Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ವೋಟಿನ ಬೇಟೆಗಾಗಿ ಭಾವನೆಗಳೊಂದಿಗೆ ಓಟ – budget ನಲ್ಲಿಲ್ಲ ಅಭಿವೃದ್ಧಿಯ ನೋಟ
    ರಾಜ್ಯ

    ವೋಟಿನ ಬೇಟೆಗಾಗಿ ಭಾವನೆಗಳೊಂದಿಗೆ ಓಟ – budget ನಲ್ಲಿಲ್ಲ ಅಭಿವೃದ್ಧಿಯ ನೋಟ

    vartha chakraBy vartha chakraFebruary 17, 2023Updated:February 17, 202320 Comments4 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬಜೆಟ್ ವಿಶ್ಲೇಷಣೆ – ಆರ್.ಎಚ್. ನಟರಾಜ್, ಹಿರಿಯ ಪತ್ರಕರ್ತ

    ಸದ್ಯದಲ್ಲೇ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯ ಮೇಲೆ ಕಣ್ಣು ನೆಟ್ಟಿರುವ ಮುಖ್ಯಮಂತ್ರಿ ಬೊಮ್ಮಾಯಿ. ಅಭಿವೃದ್ಧಿ ಯೋಜನೆಗಳಿಗಿಂತ ಭಾವನಾತ್ಮಕ ಅಂಶಗಳೇ ಮತಗಳಿಸಬಲ್ಲವು ಎಂಬ ವಿಶ್ವಾಸ. ಇದು ಹದಿನೈದನೆ ವಿಧಾನಸಭೆಯ ಕೊನೆಯ budget ನ ಎಲ್ಲ ಕಸರತ್ತುಗಳೂ ಈ ಎರಡು ಸಂಗತಿಗಳ ಮೇಲೆಯೇ ಕೇಂದ್ರೀಕರಿಸಿರುವುದು ಸ್ಪಷ್ಟವಾಗಿದೆ.

    ಬೆಂಗಳೂರಿನಲ್ಲಿ ತಾಯಿ ಭುವನೇಶ್ವರಿಯ ಬೃಹತ್ ಮೂರ್ತಿ ಹಾಗೂ ಥೀಮ್ ಪಾರ್ಕ್ ಸ್ಥಾಪನೆ, ರಾಮನಗರದ ರಾಮದೇವರ ಬೆಟ್ಟದಲ್ಲಿ ಅಯೋಧ್ಯೆ ಮಾದರಿಯ ರಾಮಮಂದಿರ ನಿರ್ಮಾಣ, ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ರೂಪಾಯಿ, ನಮ್ಮ ಜಿಲ್ಲೆ ನಮ್ಮ ಸಂಸ್ಕೃತಿ ಎಂಬ ಕಾರ್ಯಕ್ರಮದಡಿಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಜಾನಪದ ಹಬ್ಬ, ಮಠ ಮಂದಿರಗಳ ಅಭಿವೃದ್ಧಿಗೆ 1,000 ಕೋಟಿ ರೂಪಾಯಿ, ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ 475 ಕೋಟಿ ಇಂತಹ ಹಲವು ಭಾವನಾತ್ಮಕ ಯೋಜನೆಗಳ ಮೂಲಕ ಮತ ಬುಟ್ಟಿಗೆ ಕೈ ಹಾಕಿದ್ದಾರೆ.

    ರಾಯಿಸ್ಟ್ ಸಿದ್ಧಾಂತದ ತಂದೆಯ ಛಾಪು, ಜೆ.ಪಿ.- ಲೋಹಿಯಾ ಸಿದ್ಧಾಂತದ ಅಧ್ಯಯನ

    ಸಮಾಜವಾದಿಗಳ ಒಡನಾಟದ ಹಣಕಾಸು ಮಂತ್ರಿಯಾದ ಬಸವರಾಜ ಬೊಮ್ಮಾಯಿ (Basavaraj Bommai) ಮುಖ್ಯಮಂತ್ರಿಯಾಗಿ BJP ಮತ್ತು ಸಂಘ ಪರಿವಾರದ ಕಾರ್ಯಸೂಚಿಗೆ ಅನುಗುಣವಾಗಿ ಬಜೆಟ್ ಮಂಡಿಸಲು ಪ್ರಯತ್ನಿಸಿ ಅತ್ತ ಸಮಾಜವಾದವೂ ಅಲ್ಲ,ಇತ್ತ ಪರಿವಾರ ಸಿದ್ಧಾಂತವೂ ಅಲ್ಲದ ಯಾಥಾಸ್ಥಿತಿಯ ವಾರ್ಷಿಕ ಪರಂಪರೆ ಪೂರ್ಣಗೊಳಿಸಿದ್ದಾರೆ.

    ಈ ಬಜೆಟ್ ನ ಅವಧಿ ಕೇವಲ ಮೂರು ತಿಂಗಳು ಮಾತ್ರ, ನಂತರ ಯಾವುದೇ ಸರ್ಕಾರ ಬರಲಿ ತನ್ನ ಕಾರ್ಯಸೂಚಿಯ ವಾರ್ಷಿಕ ಬಜೆಟ್ ಮಂಡಿಸುವುದು ವಾಡಿಕೆ. ಈ ಸತ್ಯದ ಅರಿವಿದ್ದೇ ಮುಖ್ಯಮಂತ್ರಿ ಬೊಮ್ಮಾಯಿ ಭರಪೂರ ಘೋಷಣೆಗಳು, ಪರಿವಾರ ಯಥೇಚ್ಛವಾಗಿ ಬಳಸುವ ಸಂಸ್ಕೃತ ಮೂಲದ ಹಿಂದಿ ಶಬ್ದಗಳ ಯೋಜನೆಗಳನ್ನು ಪ್ರಕಟಿಸಿದ್ದಾರೆ.

    ಆರಂಭದಲ್ಲೇ ಮನುಜಮತ ಸಿದ್ಧಾಂತವನ್ನು ಪ್ರತಿಪಾದಿಸಿದ ರಾಷ್ಟ್ರಕವಿ ಕುವೆಂಪು ಅವರ ಕವನದ ಸಾಲು,  ‘ಹೋಗುತಿದೆ ಹಳೆ ಕಾಲ, ಹೊಸ ಕಾಲ ಬರುತಲಿದೆ. ಬರುತಲಿದೆ ಹೊಸ ದೃಷ್ಟಿ, ಹಳೆಯ ಬಾಳು ಹೋಗುತಲಿದೆ, ಹೊಸ ಬಾಳು ಬರುತಿದೆ’ ಎಂದು ಉಲ್ಲೇಖಿಸಿದ್ದು, ಜೊತೆಗೆ ಪ್ರಕಟಿಸಿದ ಕಾರ್ಯಕ್ರಮ ನೋಡಿದಾಗ ಯಾವ ಕಾಲ ಬರಲಿದೆ ಎಂದು ಕೇಳಬೇಕಾಗುತ್ತದೆ.

    ವಿಧಾನಸಭೆ ಚುನಾವಣೆಗೂ ಮುನ್ನ ಮಂಡಿತವಾದ ಬಜೆಟ್‌ ಇದಾಗಿದೆ. ಹೀಗಾಗಿ ಹಣಕಾಸು ಸಚಿವರಿಗೆ ಬಜೆಟ್‌ ಮಂಡಿಸುವಾಗ ವೋಟಿನ ಮೇಲೇ ಕಣ್ಣಿಟ್ಟಿದ್ದಾರೆ.

    ದೇಶದ ಆರ್ಥಿಕತೆಯನ್ನು ಐದು ಟ್ರಿಲಿಯನ್‍ಗೆ ಹೆಚ್ಚಿಸುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಗುರಿಗೆ ಪೂರಕವಾಗಿ ರಾಜ್ಯದ ಅರ್ಥಿಕತೆಯನ್ನು ಒಂದು ಟ್ರಿಲಿಯನ್‍ಗೆ ಹೆಚ್ಚಿಸುವ ಇಂಗಿತವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಕ್ತ ಪಡಿಸಿದ್ದರು. ಅದಕ್ಕೆ ಅನುಗುಣವಾಗಿ ಬಜೆಟ್ ಗಾತ್ರವನ್ನು ಹೆಚ್ಚಿಸಲಾಗಿದ್ದು, ಒಟ್ಟು ಗಾತ್ರವನ್ನು 3,09,182 ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ.

    2023-24ನೇ ಆರ್ಥಿಕ ವರ್ಷದಲ್ಲಿ ಸ್ವಂತ ತೆರಿಗೆ ರಾಜಸ್ವ ಸಂಗ್ರಹ 1,64,653 ಕೋಟಿ ರೂಪಾಯಿಗಳೆಂದು ಅಂದಾಜು ಮಾಡಲಾಗಿದೆ. ತೆರಿಗೆಯೇತರ ರಾಜಸ್ವಗಳಿಂದ 11 ಸಾವಿರ ಕೋಟಿ ರೂಪಾಯಿ ಸಂಗ್ರಹಿಸುವ ನಿರೀಕ್ಷೆಗಳಿವೆ. ಕೇಂದ್ರದ ತೆರಿಗೆಯ ಪಾಲಿನಿಂದ 37,252 ಕೋಟಿ ರೂಪಾಯಿ, ಸಹಾಯಧನ ರೂಪದಲ್ಲಿ 13,005 ಕೋಟಿ ರೂಪಾಯಿ ನೀರಿಕ್ಷಿಸಲಾಗಿದೆ. ಹೀಗಿದ್ದರೂ

    ಈ ವರ್ಷವೂ 77,750 ಕೋಟಿ ರೂಪಾಯಿ ಸಾಲ ಪಡೆಯುವ ಉದ್ದೇಶವನ್ನು ವ್ಯಕ್ತಪಡಿಸಿದ್ದಾರೆ. ಋಣೇತರ ಸ್ವೀಕೃತಿಗಳಿಂದ 23 ಸಾವಿರ ಕೋಟಿ, ಸಾಲಗಳ ವಸೂಲು ಮೊತ್ತದಿಂದ 228 ಕೋಟಿ ರೂಪಾಯಿಗಳಗಳನ್ನು ಅಂದಾಜಿಸಲಾಗಿದೆ. ಒಟ್ಟು 3,03,910 ಕೋಟಿ ರೂಪಾಯಿಗಳ ಜಮೆಯನ್ನು ಅಂದಾಜಿಸಲಾಗಿದೆ.

    ಇನ್ನೂ ವೆಚ್ಚದ ಬಾಬ್ತುನಲ್ಲಿ 2,25,507 ಕೋಟಿ ರೂಪಾಯಿಗಳ ರಾಜಸ್ವ ವೆಚ್ಚ, 61,234 ಕೋಟಿ ರೂಪಾಯಿ ಬಂಡವಾಳ ವೆಚ್ಚವನ್ನು ಅಂದಾಜಿಸಲಾಗಿದೆ. ಸಾಲ ಮರುಪಾವತಿಗೆ 22,441 ಕೋಟಿ ರೂಪಾಯಿಗಳನ್ನು ಒಳಗೊಂಡು ಒಟ್ಟು ವೆಚ್ಚ 3,09,182 ಕೋಟಿ ರೂಪಾಯಿಗಳೆಂದು ಹೇಳಲಾಗಿದೆ. ಸಂಪನ್ಮೂಲ ಕ್ರೋಡೀಕರಣ ದೃಷ್ಟಿಯಿಂದ GST ಪೂರ್ವ ತೆರಿಗೆ ವಿವಾದ ತ್ವರಿತ ಇತ್ಯರ್ಥಕ್ಕೆ ಕರಸಮಾಧಾನ ಯೋಜನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ 2023-24 ನೇ ಸಾಲಿನ ಬಜೆಟ್ ನಲ್ಲಿ ಪ್ರಸ್ತಾಪಿಸಿದ್ದಾರೆ.

    ಈ ಕರಸಮಾಧಾನ ಯೋಜನೆಯ ಮೂಲಕ ತೆರಿಗೆ ಬಾಕಿಗಳನ್ನು ಯಾವುದೇ ದಾವೆಯಿಲ್ಲದೇ ಕ್ಷಿಪ್ರವಾಗಿ ಸಂಗ್ರಹಿಸಲು ಸಾಧ್ಯವಾಗುತ್ತದೆ ಹಾಗೂ ಈ ಯೋಜನೆಯಡಿ ಎಲ್ಲಾ GST-ಪೂರ್ವ ಅಧಿನಿಯಮಗಳ ಅಡಿಯಲ್ಲಿ ಬಾಕಿ ಇರುವ ಪೂರ್ಣ ತೆರಿಗೆಯನ್ನು 2023 ರ ಅ.30 ರ ಒಳಗೆ ಪಾವತಿಸುವವರಿಗೆ ಬಡ್ಡಿ ಮತ್ತು ದಂಡಬಡ್ಡಿ ಪಾವತಿಯಲ್ಲಿ ಪರಿಹಾರ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಇದೊಂದು ಉತ್ತಮ ಪ್ರಯತ್ನವಾಗಿದೆ.

    ಆಡಳಿತದಲ್ಲಿ, ಕೈಗಾರಿಕೋದ್ಯಮಗಳಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಕನ್ನಡದ ವ್ಯಾಪಕ ಬಳಕೆಗಾಗಿ ಹಾಗೂ ಕನ್ನಡಿಗರ ಹಿತಾಸಕ್ತಿಯ ರಕ್ಷಣೆಗಾಗಿ ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ಅಧಿನಿಯಮವನ್ನು ಜಾರಿಗೆ ತರಲಾಗುವುದು ಎಂದು ಪ್ರಕಟಿಸಿದ್ದಾರೆ. ಕನ್ನಡ ಭಾಷೆಯ ಬೆಳವಣಿಗೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಇದೊಂದು ಉತ್ತಮ ನಿರ್ಧಾರವಾಗಿದೆ. ಬದಲಾದ ಆರ್ಥಿಕ ಪರಿಸ್ಥಿತಿ ಹಾಗೂ ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆ ಹಿನ್ನೆಲೆಯಲ್ಲಿ ಬಹುತೇಕ ವಲಯಗಳಲ್ಲಿ ಕನ್ನಡ ಕಣ್ಮರೆಯಾಗುತ್ತಿದೆ.ಕೇಂದ್ರ ಸರ್ಕಾರದ ಈ ನಿಲುವು ಪ್ರಾದೇಶಿಕ ಭಾಷೆಗಳಿಗೆ ದೊಡ್ಡ ಹೊಡೆತ ನೀಡಿದೆ. ಇದಕ್ಕೆ ಮದ್ದು ನೀಡುವ ರೀತಿಯಲ್ಲಿ ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ಅಧಿನಿಯಮ ಸ್ವಾಗತಾರ್ಹ ಬೆಳವಣಿಗೆಯಾಗಿದ್ದು, ಇದು ಆದಷ್ಟು ಜರೂರಾಗಿ ಜಾರಿಗೆ ಬರಬೇಕಿದೆ.

    ಕೃಷಿ ಆಧಾರಿತ ಗ್ರಾಮೀಣ ಆರ್ಥಿಕತೆಗೆ ಬಜೆಟ್‌ನಲ್ಲಿ ವಿಶೇಷ ಒತ್ತು ನೀಡಿದರೂ ಒಟ್ಟಾರೆ ಅನುದಾನದ ಪ್ರಮಾಣ ಕಡಿಮೆಯಾಗಿದೆ. ಶೂನ್ಯ ಬಡ್ಡಿ ಸಾಲದ ಪ್ರಮಾಣ ಮೂರರಿಂದ ಐದು ಲಕ್ಷ ರೂಪಾಯಿಗಳಿಗೆ ಹೆಚ್ಚಳ ಮಾಡಿದರೂ, ಸಾಲ ನೀಡುವ ಸಹಕಾರ ಬ್ಯಾಂಕ್ ಗಳ ಅನುದಾನದ ಪ್ರಮಾಣ‌ ಹೆಚ್ಚಳವಾಗಿಲ್ಲ. ಇದರ ನಡುವೆ ಕೆಲವು ಹಾಲಿ ಯೋಜನೆಗಳಿಗೆ ಅನುದಾನ ಕಡಿತ ಮಾಡಿರುವುದು ಗಮನಾರ್ಹ.

    ಕೃಷಿಗೆ ‘ಬಲ’ ನೀಡುವಂತಹ ಯೋಜನೆಗಳು, ತಂತ್ರಜ್ಞಾನ ಬಳಕೆಗೆ ಉತ್ತೇಜನ, ನೈಸರ್ಗಿಕ ಕೃಷಿಗೆ ಬೆಂಬಲ, ಬೀಜ–ರಸಗೊಬ್ಬರ ಪೂರೈಕೆಯ ಸರಪಳಿ ಬಲವರ್ಧನೆ,ಉದ್ಯೋಗ ಸೃಷ್ಟಿಗೆ ಘೋಷಿಸಿರುವ ಕೆಲವು ಯೋಜನೆಗಳು ಸ್ವಾಗತಾರ್ಹವಾದರೂ ಬಹುತೇಕ ಯೋಜನೆಗಳು ಆರ್ಥಿಕ ನೆರವಿಗೆ ಸೀಮಿತವಾಗಿವೆ.

    ರಾಜ್ಯದ ಎಲ್ಲ ಮಹಿಳಾ ಕಾರ್ಮಿಕರಿಗೆ ತಲಾ 500 ರೂ. ಸಹಾಯಧನ ನೀಡಲಾಗುವುದು. ರಾಜ್ಯದಲ್ಲಿ ಕೆಲಸ ಮಾಡುವ ಎಲ್ಲ 30 ಲಕ್ಷ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲಾಗುವುದು. ಮತ್ತೊಂದೆಡೆ ಎಲ್ಲ ಶಾಲಾ- ಕಾಲೇಜು ವಿದ್ಯಾರ್ಥಿನಿಯರಿಗೂ ಉಚಿತ ಬಸ್ ಪಾಸ್ ನೀಡಲಾಗುವುದು ಎಂದು ಹೇಳಿದ್ದಾರೆ.

    ಯುವಸ್ನೇಹಿ, ಗೃಹಿಣಿ ಶಕ್ತಿ, ಮೊದಲಾದ ಯೋಜನೆಗಳ ಮೂಲಕ ಖಜಾನೆಯ ಹಣವನ್ನು ನೇರವಾಗಿ ಎತ್ತಿ ಫಲಾನುಭವಿಗಳಿಗೆ ಕೊಡಲಾಗುತ್ತದೆ. ಇದಕ್ಕಾಗಿ ಫಲಾನುಭವಿಗಳು ಏನೂ ಮಾಡಬೇಕಿಲ್ಲ ತಮ್ಮ ಹೆಸರು, ವಿವರ ಸಂಬಂಧಿಸಿದ ಇಲಾಖೆಯಲ್ಲಿ ನೊಂದಾಯಿಸಿದರೆ ಸಾಕು. ಈ ಎಲ್ಲವೂ ಮತಗಳ ಮೇಲೆ ಕಣ್ಣಿಟ್ಟಿರುವ ಕಾರ್ಯಕ್ರಮಗಳೇ ಹೊರತು ಅಭಿವೃದ್ಧಿಯ ದೃಷ್ಟಿಯಿಂದ ರೂಪಿತವಾದವುಗಳಲ್ಲ.

    ಹಲವಾರು ಹೊಸ ಘೋಷಣೆಗಳು ಈ ಬಜೆಟ್ ನಲ್ಲಿ ಗಮನ ಸೆಳೆಯುತ್ತವೆ. ಬರೀ ಘೋಷಣೆಗಳು ಕ್ಷಣಿಕ ಹಿತಾನುಭವ ನೀಡಬಹುದೇ ವಿನಾ ಅವುಗಳಿಂದ ಹೆಚ್ಚೇನೂ ಪ್ರಯೋಜನವಿಲ್ಲ. ಬಜೆಟ್‌ನ ಘೋಷಣೆಗಳೆಲ್ಲ ಅನುಷ್ಠಾನಕ್ಕೆ ಬಂದರಷ್ಟೇ ಅವುಗಳಿಗೆ ಕಿಮ್ಮತ್ತು. ಆ ದಿಕ್ಕಿನಲ್ಲಿ ಸರ್ಕಾರ ತನ್ನ ಬದ್ಧತೆಯನ್ನು ಪ್ರದರ್ಶಿಸಬೇಕು ಆದರೆ, ಚುನಾವಣಾ ಕಾಲದ ಬಜೆಟ್ ಅನುಷ್ಠಾನಕ್ಕೆ ಬದ್ಧತೆ ತೋರಿಸಬೇಕಾದವರು ಯಾರು ಎಂಬುದೇ ಮೂಲ ಪ್ರಶ್ನೆ.

    #budget basavaraj bommai BJP bommai budget analysis Government gst Karnataka m ಕರಸ ಕಾಲೇಜು Election ತಂತ್ರಜ್ಞಾನ ನರೇಂದ್ರ ಮೋದಿ ಬೊಮ್ಮಾಯಿ ವಿದ್ಯಾರ್ಥಿ ಶಿಕ್ಷಣ
    Share. Facebook Twitter Pinterest LinkedIn Tumblr Email WhatsApp
    Previous ArticleBudget ನಲ್ಲಿ ಹೊಸದೇನು ಗೊತ್ತಾ?
    Next Article Tax ಸಂಗ್ರಹಕ್ಕೆ ಕರಸಮಾಧಾನ
    vartha chakra
    • Website

    Related Posts

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    July 23, 2025

    ಸಿದ್ದರಾಮಯ್ಯ ಕ್ಷಮೆ ಕೋರಿದ META.

    July 18, 2025

    ಶಾಲೆಗಳಿಗೆ ಕಿಡಿಗೇಡಿಗಳ ಸಂದೇಶ

    July 18, 2025

    20 Comments

    1. Link Daftar Slot Deposit Qris 10rb Lokabet88 on May 16, 2025 12:14 am

      Fantastic post. You’ve provided some excellent advice. You and I both think that it is crucial for bloggers to assist their readers. Visitors will return for more as soon as they see the worth in your material. Try to Visit My Web Site :Link Daftar Slot Deposit Qris 10rb Lokabet88

      Reply
    2. lxk9d on June 4, 2025 10:15 pm

      can i buy cheap clomiphene where can i get cheap clomiphene without prescription order generic clomid without a prescription can i get cheap clomid price where to get cheap clomiphene without dr prescription cheap clomiphene without insurance clomid chart

      Reply
    3. buy cialis online generic on June 10, 2025 12:26 am

      I am actually enchant‚e ‘ to glitter at this blog posts which consists of tons of useful facts, thanks for providing such data.

      Reply
    4. half life of flagyl on June 11, 2025 6:45 pm

      More peace pieces like this would insinuate the интернет better.

      Reply
    5. m2nid on June 22, 2025 2:48 am

      buy cheap generic amoxicillin – diovan oral order ipratropium 100 mcg

      Reply
    6. gj9i3 on June 26, 2025 1:37 am

      buy augmentin 1000mg generic – atbio info ampicillin pill

      Reply
    7. tqooe on June 27, 2025 5:37 pm

      order esomeprazole 20mg sale – anexamate.com buy generic esomeprazole for sale

      Reply
    8. fd8m4 on July 1, 2025 12:51 am

      buy meloxicam pills – https://moboxsin.com/ buy meloxicam 7.5mg for sale

      Reply
    9. f95l1 on July 2, 2025 9:38 pm

      order deltasone 10mg sale – https://apreplson.com/ prednisone 20mg pills

      Reply
    10. x8sxe on July 4, 2025 12:25 am

      where to buy ed pills – generic ed pills buy ed pills cheap

      Reply
    11. i20jy on July 10, 2025 10:14 am

      order diflucan for sale – https://gpdifluca.com/# fluconazole 200mg generic

      Reply
    12. x0quc on July 11, 2025 11:00 pm

      order cenforce sale – on this site buy cenforce 100mg sale

      Reply
    13. clszn on July 15, 2025 5:31 am

      cialis online no prescription australia – this buy tadalafil no prescription

      Reply
    14. Connietaups on July 15, 2025 3:54 pm

      zantac 300mg price – on this site zantac 300mg for sale

      Reply
    15. n5qvf on July 17, 2025 10:03 am

      buy viagra usa – https://strongvpls.com/ buy viagra in amsterdam

      Reply
    16. Connietaups on July 18, 2025 3:58 am

      This website absolutely has all of the bumf and facts I needed about this case and didn’t know who to ask. finasteride propecia efectos secundarios

      Reply
    17. 4ou21 on July 19, 2025 10:46 am

      Thanks recompense sharing. It’s acme quality. buy generic furosemide for sale

      Reply
    18. Connietaups on July 20, 2025 8:30 pm

      This is the kind of criticism I positively appreciate. https://ursxdol.com/azithromycin-pill-online/

      Reply
    19. 12rra on July 22, 2025 6:49 am

      I am in point of fact happy to gleam at this blog posts which consists of tons of useful facts, thanks towards providing such data. https://prohnrg.com/

      Reply
    20. ddval on July 24, 2025 8:38 pm

      Good blog you procure here.. It’s obdurate to on great status article like yours these days. I truly appreciate individuals like you! Take care!! https://aranitidine.com/fr/en_ligne_kamagra/

      Reply

    Leave A Reply Cancel Reply

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    ರೌಡಿ ಬಿಕ್ಲು ಶಿವ ಹತ್ಯೆ – ಬೈರತಿ ಬಸವರಾಜ್ ಗೆ ಸಂಕಷ್ಟ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • n44b9 on ಸನ್ಯಾಸಿಗೆ ಸಿಗಲಿದೆ ರಾಜಸ್ಥಾನ ಮುಖ್ಯಮಂತ್ರಿ ಪಟ್ಟ | Balaknath Yogi
    • pf2nm on ಸಾಲು ಮರದ ತಿಮ್ಮಕ್ಕನನ್ನು ಬಿಡಲಿಲ್ಲ ಚೈತ್ರಾ ಕುಂದಾಪುರ | Saalumarada Thimmakka
    • sovp6 on ಬ್ರಾಂಡ್ ಬೆಂಗಳೂರಿನ ಮೂಲಕ ಸಿಲಿಕಾನ್ ಸಿಟಿಗೆ ಹೊಸ ರೂಪ | Brand Bengaluru
    Latest Kannada News

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    July 23, 2025

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    July 23, 2025

    ಡಿಸಿಎಂ ಶಿವಕುಮಾರ್ ಮೂರು ದಿನ ರಜೆ

    July 22, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸರೋಜಾದೇವಿ, SM ಕೃಷ್ಣ ಮದ್ವೆ ಆಗಲಿಲ್ಲವೇಕೆ
    Subscribe