ಬೆಂಗಳೂರು,ಜೂ.19:
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸೋದರ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಮಹತ್ವದ ಜವಾಬ್ದಾರಿಯೊಂದನ್ನು ವಹಿಸಿಕೊಳ್ಳಲು ಸಜ್ಜಾಗಿದ್ದಾರೆ ಇದಕ್ಕಾಗಿ ಅವರಿಗೆ ಇನ್ನೊಂದು ಮೆಟ್ಟಿಲು ಮಾತ್ರ ಬಾಕಿ ಇದೆ.
ಸಂಪುಟ ದರ್ಜೆಯ ಸಚಿವ ಸ್ಥಾನ ಹೊಂದಿರುವ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಅಧ್ಯಕ್ಷ ಸ್ಥಾನದ ಮೇಲೆ ಡಿಕೆ ಸುರೇಶ್ ಕಣ್ಣಿಟ್ಟಿರುವುದು ಇದೀಗ ಹೊಸ ಸುದ್ದಿ ಏನಲ್ಲ. ಆದರೆ ಅವರು ಇದೀಗ ಆ ಹುದ್ದೆಯ ಸನಿಹಕ್ಕೆ ಬಂದು ನಿಂತಿದ್ದಾರೆ.
ಇದರ ಮೊದಲ ಹಂತವಾಗಿ ಅವರು ಈಗ Bengaluru ಹಾಲು ಉತ್ಪಾದಕರ ಸಹಕಾರ ಸಂಘದ (ಬಮೂಲ್) ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ.
ಬಮೂಲ್ ನ ತಮ್ಮ ಬೆಂಬಲಿಗ ನಿರ್ದೇಶಕರು, ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳೊಂದಿಗೆ ಅವರು ಬೆಂಗಳೂರು ಡೇರಿ ವೃತ್ತದಲ್ಲಿರುವ ಬಮೂಲ್ ಕಚೇರಿಯಲ್ಲಿ ಅವರು ಅಧ್ಯಕ್ಷ ಸ್ಥಾನಕ್ಕೆ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ
ಬಮೂಲ್ನ ಒಟ್ಟು 14 ನಿರ್ದೇಶಕರನ್ನು ಒಳಗೊಂಡಿರುವ ಈ Electionಯಲ್ಲಿ ಡಿ.ಕೆ. ಸುರೇಶ್ ಅವಿರೋಧವಾಗಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಆಯ್ಕೆಯಾಗಿರುವ 14 ನಿರ್ದೇಶಕರಲ್ಲಿ ಬಹುತೇಕರು ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಾಗಿದ್ದಾರೆ ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ಅವರ ಆಯ್ಕೆಯು ಬಹುತೇಕ ಖಚಿತವೆಂದೇ ಹೇಳಲಾಗಿದೆ.
ಇದಾದ ನಂತರ ಕೆಎಂಎಫ್ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಎಲ್ಲಾ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಇದರ ಮತದಾರರಾಗಿರುತ್ತಾರೆ ಜೊತೆಗೆ ಸರ್ಕಾರ ಕೂಡ ಕೆಲವು ನಿರ್ದೇಶಕರನ್ನು ನಾಮಕರಣ ಮಾಡಲಿದ್ದು ಡಿಕೆ ಸುರೇಶ್ ಅವರು ರಾಜ್ಯ ಹಾಲು ಒಕ್ಕೂಟದ ಅಧ್ಯಕ್ಷ ಹುದ್ದೆ ಅಲಂಕರಿಸುವುದು ನಿಶ್ಚಿತ ಎಂದು ಹೇಳಲಾಗಿದೆ.
Previous Articleಭದ್ರತಾ ಆಯೋಗ ಅಸ್ತಿತ್ವಕ್ಕೆ.
Next Article ಪ್ರಿಯಾಂಕ್ ಖರ್ಗೆ ಆಟ ಆಡಲು ವಿದೇಶಕ್ಕೆ ಹೋದರಾ..!