Facebook Twitter Instagram
    Vartha Chakra
    • ಸುದ್ದಿ
    • ಬೆಂಗಳೂರು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ರಾಜಕೀಯ
      • ಚುನಾವಣೆ 2023
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • ಅಪರಾಧ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » IAS ಬಿಗ್ ಪೈಟ್
    ಸುದ್ದಿ

    IAS ಬಿಗ್ ಪೈಟ್

    vartha chakraBy vartha chakraಮೇ 12, 2022Updated:ಮೇ 12, 2022ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter Pinterest LinkedIn Tumblr Email
    Share
    Facebook Twitter LinkedIn Pinterest Email

    ರಾಜಕೀಯ ಅಧಿಕಾರ ಎನ್ನುವುದು‌ ಅತ್ಯಂತ ಆಕರ್ಷಣೀಯ ಪದವಾಗಿದೆ ಇದಕ್ಕಾಗಿ ಹಾಲಿ ರಾಜಕಾರಣಿಗಳು ತಮ್ಮೆಲ್ಲಾ ಶಕ್ತಿ ವಿನಿಯೋಗಿಸುತ್ತಾರೆ.ಇದನ್ನು ಗಿಟ್ಟಿಸಿಕೊಂಡು ಅಧಿಕಾರ ಚಲಾಯಿಸುವ ರಾಜಕಾರಣಿಗಳನ್ನು ಹತ್ತಿರದಿಂದ ನೋಡುವ ಹಲವು ಅಧಿಕಾರಿಗಳು ತಾವೂ ಕೂಡಾ ರಾಜಕಾರಣಿಯಾಗಿ ಅಧಿಕಾರ ಹಿಡಿಯಬೇಕು ಎಂದು ಬಯಸುತ್ತಾರೆ. ಈ ರೀತಿ ಬಯಸಿ ಕೆಲವರು ಯಶಸ್ವಿಯಾದರೂ ಮತ್ತೆ ಕೆಲವರು ಯಶಸ್ಸಿಗಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಇದೀಗ ಇಂತಹವರ ಸಾಲಿಗೆ ಸೇರಲು ರಾಜ್ಯದ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳು ಪ್ರಯತ್ನ ನಡೆಸಿದ್ದಾರೆ. ಇದು ಅಂತಹ ವಿಶೇಷವಿಲ್ಲ ಎನಿಸಬಹುದು ಆದರೆ ಗಮ್ಮತ್ತು ಎನೆಂದರೆ ಇಬ್ಬರೂ ದಲಿತ ಸಮುದಾಯಕ್ಕೆ ಸೇರಿದವರು ಇಬ್ಬರೂ ಕುಡಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಂತದ ಅಧಿಕಾರಿಗಳು,ಇಬ್ಬರೂ ಮುಂಬರುವ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಲು ಸಿದ್ದತೆ ನಡೆಸಿದ್ದಾರೆ. ಅಂದಹಾಗೆ ಇಬ್ಬರೂ ಒಂದೇ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ.
    ಯಾರು ಆ ಇಬ್ಬರು ಅಧಿಕಾರಿಗಳು ಅಂತಿರಾ..? ಸಾರ್ವಜನಿಕ ಉದ್ದಿಮೆಗಳ ಇಲಾಖೆ‌‌ ಮುಖ್ಯಸ್ಥ ರಾಜ್ಯ ಸರ್ಕಾರದ‌ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಬಿ.ಎಚ್.ಅನಿಲ್ ಕುಮಾರ್ ಮತ್ತು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್..
    ಈ ಇಬ್ಬರೂ ಅಧಿಕಾರಿಗಳು ತಮಗಿರುವ ಬಿಜೆಪಿ ಹಿರಿಯ ನಾಯಕರ ಒಡನಾಟವನ್ನು ಬಳಸಿಕೊಂಡು ಸಕ್ರಿಯ ರಾಜಕಾರಣಕ್ಕಿಳಿಯಲು ಸಜ್ಜುಗೊಂಡಿದ್ದಾರೆ.
    ಮುಖ್ಯಮಂತ್ರಿ ಬೊಮ್ಮಾಯಿ ಹಿರಿಯ ನಾಯಕ ಆರ್.ಅಶೋಕ್ ಬೆಂಬಲದೊಂದಿಗೆ ಬಿಜೆಪಿಯಲ್ಲಿ ಅದೃಷ್ಟ ಪರೀಕ್ಷೆಗೆ ಮಂಜುನಾಥ್ ಪ್ರಸಾದ್ ಮುಂದಾದರೆ, ಗೋವಿಂದ ಕಾರಜೋಳ,ರಮೇಶ್ ಜಿಗಜಿಣಗಿ ಮತ್ತು ಎ.ನಾರಾಯಣಸ್ವಾಮಿ ಹಾಗು ಸಂಘ ಪರಿವಾರದ ಕೆಲ ನಾಯಕರ ಬೆಂಬಲದೊಂದಿಗೆ ಅನಿಲ್ ಕುಮಾರ್ ಬಿಜೆಪಿ ಮೂಲಕ ರಾಜಕಾರಣ ಪ್ರವೇಶಿಸಲಿದ್ದಾರೆ.
    ಇನ್ನೊಂದು ಕುತೂಹಲಕರ ಸಂಗತಿಯೆಂದರೆ ಈ ಇಬ್ಬರೂ ಹಿರಿಯ ಅಧಿಕಾರಿಗಳು ತುಮಕೂರು ಜಿಲ್ಲೆಯ ಕೊರಟಗೆರೆ ಮೀಸಲು ಕ್ಷೇತ್ರದಿಂದ ಕಣಕ್ಕಿಳಿಯುವ ಪ್ರಯತ್ನ ನಡೆಸಿದ್ದಾರೆ.
    ಈ ಇಬ್ಬರೂ ಕ್ಷೇತ್ರದಲ್ಲಿ ತಮ್ಮದೆ ಬೆಂಬಲಿಗರ ಪಡೆಯನ್ನು ಕಟ್ಟುತ್ತಿದ್ದು ತಮ್ಮ ಸಮುದಾಯಗಳಿಗೆ ಸೇರಿದ ಮುಖಂಡರ ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಡಾ.ಪರಮೇಶ್ವರ್ ಪ್ರತಿನಿಧಿಸುತ್ತಿರುವ ಈ ಕ್ಷೇತ್ರ ಹಲವು ವೈಶಿಷ್ಟ್ಯಗಳಿಂದ ಕೂಡಿದೆ ದಲಿತ, ಹಿಂದುಳಿದ ಸಮುದಾಯದವರೆ ಹೆಚ್ಚಾಗಿರುವ ಕ್ಷೇತ್ರದಲ್ಲಿ ಲಿಂಗಾಯಿತ, ಒಕ್ಕಲಿಗ ಹಾಗು ಅಲ್ಪಸಂಖ್ಯಾತರ ಮತಗಳು ಸಮ ಪ್ರಮಾಣದಲ್ಲಿವೆ ಬಿಜೆಪಿಯಿಂದ ಕಣಕ್ಕಿಳಿದರೆ ತಮ್ಮ ಸಮುದಾಯದ ಜೊತೆಗೆ ಲಿಂಗಾಯತ ಸಮುದಾಯದ ಮತಗಳು ಕಟ್ಟಿಟ್ಟ ಬುತ್ತಿ ಎಂದು ಈ ಇಬ್ಬರೂ ನಾಯಕರು ಲೆಕ್ಕಾಚಾರ ಹಾಕಿದ್ದಾರೆ.ಅಲ್ಲದೆ ಡಾ.ಪರಮೇಶ್ವರ್ ಈ ಕ್ಷೇತ್ರದಿಂದ ಕಣಕ್ಕಿಳಿಯುವ ಕುರಿತಂತೆ ಸ್ಪಷ್ಟತೆಯಿಲ್ಲ ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ.ಜೆಡಿಎಸ್ ಸಾಕಷ್ಟು ಪ್ರಬಲವಾಗಿದೆಯಾದರೂ, ಮಾಜಿ ಶಾಸಕ ಸುಧಾಕರ್ ಲಾಲ್ ಹಲವಾರು ಕಾರಣಗಳಿಂದ ಕ್ಷೇತ್ರದಲ್ಲಿ ಕಾರ್ಯಕರ್ತರ ವಿರೋಧ ಎದುರಿಸುತ್ತಿದ್ದಾರೆ.
    ಇದರಿಂದ ತಮಗೆ ಲಾಭ ಎನ್ನುವುದು ಈ ಅಧಿಕಾರಿಗಳ ಲೆಕ್ಕಾಚಾರ.ಆದರೆ ಈ ಪೈಟ್ ನಲ್ಲಿ ಯಾರ ಕೈ ಮೇಲಾಗಲಿದೆ ಎಂಬುದು ಕುತೂಹಲಕರ ಸಂಗತಿಯಾಗಿದೆ.

    News
    Share. Facebook Twitter Pinterest LinkedIn Tumblr Email
    Previous Articleಹಸೆಮಣೆಯಿಂದ ಸೀದಾ exam ಹಾಲ್ ಗೆ
    Next Article ನೋಯ್ಡಾದಲ್ಲಿ ಅಪಘಾತ.. ಕರ್ನಾಟಕದ ವ್ಯಕ್ತಿ ದುರ್ಮರಣ
    vartha chakra
    • Website

    Related Posts

    ಸೋಲುವ ಭೀತಿ-ಇವರಿಗಿಲ್ಲ BJP ಟಿಕೆಟ್! #bjp #karnataka #rss

    ಮಾರ್ಚ್ 27, 2023

    ಅಖಾಡದಲ್ಲಿ ಝಣ ಝಣ ಕಾಂಚಾಣ! #karnatakaelections2023 #bangalore

    ಮಾರ್ಚ್ 23, 2023

    Electionಗೆ ಮುನ್ನವೇ DK ವ್ಯೂಹ ಛಿದ್ರ

    ಮಾರ್ಚ್ 21, 2023

    Comments are closed.

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕ್ರೀಡೆ
    • ಚುನಾವಣೆ
    • ಚುನಾವಣೆ 2023
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬೆಂಗಳೂರು
    • ಮನರಂಜನೆ
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಮಾಜ
    • ಸಮೂಹ ಶಕ್ತಿ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    Siddaramaiahಗಾಗಿ Rules change!

    BJP ಯ‌ ಮತ್ತೊಂದು ವಿಕೆಟ್ ಪತನ

    Scotlandನ ಪ್ರಥಮ ಮಂತ್ರಿಯಾಗಿ ಹಂಝ ಯೂಸಫ್ (Hamza Yousaf)

    ಸೋಲುವ ಭೀತಿ-ಇವರಿಗಿಲ್ಲ BJP ಟಿಕೆಟ್! #bjp #karnataka #rss

    About
    About

    We're social, connect with us:

    Facebook Twitter YouTube
    Software Training
    Recent Posts
    • Siddaramaiahಗಾಗಿ Rules change! ಮಾರ್ಚ್ 28, 2023
    • BJP ಯ‌ ಮತ್ತೊಂದು ವಿಕೆಟ್ ಪತನ ಮಾರ್ಚ್ 28, 2023
    • Scotlandನ ಪ್ರಥಮ ಮಂತ್ರಿಯಾಗಿ ಹಂಝ ಯೂಸಫ್ (Hamza Yousaf) ಮಾರ್ಚ್ 27, 2023
    • ಸೋಲುವ ಭೀತಿ-ಇವರಿಗಿಲ್ಲ BJP ಟಿಕೆಟ್! #bjp #karnataka #rss ಮಾರ್ಚ್ 27, 2023
    • ಅದಾನಿ ಸಮೂಹ ಕಂಪನಿಗಳಲ್ಲಿ ಹೂಡಿಕೆ ಮುಂದುವರೆಸಿದ ಮಾರ್ಚ್ 27, 2023
    • ಗುಟುರು ಹಾಕಿದ Ramesh Jarkiholi – ಬೆಚ್ಚಿದ Bommai #amitshah #bjp #karnataka #belgaum ಮಾರ್ಚ್ 27, 2023
    • Kabza ಸಿನೆಮ ನಿಜವಾದ Collection ಎಷ್ಟು ಗೊತ್ತಾ? #kabza #shriyasaran #kiccha ಮಾರ್ಚ್ 26, 2023
    • Ultraviolet ಕಿರಣಗಳಿವೆ ಎಚ್ಚರ! #bangalore #skincancer ಮಾರ್ಚ್ 25, 2023
    • ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮೃತಪಟ್ಟಿದ್ದು ಹೃದಯಾಘಾತದಿಂದಲ್ಲ! ಮಾರ್ಚ್ 24, 2023
    • ರಾಹುಲ್ ಗಾಂಧಿ Disqualified ಮಾರ್ಚ್ 24, 2023
    Popular Posts

    Siddaramaiahಗಾಗಿ Rules change!

    ಮಾರ್ಚ್ 28, 2023

    BJP ಯ‌ ಮತ್ತೊಂದು ವಿಕೆಟ್ ಪತನ

    ಮಾರ್ಚ್ 28, 2023

    Scotlandನ ಪ್ರಥಮ ಮಂತ್ರಿಯಾಗಿ ಹಂಝ ಯೂಸಫ್ (Hamza Yousaf)

    ಮಾರ್ಚ್ 27, 2023
    Copyright © 2023 Vartha Chakra
    • ಸುದ್ದಿ
    • ಬೆಂಗಳೂರು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ರಾಜಕೀಯ
      • ಚುನಾವಣೆ 2023
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • ಅಪರಾಧ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಅಕ್ರಮ ಹಣದ ಮೂಲ ಪತ್ತೆಗಾಗಿ ಮಾಡಾಳು ಗೆ ಪೊಲೀಸ್ ಗ್ರಿಲ್
    Subscribe