಖೆಗೆ ಶಿಫಾರಸು ಮಾಡಿದರೂ ಸರ್ಕಾರ ಅದನ್ನು ತಿರಸ್ಕರಿಸಿತು. ಇಂತಹ ರಕ್ಷಣೆ ಕನ್ನಡಿಗ ಅಧಿಕಾರಿಗಳಿಗೆ ಸಿಗಲು ಸಾಧ್ಯವೇ ಎಂದು ‌ಕೇಳಿದ್ದಾರಾದರೂ ಇಲ್ಲಿ ಕನ್ನಡಿಗ ಅನ್ನುವುದನ್ನು ಹೊರತು ಪಡಿಸಿ ಸಿಂಧೂರಿ ವಿರುದ್ಧ ಮಾಡಿರುವ ಆರೋಪಗಳು ಗಂಭೀರ ಸ್ವರೂಪದ್ದಾಗಿವೆ.

    ಭ್ರಷ್ಟಾಚಾರ, ಆಮ್ಲಜನಕ ಕೊರತೆಯಿಂದ ಅಮೂಲ್ಯ ಜೀವಗಳು ಬಲಿಯಾದ ವಿಷಯ, ದುಬಾರಿ ಬೆಲೆಗೆ ಮಾರಾಟ ಇವೆಲ್ಲವನ್ನೂ ಸಾರ್ವಜನಿಕ ಹಿತಾಸಕ್ತಿಯ ವ್ಯಾಪ್ತಿಯಲ್ಲಿ ನೋಡಬೇಕಾಗುತ್ತದೆ. ಉನ್ನತ ಮಟ್ಟದ ತನಿಖೆ ಅಗತ್ಯವಿದೆ. ಇಲಾಖಾ ಮಟ್ಟದ ತನಿಖೆಗಳು ಸಂಶಯಕ್ಕೆ ಕಾರಣವಾಗುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಇಲ್ಲವೇ ಇಂತಹುದೇ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕಾದ ಅಗತ್ಯವಿದೆ. ಇಲ್ಲವಾದರೆ ಸಾರ್ವಜನಿಕ ವಲಯದ ಸಂಶಯ ಉಳಿಯಲಿದೆ.

    ಇದಷ್ಟೇ ಅಲ್ಲ, ಸಿಂಧೂರಿ ಅವರಿಂದಾಗಿ ಹಲವು ಮಂದಿ ಪುರುಷ IAS, IPS ಅಧಿಕಾರಿಗಳು ತೊಂದರೆ ಅನುಭವಿಸಿದ್ದಾರೆ. ಯೋಗ್ಯವಲ್ಲದ ಫೋಟೊಗಳನ್ನು ಪುರುಷ ಅಧಿಕಾರಿಗಳಿಗೆ ಕಳುಹಿಸಿ ಪ್ರಚೋದನೆ ನೀಡಿರುವುದಕ್ಕೂ ತಮ್ಮ ಬಳಿ ಸಾಕ್ಷ್ಯಗಳಿವೆ’ ಎಂದು ರೂಪಾ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

    ಇದೂ ಕೂಡ ಗಂಭೀರವಾದ ವಿಷಯವೇ. ಒಬ್ಬ ಅಧಿಕಾರಿ ಈ‌ ರೀತಿಯಲ್ಲಿ ತಮ್ಮ ಪೋಟೋಗಳನ್ನು ಕಳುಹಿಸಿದ್ದಾರೆಂದರೆ ಅದನ್ನು ಯಾರಿಗೆ ಯಾಕಾಗಿ ಕಳುಹಿಸಿದ್ದಾರೆನ್ನುವುದು ಬಹಿರಂಗವಾಗಬೇಕಿದೆ. ಯಾಕೆಂದರೆ ರೂಪಾ ಅವರು ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು ಇದೀಗ ಸಾರ್ವಜನಿಕ ವಿಷಯವಾಗಿ ಪರಿಣಮಿಸಿದೆ.

    ಹೀಗಾಗಿ ಈ ಪೋಟೋಗಳನ್ನು ಯಾವ್ಯಾವ ಅಧಿಕಾರಿಗಳಿಗೆ ಯಾವ ಕಾರಣಕ್ಕಾಗಿ ಕಳುಹಿಸಿದರು. ಐದಾರು ಪುರುಷ IAS ಅಧಿಕಾರಿಗಳಿಗೆ ಕಳುಹಿಸಿದ್ದಾರೆಂದು ರೂಪಾ ಹೇಳಿದ್ದಾರೆ ‌ಇದು ನಿಜವಾ? ಹಾಗಿದ್ದಲ್ಲಿ ವಿವರ ಬಹಿರಂಗವಾಗಬೇಕು ಇಲ್ಲವೇ ಪ್ರಚಾರಕ್ಕಾಗಿ ಡಿ.ರೂಪಾ ಈ ರೀತಿಯಲ್ಲಿ ಮಾಡಿದ್ದರೆ, ಅವರ ವಿರುದ್ಧ ಕ್ರಮ ಜರುಗಿಸಲೇಬೇಕು. ಇವೆಲ್ಲದರ ನಡುವೆ, ಸಿಂಧೂರಿ ಅವರು ಮಂಡ್ಯ (Mandya) ದಲ್ಲಿ ‌ಕೆಲಸ ಮಾಡುವ ವೇಳೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ (Siddaramaiah ) ಅವರನ್ನು ಶಿಷ್ಟಾಚಾರದ ಪ್ರಕಾರ ಒಮ್ಮೆಯೂ ಸ್ವಾಗತಿಸಿಲ್ಲ. ಮೈಸೂರಿನಲ್ಲಿದ್ದಾಗ ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ (S T Somashekar) ಸಭೆ ನಡೆಸುತ್ತಿದ್ದರೆ ಸಭೆಯ ಮಧ್ಯ ದೂರವಾಣಿ ಕರೆ ಸ್ವೀಕರಿಸುವ ನೆಪದಲ್ಲಿ ಹೋಗುತ್ತಿದ್ದವರು ಮತ್ತೆ ಸಭೆಗೆ ಬರುತ್ತಿರಲಿಲ್ಲ ಎಂಬ ಆರೋಪಗಳಿವೆ. ಈ ಎಲ್ಲವೂ ಈಗ ತನಿಖೆಗೆ ಅರ್ಹ.

    #Mandya #siddaramaiah chamarajnagara d roopa Government IAS IAS - IPS IAS - IPS conflicts Karnataka m rohini sindhuri S T Somashekar Gowda Trending ಕಾನೂನು ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಬೆಂಗಳೂರಿಗೆ ಎರಡು ಸಾವಿರ ಹೆಚ್ಚುವರಿ ಪೊಲೀಸ್
    Next Article ಇವರೇ ನೋಡಿ ನಿರ್ದೇಶಕ S. K. Bhagavan
    vartha chakra
    • Website

    Related Posts

    ಡಿ ಬಾಸ್ ಗ್ಯಾಂಗ್ ನಂತೆ ಯುವಕನ ಮೇಲೆ ಹಲ್ಲೆ !

    July 7, 2025

    ರಾಜ್ಯ ಕಾಂಗ್ರೆಸ್ ನಲ್ಲಿ ಏನಾಗುತ್ತಿದೆ ?

    July 7, 2025

    ಕುತೂಹಲ ಮೂಡಿಸಿದ ಸಿಎಂ, ಡಿಸಿಎಂ ದೆಹಲಿ ಯಾತ್ರೆ

    July 7, 2025

    11 Comments

    1. prodamys promokod_xakn on December 13, 2024 2:17 pm

      Продамус промокод Продамус промокод .

      Reply
    2. Sazrgbt on January 1, 2025 8:00 am

      купить диплом специалиста

      Reply
    3. buy cialis from uk on June 10, 2025 4:04 am

      Thanks on putting this up. It’s understandably done.

      Reply
    4. are flagyl and cipro compatible on June 11, 2025 10:28 pm

      This is the big-hearted of criticism I truly appreciate.

      Reply
    5. jajlp on June 19, 2025 10:43 am

      buy inderal – inderal 20mg price buy generic methotrexate for sale

      Reply
    6. fjswq on June 24, 2025 9:54 am

      zithromax cost – buy zithromax 500mg generic bystolic 20mg for sale

      Reply
    7. fst4u on June 26, 2025 4:56 am

      order generic augmentin – atbioinfo buy ampicillin generic

      Reply
    8. 5f8dh on June 27, 2025 8:36 pm

      purchase esomeprazole generic – https://anexamate.com/ where can i buy nexium

      Reply
    9. hgzqv on June 29, 2025 6:04 am

      order warfarin 5mg pills – https://coumamide.com/ buy cozaar medication

      Reply
    10. jtabi on July 1, 2025 3:47 am

      buy mobic 7.5mg generic – moboxsin order mobic sale

      Reply
    11. ru7la on July 4, 2025 3:09 am

      blue pill for ed – buy ed pills uk erectile dysfunction drug

      Reply

    Leave A Reply Cancel Reply

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಡಿ ಬಾಸ್ ಗ್ಯಾಂಗ್ ನಂತೆ ಯುವಕನ ಮೇಲೆ ಹಲ್ಲೆ !

    ರಾಜ್ಯ ಕಾಂಗ್ರೆಸ್ ನಲ್ಲಿ ಏನಾಗುತ್ತಿದೆ ?

    ಕುತೂಹಲ ಮೂಡಿಸಿದ ಸಿಎಂ, ಡಿಸಿಎಂ ದೆಹಲಿ ಯಾತ್ರೆ

    ಹೃದಯಾಘಾತಕ್ಕೆ ಕಾರಣ ಪತ್ತೆ ಹಚ್ಚಿದ ತಜ್ಞರು

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Davidzooro on ಬೆಂಗಳೂರಲ್ಲಿ ಬಾಡಿಗೆ ಮನೆ ಬೇಕಾದ್ರೆ ಏನೇನು ಮಾಡಬೇಕು ಗೊತ್ತಾ? Bengaluru
    • chickencog on ರಾಜ್ಯ ಸರ್ಕಾರದ ಗೆಜೆಟ್ ಸೃಷ್ಟಿಸಿದ ವಂಚಕರು
    • mostbet_puEi on ಪಾದಚಾರಿಗಳಿಗೆ ಅಪ್ಪಳಿಸಿದ ಶಾಸಕರ ಕಾರು
    Latest Kannada News

    ಡಿ ಬಾಸ್ ಗ್ಯಾಂಗ್ ನಂತೆ ಯುವಕನ ಮೇಲೆ ಹಲ್ಲೆ !

    July 7, 2025

    ರಾಜ್ಯ ಕಾಂಗ್ರೆಸ್ ನಲ್ಲಿ ಏನಾಗುತ್ತಿದೆ ?

    July 7, 2025

    ಕುತೂಹಲ ಮೂಡಿಸಿದ ಸಿಎಂ, ಡಿಸಿಎಂ ದೆಹಲಿ ಯಾತ್ರೆ

    July 7, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಕಪಾಳಕ್ಕೆ ಬಾರಿಸಿದ ಬಿಜೆಪಿ ಶಾಸಕ ! #bjp #viralvideo #news #kannadanews #varthachakra #slapping #
    Subscribe