ಬೆಂಗಳೂರು.
ಸಿಲಿಕಾನ್ ಸಿಟಿ ಬೆಂಗಳೂರಿನ HAL ಠಾಣೆಯ ಪೊಲೀಸರು ಸೈಯದ್ ಮುನ್ನಾವರ್ ಸಾಬ್ರಿ, ಪ್ರತಾಪ್, ಸೈಯದ್ ಅಫ್ರೋಜ್, ರಾಜ್ ಕುಮಾರ್, ಶ್ರೀನಿವಾಸ ಮೂರ್ತಿ ಹಾಗೂ ವೈಜಯಂತ್ ಎಂಬುವರನ್ನು ಬಂಧಿಸಿದ್ದಾರೆ. ಅಲ್ಲದೆ ತಲೆ ಮರೆಸಿಕೊಂಡವರಿಗಾಗಿ ಶೋಧ ನಡೆಸಿದ್ದಾರೆ.
ಯಾಕೆ ಇವರನ್ನು ಬಂಧಿಸಿದ್ದಾರೆ, ಇವರೇನು ಮಾಡಿದರು ಅಂತಾ ಕೇಳ್ತೀರಾ? ಅದೇ ವಿಶೇಷ, ಇವರೇನೂ ಅಂತಿಂಥ ಅಪರಾಧಿಗಳಲ್ಲ ಐನಾತಿಗಳು. ಇವರು ಮಾಡಿದ್ದೇನು ಗೊತ್ತಾ?
ಫೆಬ್ರವರಿ 1ರಂದು HAL ಅಧಿಕಾರಿಗಳು HAL ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ಯಾರೋ ಅನಾಮಧೇಯರು HAL ಗೆ ಸೇರಿದ ಸುಮಾರು 833 ಎಕರೆ ಜಮೀನಿನ ನಕಲಿ ದಾಖಲೆಗಳನ್ನು ಸೃಷ್ಟಿಸಿ ಲೀಸ್ ಕೊಟ್ಟಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದರು.
ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಾಗ ಬಂಧಿತ ಐನಾತಿಗಳ ಘನಂದಾರಿ ಕೆಲಸ ಬೆಳಕಿಗೆ ಬಂದಿದೆ.
ಆರೋಪಿಗಳು ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಕೇಂದ್ರ ಸರ್ಕಾರಕ್ಕೆ ಸೇರಿರುವ 833 ಎಕರೆ ಜಾಗಕ್ಕೆ ನಕಲಿ ದಾಖಲಾತಿ ಸಿದ್ಧಪಡಿಸಿ, ಲೀಸ್ಗೆ ಪಡೆದಿರುವುದಾಗಿ ದಾಖಲೆಗಳನ್ನು ರೆಡಿ ಮಾಡಿಕೊಂಡಿದ್ದರು. ಇದಕ್ಕೆ HAL ನ ಲೆಟರ್ಹೆಡ್, ಅಧಿಕಾರಿಗಳ ಸೀಲ್ ಮತ್ತು ಸಹಿ ನಕಲಿಸಿದ್ದಾರೆ. ಹೀಗೆ ನಕಲಿಸಿದ ದಾಖಲೆಯಿಂದ ಆಸ್ತಿಯನ್ನು ಪರಭಾರೆ ಮಾಡಲು ಮೂರನೇ ವ್ಯಕ್ತಿಗಳಿಗೆ ಗಾಳ ಹಾಕುತ್ತಿದ್ದರು.
ತಾವು ತಯಾರಿಸಿದ್ದ ದಾಖಲಾತಿ ತೋರಿಸಿ ನಾವು HAL ನಿಂದ 30 ವರ್ಷಕ್ಕೆ ಜಾಗ ಲೀಸ್ ಪಡೆದಿದ್ದೇವೆ. ನಿಮಗೆ ಬೇಕಾದರೆ ವಾಣಿಜ್ಯ ವ್ಯವಹಾರಕ್ಕಾಗಿ ಲೀಸ್ ಮತ್ತು ಬಾಡಿಗೆಗಾಗಿ ನೀಡ್ತೀವಿ ಎಂದು ಹಣ ಪಡೆಯುತ್ತಿದ್ದರು. ಈ ಕರ್ಮಕಾಂಡದ ಪ್ರಮುಖ ಆರೋಪಿ ಬಿನಿಷ್ ಥಾಮಸ್ ತಲೆಮರೆಸಿಕೊಂಡಿದ್ದು ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
1 ಟಿಪ್ಪಣಿ
Профессиональный сервисный центр по ремонту бытовой техники с выездом на дом.
Мы предлагаем:сервис центры бытовой техники москва
Наши мастера оперативно устранят неисправности вашего устройства в сервисе или с выездом на дом!